ರಾಜ್ಯ

ತರಗತಿಯಲ್ಲೇ ‌ವಿದ್ಯಾರ್ಥಿನಿಗೆ ಲವ್ ಪ್ರೊಪೋಸ್ ಮಾಡಿದ ಪ್ರೊಫೆಸರ್

ಬೆಂಗಳೂರು: ವಿದ್ರಾರ್ಥಿನಿಯೊಬ್ಬಳಿಗೆ ಪ್ರೊಫೆಸರ್ ಒಬ್ಬ ತರಗತಿ ನಡೆಯುತ್ತಿರುವಾಗಲೇ ಲವ್ ಪ್ರೊಪೋಸ್ ಮಾಡಿದ್ದು, ಇದು ವಿವಾದ ಸೃಷ್ಟಿ ಮಾಡಿದೆ. ಪ್ರತಿಷ್ಟಿತ ಮೆಡಿಕಲ್ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಪ್ರೊ. ಅಬ್ದುಲ್ಲಾ ಎಂಬಾತ ಚಾಕೊಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆಯನ್ನು ತರಗತಿಯಲ್ಲೇ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಆಕ್ರೋಶದಿಂದ ಆತನನ್ನು ಪ್ರಶ್ನೆ ಮಾಡಿದ್ದಾಳೆ. ಘಟನೆಯಿಂದ ವಿವಾದ ಉಂಟಾಗಿತ್ತು, ಬೇರೆ ವಿದ್ಯಾರ್ಥಿಗಳು ಸಹ ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆತನನ್ನು ಹಿಂಬಾಲಿಸಿ ಕ್ಯಾಂಪಸ್ ನಲ್ಲೇ ಹೊಡೆದಿರುವ ಘಟನೆ ಸಹ ನಡೆದಿದೆ. ಪರಿಸ್ಥಿತಿ […]

ತರಗತಿಯಲ್ಲೇ ‌ವಿದ್ಯಾರ್ಥಿನಿಗೆ ಲವ್ ಪ್ರೊಪೋಸ್ ಮಾಡಿದ ಪ್ರೊಫೆಸರ್ Read More »

ಬಸ್ – ಟಿಪ್ಪರ್ ‌ಅಪಘಾತ: ಹೊತ್ತಿಕೊಂಡ ಬೆಂಕಿಯಲ್ಲಿ ಹತ್ತು ಮಂದಿ ಸಜೀವ ದಹನ

ಹೈದರಾಬಾದ್: ಬಸ್‌ ಮತ್ತು ಟಿಪ್ಪರ್ ಢಿಕ್ಕಿ ಹೊಡೆದು ಎರಡೂ ವಾಹನಗಳಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಸುಮಾರು 10 ಮಂದಿ ಸಜೀವ ದಹನವಾದ ಘಟನೆ ಮಾರ್ಕಪುರಂ ಬಳಿಯ ರಾಯವರಂ ಎಂಬಲ್ಲಿ ನಡೆದಿದೆ. ಹರಿಕೃಷ್ಣ ಟ್ರಾವೆಲ್ಸ್‌ಗೆ ‌ಸೇರಿದ ಬಸ್ಸು ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದಿದೆ. ಈ ದುರಂತದಲ್ಲಿ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬಸ್ಸು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿದೆ. ಘಟನೆಯಲ್ಲಿ 10 ಮಂದಿ ಸಜೀವವಾಗಿ ಸುಟ್ಟು ಹೋಗಿದ್ದಾಗಿ ತಿಳಿದು ಬಂದಿದೆ. ಬೆಳಗ್ಗೆ ಸುಮಾರು 6 ರಿಂದ

ಬಸ್ – ಟಿಪ್ಪರ್ ‌ಅಪಘಾತ: ಹೊತ್ತಿಕೊಂಡ ಬೆಂಕಿಯಲ್ಲಿ ಹತ್ತು ಮಂದಿ ಸಜೀವ ದಹನ Read More »

