ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನಗಳು ಆರಂಭವಾಗಿದ್ದು, ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಇಂದು ಮುಂಜಾನೆ ಪ್ರಾಣಪ್ರತಿಷ್ಠೆಗೆ ವಿಧಿವಿಧಾನ ಆರಂಭವಾಗಿದ್ದು, 114 ಕಲಶಗಳಿಂದ ವಿವಿಧ ಔಷಧೀಯ ನೀರಿನಿಂದ ವಿಗ್ರಹ ಸ್ನಾನ ನಡೆಸಲಾಯಿತು.

ಕಲಶ ನೀರಿನಿಂದ ಮೂರ್ತಿಗಳ ಪುಣ್ಯ ಸ್ನಾನದ ಬಳಿ ಪ್ರತಿಷ್ಠಾಪಿಸಲಿರುವ ದೇವತೆಗಳಿಗೆ ನಿತ್ಯ ಪೂಜೆ, ಹವನ, ಪಾರಾಯಣ ನಡೆದಿದೆ.
ಪ್ರಾತಃಕಾಲ ಮಾಧ್ವಾಧೀನಗಳು, ಮಹಾಪೂಜೆ, ಉತ್ಸವ ಮೂರ್ತಿ ಪ್ರಸಾದ ಪರಿಕ್ರಮ, ತತ್ತ್ವನ್ಯಾಯ, ಮಹನ್ಯಾಸ, ಅದಿನ್ಯಾಸ, ಅಘೋರ ಹೋಮ, ವ್ಯಾಹೃತಿ ಹೋಮ, ಜಾಗರಣ, ಸಂಜೆಪೂಜೆ ಹಾಗೂ ಆರತಿ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ಅವರು 12.20 ಕ್ಕೆ ಸರಯು ನದಿ ನೀರನ್ನು ಕಲಶದಲ್ಲಿ ಹಿಡಿದು ಗರ್ಭಗುಡಿ ಪ್ರವೇಶಿಸಲಿದ್ದಾರೆ. 12.30 ಕ್ಕೆ ಬಾಲರಾಮನನ್ನು ಪ್ರತಿನಿಧಿಸುವ ಸುಂದರ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.