ದೇಶ

ತಾಂತ್ರಿಕ ದೋಷದಿಂದ ವಿಮಾನ ತುರ್ತು ಲ್ಯಾಂಡಿಂಗ್‌ : ಕೂದಲೆಳೆ ಅಂತರದಲ್ಲಿ ಬಚಾವಾದ ಸಂಸದರು, ಪ್ರಯಾಣಿಕರು

ಕಾಂಗ್ರೆಸ್‌ ಎಂಪಿ ಕೆ.ಸಿ.ವೇಣುಗೋಪಾಲ್‌ ಸಹಿತ ಹಲವು ಸಂಸದರು, ನೂರಾರು ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಚೆನ್ನೈ : ಕೇರಳದ ಕಾಂಗ್ರೆಸ್‌ ಸಂಸದ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವಾರು ಸಂಸದರು ಮತ್ತು ನೂರಾರು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಭಾನುವಾರ ಸಂಜೆ ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ವಿಮಾನ AI2455ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅಲ್ಲದೆ, ಹವಾಮಾನ ವೈಪರೀತ್ಯವೂ ತುರ್ತು ಲ್ಯಾಂಡಿಂಗ್​ಗೆ ಕಾರಣವಾಯಿತು […]

ತಾಂತ್ರಿಕ ದೋಷದಿಂದ ವಿಮಾನ ತುರ್ತು ಲ್ಯಾಂಡಿಂಗ್‌ : ಕೂದಲೆಳೆ ಅಂತರದಲ್ಲಿ ಬಚಾವಾದ ಸಂಸದರು, ಪ್ರಯಾಣಿಕರು Read More »

ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್‌

ರಿಟರ್ನ್‌ ಟಿಕೆಟ್‌ಗಳ ಮೇಲೆ ಸಿಗಲಿದೆ ಈ ವಿಶೇಷ ರಿಯಾಯಿತಿ ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ಭಾರತೀಯ ರೈಲ್ವೆ ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್ ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಅಕ್ಟೋಬರ್ 13ರಿಂದ 26 ರವರೆಗೆ ನಿಗದಿಪಡಿಸಲಾಗುವ ಪ್ರಯಾಣಗಳಿಗೆ ಬುಕ್ಕಿಂಗ್ ಆಗಸ್ಟ್ 14ರಿಂದ ಶೇ.20ರಷ್ಟು ಡಿಸ್ಕೌಂಟ್‌ ಸಿಗಲಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿ ಸುಗಮ ಪ್ರಯಾಣಕ್ಕೆ ಅನುಕೂಲ

ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್‌ Read More »

ನಿರ್ಮಲಾ ಸೀತಾರಾಮನ್‌ಗೆ ಉಡುಪಿ ಕೃಷ್ಣ ಮಠದಿಂದ ಭಾರತ ಲಕ್ಷ್ಮಿ ಬಿರುದು ಪ್ರದಾನ

ಮಠದಲ್ಲಿ ಜನಸಾಮಾನ್ಯರಂತೆ ವಿವಿಧ ಸೇವೆಗಳನ್ನು ನೆರವೇರಿಸಿದ ಕೇಂದ್ರ ವಿತ್ತ ಸಚಿವೆ ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಸಂದರ್ಭದಲ್ಲಿ ಶನಿವಾರ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಭಾರತ ಲಕ್ಷ್ಮಿ ಎಂಬ ಗೌರವ ಬಿರುದನ್ನು ಪ್ರದಾನ ಮಾಡಲಾಯಿತು. ಪುತ್ತಿಗೆ ಮಠದ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಈ ಗೌರವವನ್ನು ನಿರ್ಮಲಾ ಸೀತಾರಾಮನ್‌ಗೆ ಪ್ರದಾನ ಮಾಡಿದರು. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ನಿರ್ಮಲಾ ಸೀತಾರಾಮನ್‌ಗೆ ಉಡುಪಿ ಕೃಷ್ಣ ಮಠದಿಂದ ಭಾರತ ಲಕ್ಷ್ಮಿ ಬಿರುದು ಪ್ರದಾನ Read More »