ಕೆಲಸಕ್ಕೆಂದ್ದು ಹೊರಟು ಹೋದ ಯುವತಿ ನಾಪತ್ತೆ

ಬಂಟ್ವಾಳ: ಕೆಲಸಕ್ಕೆಂದು ತೆರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಅರಳ ಗ್ರಾಮದ ಮುಲಾರಪಟ್ಟದಲ್ಲಿ ನಡೆದಿದೆ. ಮುಲ್ಲಾರಪಟ್ಟ ಆಝಾದ್ ನಗರದನಿವಾಸಿ ಅಬ್ದುಲ್ ರಶೀದ್‌ರವರ ಪುತ್ರಿ ಫಾತಿಮತ್ ಇಪ್ರಾ (18) ನಾಪತ್ತೆಯಾದ ಯುವತಿ. ಪಿಯುಸಿ ಮುಗಿಸಿ ಕಂಪ್ಯೂಟರ್ ತರಬೇತಿ ಪಡೆದಿದ್ದು, ಬಿ.ಸಿ.ರೋಡ್ ನ ಸೈಬರ್ ಸೆಂಟರ್ ನಲ್ಲಿ ಕೆಲಸ ಮಾಡಿತ್ತಿದ್ದರು. ಎಂದಿನಂತೆ ಮಾ.24ರಂದು ಕೆಲಸಕ್ಕೆಂದು ತೆರಳಿದ ಫಾತಿವiತ್ ಇಪ್ರಾ ಸಂಜೆಯಾದರು ಮನೆಗೆ ಬಾರದಿರುವುದನ್ನು ಕಂಡು ಗಾಬರಿಗೊಂಡ ಪೋಷಕರು ಆಕೆ ಕೆಲಸ ಮಾಡುವ ಸೈಬರ್ ಸೆಂಟರ್ ನ ಮಾಲೀಕ ಮನ್ನೂರ್ ಅವರ

ಕೆಲಸಕ್ಕೆಂದ್ದು ಹೊರಟು ಹೋದ ಯುವತಿ ನಾಪತ್ತೆ Read More »

ಆನ್‌ಲೈನ್ ಗೇಮಿಂಗ್ ಹುಚ್ಚು: ವೈದ್ಯಕೀಯ ವಿದ್ಯಾರ್ಥಿಯ ಹಣವೂ ಹೋಯ್ತು, ಜೀವವೂ ಹೋಯ್ತು

ಬೀದರ್: ಆನ್‌ಲೈನ್ ಗೇಮ್ಸ್ ಹುಚ್ಚಿಗೆ ಹಣ ಕಳಕೊಂಡ ನೋವಿನಲ್ಲಿ ‌ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದೆ. ಮೃತನನ್ನು ಅಂತಿಮ ವರ್ಷದ ವೈದ್ಯಕೀಯ ಪದವಿ ಓದುತ್ತಿದ್ದ ಅನಿಷ್ಕಾರ್ ‌ಚೌಹಾಣ್ ಎಂದು ಗುರುತಿಸಲಾಗಿದೆ. ಕಲ್ಬುರ್ಗಿಯ ಚಿಂಚೋಳಿ ತಾಲೂಕಿನ ಸಲಗರ್ ಗ್ರಾಮದ ಯುವಕ ಈತ. ಆನ್‌ಲೈನ್ ಗೇಮ್ಸ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ. ಇದರಿಂದ ಮನನೊಂದು ಕಾಲೇಜಿನ ವಸತಿ ಗೃಹದಲ್ಲೇ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾನೆ. ಅನಿಷ್ಕಾರ್ ತನ್ನ ಸ್ನೇಹಿತನಿಂದಲೂ ‌ಸುಮಾರು ಎಪ್ಪತ್ತು ಸಾವಿರ ರೂ.

ಆನ್‌ಲೈನ್ ಗೇಮಿಂಗ್ ಹುಚ್ಚು: ವೈದ್ಯಕೀಯ ವಿದ್ಯಾರ್ಥಿಯ ಹಣವೂ ಹೋಯ್ತು, ಜೀವವೂ ಹೋಯ್ತು Read More »

