ದೇಶ

ಎಲ್‌ಪಿಜೆ ಕೊರತೆ : ಕಲ್ಲಿದ್ದಲು, ಪಿಎನ್‌ಜಿ ಬಳಸಲು ಕೇಂದ್ರ ಸರ್ಕಾರ ಸಲಹೆ

ಯುದ್ಧದಿಂದಾಗಿ ಅಡುಗೆ ಅನಿಲ ಪೂರೈಕೆ ವ್ಯತ್ಯಯವಾಗಿ ಸಮಸ್ಯೆ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧ ತೀವ್ರಗೊಂಡಿದ್ದು, ಸದ್ಯಕ್ಕೆ ನಿಲ್ಲುವ ಸಾಧ್ಯತೆಯಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ಯಾಸ್‌ ಮಿತವಾಗಿ ಬಳಸುವಂತೆ ಸಲಹೆ ನೀಡಿದೆ. ಯುದ್ಧದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದ್ದು, ಯುದ್ಧ ಇದೇ ರೀತಿ ಮುಂದುವರಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಹೋಟೆಲ್‌ಗಳು ಹಾಗೂ ವಾಣಿಜ್ಯ ಸಂಸ್ಥಾಪನೆಗಳು ಕಲ್ಲಿದ್ದಲು ಹಾಗೂ ಪರ್ಯಾಯ ಇಂಧನ ಬಳಸುವ ಮೂಲಕ ಮಿತವ್ಯಯ ಮಾಡಬೇಕು ಹಾಗೂ ಮನೆಗಳಲ್ಲಿ ಪಿಎನ್‌ಜಿ ಅನಿಲ ಬಳಕೆ ಮಾಡುವಂತೆ ಕೇಂದ್ರ ಸರ್ಕಾರ […]

ಎಲ್‌ಪಿಜೆ ಕೊರತೆ : ಕಲ್ಲಿದ್ದಲು, ಪಿಎನ್‌ಜಿ ಬಳಸಲು ಕೇಂದ್ರ ಸರ್ಕಾರ ಸಲಹೆ Read More »

ರಷ್ಯಾದಿಂದ ತೈಲ ಖರೀದಿಸಲು ಭಾರತದ ಬಳಿ ಅಮೆರಿಕ ಬೇಡಿಕೊಂಡಿತ್ತು

ಇರಾನ್‌ ವಿದೇಶಾಂಗ ಸಚಿವ ಬಹಿರಂಗಪಡಿಸಿದ ರಹಸ್ಯ ಟೆಹ್ರಾನ್‌: ರಷ್ಯಾದಿಂದ ತೈಲ ಖರೀದಿಸುವಂತೆ ಭಾರತಕ್ಕೆ ಅಮೆರಿಕ ಅನುಮತಿ ನೀಡಿದ್ದಲ್ಲ ಬದಲಾಗಿ ಬೇಡಿಕೊಂಡದ್ದು ಎಂದು ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಬಹಿರಂಗಪಡಿಸಿದ್ದಾರೆ. ಭಾರತವೂ ಸೇರಿದಂತೆ ವಿವಿಧ ದೇಶಗಳ ಬಳಿ ಈಗ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬೇಡಿಕೊಳ್ಳುವ ಸ್ಥಿತಿಗೆ ಅಮೆರಿಕವನ್ನು ತಂದು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ಮದ್ಯಪ್ರಾಚ್ಯ ಯುದ್ಧ ಶುರುವಾದ ಬಳಿಕ ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು,

ರಷ್ಯಾದಿಂದ ತೈಲ ಖರೀದಿಸಲು ಭಾರತದ ಬಳಿ ಅಮೆರಿಕ ಬೇಡಿಕೊಂಡಿತ್ತು Read More »

ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ನಟ ಮೋಹನ್ ಲಾಲ್

ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಲಯಾಳಂ ಚಿತ್ರರಂಗದ ಹೆಸರಾಂತ ಹಿರಿಯ ನಟ ಮೋಹನ್ ಲಾಲ್ ಅವರು ಶ್ಲಾಘಿಸಿದ್ದಾರೆ. ಪಾಡ್‌ಕಾಸ್ಟ್ ಒಂದರಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ ಲಾಲೇಟನ್, ಪ್ರಧಾನಿ ಮೋದಿ ಅವರು ರಾಜಕೀಯ ಚಾಣಾಕ್ಷ, ಕಲಾವಿದರಿಗೆ ಗೌರವ ನೀಡುವ ದೂರದೃಷ್ಟಿತ್ವ ಹೊಂದಿರುವ ನಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ನಾನು ಸಾಕಷ್ಟು ಬಾರಿ ಭೇಟಿ ಮಾಡಿದ್ದೇನೆ. ಪ್ರತಿ ಭೇಟಿಯಲ್ಲಿಯೂ ಓರ್ವ ದೂರದೃಷ್ಟಿಯ ದೃಢ ನಾಯಕನನ್ನು ಭೇಟಿಯಾದ ಅನುಭವವೇ ನನಗೆ ದೊರೆತಿದೆ. ಅವರು

ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ನಟ ಮೋಹನ್ ಲಾಲ್ Read More »

ಪ್ರವಾಸೋದ್ಯಮ, ಡ್ರೈಫ್ರುಟ್ಸ್‌ ವಹಿವಾಟು ಕುಂಠಿತಗೊಳಿಸಿದ ಯುದ್ಧ

ಎಲ್ಲ ಕ್ಷೇತ್ರಗಳಿಗೂ ತಟ್ಟುತ್ತಿದೆ ಮಧ್ಯಪ್ರಾಚ್ಯದ ಯುದ್ಧದ ಬಿಸಿ ಮಂಗಳೂರು: ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಘನಘೋರ ಕದನ ಹದಿನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ ಈ ಯುದ್ಧ ನಿಲ್ಲುವ ಸಾಧ್ಯತೆ ಗೋಚರಿಸುತ್ತಿಲ್ಲ. ಈಗಾಗಲೇ ಯುದ್ಧ ಜಗತ್ತಿನಾದ್ಯಂತ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಭಾರತದಲ್ಲಿ ಗ್ಯಾಸ್‌ ಅಭಾವದಿಂದ ಹೋಟೆಲ್, ಕ್ಯಾಟರಿಂಗ್‌ ಉದ್ಯಮ ಹೊಡೆತ ತಿಂದಿದೆ. ರಫ್ತು, ಆಮದು ವಹಿವಾಟುಗಳು ಇನ್ನಿಲ್ಲದಂತೆ ಸಂಕಷ್ಟಕ್ಕೀಡಾಗಿವೆ. ಪ್ರವಾಸೋದ್ಯಮ, ಡ್ರೈಫ್ರೂಟ್ಸ್‌ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ವಿಮಾನ ವ್ಯತ್ಯಯದಿಂದಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರಿ

ಪ್ರವಾಸೋದ್ಯಮ, ಡ್ರೈಫ್ರುಟ್ಸ್‌ ವಹಿವಾಟು ಕುಂಠಿತಗೊಳಿಸಿದ ಯುದ್ಧ Read More »

ಇರಾನ್‌ನ ಪ್ರತಿ ವ್ಯಕ್ತಿಯ ಸಾವಿಗೆ ಪ್ರತೀಕಾರ : ಮೊಜ್ತಬಾ ಖಮೇನಿ ಘೋಷಣೆ

ಅಮೆರಿಕ, ಇಸ್ರೇಲ್‌, ಗಲ್ಫ್‌ ದೇಶಗಳಿಗೆ ಕಠಿಣ ಎಚ್ಚರಿಕೆ ಟೆಹ್ರಾನ್‌ : ಮಧ್ಯಪ್ರಾಚ್ಯ ಸಮರ ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಜಗತ್ತಿಗೆ ಮೊದಲ ಸಂದೇಶ ರವಾನಿಸಿರುವ ಮೊಜ್ತಬಾ ಖಮೇನಿ, ಅಮೆರಿಕ ಮತ್ತು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಮೃತಪಟ್ಟ ಇರಾನಿಯನ್ನರ ಪ್ರತಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತದೆ. ಅಗತ್ಯವಿದ್ದರೆ ಸಂಘರ್ಷ ಹೊಸ ಮಜಲುಗಳನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇರಾನ್ ತನ್ನ ಹುತಾತ್ಮರ ರಕ್ತದ ಸೇಡು ತೀರಿಸಿಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ.

