ವರ್ಗಾವಣೆಗೊಂಡಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ಯೋಜನಾ ಕಚೇರಿಯಿಂದ ಬಡ್ತಿಗೊಂಡು ವರ್ಗಾವಣೆಯಾಗಿರುವ ಸಿಬ್ಬಂದಿಗಳಿಗೆ ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಡಬ ಯೋಜನಾ ಕಛೇರಿಯಲ್ಲಿ ಸಹಾಯಕ ಪ್ರಭಂದಕರಾಗಿ ಕೆಲಸನಿರ್ವಹಿಸುತ್ತಿದ್ದ ರೂಪಾರವರು ಕೇಂದ್ರ ಕಚೇರಿಯ ಡಾಟಾ ಸೆಂಟರ್ ವಿಭಾಗಕ್ಕೆ ಮ್ಶಾನೇಜರ್ ಆಗಿ ವರ್ಗಾವಣೆಯಾಗಿದ್ದಾರೆ.  ತಾಲೂಕಿನಲ್ಲಿ ನಗದು ಸಹಾಯಕರಾಗಿ ಹಾಗೂ ಪ್ರಭಾರ ಕೃಷಿ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸಿರುವ ರಮ್ಶಾ ಅವರು  ತೀರ್ಥಹಳ್ಳಿ ಯೋಜನಾ ಕಚೇರಿಯ ನಗದು ಸಹಾಯಕಿ ಮೇಲ್ವಿಚಾರಕಿಯಾಗಿ ಬಡ್ತಿಗೊಂಡು ವರ್ಗಾವಣೆಗೊಂಡಿದ್ದಾರೆ. ತಾಲೂಕಿನ ನಗದು ಸಹಾಯಕಿಯಾಗಿ ಕೆಲಸ ನಿರ್ವಹಿಸಿದ ಸವಿತಾ ಅವರಿಗೆ  ಹೆಬ್ರಿ ಯೋಜನಾ ಕಚೇರಿಗೆ ನಗದು ಸಹಾಯಕಿ ಮೇಲ್ವಿಚಾರಕರಾಗಿ ಬಡ್ತಿಗೊಂಡು ವರ್ಗಾವಣೆಯಾಗಿದ್ದು, ಇವರನ್ನು ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಎನ್.  ಸ್ಮರಣಿಕೆ ನೀಡಿ ಅಭಿನಂದಿಸಿ ಶುಭಹಾರೈಸಿದರು. ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಬಿಳಿನೆಲೆ ವಲಯ ಮೇಲ್ವಿಚಾರಕ ಆನಂದ, ನೆಲ್ಶಾಡಿ ವಲಯ ಮೇಲ್ವಿಚಾರಕ ವಿಜೇಶ್ ಜೈನ್,  ಸವಣೂರು ವಲಯ ಮೇಲ್ವಿಚಾರಕಿ ಹರ್ಷಕುಮಾರಿ, ತಾಲೂಕು ಲೆಕ್ಕಪರಿಶೋಧಕಿ ಶೀಲಾವತಿ, ತಾಲೂಕು ನೋಡೆಲ್ ಅಧಿಕಾರಿ ರಕ್ಷಕ್ ಮತ್ತಿತರರು  ಉಪಸ್ಥಿತರಿದ್ದರು.

ತಾಲೂಕು ಕಚೇರಿ ಪ್ರಬಂಧಕಿ ಸುಜಾತ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಕಾರ್ಯಕ್ರಮ ನಿರೂಪಿಸಿದರು.







https://screenapp.io/app/#/shared/8P4BcrrHNx























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top