ಬಾಂಧವ್ಯ ಟ್ರೋಫಿ-2023 ಮುಂದೂಡಿಕೆ

ಪುತ್ತೂರು: ಫೆ. 26ರಂದು ನೆಹರೂನಗರದ ವಿವೇಕಾನಂದ ಕಾಲೇಜು ಮೈದಾನದಲ್ಲಿ ಪುತ್ತೂರು ಬಾಂಧವ್ಯ ಫ್ರೆಂಡ್ಸ್ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾಟ “ಬಾಂಧವ್ಯ ಟ್ರೋಫಿ-2023” ನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಕಳೆದ 7 ವರ್ಷಗಳಿಂದ ಪುತ್ತೂರಿನಲ್ಲಿ ನಡೆಸುತ್ತಿದ್ದ ಬಾಂಧವ್ಯ ಟ್ರೋಫಿ, ಇಲಾಖಾ ಮಟ್ಟದ ಪಂದ್ಯವಾಗಿ ಜನಮನ್ನಣೆ ಪಡೆದಿದೆ. ಹೆಸರಿನಿಂದ ಇದು ನಿಜಾರ್ಥದ ಬಾಂಧವ್ಯ ಟ್ರೋಫಿಯಾಗಿ ಗುರುತಿಸಿಕೊಂಡಿದೆ.

ಇದೀಗ ಪಂದ್ಯವನ್ನು ಮುಂದೂಡಿದ್ದು, ಮುಂದಿನ ದಿನಾಂಕ ಇನ್ನು ಖಚಿತ ಪಡಿಸಿಲ್ಲ. ಅತೀ ಶೀಘ್ರದಲ್ಲಿ ಪಂದ್ಯದ ದಿನವನ್ನು ತಿಳಿಸಲಾಗುವುದು. ಎಲ್ಲರೂ ಸಹಕರಿಸಬೇಕೆಂದು ಬಾಂಧವ್ಯ ಫ್ರೆಂಡ್ಸ್ ಪ್ರಕಟಣೆ ತಿಳಿಸಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top