ಸುದ್ದಿ

ಗೃಹ ಬಳಕೆ ಸಿಲಿಂಡರ್‌ ಬೆಲೆ ದಿಢೀರ್‌ 60 ರೂ. ಏರಿಕೆ

ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಮತ್ತೆ 115 ರೂ. ಹೆಚ್ಚಳ ನವದೆಹಲಿ: ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಉಳಿದ ದೇಶಗಳ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. BHಳ ಸಮಯದ ಬಳಿಕ ಭಾರತದಲ್ಲಿ ಗೃಹಬಳಕೆಯ ಸಿಲಿಂಡರ್‌ ಬೆಲೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯೂ ಹೆಚ್ಚಾಗಿದೆ. 14.2 ಕಿಲೋಗ್ರಾಂ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 60 ರೂ. ಹೆಚ್ಚಿಸಲಾಗಿದ್ದು, ಇದರೊಂದಿಗೆ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 853 ರೂ.ನಿಂದ 913ಕ್ಕೆ ಏರಿಕೆಯಾಗಿದೆ. ಅದೇ ರೀತಿ […]

ಗೃಹ ಬಳಕೆ ಸಿಲಿಂಡರ್‌ ಬೆಲೆ ದಿಢೀರ್‌ 60 ರೂ. ಏರಿಕೆ Read More »

ಬುರ್ಖಾ ಹಾಕಿ ಹೋಳಿ ಹಬ್ಬ ಆಚರಿಸಿದ ಯುವಕರು ಪೊಲೀಸರ ವಶಕ್ಕೆ

ಕಲಬುರ್ಗಿ: ಹೋಳಿ ಹಬ್ಬವನ್ನು ತಮ್ಮ ಗೆಳೆಯನಿಗೆ ಬುರ್ಖಾ ಧರಿಸಿ ಆಚರಿಸಿದ ಯುವಕರ ವಿರುದ್ಧ ಮುಸ್ಲಿಂ ಸಮುದಾಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಹೋಳಿ ಆಡುವ ವೇಳೆ ಗೆಳೆಯನೊಬ್ಬನಿಗೆ ಹಿಜಾಬ್, ಬುರ್ಖಾ ಹಾಕಿಸಿ ವಿವಿಧ ಭಂಗಿಯಲ್ಲಿ ನೃತ್ಯ ಮಾಡಿಸಿ, ಫೋಟೋ ತೆಗೆಸಿ, ವಿಡಿಯೋ ಮಾಡಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಹಾಗೆಯೇ ಬುರ್ಖಾ ಧರಿಸಿದ ಯುವಕನನ್ನು ಗರ್ಭಿಣಿಯಂತೆ ನಟನೆ ಮಾಡಿಸಿ ಫೋಟೋ ತೆಗೆದು ಹಾಕಿದ್ದರು. ಇವೆಲ್ಲವೂ ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.

ಬುರ್ಖಾ ಹಾಕಿ ಹೋಳಿ ಹಬ್ಬ ಆಚರಿಸಿದ ಯುವಕರು ಪೊಲೀಸರ ವಶಕ್ಕೆ Read More »

ಸಿಎಂ ಸಿದ್ದರಾಮಯ್ಯ ಅವರ ‘ಬ್ರದರ್ಸ್ ಬಜೆಟ್’ ಬಗ್ಗೆ ಬಿಜೆಪಿ ಟೀಕೆ

ಬೆಂಗಳೂರು: ಸಿ ಎಂ ಸಿದ್ದರಾಮಯ್ಯ ಸರ್ಕಾರದ ಬಜೆಟ್‌ಗೆ ‘ಬ್ರದರ್ಸ್ ಬಜೆಟ್’ ಎಂದು ಕರೆದಿರುವ ಬಿಜೆಪಿ, ಟೀಕೆಗಳ ಸುರಿಮಳೆಯನ್ನೇ ‌ಮಾಡಿದೆ. ಬಿಜೆಪಿ ನಾಯಕರು ಎಕ್ಸ್ ಖಾತೆಯಲ್ಲಿ ಬಜೆಟ್ ವಿರುದ್ಧ ಟೀಕೆಗಳನ್ನು ಮಾಡಿದ್ದು, ಅಲ್ಪಸಂಖ್ಯಾತರ ಶಾಲೆಗಳನ್ನು ಕೆಪಿಎಸ್‌ ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ರೂ., ಅಲ್ಪಸಂಖ್ಯಾತರ ವಸತಿ ಶಾಲೆಗಳ ಆರಂಭ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಅಲ್ಪಸಂಖ್ಯಾತ ಕಾಲೋನಿಗಳ ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು, ಅಲ್ಪಸಂಖ್ಯಾಂತ ನಿರ್ಗತಿಕರಿಗೆ ಎರಡು ವೃದ್ಧಾಶ್ರಮ ಆರಂಭ, ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ 3 ಲಕ್ಷ

ಸಿಎಂ ಸಿದ್ದರಾಮಯ್ಯ ಅವರ ‘ಬ್ರದರ್ಸ್ ಬಜೆಟ್’ ಬಗ್ಗೆ ಬಿಜೆಪಿ ಟೀಕೆ Read More »