ಮಡಿಕೇರಿಯಲ್ಲಿ ‌ಕಾಣಿಸಿಕೊಂಡ ಹುಲಿ: ಸಾರ್ವಜನಿಕರಲ್ಲಿ ಮನೆಮಾಡಿದ ಆತಂಕ

ಮಡಿಕೇರಿ: ಇಬ್ನಿಳವಾಡಿಯಲ್ಲಿ ಹುಲಿ ಸಂಚಾರ ಕಂಡು ಬಂದಿದ್ದು,‌ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಮಡಿಕೇರಿಯ ಹೊರವಲಯದ ಎರಡು ಕಿ. ಮೀ. ದೂರದ ಪ್ರದೇಶದಲ್ಲಿ ಹುಲಿ ಚಲನವಲನ ಕಂಡುಬಂದಿರುವುದಾಗಿದೆ. ಪೊನ್ನಚೆಟ್ಟಿರ ಸಂದೀಪ್ ಎಂಬವರ ತೋಟದಲ್ಲಿ ಹುಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಅರಣ್ಯ ಇಲಾಖೆಗೂ ಈ‌ ಕುರಿತು ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರದೇಶದ ಏಳೆಂಟು ಕಿ.ಮೀ ವ್ಯಾಪ್ತಿಯಲ್ಲಿ ಹುಲಿಯನ್ನು ಹೋಲುವ ಪ್ರಾಣಿಯ ಓಡಾಟದ ಬಗ್ಗೆ ಮಾಹಿತಿ ಇತ್ತು. ಅದು ಹುಲಿಯೋ, ಪೆರ್ಪಣವೋ ಎಂಬ ಗೊಂದಲವೂ

ಮಡಿಕೇರಿಯಲ್ಲಿ ‌ಕಾಣಿಸಿಕೊಂಡ ಹುಲಿ: ಸಾರ್ವಜನಿಕರಲ್ಲಿ ಮನೆಮಾಡಿದ ಆತಂಕ Read More »

ಮಗಳ ಜೊತೆ ಮನೆ ಬಿಟ್ಟು ನಾಪತ್ತೆಯಾದ ಮಹಿಳೆ: ದೂರು ದಾಖಲು

ಶಿರ್ವ: ಗಂಡನ ಜೊತೆಗೆ ಊಟದ ವಿಷಯದಲ್ಲಿ ಜಗಳವಾಗಿದ್ದು, ಹೆಂಡತಿ ತನ್ನ ಅಪ್ರಾಪ್ತ ಪುತ್ರಿಯನ್ನು ಕರೆದುಕೊಂಡು ನಾಪತ್ತೆಯಾಗಿರುವ ಘಟನೆ ಬೆಳಪು ಗ್ರಾಮದ ಪುಂಚಲಕಾಡಿನಲ್ಲಿ ನಡೆದಿದೆ. ರೇಣುಕಾ ಗಂಗಾಧರ್ ಪೂಜೇರ್ (28) ಮತ್ತು ಪ್ರತೀಕ್ಷಾ ಗಂಗಾಧರ್ ಪೂಜೇರ್(11) ಎಂಬವರೇ ನಾಪತ್ತೆಯಾದವರು. ಗಂಡ ಮತ್ತು ಹೆಂಡತಿಯ ನಡುವೆ ಮಾ. 20 ರಂದು ಊಟದ ವಿಷಯದಲ್ಲಿ ಗಲಾಟೆ ನಡೆದಿತ್ತು. ಬಳಿಕ ಕೆಲಸದ ಕಾರಣಕ್ಕೆ ಅಂಗಡಿಗೆ ಹೋಗುವುದಾಗಿ ಹೇಳಿ ಗಂಡ ಮನೆಯಿಂದ ತೆರಳಿದ್ದಾರೆ. ಕೆಲಸ ಮುಗಿಸಿ ಗಂಡ ರಾತ್ರಿ ವೇಳೆ ಮನೆಗೆ ಬಂದಿದ್ದು, ಆಗ

ಮಗಳ ಜೊತೆ ಮನೆ ಬಿಟ್ಟು ನಾಪತ್ತೆಯಾದ ಮಹಿಳೆ: ದೂರು ದಾಖಲು Read More »

ಬೈಕ್ ವಿದ್ಯುತ್ ಕಂಬಕ್ಕೆ ಬಡಿದು ಯುವಕ ಸಾವು

ಸುಳ್ಯ: ನಿಯಂತ್ರಣ ತಪ್ಪಿ ಬೈಕೊಂದು ‌ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸವಾರ ಮೃತಪಟ್ಟ ಘಟನೆ ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರ ನಡೆದಿದೆ. ಮೆಸ್ಕಾಂ ಗುತ್ತಿಗೆ ನೌಕರ ಲೋಕನಾಥ್ ಎಂಬವರೇ ‌ಮೃತ ದುರ್ದೈವಿ. ಸುಳ್ಯದಿಂದ ತಮ್ಮ ಮನೆಯತ್ತ ಮರಳುತ್ತಿದ್ದ ‌ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾದರೂ, ಗಾಯದ ತೀವ್ರತೆ ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಬೈಕ್ ವಿದ್ಯುತ್ ಕಂಬಕ್ಕೆ ಬಡಿದು ಯುವಕ ಸಾವು Read More »