ಆಪರೇಷನ್‌ ಅಖಾಲ್‌ : ಇಬ್ಬರು ಸೈನಿಕರು ಹುತಾತ್ಮ

ಒಂಬತ್ತನೆ ದಿನಕ್ಕೆ ಪ್ರವೇಶಿಸಿದ ಉಗ್ರ ನಿಗ್ರಹ ಕಾರ್ಯಾಚರಣೆ ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಿನ್ನೆ ರಾತ್ರಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೂವರು ಸೈನಿಕರು ಗಾಯಗೊಂಡಿದ್ದು, ಇದರೊಂದಿಗೆ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಆಪರೇಷನ್‌ನಲ್ಲಿ ಗಾಯಗೊಂಡ ಸೈನಿಕರ ಸಂಖ್ಯೆ ಹತ್ತಕ್ಕೇರಿದೆ. ಶುಕ್ರವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಮಡಿದ ವೀರ ಯೋಧರನ್ನು ಕೆ.ಪ್ರೀತ್‌ಪಾಲ್ ಸಿಂಗ್ ಮತ್ತು ಹರ್ಮಿಂದರ್‌ ಸಿಂಗ್ ಎಂದು

ಆಪರೇಷನ್‌ ಅಖಾಲ್‌ : ಇಬ್ಬರು ಸೈನಿಕರು ಹುತಾತ್ಮ Read More »

10*15 ಅಡಿ ದೊಡ್ಡ ಮನೆಯಲ್ಲಿ 80 ಜನ ವಾಸ ಮಾಡುವುದು ಸಾಧ್ಯವೆ? : ಕಾಂಗ್ರೆಸ್‌ಗೆ ಮನೆ ಮಾಲೀಕನ ಪ್ರಶ್ನೆ

ಮೂವರು ವಾಸವಿರುವ ಮನೆಯಲ್ಲಿ 80 ಜನ ಮತದಾರರು ಇದ್ದಾರೆ ಎಂದು ಹೇಳಿದ್ದ ರಾಹುಲ್‌ ಗಾಂಧಿಗೆ ತಿರುಗೇಟು ಬೆಂಗಳೂರು: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆ ವೇಳೆ ಮತ ಕಳ್ಳತನವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೇಲೆ ಬಿಜೆಪಿ ಮುಗಿಬಿದ್ದಿರುವಂತೆಯೇ ಮನೆ ಮಾಲೀಕರೊಬ್ಬರು 10*15 ಅಡಿ ದೊಡ್ಡದಿರುವ ಮನೆಯಲ್ಲಿ 80 ಮಂದಿ ವಾಸ ಮಾಡಲು ಸಾಧ್ಯವೇ ಎಂಬ ಪ್ರಾಕ್ಟಿಕಲ್‌ ಪ್ರಶ್ನೆಯನ್ನು ಕೇಳಿದ್ದಾರೆ. ಬೆಳ್ಳಂದೂರಿನ ಮನೆ ನಂ.35ರ ವಿಳಾಸದಲ್ಲಿ 80 ಮಂದಿಗೆ ವೋಟರ್‌ ಐಡಿ ಕಾರ್ಡ್‌ ನೀಡಲಾಗಿದೆ ಎಂದು ರಾಹುಲ್‌

10*15 ಅಡಿ ದೊಡ್ಡ ಮನೆಯಲ್ಲಿ 80 ಜನ ವಾಸ ಮಾಡುವುದು ಸಾಧ್ಯವೆ? : ಕಾಂಗ್ರೆಸ್‌ಗೆ ಮನೆ ಮಾಲೀಕನ ಪ್ರಶ್ನೆ Read More »