ಮಾ. 8: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಹತ್ತೂರೊಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಮಾ. 8 ರಂದು ಬಿಡುಗಡೆ ಮಾಡಲಿದ್ದಾರೆ. ಮಹಾಲಿಂಗೇಶ್ವರ ದೇಗುಲದಲ್ಲಿ ಮಾ. 8 ರಂದು 11 ಗಂಟೆಗೆ ದೇಗುಲದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ಎ. 1 ರಂದು ಜಾತ್ರಾ ಪ್ರಯುಕ್ತ ಗೊನೆ ‌ಮುಹೂರ್ತ ನಡೆಯಲಿದ್ದು, ಎ. 19 ರ ವರೆಗೆ ಪುತ್ತೂರು ಜಾತ್ರೆ ಬಹಳಷ್ಟು ವೈಭವದಿಂದ ನಡೆಯಲಿದೆ. ಪ್ರಧಾನ ವಿಧಿ

ಮಾ. 8: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಹದಿನಾರರೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ: ಸಿಎಂ ಸಿದ್ದರಾಮಯ್ಯ ಅವರ ದಿಟ್ಟ ನಿಲುವು

ಬೆಂಗಳೂರು: ಹದಿನಾರು ವರ್ಷದೊಳಗಿನ ಮಕ್ಕಳಿಗೆ ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವಂತಹ ದಿಟ್ಟ ನಿಲುವನ್ನು ಸಿಎಂ ‌ಸಿದ್ದರಾಮಯ್ಕ ಅವರ ನೇತೃತ್ವದ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ಇಂದಿನ ಬಜೆಟ್ ಮಂಡನೆಯ ವೇಳೆ ಸಿಎಂ ‌ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದು ಅವರ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ಹದಿನಾರರ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧದಂತಹ ಕ್ರಮ ಕೈಗೊಳ್ಳಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ. ಹಾಗೆಯೇ ಮಾದಕ

ಹದಿನಾರರೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ: ಸಿಎಂ ಸಿದ್ದರಾಮಯ್ಯ ಅವರ ದಿಟ್ಟ ನಿಲುವು Read More »

ದಿ ಕೇರಳ ಸ್ಟೋರಿ 2 ಉಚಿತ ಪ್ರದರ್ಶನ: ವೀಕ್ಷಿಸಿದ ಯುವತಿಯರಿಗೆ ಬಂತು ಬೆದರಿಕೆ ಕರೆ

ಪುತ್ತೂರು: ನಗರದ ಜಿ. ಎಲ್. ಒನ್ ಮಾಲ್‌ನಲ್ಲಿ ಸೀತಾ ಪರಿವಾರ ಸಂಘಟನೆಯ ವತಿಯಿಂದ ‘ದಿ ಕೇರಳ ಸ್ಟೋರಿ 2’ ಚಿತ್ರವನ್ನು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪ್ರದರ್ಶಿಸಲಾಗಿದ್ದು, ಇದರ ಬೆನ್ನಲ್ಲೇ ಈ ವಿಷಯದ ಸುತ್ತ ಹೊಸ ವಿವಾದಗಳು ಸೃಷ್ಟಿಯಾಗಿವೆ. ಕೆಲವು ರಾಜಕೀಯ ನಾಯಕರು ಈ ಚಿತ್ರದ ಪ್ರದರ್ಶನಕ್ಕೆ ಬೆಂಬಲ ಸೂಚಿಸಿದ್ದರು. ವಿದ್ಯಾರ್ಥಿಗಳು ಸಹ ಚಿತ್ರವನ್ನು ನೋಡಿದ್ದರು. ಅದಾದ ಬಳಿಕ ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಚಾರಗಳನ್ನು ಕೆಲವು ವಿಘ್ನಸಂತೋಷಿಗಳು ಹರಡಲು ಆರಂಭಿಸಿದ್ದಾರೆ. ಜೊತೆಗೆ ಚಲನಚಿತ್ರದ ಬುಕ್ಕಿಂಗ್‌ಗಾಗಿ

ದಿ ಕೇರಳ ಸ್ಟೋರಿ 2 ಉಚಿತ ಪ್ರದರ್ಶನ: ವೀಕ್ಷಿಸಿದ ಯುವತಿಯರಿಗೆ ಬಂತು ಬೆದರಿಕೆ ಕರೆ Read More »

