ಪುತ್ತೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವಿಟ್ಲ ಪೆರ್ನೆ ವಲಯದ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ವ್ಯಾಘ್ರ ಚಾಮುಂಡಿ ದೈವಸ್ಥಾನ ಕೊರತಿಕಟ್ಟೆ ಮಾಡತ್ತಾರು ಕ್ಷೇತ್ರ ದೈವಸ್ಥಾನದ ಬ್ರಹ್ಮ ಕಲಶೋತ್ಸವ ದ ಅಂಗವಾಗಿ ಕ್ಷೇತ್ರದಲ್ಲಿ ಸ್ವಚ್ಛತೆಗಾಗಿ ಶ್ರಮದಾನ ಮಾಡಲಾಯಿತು.
ದೇವಸ್ಥಾನದ ಸುತ್ತಮುತ್ತಲು ಗಿಡಗಂಟಿಗಳನ್ನು ತೆರವುಗೊಳಿಸಿ, ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛತೆ ಮಾಡಲಾಯಿತು.

ಶ್ರಮದಾನದಲ್ಲಿ ಪೆರ್ನೆ ವಲಯ ಮೇಲ್ವಿಚಾರಕಿ ಜಯಶ್ರೀ, ಸಂಯೋಜಕಿ ಅಸ್ಮಿತಾ ಮತ್ತು ಶೌರ್ಯ ಘಟಕದ ಸದಸ್ಯರಾದ ರಮೇಶ್, ಗಿರೀಶ್, ಹರೀಶ್, ಅಶೋಕ್ ದೇವಾಡಿಗ, ಕೇಶವ ಶೆಟ್ಟಿಗಾರ್, ಸುರೇಶ್ ಗೋಪಾಲ ಚದ್ರಾವತಿ, ಮಮತ , ಸುನಂದಾ, ಜಗದೀಶ, ಶೀನಪ್ಪ, ರವಿ ಪಾಲ್ಗೊಂಡಿದ್ದರು.