ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ

ಪುತ್ತೂರು: ಹಿರಿಯ ಸಾಹಿತಿ ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅನುರಾಗ ವಠಾರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಹಿರಿಯ ಸಾಹಿತಿ ಬಿ. ಪುರಂದರ್ ಭಟ್ ಅಗಲಿದ ದಿವ್ಯ ಚೇತನಕ್ಕೆ ನುಡಿ ನಮನ ಸಲ್ಲಿಸಿದರು. ನಿವೃತ್ತ ಶಿಕ್ಷಕರಾದ ಶ್ರೀಧರ್ ರೈ ಅಧ್ಯಕ್ಷತೆ ವಹಿಸಿದ್ದರು. ಡಾ ವರದರಾಜ ಚಂದ್ರಗಿರಿ, ನಾರಾಯಣ ರೈ ಕುಕ್ಕುವಳ್ಳಿ, ವಿಜಯಕುಮಾರ್, ಬಿ ವಿ ಸೂರ್ಯನಾರಾಯಣ, ಬಿ ಐತಪ್ಪ ನಾಯ್ಕ್ ಮುಂತಾದವರು ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರೊಂದಿಗೆನ ಒಡನಾಟದ ಅನುಭವವನ್ನು ಹಂಚಿ  ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರೊ. ದತ್ತಾತ್ರೇಯ ರಾವ್  ರಾಮಕೃಷ್ಣ ಆಚಾರ್ ರಚಿಸಿದ ತುಳು ಕವಿತೆಯೊಂದನ್ನು ಹಾಡಿ ವಿಶೇಷವಾಗಿ ನುಡಿ ನಮನ ಸಲ್ಲಿಸಿದರು.





























 
 

ಶಾಂತ ಪುತ್ತೂರು, ರಂಗನಾಥ್ ರಾವ್, ಸಂತೋಷ್ ಕುಮಾರ್, ರೋ. ಎ ಜೆ ರೈ, ಸೂರ್ಯ ನಾರಾಯಣ ಶರ್ಮಾ, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top