ಕ್ರೈಸ್ತ ಸಮುದಾಯದ ಯುವಕನಿಂದ ದೈವ ನರ್ತನ!

ದೈವಾರಾಧನೆ ಪರಂಪರೆಗೆ ಧಕ್ಕೆಯಾಗಿದೆ ಎಂದು ಪಂಬದ ಸಮುದಾಯದವರ ಆರೋಪ ಮಂಗಳೂರು : ತುಳುನಾಡಿನ ಪ್ರಸಿದ್ಧ ದೈವಾರಾಧನೆ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ. ಮಂಗಳೂರಿನ ಪ್ರಸಿದ್ಧ ದೈವಸ್ಥಾನವೊಂದರ ನೇಮೋತ್ಸವದಲ್ಲಿ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನವರಿ 31ರಂದು ಮಂಗಳೂರಿನ ಪ್ರಸಿದ್ಧ ದೈವಕ್ಷೇತ್ರದಲ್ಲಿ ಶ್ರೀ ಜಾರಂದಾಯ ಹಾಗೂ ಬಂಟ ದೈವಕ್ಕೆ ನೇಮೋತ್ಸವ ನಡೆದಿತ್ತು. ಸಂಪ್ರದಾಯದಂತೆ ದೈವ ನರ್ತನ ಸೇವೆಯನ್ನು ನಲಿಕೆ, ಪರವ ಹಾಗೂ ಪಂಬದ ಸಮುದಾಯದವರು ಮಾತ್ರ ಮಾಡಬೇಕು ಎಂಬ […]

ಕ್ರೈಸ್ತ ಸಮುದಾಯದ ಯುವಕನಿಂದ ದೈವ ನರ್ತನ! Read More »

ತನ್ನೂರಿನ ಜಾತ್ರೆಗೆ ಒಂದು ಲೋಡ್‌ ಸಿಲಿಂಡರ್‌ ಕೊಡಿಸಿದ ಸಿದ್ದರಾಮಯ್ಯ?

200-250 ಸಿಲಿಂಡರ್‌ ಸಿದ್ದರಾಮಯ್ಯ ಜಾತ್ರೆಗೆ ಕೊಡಿಸಿದ್ದಾರೆ ಎಂದು ಆರೋಪ ಮೈಸೂರು: ತನ್ನ ಊರಿನ ಜಾತ್ರೆಯ ಭೋಜನ ಪ್ರಸಾದ ತಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಭಾವ ಬಳಸಿ ಒಂದು ಲೋಡ್‌ ಗ್ಯಾಸ್‌ ಸಿಲಿಂಡರ್‌ ಕೊಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರ ವರಕೊಡುನಲ್ಲಿ ಜಾತ್ರೆ ಹಿನ್ನೆಲೆ ಸಿಎಂ ತಮ್ಮ ಪ್ರಭಾವ ಬಳಸಿ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ. ಶುಕ್ರವಾರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವರಕೊಡುನಲ್ಲಿ ದೊಡ್ಡ ಜಾತ್ರೆ ನಡೆಯಿತು. ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ

ತನ್ನೂರಿನ ಜಾತ್ರೆಗೆ ಒಂದು ಲೋಡ್‌ ಸಿಲಿಂಡರ್‌ ಕೊಡಿಸಿದ ಸಿದ್ದರಾಮಯ್ಯ? Read More »

ಮುಂದುವರಿದ ಗ್ಯಾಸ್‌ ಸಮಸ್ಯೆ : ಅನೇಕ ಹೋಟೆಲ್‌ಗಳು ಬಂದ್‌

ಅಕ್ರಮವಾಗಿ ಸಂಗ್ರಹಿಸಿಟ್ಟವರ ಮೇಲೆ ದಾಳಿ ; ಕಾಳಸಂತೆಯಲ್ಲಿ 4 ಪಟ್ಟು ದರ ಬೆಂಗಳೂರು: ಇಸ್ರೆಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮ ಗ್ಯಾಸ್‌ ಕೊರತೆಯಾಗಿ ಜನರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದ ಎಲ್ಲೆಡೆ ಸಿಲಿಂಡರ್‌ ಇಲ್ಲದೆ ಹೋಟೆಲ್‌ಗಳು ಮುಚ್ಚಿವೆ. ಈ ನಡುವೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ. ಈ ಸಂಬಂಧ

ಮುಂದುವರಿದ ಗ್ಯಾಸ್‌ ಸಮಸ್ಯೆ : ಅನೇಕ ಹೋಟೆಲ್‌ಗಳು ಬಂದ್‌ Read More »

