ನಾಳೆ (ಮಾ.1) : ಅರಿಯಡ್ಕದಲ್ಲಿ ಕಾಂಗ್ರೆಸ್ ಉತ್ಸವ-2023

ಪುತ್ತೂರು : ಅರಿಯಡ್ಕ ವಲಯ ಕಾಂಗ್ರೆಸ್‍ ಆಶ್ರಯುದಲ್ಲಿ ಕಾಂಗ್ರೆಸ್ ಉತ್ಸವ-2023 ಮಾ.1 ಬುಧವಾರ ಕೌಡಿಚ್ಚಾರ್ ನಲ್ಲಿ ನಡೆಯಲಿದೆ.

ಕೌಡಿಚ್ಚಾರ್ ಎಸ್ ಬಿಲ್ಡಿಂಗ್ ವಠಾರದಲ್ಲಿ ಬೆಳಿಗ್ಗೆ 9 ರಿಂದ ನಡೆಯುವ ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸುವರು. ಪುತ್ತೂರು ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಎಂ.ಜಿ. ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರುಗಳು, ಮಾಜಿ ವಲಯ ಅಧ್ಯಕ್ಷರುಗಳು, ಹಿರಿಯ ಕಾಂಗ್ರೆಸ್‍ ಕಾರ್ಯಕರ್ತರು, ಸಹಕಾರ, ಶಿಕ್ಷಣ ಕ್ಷೇತ್ರದ ಸಾಧಕರಿಗೆ, ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಅವರಿಗೆ ಅಭಿನಂದನೆ ನಡೆಯಲಿದೆ. ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ ಅಭಿನಂದಿಸಲಿದ್ದಾರೆ ಎಂದು ವಲಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top