ಬಜೆಟ್‌ ಮುಖ್ಯಾಂಶಗಳು : 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ನಿಷೇಧ

ಮೀನುಗಾರಿಕೆ ಪ್ರೋತ್ಸಾಹ ಧನ ಹೆಚ್ಚಳ ಅಡಿಕೆ ಎಲೆಚುಕ್ಕಿ, ಹಳದಿ ಚುಕ್ಕಿ ರೋಗ ನಿವಾರಣೆ 10 ಕೋಟಿ ರೂ. ಮೀಸಲು ಬೆಂಗಳೂರೂ : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೆರ ಸರಿಯಾಗಿ ಬಜೆಟ್‌ ಮಂಡನೆ ಪ್ರಾರಂಭಿಸಿದ್ದಾರೆ. ಬಜೆಟ್‌ ಘೋಷಣೆಯ ಕೆಲವು ಮುಖ್ಯಾಂಶಗಳು ಇಲ್ಲಿವೆ. *ಮೀನುಗಾರಿಕೆ ಪೋತ್ರಾಹಧನ 20 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಮಂಗಳೂರು ಮೀನುಗಾರಿಕಾ ವಿವಿಯಲ್ಲಿ ಸೆಂಟರ್ ಆಫ್ ಎಕ್ಸ್‌ಲೆನ್ಸ್, ಮೀನು ಮಾರಾಟ ಮಾಡಲು ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು. ಉತ್ತರ ಕನ್ನಡ, ದಕ್ಷಿಣ

ಬಜೆಟ್‌ ಮುಖ್ಯಾಂಶಗಳು : 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ನಿಷೇಧ Read More »

ಆರು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯ ಬಂಧನ

ಧರ್ಮಸ್ಥಳ: ಕಳ್ಳತನ ಪ್ರಕರಣವೊಂದರ ಆರೋಪಿ ಕಳೆದ ಆರು ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದು, ಆತನನ್ನು ತುಮಕೂರಿನ ತಿಪಟೂರಿನಲ್ಲಿ ಧರ್ಮಸ್ಥಳ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬಂಧಿತನನ್ನು ಬೆಂಗಳೂರಿನ ಕುಂಬಳಗೋಡು ನಿವಾಸಿ ವೆಂಕಟೇಶ್ ಯಾನೆ ಡಾಬರ್ ವೆಂಕಟೇಶ್ ಎಂದು ಗುರುತಿಸಲಾಗಿದೆ. 2017 ರ ಸಮಯದಲ್ಲಿ ಡಾಬರ್ ವೆಂಕಟೇಶ್ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಕಳ್ಳತನಕ್ಕೆ ‌ಸಂಬಂಧಿಸಿದ ಪ್ರಕರಣವೊಂದು ದಾಖಲಾಗಿತ್ತು. ಸತತ ಆರು ವರ್ಷಗಳಿಂದ ಆತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ. ಸದ್ಯ ಆರೋಪಿ ಧರ್ಮಸ್ಥಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯ ಬಂಧನ Read More »

ಆರು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಉಪ್ಪಿನಂಗಡಿ: ನ್ಯಾಯಾಲಯಕ್ಕೆ ರಾಜನಾದ ಬಳಿಕ ಕಳೆದ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದಲ್ಲಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಕಡಬದ ವಿನೋದ್ ಯಾನೆ ಜಾರ್ಜ್ ಕುಟ್ಟಿ ಸೆಬಾಸ್ಟಿಯನ್ ಎಂದು ಗುರುತಿಸಲಾಗಿದೆ. ಆರೋಪಿ ವಿನೋದ್‌ನ ಮೇಲೆ 2019 ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಜೀವ ಬೆದರಿಕೆ ಮೊದಲಾದ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ದಾಖಲಾದ ಬಳಿಕ ಆತ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಸದ್ಯ ಉಪ್ಪಿನ ಗಡಿ ಪೊಲೀಸರು ಮಾರ್ಚ್ 5 ರಂದು ಆರೋಪಿಯನ್ನು

ಆರು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ Read More »

ಪತ್ನಿಯ ಮೇಲೆ ಆ್ಯಸಿಡ್ ಹಾಕಿದ ಪತಿ

ಊಟ ತಂದು ಕೊಡಲಿಲ್ಲ ಎಂದು ಸಿಟ್ಟಿಗೆದ್ದ ಗಂಡನಿಂದ ಕೃತ್ಯ ಬೆಳ್ತಂಗಡಿ: ಪತಿಯೇ ಪತ್ನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಗಾಯಗೊಳಿಸಿದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಪ್ಲೊಟ್ಟುನಲ್ಲಿ ನಡೆದಿದೆ. ಕುಪ್ಲೊಟ್ಟು ನಿವಾಸಿ ಲಿಂಗಪ್ಪ ಪ್ರಕರಣದ ಆರೋಪಿಯಾಗಿದ್ದು, ಆ್ಯಸಿಡ್ ದಾಳಿಗೊಳಗಾದ ಆತನ ಪತ್ನಿ ಸರೋಜ(44) ಎಂಬವರು ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಸರೋಜಾ ಗಂಡ ಊಟ ಕೇಳಿದ ಸಂದರ್ಭದಲ್ಲಿ ಊಟವನ್ನು ನೀಡಿರಲಿಲ್ಲ. ಬಳಿಕ ಪಕ್ಕದ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಬಂದು ಮಲಗಿದ ಸಂದರ್ಭದಲ್ಲಿ

ಪತ್ನಿಯ ಮೇಲೆ ಆ್ಯಸಿಡ್ ಹಾಕಿದ ಪತಿ Read More »

error: Content is protected !!
Scroll to Top