ಶ್ರೀರಾಮ ತಾರಕ ಮಂತ್ರದ ಮೂಲಕ ತನ್ನ ಮನೆಯನ್ನೇ ರಾಮಮಂದಿರ ಮಾಡಿಕೊಳ್ಳಬೇಕು | ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ

ಪುತ್ತೂರು: ನಿತ್ಯ ಶ್ರೀರಾಮ ತಾರಕ ಮಂತ್ರ ಜಪದ ಮೂಲಕ ಪ್ರತಿಯೊಬ್ಬ ಹಿಂದೂ ತನ್ನ ಮನೆಯನ್ನೇ ರಾಮಮಂದಿರ ಮಾಡಿಕೊಳ್ಳುವ ಮೂಲಕ ಹಿಂದೂ ಸಮಾಜದ ಉದ್ಧಾರಕ್ಕೆ ಪಣತೊಡಬೇಕಾದ ಅಗತ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು. ಅವರು ಭಾನುವಾರ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಯೋಧ್ಯೆ ರಾಮಜನ್ಮಭೂಮಿಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.  ಶ್ರೀ ರಾಮ ತಾರಕ ಮಂತ್ರದ ಜತೆಗೆ ಧ್ಯಾನ ಮಾಡುವ ಮೂಲಕ […]

ಶ್ರೀರಾಮ ತಾರಕ ಮಂತ್ರದ ಮೂಲಕ ತನ್ನ ಮನೆಯನ್ನೇ ರಾಮಮಂದಿರ ಮಾಡಿಕೊಳ್ಳಬೇಕು | ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ Read More »

ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಜೋಡಿ ಮೇಲೆ ಹಲ್ಲೆ !

ಉಪ್ಪಿನಂಗಡಿ: ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಜೋಡಿಯನ್ನು ತಡೆದು ಹಲ್ಲೆಗೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಸಮೀಪದ ಬಾಜಾರು ಎಂಬಲ್ಲಿ ಭಾನುವಾರ ನಡೆದಿದೆ. ಘಟನೆ ಕುರಿತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮುಸ್ಲಿಂ ಜೋಡಿಯನ್ನು ಮುಸ್ಲಿಂ ಸಮುದಾಯವೇ ತಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿದ ಮೂವರು ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ವಿದ್ಯಾರ್ಥಿನಿಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಜೋಡಿ ಮೇಲೆ ಹಲ್ಲೆ ! Read More »

ಉಳ್ಳಾಲ ಸಮುದ್ರ ಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ

ಉಳ್ಳಾಲ: ಸಮುದ್ರತೀರಕ್ಕೆ ವಿಹಾರಕ್ಕೆ ತೆರಳಿದ್ದ ಸಂದರ್ಭ ಸಮುದ್ರಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ. ಸೊಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಓದುತ್ತಿದ್ದ  ವಿದ್ಯಾರ್ಥಿಗಳಾದ ಯಶ್ವಿತ್‌, ಯುವರಾಜ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಮದ್ಯಾಹ್ನ 12.40ಕ್ಕೆ ಕಾಲೇಜು ಮುಗಿಸಿ ಸೋಮೇಶ್ವರ ಶ್ರೀ ಸೊಮನಾಥ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆಯ ಬಳಿಕ ದೇವಸ್ಥಾನದಲ್ಲಿ ಮುಗಿಸಿ ಅಲ್ಲೇ ಪಕ್ಕದ ಮರದಡಿಯಲ್ಲಿ ಕುಳಿತಿದ್ದರು. ಸುಮಾರು ಮೂರು ಗಂಟೆಯ ಬಳಿಕ ಸ್ಥಳೀಯ ಗೂಡಂಗಡಿಯಿಂದ ತಿಂಡಿ ತೆಗೆದುಕೊಂಡು ಸೋಮೇಶ್ವರ ದೇವಸ್ಥಾನದಿಂದ ಉಚ್ಚಿಲದ ಕಡೆಗೆ

ಉಳ್ಳಾಲ ಸಮುದ್ರ ಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ Read More »

ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿ

ಪುಣಚ: ಮಿಂಚು, ಸಿಡಿಲಿಗೆ ಕೃಷಿ ಪಂಪ್‍ ಶೆಡ್ ಹಾಗೂ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾ ಘಟನೆ ಶನಿವಾರ ರಾತ್ರಿ ಪುಣಚ ಕೆಲ್ಲಾಳಿ ಎಂಬಲ್ಲಿ ನಡೆದಿದೆ. ಪುಣಚ ಕೆಲ್ಲಾಳಿಯ ದೇವಪ್ಪ ನಾಯ್ಕ ಎಂಬವರ ಮನೆ ಪಂಪ್ ಶೆಡ್ ಹಾಗೂ ವಿದ್ಯುತ್ ಉಪಕರಣಗಳು ಸಿಡಿಲಿಗೆ ಸುಟ್ಟು ಕರಕಲಾಗಿದೆ. ಈ ಕುರಿತು ಅಪಾಯ ನಷ್ಟ ಉಂಟಾಗಿದೆ ಎಂದು ಮನೆ ಮಾಲಕ ತಿಳಿಸಿದ್ದಾರೆ.

ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿ Read More »

ಡಿ.12 : ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟದಿಂದ ಪ್ರತಿಭಟನೆ | ಸೇವೆಯಲ್ಲಿ ಉಂಟಾಗಲಿದೆ ವ್ಯತ್ಯಯ

ಮಂಗಳೂರು: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ  ಹಾಗೂ ಗ್ರಾಮೀಣ ಅಂಚೆ ಸೇವಕರ ರಾಷ್ಟ್ರೀಯ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸಹಯೋಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 12ರಿಂದ ಮುಷ್ಕರ ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗಗಳಲ್ಲಿ ಅಂಚೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮುಷ್ಕರ ಹಿನ್ನೆಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಐಜಿಡಿಎಸ್‌ಯು ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹದೇವಯ್ಯ ಸಭೆಯೊಂದರಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 16.5 ಸಾವಿರ ಗ್ರಾಮೀಣ ಅಂಚೆ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಅಂಚೆ ಸೇವೆಗಳನ್ನು

ಡಿ.12 : ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟದಿಂದ ಪ್ರತಿಭಟನೆ | ಸೇವೆಯಲ್ಲಿ ಉಂಟಾಗಲಿದೆ ವ್ಯತ್ಯಯ Read More »

ಅಯೋಧ್ಯೆ ಶ್ರೀರಾಮ ದೇಗುಲದಲ್ಲಿ ಪೌರೋಹಿತ್ಯ ಸೇವೆಗೈಯಲಿದ್ದಾರೆ ಯುವ ಪುರೋಹಿತ ಮೋಹಿತ್ ಪಾಂಡೆ

ಅಯೋಧ್ಯೆ ಶೀಘ್ರದಲ್ಲೇ ಉದ್ಘಾಟನೆ ಆಗಲಿರುವ ಶ್ರೀ ರಾಮ ದೇಗುಲದಲ್ಲಿ ಶ್ರೀರಾಮನ ಪೌರೋಹಿತ್ಯ ಸೇವೆ ಮಾಡಲು ಆಯ್ಕೆಯಾದ ಯುವ ಪುರೋಹಿತ, ಸಕಲ ವೇದ ಪಾರಂಗತ ಭಾಗ್ಯವಂತ ಮೋಹಿತ್ ಪಾಂಡೆ ದೇಶದಾದ್ಯಂತ ಕರೆಯಲಾದ 3000 ಕ್ಕಿಂತಲೂ ಅಧಿಕ ಪುರೋಹಿತರ ಸಂದರ್ಶನದಲ್ಲಿ ಮತ್ತು ವೇಧಜ್ಞಾನ ಕಠಿಣ ಪರೀಕ್ಷೆಯಲ್ಲಿ ತನ್ನ ವೇದ ಮತ್ತು ಪೂಜಾ ವಿಧಿ, ವಿಧಾನಗಳ ಅಪಾರ ಪಾಂಡಿತ್ಯ ಮತ್ತು ಜ್ಞಾನದಿಂದ ಆಯ್ಕೆಯಾದ ಕೊನೆಯ 50 ಮಂದಿಯಲ್ಲಿ ಅಗ್ರಸ್ಥಾನಿಯಾಗಿ ಆಯ್ಕೆಯಾದವರು ಮೋಹಿತ್ ಪಾಂಡೆ. ಯುವ ಪುರೋಹಿತರಾಗಿದ್ದು, ಪ್ರಸ್ತುತ ಗಾಜಿಯಾಬಾದ್ ನ ಧುದೇಶ್ವರನಾಥ

ಅಯೋಧ್ಯೆ ಶ್ರೀರಾಮ ದೇಗುಲದಲ್ಲಿ ಪೌರೋಹಿತ್ಯ ಸೇವೆಗೈಯಲಿದ್ದಾರೆ ಯುವ ಪುರೋಹಿತ ಮೋಹಿತ್ ಪಾಂಡೆ Read More »

ಕೊಳ್ತಿಗೆ ಹಾಲುತ್ಪಾದಕರ ಸಹಕಾರ ಸಂಘದ ಚುನಾವಣೆ | ಸಹಕಾರ ಭಾರತಿ ಬೆಂಬಲಿತರಿಗೆ ಜಯ

ಪುತ್ತೂರು: ಕೊಳ್ತಿಗೆ ಹಾಲುತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಬೆಂಬಲಿತ ಎಲ್ಲಾ 11 ಮಂದಿ ಜಯಗಳಿಸಿದ್ದಾರೆ. ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸಹಕಾರಿ ಭಾರತಿ ಬೆಂಬಲಿತರಾದ ಕರುಣಾಕರ, ಕೆ.ಬೆಳ್ಯಪ್ಪ ಗೌಡ, ಎನ್‍.ಮುರಳೀಕೃಷ್ಣ, ವಾಡ್ಯಪ್ಪ ಗೌಡ, ವಿಶ್ವನಾಥ ಶೆಟ್ಟಿ, ಶಿವರಾಮ ಕೆ., ಸಿ.ಆರ್‍.ಸುಬ್ರಹ್ಮಣ್ಯ ಗೌಡ, ಮಹಿಳಾ ಮೀಸಲು ಸ್ಥಾನದಿಂದ ಚಂದ್ರಾವತಿ, ಜಲಜಾಕ್ಷಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಕೆ.ತಿರುಮಲೇಶ್ವರ, ಹಿಂದುಳಿದ ವರ್ಗ ಎ ಸ್ಥಾನದಿಂದ ಧನಂಜಯ

