ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 10ನೇ ತರಗತಿ ಮಕ್ಕಳ ಪೋಷಕರ ಸಭೆ

ಪುತ್ತೂರು: ಮಗುವಿನ ಮೇಲಿನ ವ್ಯಾಮೋಹ ಮಕ್ಕಳ ಬೆಳವಣಿಗೆಗೆ ತೊಡಕಾಗಬಾರದು. ಮಗುವಿನ ದೈನಂದಿನ ಆಗು ಹೋಗುಗಳನ್ನು ತಿಳಿದುಕೊಳ್ಳಲು ಪೋಷಕರು ಸದಾ ಶಾಲೆಯ ಸಂಪರ್ಕದಲ್ಲಿ ಇರಬೇಕು ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸಂಚಾಲಕ ರವಿನಾರಾಯಣ ಎಂ ಹೇಳಿದರು.

ಅವರು ಶಾಲಾ ಸಭಾಂಗಣದಲ್ಲಿ ನಡೆದ 10ನೇ ತರಗತಿಯ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ ಮಾತನಾಡಿ,  ಪೋಷಕರ ಸಲಹೆ ಸೂಚನೆಗಳನ್ನು ಸದಾ ಪುರಸ್ಕರಿಸಿ, ಅಳವಡಿಸುವ ಭರವಸೆ ನೀಡಿದರು.

































 
 

ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಈ ವರೆಗಿನ ಸಮಗ್ರ ಅಭಿವೃದ್ಧಿಯಲ್ಲಿ ಪೋಷಕರ, ಶಿಕ್ಷಕರ ಹಾಗೂ ಆಡಳಿತ ಮಂಡಳಿಯ ಶ್ರಮವನ್ನು ಸ್ಮರಿಸಿದ ಮುಂದೆಯೂ ಇದೇ ರೀತಿ ಸಹಕಾರವನ್ನು ಕೋರಿದರು.

ಸಹಶಿಕ್ಷಕಿ ಸುಜಾತಾ ಪ್ರಾರ್ಥಿಸಿದರು. ಸಹಶಿಕ್ಷಕಿ ಕವಿತಾ ಕುಸುಮಾಧರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top