ಸುದ್ದಿ

ಫಾಲ್ಸ್‌ಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ : ಇಬ್ಬರು ಯುವಕರು ಸೆರೆ

ಮೇ 10ರಂದು ವಿವಾಹವಾಗಲಿದ್ದ ಓರ್ವ ಆರೋಪಿ ಬೆಳ್ತಂಗಡಿ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರಗೈದ ಆರೋಪದಲ್ಲಿ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ಬಂಧಿತ ಆರೋಪಿಗಳು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ 15 ವರ್ಷದ ಬಾಲಕಿಯನ್ನು ಆರೋಪಿಗಳು ಪುಸಲಾಯಿಸಿ ಏ.16ರಂದು ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿರುವ ಬಗ್ಗೆ ಸಂತ್ರಸ್ತೆ ಮನೆಯವರಿಗೆ ತಿಳಿಸಿದ್ದಾಳೆ. ಈ […]

ಫಾಲ್ಸ್‌ಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ : ಇಬ್ಬರು ಯುವಕರು ಸೆರೆ Read More »

ಇರಾನ್‌-ಭಾರತ ನಡುವೆ 5 ಸಾವಿರ ವರ್ಷಗಳ ಸಂಬಂಧ : ಉದ್ವಿಗ್ನತೆ ನಡುವೆ ಪ್ರತಿನಿಧಿಯ ಹೇಳಿಕೆ

ಭಾರತದ ಹಡಗುಗಳನ್ನು ತಡೆದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ಇರಾನ್‌ ಪ್ರತಿನಿಧಿ ಟೆಹ್ರಾನ್‌: ಹಾರ್ಮೂಜ್ ಜಲಸಂಧಿಯಲ್ಲಿ ಭಾರತೀಯ ಧ್ವಜದ ಹಡಗುಗಳನ್ನು ಇರಾನ್‌ ಗುಂಡು ಹಾರಿಸಿ ತಡೆದ ಬಳಿಕ ಭಾರತದಲ್ಲಿ ಮತ್ತೆ ತೈಲ ಸಂಕಷ್ಟ ತಲೆದೋರುವ ಭೀತಿ ಆವರಿಸುತ್ತಿರುವಾಗಲೇ ಇರಾನ್‌ ಆಶಾದಾಯ್‌ ಹೇಳಿಕೆಯೊಂದನ್ನು ನೀಡಿದೆ. ಇರಾನ್ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಇದರ ಬೆನ್ನಲ್ಲೇ ಭಾರತ–ಇರಾನ್ ಸಂಬಂಧಗಳು ಅತ್ಯಂತ ಬಲಿಷ್ಠವಾಗಿವೆ ಎಂದು ಸ್ಪಷ್ಟಪಡಿಸಿದೆ. ಇರಾನ್‌ ರಾಷ್ಟ್ರದ ಪರಮೋಚ್ಛ ನಾಯಕನ ಭಾರತದ ಪ್ರತಿನಿಧಿ ಡಾ.ಅಬ್ದುಲ್ ಮಜೀದ್ ಹಕೀಮ್

ಇರಾನ್‌-ಭಾರತ ನಡುವೆ 5 ಸಾವಿರ ವರ್ಷಗಳ ಸಂಬಂಧ : ಉದ್ವಿಗ್ನತೆ ನಡುವೆ ಪ್ರತಿನಿಧಿಯ ಹೇಳಿಕೆ Read More »

50ಕ್ಕೂ ಅಧಿಕ ಮಹಿಳಾ ಅಧಿಕಾರಿಗಳ ಬ್ಲ್ಯಾಕ್‌ಮೇಲ್‌ : ಆರೋಪಿ ಸೆರೆ

ಉದ್ಯಮಿಯ ಸೋಗುಹಾಕಿ ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಯುವಕ ಬೆಂಗಳೂರು: ಕಸ್ಟಮ್ಸ್ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿ ಕೃಪಲಾನಿ (36) ಎಂಬಾತ ಪ್ರೀತಿ, ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ಇನ್ನೂ 50 ಮಂದಿಗೆ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೃಪಲಾನಿ ಮೇಲಿದೆ. ಆರೋಪಿ ಕೃಪಲಾನಿ ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸುಮಾರು ಆರೇಳು ವರ್ಷಗಳಿಂದ ಅಕೆಯ ಮೇಲೆ

50ಕ್ಕೂ ಅಧಿಕ ಮಹಿಳಾ ಅಧಿಕಾರಿಗಳ ಬ್ಲ್ಯಾಕ್‌ಮೇಲ್‌ : ಆರೋಪಿ ಸೆರೆ Read More »

