ಭಜನೆ ಬಗ್ಗೆ ಅವಹೇಳನಕಾರಿ ಹೇಳಿಕೆ: ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಭಜನೆ ಹಾಡಿ ಪ್ರತಿಭಟನೆ

ಪುತ್ತೂರು: ಭಜನೆಯ  ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಸಂದರ್ಭ ಪ್ರತಿಭಟನಾಕಾರರು ಭಜನೆಯನ್ನು ಹಾಡಿ, ಅಧಿಕಾರಿಯ ಹೇಳಿಕೆಯನ್ನು ಖಂಡಿಸಿದರು. ವಲಯ ಅರಣ್ಯಾಧಿಕಾರಿಯವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರನ್ನು ಸಮಾಧಾನಿಸಲು ಪ್ರಯತ್ನಿಸಿದರೂ, ಫಲ ನೀಡಲಿಲ್ಲ.

ಹೋರಾಟದಲ್ಲಿ ಪಮುಖರಾದ ಮುರಳಿಕೃಷ್ಣ ಹಸಂತಡ್ಕ, ಅಜಿತ್ ಹೊಸಮನೆ, ಶ್ರೀಧರ ತೆಂಕಿಲ, ಲತೀಶ್ ಕುಂಡ್ಯಾ, ನವೀನ್ ರೆಕ್ಯ, ಸಂತೋಷ್ ಕುಮಾರ್ ಕೈಕಾರ, ಕೃಷ್ಣ ಕುಮಾರ್ ಕೆದಂಬಾಡಿ, ದಿನೇಶ್ ಪಂಜಿಗ, ಕೃಷ್ಣ ಪ್ರಸಾದ್ ಪುತ್ತೂರು, ಜಯಂತ್ ಕುಂಜೂರ್ ಪಂಜ  ಉಪಸ್ಥಿತರಿದ್ದರು.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top