ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : ವಿಶೇಷ ಸರಕಾರಿ‌ ಅಭಿಯೋಜಕರಾಗಿ  ನ್ಯಾಯವಾದಿ ಮಹೇಶ್ ಕಜೆ

ಪುತ್ತೂರು : ಹುಲಿವೇಷದ ತಂಡ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆರೋಪಿಗಳ ಜಾಮೀನು ನಿರಾಕರಣೆ ಬೆನ್ನಲ್ಲೇ, ಖಡಕ್ ನ್ಯಾಯವಾದಿ ಮಹೇಶ್ ಕಜೆ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ರಾಜ್ಯ ಸರಕಾರ ನೇಮಕ‌ ಮಾಡಿ ಅದೇಶ ಮಾಡಿದೆ.

ಮಹೇಶ್ ಕಜೆ ಪ್ರಸ್ತುತ ಜಾರಿ ನಿರ್ದೇಶನಾಲಯ ಇದರ ಕೇಂದ್ರ ಸರಕಾರದ ಸರಕಾರಿ ಅಭಿಯೋಜಕರು ಹಾಗೂ ಹಿರಿಯ ನ್ಯಾಯಾಲಯಗಳೂ ಇವರನ್ನು ನೇಮಕ ಮಾಡಿರುತ್ತಾರೆ.

ಈಗಾಗಲೇ ಈ ಪ್ರಕರಣವನ್ನು ಸಮರ್ಥವಾಗಿ ನಿರ್ವಹಣೆ ಮಾಡಿ ಜಾಮೀನು ನಿರಾಕರಣೆಯಾಗುವಂತೆ ಮಾಡಿದ ಸರಕಾರಿ ಅಭಿಯೋಜಕರಾದ ಜಯಂತಿಯವರಿಗೆ ಆನೆಭಲ ಬಂದಂತಾಗಿದ್ದು, ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top