ಭಾರತಕ್ಕೆ ಬರುತ್ತಿದ್ದ 14 ಹಡಗುಗಳಿಗೆ ಇರಾನ್‌ ತಡೆ

ಗುಂಡು ಹಾರಿಸಿ ಹಡಗುಗಳನ್ನು ತಡೆದ ಇರಾನ್‌ ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನೌಕಾಪಡೆ 14 ಭಾರತೀಯ ಹಡಗುಗಳನ್ನು ಮೇಲೆ ಗುಂಡು ಹಾರಿಸಿ ತಡೆದಿದೆ. ಈ ಪೈಕಿ ಒಂದು ಹಡಗಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಹೋಗುತ್ತಿದ್ದ ಹಡಗುಗಳ ಮೇಲೆ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಗುಂಡು ಹಾರಿಸುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಯಿತು. ಇದು ತೈಲ ಮತ್ತು ಅನಿಲ ಸರಬರಾಜನ್ನು ಅಡ್ಡಿಪಡಿಸಿತು ಮತ್ತು ಕಡಲ ಭದ್ರತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಕಚ್ಚಾತೈಲ ಮತ್ತು ಅನಿಲವನ್ನು

ಭಾರತಕ್ಕೆ ಬರುತ್ತಿದ್ದ 14 ಹಡಗುಗಳಿಗೆ ಇರಾನ್‌ ತಡೆ Read More »

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು

ಬರ್ತ್‌ಡೇ ಪಾರ್ಟಿಯಲ್ಲಿ ಸಂಭವಿಸಿದ ದುರಂತ ಶಿವಮೊಗ್ಗ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಯುವಕನೊಬ್ಬ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಸಾವನ್ನಪ್ಪಿದ ಘಟನೆ ಕುಂಸಿ ಸಮೀಪದ ಚೆನ್ನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಸಚಿನ್ (21) ಎಂದು ಗುರುತಿಸಲಾಗಿದೆ. ಗ್ರಾಮಸ್ಥರೊಬ್ಬರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಗ್ರಾಮದ ಹೊರವಲಯದ ನಿರ್ಮಾಣ ಹಂತದ ಮನೆಯೊಂದರ ಬಳಿ ನಾನ್‌ವೆಜ್​ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಚಿನ್ ಊಟ ಮುಗಿಸಿಕೊಂಡು ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದ್ದ ನಿರ್ಮಾಣ ಹಂತದ ಮನೆಯೊಳಗೆ ತೆರಳಿದ್ದನು. ಊಟದ ಬಳಿಕ ಉಳಿದವರೆಲ್ಲರೂ ತಮ್ಮ

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು Read More »

ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡು ಸಂಭ್ರಮಿಸಿದ ಕಾಂಗ್ರೆಸ್‌ : ಮೋದಿ ವಾಗ್ದಾಳಿ

ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿರುವುದಕ್ಕೆ ಮಹಿಳೆಯರ ಕ್ಷಮೆ ಕೇಳಿದ ಪ್ರಧಾನಿ ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಕೇಳಿದ್ದಾರೆ. ಶನಿವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷಗಳ ಸ್ವಾರ್ಥ ರಾಜಕಾರಣದಿಂದ ಸೋಲಾಗಿದೆ. ದೇಶದ ಮಾತೆಯರಿಗೆ ವಿಪಕ್ಷಗಳು ಅಪಮಾನ ಮಾಡಿವೆ. ಮಸೂದೆ ವಿಫಲವಾದ ಬೆನ್ನಲ್ಲೇ ಎಲ್ಲ ವಿಪಕ್ಷ ಸದಸ್ಯರು ಖುಷಿಯಿಂದ ಚಪ್ಪಾಳೆ ತಟ್ಟಿದರು ಎಂದು ಬೇಸರ ವ್ಯಕ್ತಪಡಿಸಿದರು. ಈ ಮಸೂದೆಯನ್ನು ಸೋಲಿಸುವ ಮೂಲಕ

ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡು ಸಂಭ್ರಮಿಸಿದ ಕಾಂಗ್ರೆಸ್‌ : ಮೋದಿ ವಾಗ್ದಾಳಿ Read More »