ಇರಾನ್‌ನ ಪ್ರತಿ ವ್ಯಕ್ತಿಯ ಸಾವಿಗೆ ಪ್ರತೀಕಾರ : ಮೊಜ್ತಬಾ ಖಮೇನಿ ಘೋಷಣೆ Read More »

ಕಾಂಗ್ರೆಸ್‌ನಲ್ಲಿ ಮತ್ತೆ ರೆಸಾರ್ಟ್‌ ರಾಜಕಾರಣ : ಹಲವು ಶಾಸಕರನ್ನು ಸಾಗಿಸಿದ ಡಿಕೆಶಿ

ಅಡ್ಡ ಮತದಾನ, ಪಕ್ಷಾಂತರ ತಡೆಯಲು ಬೆಂಗಳೂರಿನ ರೆಸಾರ್ಟ್‌ಗಳಲ್ಲಿ ಶಾಸಕರಿಗೆ ಆಶ್ರಯ ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಸ್ಸಾಂ ಹಾಗೂ ಒಡಿಶಾದ ಹಲವು ಕಾಂಗ್ರೆಸ್‌ ಶಾಸಕರನ್ನು ಕುದುರೆ ವ್ಯಾಪಾರ ತಡೆಯುವ ಉದ್ದೇಶದಿಂದ ಬೆಂಗಳೂರಿಗೆ ಕರೆತರಲಾಗಿದ್ದು, ರೆಸಾರ್ಟ್‌ಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಶ್ರಯ ಕಲ್ಪಿಸಿದ್ದಾರೆ. ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಹೆಚ್ಚಾಗಿರುವ ನಡುವೆ ಕಾಂಗ್ರೆಸ್ ತನ್ನ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಬೆಂಗಳೂರಿಗೆ ಕಳುಹಿಸಿದೆ. ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ

ಕಾಂಗ್ರೆಸ್‌ನಲ್ಲಿ ಮತ್ತೆ ರೆಸಾರ್ಟ್‌ ರಾಜಕಾರಣ : ಹಲವು ಶಾಸಕರನ್ನು ಸಾಗಿಸಿದ ಡಿಕೆಶಿ Read More »

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ

ಮದುವೆ ಸಮಾರಂಭದಲ್ಲಿ ಗುಂಡಿನೇಟಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಫಾರೂಕ್‌ ಅಬ್ದುಲ್ಲಾ ಶ್ರೀನಗರ : ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಗುಂಡಿಕ್ಕಿ ಸಾಯಿಸಲು ಯತ್ನಿಸಿರುವ ಘಟನೆ ನಡೆದಿದೆ. ಬುಧವಾರರಂದು ಸಂಜೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ದುಷ್ಕರ್ಮಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ದಾಳಿಕೋರ ಅಬ್ದುಲ್ಲಾ ಅವರಿಂದ ಕೆಲವೇ ಕೆಲವು

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ Read More »