ಕೊಳ್ತಿಗೆ ಹಾಲುತ್ಪಾದಕರ ಸಹಕಾರ ಸಂಘದ ಚುನಾವಣೆ | ಸಹಕಾರ ಭಾರತಿ ಬೆಂಬಲಿತರಿಗೆ ಜಯ Read More »

ಮಾಜಿ ಗ್ರಾಪಂ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ನಿಧನ

ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ (45) ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಶುಕ್ರವಾರ ಮೈಂದನಡ್ಕದಲ್ಲಿ ನಡೆದ ವಾಲಿಬಾಲ್‍ ಪಂದ್ಯಾಟವೊಂದಕ್ಕೆ ತೆರಳಿದ್ದ ಅವರು, ಮನೆಗೆ ಬಂದು ರಕ್ತ ವಾಂತಿ ಮಾಡಿದ್ದರು. ಶನಿವಾರ ಬೆಳಿಗ್ಗೆ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆ ಮೃತಪಟ್ಟಿದ್ದಾರೆ. ಬಡಗನ್ನೂರು ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಒಂದು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು. ಮೃತರು

ಮಾಜಿ ಗ್ರಾಪಂ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ನಿಧನ Read More »

ಮಡಿಕೇರಿ ರೆಸಾರ್ಟ್‍ನಲ್ಲಿ ದಂಪತಿ, ಮಗುವಿನ ಮೃತದೇಹ ಪತ್ತೆ !

ಮಡಿಕೇರಿ: ತಾಲೂಕಿನ ಕಗ್ಗೋಡು ಗ್ರಾಮದ ರೆಸಾರ್ಟ್‍ ಒಂದರಲ್ಲಿ ದಂಪತಿ ಹಾಗೂ ಮಗುವಿನ ಮೃತದೇಹ ಶನಿವಾರ ಪತ್ತೆಯಾಗಿದೆ. ರೆಸಾರ್ಟ್‍ನ ಕೋಣೆಯಲ್ಲಿ ಪತಿ, ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಮಗುವಿನ ಮೃತದೇಹ ಹಾಸಿಗೆಯಲ್ಲಿ ಪತ್ತೆಯಾಗಿದೆ. ಕೇರಳದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37), ಪತ್ನಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವನ್ನು ಕೊಂದು ಬಳಿಕ ದಂಪತಿ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಸಂಜೆ ರೆಸಾರ್ಟ್‍ಗೆ ಬಂದು ತಂಗಿದ್ದರು ಎಂದು ಹೇಳಲಾಗಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ

ಮಡಿಕೇರಿ ರೆಸಾರ್ಟ್‍ನಲ್ಲಿ ದಂಪತಿ, ಮಗುವಿನ ಮೃತದೇಹ ಪತ್ತೆ ! Read More »

ಕಾರು-ರಿಕ್ಷಾ ಡಿಕ್ಕಿ : ಇಬ್ಬರಿಗೆ ಗಾಯ

ಪುತ್ತೂರು: ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ ಪರಿಣಾಮ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಸಹಿತ ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ಬೊಳುವಾರಿನಲ್ಲಿ ನಡೆದಿದೆ. ಚಿಕ್ಕಮುಡೂರು ಗ್ರಾಮ ನಿವಾಸಿ ಹರೀಶ್ ಕೆ(42) ಹಾಗೂ ಕೆ.ಸಚ್ಚಿದಾನಂದ ರಾವ್ ಗಾಯಗೊಂಡವರು. ಕಾರು ಚಾಲಕ ನಿರ್ಲಕ್ಷ್ಯತನದಿಂದ ರಸ್ತೆಯಲ್ಲಿ ಒಮ್ಮೇಲೆ ಯು ಟರ್ನ್ ಮಾಡಿದ ಪರಿಣಾಮ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ರಿಕ್ಷಾ ಮಗುಚಿ ಬಿದ್ದಿದ್ದು, ಇಬ್ಬರು ಗಾಯಗೊಂಡರು. ಸಚ್ಚಿದಾನಂದ ರವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿರುವುದಾಗಿ

ಕಾರು-ರಿಕ್ಷಾ ಡಿಕ್ಕಿ : ಇಬ್ಬರಿಗೆ ಗಾಯ Read More »

error: Content is protected !!
Scroll to Top