ಬಯಲಾಟ ನೋಡುತ್ತಿದ್ದವರ ಮೇಲೆ ಸಿಮೆಂಟ್ ಬೋರ್ಡ್ ಬಿದ್ದು ಎರಡು ಸಾವು, ನಾಲ್ವರಿಗೆ ಗಾಯ

ರಾಯಚೂರು: ಬಯಲಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಮೆಂಟ್ ಬೋರ್ಡ್ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಚ ಘಟನೆ ನಡೆದಿದ್ದು, ಇದರಿಂದಾಗಿ ಇನ್ನಿಬ್ಬರು ಕಾಲುಗಳನ್ನೇ ಕಳೆದುಕೊಂಡಿದ್ದಾರೆ. ಬೈಲ್ ಮರ್ಚಡ್ ಗ್ರಾಮದಲ್ಲಿ ಹಳೆಯ ಕಟ್ಟಡ ಒಂದರ ಸಿಮೆಂಟ್ ಬೋರ್ಡ್ ಕುಸಿದು ಈ ದುರಂತ ಸಂಭವಿಸಿದೆ. ಇಬ್ಬರು ಮಕ್ಕಳ ಪ್ರಾಣವೇ ಹೋಗಿದ್ದು, ನಾಲ್ಕು ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬಯಲಾಟವನ್ನು ಗ್ರಾಮಸ್ಥರು ಗ್ರಾಮದ ಚಾವಡಿ ಕಟ್ಟೆಯ ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಹಳೆಯದಾಗಿದ್ದ ಚಾವಡಿ ಕಟ್ಟಡದ ಮೇಲ್ಬಾಗದಲ್ಲಿದ್ದ ಸಿಮೆಂಟ್‌ನ ನಾಮಫಲಕದ ಬೋರ್ಡ್

ಬಯಲಾಟ ನೋಡುತ್ತಿದ್ದವರ ಮೇಲೆ ಸಿಮೆಂಟ್ ಬೋರ್ಡ್ ಬಿದ್ದು ಎರಡು ಸಾವು, ನಾಲ್ವರಿಗೆ ಗಾಯ Read More »

ಕಾಡುಕೋಣ ದಾಳಿಗೆ ಯುವಕ ಸಾವು

ಕಳಸ: ಕಾಡುಕೋಣ ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಕಳಸದ ‌ಮೈದಾಡಿ ಎಸ್ಟೇಟ್‌ನಲ್ಲಿ ನಡೆದಿದೆ. ಚೇತನ್ (30) ಎಂಬ ಯುವಕನೇ ಮೃತ ದುರ್ದೈವಿ. ದಾಳಿಯಲ್ಲಿ ಕಾಡುಕೋಣದ ಕೊಂಬು ಚೇತನ್ ಅವರ ಎದೆಗೆ ಗಂಭೀರ ಪ್ರಮಾಣದಲ್ಲಿ ತಾಗಿದೆ. ಅವರನ್ನು ಕಳಸದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿದೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು, ಇದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಕಾಡುಕೋಣ ದಾಳಿಗೆ ಯುವಕ ಸಾವು Read More »

ಬೈಕುಗಳೆರಡರ ನಡುವೆ ಅಪಘಾತ: ಓರ್ವ ಮೃತ್ಯು

ಪುತ್ತೂರು: ಬೈಕುಗಳೆರಡರ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಚ ಘಟನೆ ಪಡೀಲ್‌ನ ಯಾಸಿನ್ ಚಿಕನ್ ಸೆಂಟರ್ ಸಮೀಪ ನಡೆದಿದೆ. ಒಂದು ಬೈಕ್ ರಾಂಗ್ ‌ಸೈಡಿನಲ್ಲಿ ಬರುತ್ತಿದ್ದು, ಈ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ನ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸವಾರ ಮೃತಪಟ್ಟಿದ್ದು, ಇನ್ನೊಂದು ಬೈಕ್‌ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ‌ಲಭ್ಯವಾಗಬೇಕಿದೆ.

ಬೈಕುಗಳೆರಡರ ನಡುವೆ ಅಪಘಾತ: ಓರ್ವ ಮೃತ್ಯು Read More »

ಗಂಡನ ಬ್ಯಾಂಕ್ ಲಾಕರಿನಿಂದ ಚಿನ್ನ ಎಗರಿಸಿದ ಪತ್ನಿ: ದೂರು ದಾಖಲು

ಉಡುಪಿ: ಗಂಡ ಹೆಂಡತಿ ಒಂದೇ ಮನೆಯಲ್ಲಿ ಇದ್ದರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಇದೀಗ ಪತಿ ತನ್ನ ಪತ್ನಿಯ ವಿರುದ್ಧ ಚಿನ್ನ ಕದ್ದ ಆರೋಪ ಹೊರಿಸಿದ್ದಾರೆ. ಪತ್ನಿ ವನಿತಾ ಅವರು ಮನೆಯ ಕಪಾಟಿನಲ್ಲಿದ್ದ ಬ್ಯಾಂಕ್ ಲಾಕರ್ ‌ಕೀ ಕದ್ದು ಚಿನ್ನ ಎಗರಿಸಿದ್ದಾಗಿ ಪತಿ ಉಚ್ಚಿಲದ ಕಿರಣ್ ಕುಮಾರ್ ಅವರು ಆರೋಪಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲೆಕ್ಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುವ ಕಿರಣ್ ಕುಮಾ‌ರ್ ಅವರು ವನಿತಾ ಎಂಬುವವರೊಂದಿಗೆ 2016 ರಲ್ಲಿ

ಗಂಡನ ಬ್ಯಾಂಕ್ ಲಾಕರಿನಿಂದ ಚಿನ್ನ ಎಗರಿಸಿದ ಪತ್ನಿ: ದೂರು ದಾಖಲು Read More »

error: Content is protected !!
Scroll to Top