ಝೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋಗೆ ರಾಮಕುಂಜದ ಆತ್ಮಿ ಗೌಡ ಆಯ್ಕೆ | ನಾಳೆ ಎಪಿಸೋಡ್ ಪ್ರಸಾರ

ರಾಮಕುಂಜ : ಝೀ ಕನ್ನಡ ವಾಹಿನಿಯಲ್ಲಿ ಹತ್ತು ವರ್ಷಗಳ ಬಳಿಕ ಪ್ರಾರಂಭಗೊಂಡ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್ ನಲ್ಲಿ ರಾಮಕುಂಜ ಗ್ರಾಮದ ಸುಜಿತ್ ಎಸ್ ಇವರ ಪುತ್ರಿ ಆತ್ಮಿ ಗೌಡ ಎಸ್ ಆಯ್ಕೆಯಾಗಿದ್ದು ಶನಿವಾರ ಭಾನುವಾರದಂದು ಸಂಜೆ 6 ಗಂಟೆಗೆ ಎಪಿಸೋಡ್ ಪ್ರಸಾರಗೊಳ್ಳಲಿದೆ.

ಹತ್ತು ವರ್ಷಗಳ ಹಿಂದೆ ಸೃಜನ್ ಲೋಕೇಶ್ ನಿರ್ವಹಿಸುತ್ತಿದ್ದ ಮಕ್ಕಳ ಗೇಮ್‌ಶೋ ಕಾರ್ಯಕ್ರಮದ ನಿರೂಪಣೆಯನ್ನು ಈ ಬಾರಿ ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಡೆಸಿಕೊಡುತ್ತಿದ್ದು ಇದರಲ್ಲಿ ೨ ರಿಂದ ೬ ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ. ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಆಯ್ಕೆಯಾಗಿ ಆನಂತರ ೩ ಸುತ್ತಿನ ಆಡಿಷನ್ ನಂತರ ಅಂತಿಮ ಸುತ್ತಿಗೆ ಆತ್ಮಿ ಗೌಡ ಆಯ್ಕೆಯಾಗಿದ್ದಾರೆ.

ಡಬ ತಾಲೂಕಿನ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿಯಾಗಿರುವ ಸುಜಿತ್ ಎಸ್ ಮತ್ತು ಉಮಾಶ್ರೀ ಪಿ.ಬಿ ರವರ ಪುತ್ರಿಯಾಗಿರುವ ಆತ್ಮಿ ಗೌಡ ಎಸ್ ಇವರು ಸಂಪ್ಯಾಡಿಯ ಕೆಎಸ್‌ಆರ್‌ಟಿ ನಿವೃತ್ತ ಉದ್ಯೋಗಿ ಕೆಜೋಗಪ್ಪ ಗೌಡ ಮತ್ತು ನಿವೃತ್ತ ಶಿಕ್ಷಕಿ  ಚಂದ್ರಾವತಿ ದಂಪತಿಯರ ಮೊಮ್ಮಗಳು. ಛೋಟಾ ಚಾಂಪಿಯನ್ ವೇದಿಕೆಯಲ್ಲಿ ಈ ಬಾರಿ ಛೋಟಾ ಚಾಂಪಿಯನ್ ವೇದಿಕೆಯಲ್ಲಿ ಬೆಂಗಳೂರು ಬಾಯ್ಸ್ ಚಿತ್ರತಂಡದವರು ಅತಿಥಿಗಳಾಗಿ ಭಾಗವಹಿಸಿದ್ದರು. ಚಿತ್ರ ತಂಡದವರು ಮಕ್ಕಳೊಂದಿಗೆ ಬೆರೆತು ಅವರಿಗೆ ಶುಭಹಾರೈಸಿದರು. ಚಿತ್ರತಂಡದವರಾದ ಅಭಿಷೇಕ್ ರಾಮ್‌ದಾಸ್. ಚಂದನ್ ಆಚಾರ್, ರೋಹಿತ್ ಭಾನುಪ್ರಕಾಶ್, ವೈನಿಧಿ ಜಗದೀಶ, ಸೋನಿ, ಧರ್ಮವಿಶ್, ವಿಕ್ರಮ್ ಎಲೈಹ್ ಉಪಸ್ಥಿತರಿದ್ದರು.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top