ಶ್ರೀ ಗುರು ಕ್ರೆಡಿಟ್‍ ಕೋ-ಅಪರೇಟಿವ್‍ ಸೊಸೈಟಿಯ ವಿಟ್ಲ ಶಾಖೆ ಉದ್ಘಾಟನೆ

ಬಂಟ್ವಾಳ : ಮೆಲ್ಕಾರ್‍ ಶ್ರೀ ಗುರು ಕ್ರೆಡಿಟ್‍ ಕೋ-ಅಪರೇಟಿವ್‍ ಸೊಸೈಟಿ ಯ 6ನೇ ವಿಟ್ಲ ಶಾಖೆ ವಿಟ್ಲದ ರಸ್ಕಿನ್ಹಾ ಕಾಂಪ್ಲೆಕ್ಸ್‍ನಲ್ಲಿ ಭಾನುವಾರ ಉದ್ಘಾಟನೆಗೊಂಡಿತು,

ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಒಂದು ಗ್ರಾಮದ0 ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆ, ಶಾಲೆ, ಅಂಚೆ ಕಚೇರಿ ಬ್ಯಾಂಕ್‍ಗಳಷ್ಟೇ ಶಕ್ತಿಶಾಲಿ. ಗ್ರಾಹಕರಿಗೆ ಒಳ್ಳೆಯ ಸೌಲಭ್ಯ ನೀಡುವ ಮಟ್ಟಕ್ಕೆ ಸಹಕಾರಿ ಸಂಘಗಳು ಇಂದು ಬೆಳೆದಿದೆ. ಜತೆಗೆ ಜನರಿಗೆ ಬದುಕು, ಉದ್ಯೋಗ ಆರ್ಥಿಕ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರು ಠೇವಣಿ ಪತ್ರ ಬಿಡುಗಡೆ ಮಾಡಿದರು.





























ಸಹಕಾರಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶದಂತೆ ಸಹಕಾರಿ ಬೆಳೆದು ಬಂದಿದೆ. ಹತ್ತು ಕೋಟಿ ವ್ಯವಹಾರ ಮಾಡಿದ್ದು, ಉತ್ತಮ ಡಿವಿಡೆಂಡ್‍ ನೀಡಿದೆ ಎಂದರು.

 
 

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಿಟ್ಲ ಅರಮನೆಯ ಬಂಗಾರು ಅರಸರು ಭದ್ರತಾ ಕೋಶ ಉದ್ಘಾಟಿಸಿದರು. ಉದ್ಯಮಿಗಳಾದ ಶುಭಾಶ್ಚಂದ್ರ ನಾಯಕ್‍, ಬಿ.ಸತೀಶ್‍ ಕುಮಾರ್‍ ಆಳ್ವ, ಸಂಜೀವ ಪೂಜಾರಿ ನಿಡ್ಯ, ವಿಟ್ಲ ಗ್ರಾಮೀಣ ಬ್ಯಾಂಕ್‍ ಅಧ್ಯಕ್ಷ ಜಗನ್ನಾಥ ಸಾಲ್ಯಾನ್‍ ಶುಭ ಹಾರೈಸಿದರು. ಹರೀಶ್‍ ಸಿ.ಹೆಚ್‍., ಕನ್ಯಾನ ದೇಲಂತಬೆಟ್ಟು ಸಂತಪೌಲರ ದೇವಾಲಯದ ಧರ್ಮಗುರು ಸುನಿಲ್‍ ಪ್ರವೀಣ್‍ ಪಿಂಟೋ, ಸಹಕಾರಿ ಉಪಾಧ್ಯಕ್ಷ ರಮೇಶ್‍ ಅನ್ನಪ್ಪಾಡಿ, ನಿರ್ದೇಶಕ ಕೆ.ಸಂಜೀವ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಹಕಾರಿಯ ಮಾಜಿ ಅಧ್ಯಕ್ಷ, ನಿರ್ದೇಶಕ ದಿ.ಕೆ.ಸೇಸಪ್ಪ ಕೋಟ್ಯಾನ್‍ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ನಿರ್ದೇಶಕರಾದ ಉಮೇಶ್‍ ಸುವರ್ಣ ತುಂಬೆ, ರತ್ನಾಕರ ಪೂಜಾರಿ ಮೇಲ್ಕಾರ್‍, ತುಳಸಿ ಇರಾ, ಲಕ್ಷ್ಮೀ ಪೆರ್ವ, ಮುಖ್ಯ ಕಾರ್ಯನರ್ವಹಣಾಧಿಕಾರಿ ಪ್ರವೀಣ್‍, ಶಾಖಾ ವ್ಯವಸ್ಥಾಪಕ ಹೇಮಂತ್‍ ಕುಮಾರ್‍, ಕಟ್ಟಡ ಮಾಲಕರಾದ ಜೋನ್ಸನ್‍ ರಸ್ಕಿನ್‍, ಐರಿನ್‍ ಡಿ’ಸೋಜಾ ಪಾಲ್ಗೊಂಡಿದ್ದರು.

ನಿರ್ದೇಶಕ ರತ್ನಾಕರ ಪೂಜಾರಿ ನಾಡಾರ್‍ ವಂದಿಸಿದರು. ಅಶ್ವಿನಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top