ಉಪ್ಪಿನಂಗಡಿ ವಲಯ ಶೌರ್ಯ ವಿಪತ್ತು ತಂಡದಿಂದ ವಾರ್ಷಿಕೋತ್ಸವ | ಔಷಧೀಯ ಗಿಡಗಳ ನಾಟಿ ಮೂಲಕ ಆಚರಣೆ

ಉಪ್ಪಿನಂಗಡಿ : ಉಪ್ಪಿನಂಗಡಿ ವಲಯ ಶೌರ್ಯ ವಿಪತ್ತು ತಂಡದಿಂದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಮುದ್ಯ ದೇವಸ್ಥಾನ ವಠಾರದಲ್ಲಿ ಔಷಧಿ ಗಿಡಗಳ ನಾಟಿ ಮಾಡುವುದರ ಮೂಲಕ ವಾರ್ಷಿಕ ದಿನಾಚರಣೆ ಆಚರಿಸಲಾಯಿತು.

ವಲಯ ಮೇಲ್ವಿಚಾರಕ ಶಿವಪ್ಪ.ಎಂ. ಕೆ ಮಾಹಿತಿ,  ಮಾರ್ಗದರ್ಶನ ನೀಡಿದರು. ಔಷಧಿ ಗಿಡಗಳನ್ನು ಗ್ರಾಮ ವಿಕಾಸ ಯೋಜನೆ ಶ್ರೀರಾಮ ಶಾಲೆ ಉಪ್ಪಿನಂಗಡಿ ನೀಡಿ ಸಹಕರಿಸಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ವಲಯ ಅಧ್ಯಕ್ಷ ನಾರಾಯಣ ಕೆಳಗಿನಮನೆ, ಶ್ರೀರಾಮ ಶಾಲೆ ಆಡಳಿತ ಮಂಡಳಿ ಸದಸ್ಯ ಗಣೇಶ್ ಕುಲಾಲ್, ಒಕ್ಕೂಟದ ಮಾಜಿ ಅಧ್ಯಕ್ಷ ಧನಂಜಯ ಬೆದ್ರೋಡಿ, ಘಟಕ ಪ್ರತಿನಿಧಿ ಸದಾನಂದ ಶಿಬಾರ್ಲ, ಘಟಕ ಸಂಯೋಜಕಿ ಮಮತ, ವಿಪತ್ತು ತಂಡದ ಸದಸ್ಯರು ಭಾಗವಹಿಸಿದ್ದರು, ಉಪಹಾರ ವ್ಯವಸ್ಥೆಯನ್ನು ಮುದ್ಯ ಶ್ರೀ ಗಣೇಶೋತ್ಸವ ಸಮಿತಿಯವರು ನೀಡಿ ಸಹಕರಿಸಿದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top