ಮತಕಳ್ಳತನ ಆರೋಪ ಮಾಡಿದ ರಾಹುಲ್‌ ಗಾಂಧಿಗೆ ಬಿಜೆಪಿ 13 ಪ್ರಶ್ನೆ

ಇವುಗಳಿಗೆಲ್ಲ ನೀವು ಕ್ಷಮೆ ಯಾಚಿಸುವುದು ಯಾವಾಗ ಎಂದು ಕೇಳಿದ ಬಿಜೆಪಿ ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದ ಮತ ವಂಚನೆಯಾಗಿದೆ ಎಂದು ಆರೋಪಿಸಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಕರ್ನಾಟಕ ಬಿಜೆಪಿ 13 ಪ್ರಶ್ನೆಗಳನ್ನು ಕೇಳುವ ಮೂಲಕ ತಿರುಗೇಟು ನೀಡಿದೆ. *ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ 40 ಸಾವಿರ ಕೋಟಿ ರೂ. ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸುವ ಮೂಲಕ ನಿಮ್ಮ ಸರ್ಕಾರ ಪರಿಶಿಷ್ಟರಿಗೆ ಮಹಾದ್ರೋಹ

ಮತಕಳ್ಳತನ ಆರೋಪ ಮಾಡಿದ ರಾಹುಲ್‌ ಗಾಂಧಿಗೆ ಬಿಜೆಪಿ 13 ಪ್ರಶ್ನೆ Read More »

ಬಾಲಿವುಡ್‌ ನಟಿ ಹುಮಾ ಖುರೇಶಿ ಸಹೋದರನ ಬರ್ಬರ ಹತ್ಯೆ

ಸ್ಕೂಟಿ ಪಾರ್ಕಿಂಗ್‌ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಮುಂಬಯಿ: ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ಹಿಂದಿಯ ಜನಪ್ರಿಯ ನಟಿ ಹುಮಾ ಖುರೇಷಿ ಅವರ ಸಹೋದರ ಆಸಿಫ್ ಖುರೇಷಿ ಬರ್ಬರವಾಗಿ ಕೊಲೆಯಾಗಿದ್ದಾರೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ಸ್ಕೂಟಿ ಪಾರ್ಕಿಂಗ್ ವಿಚಾರದಲ್ಲಿ ಜಗಳ ನಡೆದು ಆಸಿಫ್‌ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಸಿಫ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಇಬ್ಬರು ಆರೋಪಿಗಳನ್ನು ಅಲ್ಪಾವಧಿಯಲ್ಲಿಯೇ ಬಂಧಿಸಿದ್ದಾರೆ. ಗುರುವಾರ ನಿಜಾಮುದ್ದೀನ್‌ನ ಜಂಗ್‌ಪುರ ಭೋಗಲ್ ಬಜಾರ್ ಲೇನ್‌ನಲ್ಲಿ ರಾತ್ರಿ 11

ಬಾಲಿವುಡ್‌ ನಟಿ ಹುಮಾ ಖುರೇಶಿ ಸಹೋದರನ ಬರ್ಬರ ಹತ್ಯೆ Read More »

ಮಂಗಳೂರೇ ಭಾರತದಲ್ಲಿ ಅತ್ಯಂತ ಸುರಕ್ಷಿತ ನಗರ

ಜಾಗತಿಕವಾಗಿ ನಡೆದ ಸಮೀಕ್ಷೆಯಲ್ಲಿ ಕುಡ್ಲಕ್ಕೆ ಸಿಕ್ಕಿದ ಅಪೂರ್ವ ಹಿರಿಮೆ ಮಂಗಳೂರು: ದೇಶದಲ್ಲೇ ಅತ್ಯಂತ ಸುರಕ್ಷಿತ ನಗರ ಎಂದರೆ ನಮ್ಮ ಮಂಗಳೂರು. ಜಾಗತಿಕ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಮಂಗಳೂರಿಗೆ ಈ ಅಪೂರ್ವವಾದ ಹಿರಿಮೆ ಸಿಕ್ಕಿದೆ. ಡೇಟಾ ಸಂಸ್ಥೆ ನಂಬಿಯೊ ಪ್ರಕಟಿಸಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕ ವರದಿಯಲ್ಲಿ ಮಂಗಳೂರು ನಗರ ಭಾರತದ ಅತ್ಯಂತ ಸುರಕ್ಷಿತ ನಗರವೆಂಬ ಸ್ಥಾನವನ್ನು ಪಡೆದುಕೊಂಡಿದೆ. 74.2 ಸುರಕ್ಷತಾ ಅಂಕಗಳೊಂದಿಗೆ ದೇಶದಲ್ಲಿ ಅಗ್ರಸ್ಥಾನದಲ್ಲಿರುವ ಮಂಗಳೂರು ಜಾಗತಿಕ ಮಟ್ಟದಲ್ಲಿ 49ನೇ ಶ್ರೇಯಾಂಕವನ್ನು ಗಳಿಸಿದೆ. ನಗರದ ಈ ಉನ್ನತ

