ಚುನಾವಣಾ ತಯಾರಿ ಬಗ್ಗೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತು

ಪುತ್ತೂರು: ಚುನಾವಣಾ ದಿನ ಹತ್ತಿರ ಬರುತ್ತಿದೆ. ಜನಪ್ರತಿನಿಧಿಗಳ ತಯಾರಿಯೂ ಜೋರಾಗಿಯೇ ಇದೆ. ಕಾಂಗ್ರೆಸ್ ಪಾಳಯದಲ್ಲೂ ತಯಾರಿಗಳು ಎಗ್ಗಿಲ್ಲದೇ ನಡೆಯುತ್ತಿವೆ. ಈಗಾಗಲೇ 13-14 ಹೆಸರುಗಳು ಮುನ್ನೆಲೆಗೂ ಬಂದಿವೆ.

ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ನಾಯಕಿ. ಈ ಹಿಂದೆ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ ಅನುಭವಿ. ಸಾಕಷ್ಟು ಬಾರಿ ಪುತ್ತೂರಿನ ಶಾಸಕ ಸ್ಥಾನದ ಟಿಕೇಟ್ ನೀಡಬೇಕೆಂದು ಬೇಡಿಕೆಯನ್ನು ಮುಂದಿಟ್ಟಿದ್ದರು. ಇದಕ್ಕಾಗಿ ನಾಯಕರ ಜೊತೆ ಮಾತುಕತೆ ನಡೆಸಿದ್ದು ಮಾತ್ರವಲ್ಲ, ತಳಮಟ್ಟದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಸಾಕಷ್ಟು ಓಡಾಟಗಳನ್ನು ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಜೊತೆ, ಕನಸಿನ ಪುತ್ತೂರಿನ ಅಭಿವೃದ್ಧಿ, ಟಿಕೇಟ್ ಸಿಗದೇ ಹೋದರೆ ಮುಂದಿನ ನಡೆ, ಅಮಿತ್ ಶಾ ಬಂದಿದ್ದರಿಂದ ಬಿಜೆಪಿಗಾದ ಲಾಭ ಮೊದಲಾದ ವಿಚಾರಗಳ ಜೊತೆ ನ್ಯೂಸ್ ಪುತ್ತೂರು ಜೊತೆ ಹಂಚಿಕೊಂಡಿದ್ದಾರೆ. ಅವರ ಮಾತುಗಳಲ್ಲೇ ಕೇಳಿಸಿಕೊಳ್ಳಲು ಕೆಳಗಿನ ಲಿಂಕ್ ಒತ್ತಿ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top