ನದಿಗೆ ಹಾರಿ ಆತ್ಮಹತ್ಯೆ | ಮೃತದೇಹ ಪತ್ತೆ

ಕಡಬ : ಸಕಲೇಶಪುರ ಮೂಲದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಕೊಡಿoಬಾಳ ಗ್ರಾಮದ ದoಡ್ಡುಗುರಿ ಸಮೀಪ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ 24 ರಂದು ಬೆಳಕಿಗೆ ಬಂದಿದೆ. ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಮೃತ ವ್ಯಕ್ತಿ. ಕಡಬ ಪೊಲೀಸರು ಹಾಗೂ ಸ್ಥಳೀಯರು ಮತ್ತು ಶೌರ್ಯ ತಂಡದ ಸದಸ್ಯರು ನದಿಗಿಳಿದು ಕಾರ್ಯಚರಣೆ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ.

ಕುಮಾರಧಾರ ನದಿ ಬಳಿ ವ್ಯಕ್ತಿಯೊಬ್ಬರ ಶೂ ಪತ್ತೆಯಾದ ಹಿನ್ನಲೆಯಲ್ಲಿ ಅನುಮಾನಗೊಂಡು   ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಧರ್ಮಯ್ಯ ನವರು ಮೂಲತ: ಹಾಸನ ಜಿಲ್ಲೆಯ ಸಕಲೇಶಪುರ ಬಾಲಗದ್ದೆಯವರು. ಕಡಬದ ಕೋಡಿಂಬಾಳ ಬಳಿ ರಬ್ಬರ್‌ ಕಟ್ಟಿಂಗ್‌ ಕೆಲಸಕ್ಕೆಂದು ಬಂದಿದ್ದರು.





































 
 

ಈ ಹಿನ್ನಲೆಯಲ್ಲಿ ಕಡಬ ಪೊಲೀಸ್‌ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ನೇತ್ರತ್ವದಲ್ಲಿ ಕಡಬ ಠಾಣೆಯ ಪೊಲೀಸರು ಹಾಗು ಸ್ಥಳೀಯ ಶೌರ್ಯ ತಂಡದ  ಮುರಳಿ,ಸೋಮಪ್ಪ, ಆನಂದ, ಅಪರ್ಣಾ, ಆಪತ್ಬಾಂದವ ತಂಡದ ಸದಸ್ಯರಾದ ರಫೀಕ್,ಮನೋಜ್, ಅನಿಲ್ ಸೇರಿದಂತೆ ಸ್ಥಳಿಯರು ಮೃತದೇಹ ಪತ್ತೆಹಚ್ಚಲು ಸಹಕರಿಸಿದರು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top