ದರ್ಶನ್ ಗರ್ತಿಕೆರೆ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗೆ ಆಯ್ಕೆ

ಪುತ್ತೂರು: ಮಾ.23 ಹಾಗೂ 24ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯುವ ದ. ಕ ಜಿಲ್ಲಾ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿಗೆ ಪುತ್ತೂರಿನ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರದ ತಜ್ಞ ತರಬೇತುದಾರ ದರ್ಶನ್ ಗರ್ತಿಕೆರೆ ಆಯ್ಕೆಗೊಂಡಿದ್ದಾರೆ.

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ದ ವತಿಯಿಂದ ನಡೆಸಲಾದ ಕನ್ನಡದಲ್ಲೂ ಐ.ಎ.ಎಸ್ ಪರೀಕ್ಷೆ ಬರೆಯಿರಿ ಅಭಿಯಾನದ ಅಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 50ಕ್ಕೂ ಅಧಿಕ ಉಚಿತ ಕಾರ್ಯಾಗಾರಗಳನ್ನು ನಡೆಸಿ  ಹದಿನೈದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ  ಐ.ಎ.ಎಸ್ ಹಾಗೂ ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯನ್ನು ನೀಡಿ  ಜಾಗೃತಿ ಮೂಡಿಸಿರುತ್ತಾರೆ. ಮಾತ್ರವಲ್ಲದೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರವರ್ತಿತ  ಐ.ಎ.ಎಸ್ ದರ್ಶನ್ ಎಂಬ ಉಚಿತ  ಯೂಟ್ಯೂಬ್ ಚಾನೆಲ್  ಮೂಲಕ ಐ.ಎ.ಎಸ್ ಹಾಗೂ ಐ.ಪಿ.ಎಸ್  ಪರೀಕ್ಷೆಗಳ ಕುರಿತು ಉಚಿತ ಮಾಹಿತಿ ಹಾಗೂ ತರಗತಿಗಳನ್ನು ನೀಡುತ್ತಿದ್ದಾರೆ.

ದರ್ಶನ್ ಗರ್ತಿಕೆರೆ ಮೂಲತಃ. ಹೊಸನಗರ ತಾಲೂಕಿನ ಶಿವಮೊಗ್ಗ ಜಿಲ್ಲೆಯ ಗರ್ತಿಕೆರೆಯ  ಚಂದ್ರಶೇಖರ ಹಾಗೂ ಆಶಾ ದಂಪತಿ ಪುತ್ರ. ಕಳೆದ ಎರಡು ವರ್ಷಗಳಿಂದ ಪುತ್ತೂರು ವಿವೇಕಾನಂದ ಐ.ಎ.ಎಸ್  ಅಧ್ಯಯನ ಕೇಂದ್ರದಲ್ಲಿ  ತಜ್ಞ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top