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ

ಕೇರಳದ ದೇವಸ್ಥಾನದಲ್ಲಿ ರಾಜಕೀಯದವರ ಸಮ್ಮುಖದಲ್ಲಿ ಮದುವೆ ತಿರುವನಂತಪುರಂ: ಕಳೆದ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದು ಸಖತ್‌ ಜನಪ್ರಿಯಳಾಗಿದ್ದ ಮಧ್ಯ ಪ್ರದೇಶದ ಇಂದೋರ್‌ನ ಮೊನಾಲಿಸಾ ನಿನ್ನೆ ಕೇರಳದಲ್ಲಿ ಮುಸ್ಲಿಂ ಯುವಕನನ್ನು ಮನೆಯವರ ವಿರೋಧ ಲೆಕ್ಕಿಸದೆ ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಪ್ರಿಯಕರ ಮೊಹಮ್ಮದ್‌ ಫರ್ಮಾನ್‌ ಖಾನ್‌ ಎಂಬಾತನ ಜೊತೆ ಕುಂಭಮೇಳದ ಮೊನಾಲಿಸಾ ಬೋಂಸ್ಲೆಯ ಮದುವೆ ಕೇರಳದ ದೇವಸ್ಥಾನವೊಂದರಲ್ಲಿ ನೆರವೇರಿದೆ. ಮದುವೆಗೆ ಪೋಷಕರ ವಿರೋಧ ಇದ್ದ ಕಾರಣ ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ Read More »

ಎರಡು ದಿನದಲ್ಲಿ ಗ್ಯಾಸ್‌ ಸಮಸ್ಯೆ ಪರಿಹಾರ : ಕೇಂದ್ರ ಭರವಸೆ

ಅನ್ಯಮಾರ್ಗಗಳ ಮೂಲಕ ಕಚ್ಚಾತೈಲ ಆಮದು; ಸಿಲಿಂಡರ್‌ಗಾಗಿ ಮುಗಿಬೀಳುವ ಅಗತ್ಯವಿಲ್ಲ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ದೇಶಾದ್ಯಂತ ಗ್ಯಾಸ್‌ ಕೊರತೆಯಿಂದ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಭರವಸೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅನಿಲ ಪೂರೈಕೆ ಮತ್ತಷ್ಟು ಸುಧಾರಿಸಲಿದೆ. ಹೀಗಾಗಿ ಜನರು ಭಯ ಬೀಳುವ ಅಗತ್ಯವಿಲ್ಲ, ಸಿಲಿಂಡರ್‌ಗಾಗಿ

ಎರಡು ದಿನದಲ್ಲಿ ಗ್ಯಾಸ್‌ ಸಮಸ್ಯೆ ಪರಿಹಾರ : ಕೇಂದ್ರ ಭರವಸೆ Read More »

32 ವರ್ಷದ ಯುವಕನ ದಯಾಮರಣಕ್ಕೆ ಅನುಮತಿ : ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಮಹತ್ವದ ತೀರ್ಪು

13 ವರ್ಷದಿಂದ ಕೋಮಾದಲ್ಲಿರುವ ಯುವಕನಿಗೆ ಗೌರವಯುತವಾದ ಸಾವು ಕರುಣಿಸಲು ನ್ಯಾಯಾಲಯದಿಂದ ಅನುಮತಿ ನವದೆಹಲಿ : ಐತಿಹಾಸಿಕ ಮಹತ್ವದ ತೀರ್ಪೋಂದರಲ್ಲಿ ಸುಪ್ರೀಂ ಕೋರ್ಟ್‌ ಕಳೆದ ಹದಿಮೂರು ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ (32) ಎಂಬ ಯುವಕನಿಗೆ ದಯಾಮರಣ ನೀಡಲು ಅನುಮತಿಸಿದೆ. ದಯಾಮರಣ ದೇಶದಲ್ಲಿ ಕಳೆದ ಹಲವು ದಶಕಗಳಿಂದ ಚರ್ಚೆಯಲ್ಲಿರುವ ವಿಷಯವಾಗಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಭಾರಿ ಭಿನ್ನಾಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅತ್ಯಂತ ಅಪರೂಪದ್ದು ಎನ್ನಲಾಗಿದೆ. ಮುಂದಿನ

32 ವರ್ಷದ ಯುವಕನ ದಯಾಮರಣಕ್ಕೆ ಅನುಮತಿ : ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಮಹತ್ವದ ತೀರ್ಪು Read More »

error: Content is protected !!
Scroll to Top