ಮುಂಡೂರಿನಲ್ಲಿ ಯುವತಿ ಹತ್ಯೆ: ಮಾಜಿ ಪ್ರಿಯಕರನಿಂದಲೇ ಕೃತ್ಯ ಶಂಕೆ

ಪುತ್ತೂರು: ಇಲ್ಲಿನ ಮುಂಡೂರು ಕಂಪದಲ್ಲಿ ಯುವತಿಯನ್ನು ಇರಿದು ಹತ್ಯೆಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತ ಯುವತಿ ಜಯಶ್ರೀ (23). ಬಿಎಸ್ಸಿ ಪದವೀಧರೆಯಾಗಿರುವ ಈಕೆಯನ್ನು ಭಗ್ನಪ್ರೇಮಿ ಇರಿದು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.

ಮಂಗಳವಾರ ಮಧ್ಯಾಹ್ನ 11.30ಕ್ಕೆ ಮುಂಡೂರಿನ ಯುವತಿ ಮನೆಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಮೃತ ಜಯಶ್ರೀ ಅವರು ದಿ. ಗುರುವ ಹಾಗೂ ಗಿರಿಜಾ ಎಂಬವರ ಪುತ್ರಿ. ಕಳೆದ ವರ್ಷ ಗುರುವ ಅವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದರು.





























 
 

ಘಟನೆ:

ಮೃತ ಯುವತಿ ಜಯಶ್ರೀಯ ಸಹೋದರ ಮಂಗಳೂರಿಗೆ ತೆರಳಿದ್ದ. ತಾಯಿ ತೋಟಕ್ಕೆಂದು ಹೋಗಿದ್ದಾಗ, ಜಯಶ್ರೀ ಮನೆಯಲ್ಲಿದ್ದರು. ಮಧ್ಯಾಹ್ನ 11.30ರ ಸುಮಾರಿಗೆ ಜಯಶ್ರೀ ಅಳುತ್ತಾ ಓಡಿಕೊಂಡು ಬಂದಿದ್ದು, ನೋಡಿದಾಗ ಹೊಟ್ಟೆಗೆ ಇರಿದ ಗಾಯವಾಗಿತ್ತು. ತೀವ್ರ ರಕ್ತಸ್ರಾವ ಆಗುತ್ತಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆ ಬಳಿಕ ಜಯಶ್ರೀ ಅವರ ತಾಯಿ ಪೊಲೀಸ್ ದೂರು ನೀಡಿದ್ದು, ದೂರಿನಲ್ಲಿ ಮಾಜಿ ಪ್ರಿಯಕರ ಕನಕಮಜಲಿನ ಉಮೇಶ ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಉಮೇಶನ ಗುಣ ನಡತೆಯಿಂದ ಅಸಾಮಾಧಾನಗೊಂಡಿದ್ದ ಜಯಶ್ರೀ ಎರಡು ತಿಂಗಳ ಹಿಂದೆ, ಆತನನ್ನು ದೂರ ಮಾಡಿದ್ದಳು ಎಂದು ಹೇಳಲಾಗಿದೆ. ಇದೇ ಸೇಡಿನಲ್ಲಿ ಆತ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top