ಇಂದು ಕೇಂದ್ರ ಗೃಹ ಸಚಿವ ಅಮಿತ್‍ ಶಾ ಪುತ್ತೂರಿಗೆ | ಕಾರ್ಯಕ್ರಮ ಹೀಗಿದೆ

ಪುತ್ತೂರು : ಅಮಿತ್‍ ಶಾ ಪುತ್ತೂರಿಗೆ ಭೇಟಿ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಮೂರು ಹೆಲಿಪ್ಯಾಡ್‍ಗಳನ್ನು ನಿರ್ಮಿಸಲಾಗಿದೆ. ಕೇರಳದ ಗಡಿ ಭಾಗದಲ್ಲಿರುವ ಹನುಮಗಿರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅಮರಗಿರಿಯಲ್ಲಿ ಭಾರತ್‍ಮಾತಾ ಮಂದಿರವನ್ನು ಉದ್ಘಾಟಿಸುವರು.

ಹೈದರಾಬಾದ್‍ನಿಂದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದು, ಅಲ್ಲಿಂದ ಬಿಎಎಸ್‍ಎಫ್‍ ಹೆಲಿಕ್ಯಾಪ್ಟರ್‍ನಲ್ಲಿ ಬರಲಿರುವ ಅಮಿತ್‍ ಶಾ ಅವರ ಹೆಲಿಕಾಪ್ಟರ್ ಲ್ಯಾಂಡ್‍ ಆಗಲು ಈಶ್ವರಮಂಗಲದ ಗಜಾನನ ಶಾಲಾ ಮೈದಾನದಲ್ಲಿ ಹೆಲಿಪ್ಯಾಡ್‍ ನಿರ್ಮಿಸಲಾಗಿದೆ.

ಹನುಮಗಿರಿ ಕಾರ್ಯಕ್ರಮ ಮುಗಿಸಿ ಹೆಲಿಕ್ಯಾಪ್ಟರ್‍ನಲ್ಲಿ ಬರಲಿರುವ ಶಾ ಅವರು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ರಾಷ್ಟ್ರೀಯ ಗೇರು ನಿರ್ದೇಶನಾಲಯದ ಎದುರಿನ ಮೈದಾನದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‍ನಲ್ಲಿ ಬಂದಿಳಿಯಲಿದ್ದಾರೆ. ಜತೆಗೆ ಸಂತ ಫಿಲೋಮಿನಾ ಕಾಲೇಜಿನ ಮೈದಾನವನ್ನೂ ಹೆಚ್ಚುವರಿ ಹೆಲಿಪ್ಯಾಡ್‍ ಆಗಿ ಬಳಸಲು ನಿರ್ಧರಿಸಲಾಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top