ಮಾ.15: ಕಂಪ್ರೆಸ್ಡ್ ಬಯೋ ಗ್ಯಾಸ್(ಸಿ. ಬಿ. ಜಿ.) ಘಟಕ ಲೋಕಾರ್ಪಣೆ ಸಮಾರಂಭ

ಪುತ್ತೂರು: ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್.ಎಲ್. ಪಿ ಮತ್ತು ರೋಟರಿ ಕ್ಲಬ್ ಪುತ್ತೂರು ಈಸ್ಟ್, ಸ್ವಚ್ಛಭಾರತ್ ಚಾರಿಟೇಬಲ್ ಟ್ರಸ್ಟ್ ಮತ್ತು ರಿಟ್ಯಾಪ್ ಸೊಲ್ಯೂಷನ್ಸ್ ಇವರ ಸಾರಥ್ಯದಲ್ಲಿ ಹಾಗೂ ನಗರಸಭಾ ಪುತ್ತೂರು ಇದರ ಸಹಯೋಗದೊಂದಿಗೆ ಸ್ವಚ್ಛ ಪುತ್ತೂರು ಅಭಿಯಾನದ ಪ್ರಮುಖ ಯೋಜನೆಯಾಗಿರುವ ಭಾರತದ ನಗರಸಭಾ ವ್ಯಾಪ್ತಿಯಲ್ಲಿ ಪ್ರಪ್ರಥಮವಾಗಿ ನಿರ್ಮಾಣಗೊಂಡಿರುವ ಕಂಪ್ರೆಸ್ಡ್ ಬಯೋ ಗ್ಯಾಸ್(ಸಿ. ಬಿ. ಜಿ.) ಘಟಕ ಇದರ ಲೋಕಾರ್ಪಣೆ ಮಾ. 15 ರಂದು ಬೆಳಗ್ಗೆ 10.30 ಕ್ಕೆ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ‌ನಡೆಯಲಿದೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು

ಮಾ.15: ಕಂಪ್ರೆಸ್ಡ್ ಬಯೋ ಗ್ಯಾಸ್(ಸಿ. ಬಿ. ಜಿ.) ಘಟಕ ಲೋಕಾರ್ಪಣೆ ಸಮಾರಂಭ Read More »

ಭಾರತ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದೆ ಕಾಂಗ್ರೆಸ್ : ಪ್ರಧಾನಿ ಮೋದಿ

ಅಸ್ಸಾಂ: ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧಕ್ಕೆ ಸಂಬಂಧಿಸಿದಂತೆ ಒಂದು ಹಳೆಯ ಪಕ್ಷ ಭಾರತೀಯರಲ್ಲಿ ಆತಂಕ ಸೃಷ್ಟಿ ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ನಮ್ಮ ಸರ್ಕಾರ ಈ ಸಂಘರ್ಷದ ಪರಿಣಾಮ ನಮ್ಮ ನಾಗರಿಕರ ಮೇಲೆ ಕಡಿಮೆಯಾಗುವಂತೆ ಮಾಡಲು ಪ್ರಯತ್ನವನ್ನು ಮಾಡುತ್ತಿದೆ. ಹಲವು ಜಾಗತಿಕ ಶಕ್ತಿಗಳಿಗೆ ಭಾರತದ ತ್ವರಿತ ಅಭಿವೃದ್ಧಿಯನ್ನು ಜೀರ್ಣ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅಂತಹ ಶಕ್ತಿಗಳ ಕೈಯಲ್ಲಿ ಕಾಂಗ್ರೆಸ್ ಕೈಗೊಂಬೆಯಂತಾಗಿದೆ. ದೇಶದ ಹಿತಾಸಕ್ತಿಯ ವಿಷಯದಲ್ಲಿ ಕಾಂಗ್ರೆಸ್ ಮತ್ತೆ ವಿಫಲವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಭಾರತ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದೆ ಕಾಂಗ್ರೆಸ್ : ಪ್ರಧಾನಿ ಮೋದಿ Read More »

ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ಮಡಿಕೇರಿ: ಕೆರೆಯಲ್ಲಿ ಈಜಾಟ ನಡೆಸಲು ಹೋಗಿದ್ದ ಕಾರ್ಮಿಕನೊಬ್ಬ ‌ಮುಳುಗಿ ಸಾವನ್ನಪ್ಪಿದ ಘಟನೆ ಸಿದ್ಧಾಪುರ ಠಾಣಾ ವ್ಯಾಪ್ತಿಯ ಹಾಲುಗುಂದದಲ್ಲಿ ‌ನಡೆದಿದೆ. ಮೃತನನ್ನು ‌ಕಾಫಿ ತೋಟದ ಕಾರ್ಮಿಕನಾಗಿದ್ದ ಅಣ್ಣಪ್ಪ (26) ಎಂದು ಗುರುತಿಸಲಾಗಿದೆ. ಅಣ್ಣಪ್ಪ ಅವರು ಗುರುವಾರ ಸಂಜೆ ಕಾಫಿ ತೋಟದ ಕೆರೆಗೆ ಈಜಾಟಕ್ಕೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಣ್ಣಪ್ಪನ ಜೊತೆ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ಅವರಿಗಾಗಿ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತ ತಾಯಿ ಸಿದ್ದಾಪುರ

ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು Read More »

ಮಂಗಳೂರು, ಅಂಬೇಡ್ಕರ್ ಭವನ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ

ಉರ್ವ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ 2025ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಮತ್ತು ವಾದ್ಯ ಪರಿಕರಗಳ ವಿತರಣೆ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಎಂ. ಬಿ. ಸದಾಶಿವ ಅವರು ಸಾಧಕರನ್ನು ಸನ್ಮಾನಿಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿ ಸನ್ಮಾನಿತರ ಸಾಧನೆಗಳನ್ನು ವಿಷದಪಡಿಸಿದರು. ವಿವಿಧತೆಯಲ್ಲಿ ಏಕತೆಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರದ

ಮಂಗಳೂರು, ಅಂಬೇಡ್ಕರ್ ಭವನ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ Read More »

ಬೈಕ್‌ಗಳ ನಡುವೆ ಭೀಕರ ಅಪಘಾತ: ಯುವಕ ಮೃತ್ಯು

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಎರಡು ಬೈಕುಗಳ ‌ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ‌ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಶಂಭೂರು ನಿವಾಸಿ ರಕ್ಷಿತ್ ‌ಶೆಟ್ಟಿ(43) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಕ್ಷಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಉತ್ತಮ ವಿಡಿಯೋಗ್ರಾಫರ್ ಆಗಿದ್ದ ಅವರು ಬಂಟ್ವಾಳ ವಲಯ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಅವರ ಮನೆಯಲ್ಲಿ ತಮ್ಮ ಮಗಳ 10 ನೇ ಹುಟ್ಟುಹಬ್ಬಕ್ಕೆ ‌ಸಿದ್ಧತೆ ಸಹ ನಡೆಸಿದ್ದರು.

ಬೈಕ್‌ಗಳ ನಡುವೆ ಭೀಕರ ಅಪಘಾತ: ಯುವಕ ಮೃತ್ಯು Read More »

ಗೆಳತಿಯನ್ನು ಕೊಲೆಗೈದ ಲಿವ್ ಇನ್ ಟುಗೆದರ್ ಪಾರ್ಟ್ನರ್

ಬೆಂಗಳೂರು: ಲಿವ್ ಇನ್ ಟುಗೆದರ್‌ನಲ್ಲಿದ್ದ ಗೆಳತಿಯನ್ನು ವೈರ್ ಬಳಸಿ ಕತ್ತು ಬಿಗಿದು ಹತ್ಯೆ ಮಾಡಿದ ಘಟನೆ ವರ್ತೂರಿನಲ್ಲಿ ನಡೆದಿದೆ. ಮೃತಳನ್ನು ‌ಕೊಡಗು ಮೂಲದ ರಂಜಿತಾ ಎಂದು ಗುರುತಿಸಲಾಗಿದೆ.‌ ಅಯ್ಯಪ್ಪ ಎಂಬವನೇ ಕೊಲೆ ಮಾಡಿರುವ ಆರೋಪಿ. ಆರೋಪಿ ಮತ್ತು ಕೊಲೆಯಾದ ರಂಜಿತಾ ಲಿವಿನ್ ಟುಗೆದರ್ ಸಂಬಂಧದಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಆರೋಪಿ ಅಯ್ಯಪ್ಪ‌ನಿಗೆ ಈ ಮೊದಲೇ ವಿವಾಹವಾಗಿದ್ದು, ಈ ಸಂಗತಿ ರಂಜಿತಾ‌ಗೆ ಗೊತ್ತಿರಲಿಲ್ಲ. ಆದರೆ ಸತ್ಯ ಗೊತ್ತಾದ ಬಳಿಕ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಗಲಾಟೆ ತಾರಕಕ್ಕೇರಿದಾಗ

ಗೆಳತಿಯನ್ನು ಕೊಲೆಗೈದ ಲಿವ್ ಇನ್ ಟುಗೆದರ್ ಪಾರ್ಟ್ನರ್ Read More »

ಮಗನ ಸಾವಿನ ನೋವಿನಲ್ಲಿ ‌ದಂಪತಿ ಆತ್ಮಹತ್ಯೆ

ಪೊಯಿನಾಚಿ: ಮಗನ ಸಾವಿನ ನೋವಿನಿಂದ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮೇಲ್ಪರಂಬ ಠಾಣಾ ‌ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಪೊಯಿನಾಚಿ ಪರಂಬದ ‌ವೇಣುಗೋಪಾಲನ್(55) ಮತ್ತು ಅವರ ಹೆಂಡತಿ ಸ್ಮಿತಾ(45) ಎಂದು ಗುರುತಿಸಲಾಗಿದೆ. ದಂಪತಿಯ ಪುತ್ರ ಶಿವಾನಂದ್(19) ಎಂಬಾತ ಕಳೆದ ಡಿ. 29 ರಂದು ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಆ ಬಳಿಕ ದಂಪತಿ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ಎಷ್ಟೇ ಹೊತ್ತಾದರೂ ವೇಣುಗೋಪಾಲನ್ ಅವರ ಮನೆಯ ಬಾಗಿಲು ತೆರೆಯದೇ ಇದ್ದು, ಸಂದೇಹದಿಂದ ನೆರೆಹೊರೆಯವರು ಇಣುಕಿ ನೋಡಿದ್ದು,

ಮಗನ ಸಾವಿನ ನೋವಿನಲ್ಲಿ ‌ದಂಪತಿ ಆತ್ಮಹತ್ಯೆ Read More »

error: Content is protected !!
Scroll to Top