ಅಕ್ರಮ ಗೋ ಸಾಗಾಟ : ಸ್ಥಳೀಯರಿಂದ ದಿಗ್ಬಂಧನ

ಪುತ್ತೂರು: ಅಕ್ರಮ ಗೋವುಗಳನ್ನು ಪಿಕಪ್ ನಲ್ಲಿ ಸಾಗಾಟ ಮಾಡುತ್ತಿದ್ದರು ಎಂಬ ಆರೋಪದಡಿ ಸ್ಥಳೀಯರು ವಾಹನವನ್ನು ಅಡ್ಡಗಟ್ಟಿದ ಮತ್ತು ಜೀಪು ಚಾಲಕ  ಹಾಗೂ ಇನ್ನೋರ್ವರಿಗೆ ದಿಗ್ಭಂಧನ ವಿಧಿಸಿದ ಘಟನೆ ಎಲಿಮಲೆಯ ಅಂಬೆಕಲ್ಲಿನಲ್ಲಿ ನಡೆದಿದೆ.

ಪಡ್ಡಾಯರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರು ದಿಗ್ಭಂಧನಕ್ಕೆ ಒಳಗಾದವರು.

ಸುಳ್ಯದ ಎಲಿಮಲೆಯ ಅಂಬೆಕಲ್ಲು ಕಡೆಯಿಂದ ಇಂದು ಮುಂಜಾನೆ 4 ದನಗಳನ್ನು ಪಿಕಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವ ಆರೋಪದಲ್ಲಿ ಎಲಿಮಲೆ ಅಂಬೆಕಲ್ಲು ರಸ್ತೆಯ ಕಲ್ಪಣೆ ಎಂಬಲ್ಲಿ ಸ್ಥಳೀಯರು ವಾಹನವನ್ನು ಅಡ್ಡ ಗಟ್ಟಿದರು. ಈ ವೇಳೆ ಜೀಪಿನಿಂದ ಇಬ್ಬರು ಪರಾರಿಯಾಗಿದ್ದು, ಮತ್ತಿಬ್ಬರನ್ನು ಸ್ಥಳೀಯರು ಹಿಡಿದಿದ್ದು ಅವರನ್ನು ವಿಚಾರಿಸಿದ್ದಾರೆ.





























 
 

ಎಲಿಮಲೆಯ ಮನೆಯೊಂದರಿಂದ ಅವರ ಅನುಮತಿಯಂತೆ ಗೋವುಗಳನ್ನು ಯಾವುದೇ ಹಿಂಸೆ ನೀಡದೆ ಪಿಕಪ್ ನಲ್ಲಿ ಸಾಗಾಟ ಮಾಡುತ್ತಿರುವಾಗ ಸ್ಥಳೀಯರು ಅಕ್ರಮ ಸಾಗಾಟ ಎಂದು ಗುಮಾನಿಯಿಂದ ಹಿಡಿದಿದ್ದಾರೆ. ವಾಹನದಲ್ಲಿ ಗೋವುವಿನ ಸಾಗಾಟಕ್ಕೆ ಇಲಾಖೆಯ ಪತ್ರವನ್ನು ವಾಹನ ಅಡ್ಡಗಟ್ಟಿದವರು ಹರಿದು ಹಾಕಿದ್ದಾರೆ. ಈ ಸಂದರ್ಭ ಯಾವುದೇ ಅಕ್ರಮ ಗೋ ಸಾಗಾಟ ನಡೆದಿಲ್ಲ ಎಂದು ವಾಹನದ ಮಾಲಕರ ಸಹೋದರ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top