17 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 17 ವರ್ಷಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದೇರಳಕಟ್ಟೆಯ ನಾಟೇಕಲ್ ನಿವಾಸಿ ರಿಯಾಜ್ ಎಂದು ಗುರುತಿಸಲಾಗಿದೆ. ಈತ ಬರ್ಕೆ ಪೊಲೀಸ್‌ ಠಾಣೆಯ ಅಪರಾಧ ಕ್ರಮಾಂಕ 15/2009ರಡಿ, ಕಾಪಿರೈಟ್ ಕಾಯ್ದೆಯ ಕಲಂ 52(ಎ) ಮತ್ತು 63ರ ಪ್ರಕಾರ ದಾಖಲಾಗಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಪ್ರಕರಣ ದಾಖಲಾದ ನಂತರದಿಂದಲೇ ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಸುಮಾರು 17 ವರ್ಷಗಳಿಂದ ಪರಾರಿಯಾಗಿರುವ ಆರೋಪಿತನನ್ನು ಬರ್ಕೆ ಪೊಲೀಸ್‌ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾರ್ಚ್

17 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ Read More »

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು

ಗದಗ: ಬಡತನದ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ದರೂ ಹೋಗದೆ ದ್ರಾಕ್ಷಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆತಂದು ಅಧಿಕಾರಿಗಳು ಪರೀಕ್ಷೆ ಬರೆಸಿದ ಘಟನೆ ಮುಂಡರಗಿಯ ಬರ್ಡೂರಿನಲ್ಲಿ ನಡೆದಿದೆ. ಪಲ್ಲವಿ ಎಂಬ ಬಾಲಕಿ ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮನೆಯಲ್ಲಿ ತೀರದ ಬಡತನದ ಕಾರಣಕ್ಕೆ ಆಕೆ ತನ್ನ ಪರೀಕ್ಷೆಗೂ ಹೋಗದೆ ದ್ರಾಕ್ಷಿ ತೋಟಕ್ಕೆ ದಿನಗೂಲಿ ಕೆಲಸಕ್ಕೆ ಹೋಗಿದ್ದಳು. ಅವಳ ಪರಿಸ್ಥಿತಿ ಅರಿತ ಅಧಿಕಾರಿಗಳು ಆಕೆ ಕೆಲಸ ಮಾಡುತ್ತಿದ್ದಲ್ಲಿಗೆ ತೆರಳಿ, ಆಕೆಯ ಪೋಷಕರ ಮನವೊಲಿಸಿ

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು Read More »

ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು

ಮಂಡ್ಯ: ಈಜಲೆಂದು ಹೋದ ಬಾಲಕ ಕೃಷಿ ಹೊಂಡದಲ್ಲಿ ‌ಮುಳುಗಿ ಸಾವನ್ನಪ್ಪಿದ ಘಟನೆ ಮಳವಳ್ಳಿಯ ನಂದೀಪುರದಲ್ಲಿ ‌ನಡೆದಿದೆ. ಕೊಡೀಹಳ್ಳಿ ನಿವಾಸಿ ಪೃಥ್ವಿನ್ (15) ಮೃತ ಬಾಲಕ. ಈತ ದಳವಾಯಿ ಕೊಡೀಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 8 ತರಗತಿ ವಿದ್ಯಾರ್ಥಿ. ಶಾಲೆಗೆ ರಜೆ ಇದ್ದುದರಿಂದ ತನ್ನ ನಾಲ್ವರು ಗೆಳೆಯರ ಜೊತೆಗೆ ಭಾನುವಾರ ಈಜಾಟಕ್ಕೆ ತೆರಳಿದ್ದ. ಆದರೆ ಸಂಜೆಯ ವರೆಗೂ ಬಾಲಕ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಮನೆಯವರು ಶೋಧ ನಡೆಸಿದ್ದರು. ಬಾಲಕನ ಮೃತದೇಹ ‌ನಂದೀಪುರದ ರಾಜೇಗೌಡ ಎಂಬವರ ಜಮೀನಿನ ಕೃಷಿ

ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು Read More »

error: Content is protected !!
Scroll to Top