ಮಂಗಳೂರೇ ಭಾರತದಲ್ಲಿ ಅತ್ಯಂತ ಸುರಕ್ಷಿತ ನಗರ Read More »

ಕಿವಿಗೆ ವಿಷ ಸುರಿದು ಗಂಡನನ್ನು ಕೊಂದ ಮಹಿಳೆ!

ಯೂಟ್ಯೂಬ್‌ ನೋಡಿ ಸಾಯಿಸುವ ಖತರ್‌ನಾಕ್‌ ಐಡಿಯಾ ಕಂಡುಕೊಂಡಿದ್ದ ಹೆಂಡತಿ ಹೈದರಾಬಾದ್‌: ಆಹಾರದಲ್ಲಿ ವಿಷಬೆರೆಸಿ ಸಾಯಿಸುವುದು ಸಾಮಾನ್ಯ ವಿಚಾರ. ಆದರೆ ತೆಲಂಗಾಣದ ಮಹಿಳೆಯೊಬ್ಬಳು ಗಂಡನನ್ನು ಸಾಯಿಸಲು ಬೇರೆಯೇ ಆದ ವಿಧಾನ ಅನುಸರಿಸಿದ್ದಾಳೆ. ಈಕೆ ಕಿವಿಗೆ ವಿಷ ಸುರಿದು ಗಂಡನನ್ನು ಸಾಯಿಸಿದ್ದಾಳೆ. ಈಕೆಗೆ ಈ ಖತರ್‌ನಾಕ್‌ ಐಡಿಯಾ ಸಿಕ್ಕಿದ್ದು ಯೂಟ್ಯೂಬ್‌ನಲ್ಲಂತೆ. ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಎಷ್ಟು ಚೆನ್ನಾಗಿ ಸಂಚು ರೂಪಿಸಲಾಗಿತ್ತೆಂದರೆ ಮೊದಲು ಪೊಲೀಸರಿಗೆ ಕೂಡ ಈ ರೀತಿ

ಕಿವಿಗೆ ವಿಷ ಸುರಿದು ಗಂಡನನ್ನು ಕೊಂದ ಮಹಿಳೆ! Read More »

ಲಕ್ಷ ದಾಟಿದ ಚಿನ್ನ, ಬೆಳ್ಳಿ ಬೆಲೆ : ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆ

ಟ್ರಂಪ್‌ ಡಬ್ಬಲ್‌ ಸುಂಕದಿಂದ ಚಿನ್ನದ ಮಾರುಕಟ್ಟೆಯಲ್ಲಿ ಬಿರುಗಾಳಿ ನವದೆಹಲಿ: ಭಾರತೀಯ ಆಮದುಗಳ ಮೇಲೆ ಟ್ರಂಪ್‌ ಹೆಚ್ಚುವರಿ ಶೇ.25 ಸುಂಕ ವಿಧಿಸಿದ ಪರಿಣಾಮ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ.ಭಾರತದ ಮೇಲೆ ಟ್ರಂಪ್‌ ಸುಂಕ ಘೋಷಿಸಿದ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಚಿನ್ನದ ಬೆಲೆ 3,600 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,02,620 ರೂ.ಗೆ ತಲುಪಿ ದಾಖಲೆ ಮಾಡಿದೆ.‌ ಅಖಿಲ ಭಾರತ ಸರಾಫ ಸಂಘದ ಪ್ರಕಾರ ಶೇ.99.9 ಶುದ್ಧತೆಯ ಚಿನ್ನ ಬುಧವಾರ 10 ಗ್ರಾಂಗೆ

ಲಕ್ಷ ದಾಟಿದ ಚಿನ್ನ, ಬೆಳ್ಳಿ ಬೆಲೆ : ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆ Read More »

error: Content is protected !!
Scroll to Top