ಪ್ರವಾಸಕ್ಕೆ ಗೆಳೆಯರ ಜೊತೆಗೆ ಮಲ್ಪೆಗೆ ಬಂದ ವ್ಯಕ್ತಿ ಸಾವು
ಉಡುಪಿ: ಪ್ರವಾಸಕ್ಕೆಂದು ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ಹೊಟೇಲ್ ರೂಮಿನಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ಅನೇಕಲ್ ನಿವಾಸಿ ಧನಂಜಯ್ ಕೆ. ಎನ್. (37) ಎನ್ನುವವರೇ ಮೃತ ದುರ್ದೈವಿ. ಇವರು ಸುಮಾರು 4 ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಎ. 19 ರಂದು ತಮ್ಮ ಗೆಳೆಯರ ಜೊತೆಗೆ ಮಲ್ಪೆಗೆ ಪ್ರವಾಸಕ್ಕೆ ಬಂದಿದ್ದಾರೆ. ಎ. 20 ರಂದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊಠಡಿಯಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರವಾಸಕ್ಕೆ ಗೆಳೆಯರ ಜೊತೆಗೆ ಮಲ್ಪೆಗೆ ಬಂದ ವ್ಯಕ್ತಿ ಸಾವು Read More »










