ಕಂಬಳಕ್ಕೆ ನಾಡ ಕ್ರೀಡೆಯ ಸ್ಥಾನಮಾನ

ಅಧಿವೇಶನದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

ಬೆಂಗಳೂರು : ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ನಾಡ ಕ್ರೀಡೆಯ ಸ್ಥಾನಮಾನವನ್ನು ನೀಡುವ ಕುರಿತು ಸರಕಾರ ಚಿಂತಿಸುತ್ತಿದೆ. ಈ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಕಂಬಳಕ್ಕೆ ಸೂಕ್ತ ಸ್ಥಾನಮಾನ ಒದಗಿಸುವ ಕುರಿತು ಚಿಂತಿಸಲಾಗುವುದು ಎಂದಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು, ಕಂಬಳ ಕರಾವಳಿ ಭಾಗದ ಪ್ರಸಿದ್ಧ ಜಾನಪದ ಕ್ರೀಡೆಯಾಗಿದೆ. ದೈವಾರಾಧನೆಯೊಂದಿಗೆ ಕಂಬಳವನ್ನು ಆರಾದಿಸುವ ಪರಂಪರೆ ಇದೆ. ಬರೀ ಕ್ರೀಡೆಯಲ್ಲದೆ ಧಾರ್ಮಿಕ ಮಹತ್ವವೂ ಕಂಬಳಕ್ಕೆ ಇದೆ. ಕೃಷಿ ಬದುಕಿನ ಅಂಗವಾಗಿರುವ ಕಂಬಳವನ್ನು ಜನರು ಶ್ರದ್ಧೆ, ಭಕ್ತಿಯಿಂದ ಸೇವೆ ರೂಪದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸೂಕ್ತ ಸೌಲಭ್ಯ ಮತ್ತು ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕ ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ನೀಡುವ ಮೂಲಕ ಸರಕಾರ ಕಂಬಳವನ್ನು ಪ್ರೋತಾಹಿಸುತ್ತಿದೆ. ಕಂಬಳಕ್ಕಾಗಿ ಕ್ರೀಡಾಂಗಣ ನಿರ್ಮಿಸುವಂತ ಯೋಜನೆಗಳನ್ನು ಕೈಗೊಂಡಿದೆ. ಇನ್ನೀಗ ಕಂಬಳವನ್ನು ರಾಜ್ಯಮಟ್ಟದ ಕ್ರೀಡೆಯಾಗಿ ಪರಿಗಣಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top