ಕಡಿದ ಹಾವು: ಮಗಳ ಧೈರ್ಯಕ್ಕೆ ಗುಡ್ ಬೈ ಹೇಳಿತು ಸಾವು | ತಾಯಿಯ ಉಳಿಸಿದ ದಿಟ್ಟೆಗೆ ಶಾಸಕರಿಂದ ಶಹಬ್ಬಾಶ್ ಗಿರಿ

ಪುತ್ತೂರು: ಹಾವು ಕಚ್ಚಿತು ಎಂದಾಕ್ಷಣ ಎಲ್ಲರೂ ಭಯಗೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬಾಕೆ ದಿಟ್ಟೆ, ತನ್ನ ಬಾಯಿಯಿಂದಲೇ ವಿಷವನ್ನು‌ ಕಚ್ಚಿ ತೆಗೆದು ತಾಯಿಯ ಪ್ರಾಣ ಉಳಿಸಿದ್ದಾಳೆ.

ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ರೈ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾವು ಕಚ್ಚಿತ್ತು. ತಕ್ಷಣ ಓಡಿ ಬಂದ ಮಗಳು ಶ್ರಮ್ಯ ರೈ, ತಾಯಿಗೆ ಧೈರ್ಯ ತುಂಬಿ, ತನ್ನ ಬಾಯಿಯಿಂದಲೇ ವಿಷವನ್ನು ಕಚ್ಚಿ ತೆಗೆದು ಪ್ರಥಮ ಚಿಕಿತ್ಸೆ ನೀಡಿದ್ದಾಳೆ. ನಂತರ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಮಮತಾ ರೈ ಅವರು ಇದೀಗ ಚೇತರಿಸಿಕೊಂಡಿದ್ದಾರೆ.

ಶ್ರಮ್ಯ ರೈ ಅವರು ವಿವೇಕಾನಂದ ಪದವಿ ಕಾಲೇಜಿನ ಭಾರತ್ ಸ್ಕೌಟ್ ಅಂಡ್ ಗೈಡ್ಸ್ (rovers and rangers ) ವಿದ್ಯಾರ್ಥಿನಿ.





























 
 

ಶಾಸಕರು ಭೇಟಿ, ಪ್ರಶಂಸೆ:

ವಿಷಯ ತಿಳಿಯುತ್ತಿದ್ದಂತೆ ಶ್ರಮ್ಯ ರೈ ಅವರಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಶಾಸಕ ಸಂಜೀವ ಮಠಂದೂರು ಅವರು ಮನೆಗೆ ಭೇಟಿ ನೀಡಿ, ಮಮತಾ ರೈ ಅವರ ಆರೋಗ್ಯ ವಿಚಾರಿಸಿದರು. ಜೊತೆಗೆ, ಶ್ರಮ್ಯ ರೈ ಅವರ ಧೈರ್ಯಕ್ಕೆ ಶಹಬ್ಬಾಶ್ ಹೇಳಿದರು. ಸ್ಥಳೀಯರು, ಗ್ರಾಮ ಪಂಚಾಯತ್ ಸದಸ್ಯರು ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಮಗಳ ಧೈರ್ಯವನ್ನು ಕೊಂಡಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top