ಪುತ್ತೂರು

ಕಾಂಗ್ರೆಸ್ ನಲ್ಲಿ ಇಲ್ಲದ ಜಾತಿ ರಾಜಕಾರಣ ಬಿಜೆಪಿಯಲ್ಲಿ ಯಾಕೆ ? | ಸಂಘಟನೆಯಲ್ಲಿ ಹಿರಿಯರ ಅಭಿಪ್ರಾಯದ ಪಾತ್ರ ಮಹತ್ವ| ಹಿಂದುತ್ವ ಮತ್ತು ಬಿಜೆಪಿ ಎಂದು ಹೇಳಿ ಪಕ್ಷೇತರವಾಗಿ ನಿಂತು ಮೂರನೆಯವನಿಗೇ ಲಾಭ ಮಾಡಿಕೊಡುವರೇ ?

ಪುತ್ತೂರು: ಬಿಜೆಪಿ ಪಕ್ಷದ ಅಭ್ಯರ್ಥಿ ಜಾತಿ ಅಧಾರಿತ ಎನ್ನುವ ಮತ್ತು ‌ಚರ್ಚಿಸುವ ಜನತೆ ಮತ್ತೊಮ್ಮೆ ಪುತ್ತೂರಿನ ರಾಜಕೀಯದ ಕುರಿತು ಯೋಚಿಸಬೇಕಾದ ಅಗತ್ಯವಿದೆ. ಕಳೆದ ಹಲವಾರು ವರ್ಷಗಳ ಪುತ್ತೂರಿನ ರಾಜಕೀಯದ ಮಟ್ಟಿಗೆ ಪುತ್ತೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಲ್ಲಿಯ ತನಕ ಅಯ್ಕೆಯಾದವರು ಯಾರು ಎಂಬುದನ್ನು ಯೋಚಿಸಬೇಕಾಗಿದೆ. ಸುಧಾಕರ ಶೆಟ್ಟಿ, ಬೊಂಡಾಲ ಜಗನ್ನಾಥ ಶೆಟ್ಟಿ, ಶಕುಂತಲಾ ಶೆಟ್ಟಿ, ಅಶೋಕ್ ರೈ. ಹೀಗಿದ್ದೂ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಭ್ಯರ್ಥಿ ಬಗ್ಗೆ ಯಾರೂ ಜಾತಿ ರಾಜಕರಣದ ಕುರಿತು ಹೇಳಲ್ಲ, ಯಾರೂ ಮತ ವಿಭಾಜನೆ […]

ಕಾಂಗ್ರೆಸ್ ನಲ್ಲಿ ಇಲ್ಲದ ಜಾತಿ ರಾಜಕಾರಣ ಬಿಜೆಪಿಯಲ್ಲಿ ಯಾಕೆ ? | ಸಂಘಟನೆಯಲ್ಲಿ ಹಿರಿಯರ ಅಭಿಪ್ರಾಯದ ಪಾತ್ರ ಮಹತ್ವ| ಹಿಂದುತ್ವ ಮತ್ತು ಬಿಜೆಪಿ ಎಂದು ಹೇಳಿ ಪಕ್ಷೇತರವಾಗಿ ನಿಂತು ಮೂರನೆಯವನಿಗೇ ಲಾಭ ಮಾಡಿಕೊಡುವರೇ ? Read More »

ಅವಳಿ ಸಹೋದರಿಯರ ಅವಳಿ ಮಾರ್ಕ್ಸ್ | ಪಿಯು ಫಲಿತಾಂಶದಲ್ಲಿ ಅಚ್ಚರಿಯ ಸಾಧನೆ

ಬೆಳ್ತಂಗಡಿ: ಸ್ಪಂದನಾ ಹಾಗೂ ಸ್ಪರ್ಷಾ ಅವಳಿ ಸಹೋದರಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ವಾಣಿಜ್ಯ ವಿಭಾಗದಲ್ಲಿ )  ಇಬ್ಬರೂ 600ರಲ್ಲಿ 594 ಸಮಾನ (ಶೇಕಡ 99)ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿ ಹೊನ್ನಪ್ಪ ಗೌಡ ಮತ್ತು ಗಿರಿಜಾ ಇವರ ಮೊಮ್ಮಕ್ಕಳು, ನೆರಿಯ ಉಮೇಶ್ ಗೌಡ ಪಿ‌.ಹೆಚ್- ‌ಮತ್ತು ಗೀತಾ ದಂಪತಿಯ ಅವಳಿ ಮಕ್ಕಳು ಇವರಾಗಿದ್ದಾರೆ. ಇವರು ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮಾಡಿರುತ್ತಾರೆ.

ಅವಳಿ ಸಹೋದರಿಯರ ಅವಳಿ ಮಾರ್ಕ್ಸ್ | ಪಿಯು ಫಲಿತಾಂಶದಲ್ಲಿ ಅಚ್ಚರಿಯ ಸಾಧನೆ Read More »

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 10 ನಾಮಪತ್ರ ಸಲ್ಲಿಕೆ | ಎಲ್ಲಾ ನಾಮಪತ್ರ ಸಿಂಧು

ಪುತ್ತೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ವಿವಿಧ ಪಕ್ಷ ಸಹಿತ ಪಕ್ಷೇತರದಿಂದ ಒಟ್ಟು 13 ನಾಮಪತ್ರ ಸಲ್ಲಿಕೆಯಾಗಿದ್ದು, ಎಲ್ಲಾ ನಾಮಪತ್ರಗಳೂ ಸಿಂಧು ಎಂದು ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಗಿರೀಶ್ ನಂದನ್ ತಿಳಿಸಿದ್ದಾರೆ. ಶುಕ್ರವಾರ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಸಿದ್ದು, ಎಲ್ಲಾ 10 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಪ್ರಕ್ರಿಯೆ ಆರಂಭಗೊಂಡಿತ್ತು. ನಾಮಪತ್ರ ಸಲ್ಲಿಸಲು ಏ.20 ಕೊನೆಯ ದಿನಾಂಕವಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರದ

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 10 ನಾಮಪತ್ರ ಸಲ್ಲಿಕೆ | ಎಲ್ಲಾ ನಾಮಪತ್ರ ಸಿಂಧು Read More »

ಅಫಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ

ಪುತ್ತೂರು: ಅಪಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ತಮ್ಮ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದ ಘಟನೆ ಶುಕ್ರವಾರ ನಡೆದಿದೆ. ಪ್ರಚಾರದ ಹಿನ್ನಲೆಯಲ್ಲಿ ಜಿಡೆಕಲ್ಲು ರಸ್ತೆಯಾಗಿ ಬರುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಬಾಲಕಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಬಾಲಕಿಯನ್ನು ಆಶಾ ತಿಮ್ಮಪ್ಪ ಅವರು ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಕಾರ್ಯಕರ್ತರ ಜತೆ ಮಂಗಳೂರಿನ

ಅಫಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ Read More »

ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ

ಪುತ್ತೂರು : ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕ್ಕೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಶುಕ್ರವಾರ ಭೇಟಿ ನೀಡಿದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಆಶಾ ತಿಮ್ಮಪ್ಪ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ Read More »

ವಿದ್ಯಾರಶ್ಮಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ

ಪುತ್ತೂರು: ಮಾರ್ಚ್ 2023 ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ ವಾಣಿಜ್ಯ ವಿಭಾಗದ 25 ಮತ್ತು ವಿಜ್ಞಾನ ವಿಭಾಗದ 6 ಅಭ್ಯರ್ಥಿಗಳು ಸೇರಿದಂತೆ ಒಟ್ಟು 34 ವಿದ್ಯಾರ್ಥಿಗಳು ಹಾಜರಾಗಿದ್ದು, 31 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 7 ವಿಶಿಷ್ಟ ಶ್ರೇಣಿ,15 ಪ್ರಥಮ ಹಾಗೂ 3 ದ್ವಿತೀಯ ಹಾಗೂ 6 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ತೇಜಸ್ ಕೆ. (531) ಲೋಕನಾಥ ಮತ್ತು ಶಶಿಕಲಾ ಕುದ್ಮಾರು ದಂಪತಿ ಪುತ್ರ, ನಿಶಾಂತ್ ಡಿ. ಎಚ್

ವಿದ್ಯಾರಶ್ಮಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ Read More »

ಪಿಯು ಫಲಿತಾಂಶ ಪ್ರಕಟ: ಪ್ರೇರಣಾ ಸಂಸ್ಥೆಯಲ್ಲಿ ತರಬೇತಿ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರೇರಣಾ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 53 ವಿದ್ಯಾರ್ಥಿಗಳು ಪ್ರೇರಣಾದಲ್ಲಿ ತರಬೇತಿ ಪಡೆದುಕೊಂಡಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. 30 ವಿದ್ಯಾರ್ಥಿಗಳು ಪ್ರಥಮ ದರ್ಜೆ, 13 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಮಹಮ್ಮದ್ ಶಾಝ್ (560), ಎನ್. ಅಮನ್ ಅಡ್ಯಂತ್ತಾಯ (560), ನೆಬಿಸಾ (544), ಹರ್ಷಿದಾ (535), ನಿಯಾಫ್‍ (524), ಅನ್ಸಫ್ (517), ಅಬ್ದುಲ್ ಅಹದ್ (512),

ಪಿಯು ಫಲಿತಾಂಶ ಪ್ರಕಟ: ಪ್ರೇರಣಾ ಸಂಸ್ಥೆಯಲ್ಲಿ ತರಬೇತಿ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ Read More »

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ದರ್ಖಾಸು ಎಂಬಲ್ಲಿ ಏ. 20 ರಂದು ಸಂಭವಿಸಿದೆ.ಸುಬ್ಬಪ್ಪ (60)ಎಂಬವರೇ ಮೃತ ವ್ಯಕ್ತಿ. ಪಡ್ಪಿನಂಗಡಿ ದರ್ಖಾಸು ಎಂಬಲ್ಲಿರುವ ವಿಮಲ ರವರ ವಾಸದ ಮನೆಯ ಜಗಲಿಯಲ್ಲಿ ಛಾವಣಿಯ ಪಕ್ಕಾಸಿಗೆ ಶಾಲನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಅಡಿಲು ಮೋನಪ್ಪ ಕರ್ಕೇರಾ ನಿಧನ

ಪುತ್ತೂರು: ರಾಜ್ಯ ಸರಕಾರದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಅಡಿಲು ಮೋನಪ್ಪ ಕರ್ಕೇರಾ (75) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಗುರುವಾರ ರಾತ್ರಿ ಹಠಾತ್ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನಿಧನರಾದರು. ಅವರು ಪ್ರತಿಷ್ಠಿತ ಕೃಷಿ  ಪಂಡಿತ ಪ್ರಶಸ್ತಿ ಪಡೆದಿರುವುದಲ್ಲದೆ ಮೀನುಗಾರಿಕೆಯಲ್ಲಿ ನಿರ್ದೇಶಕರಾಗಿ ಸೇವಿಸಲ್ಲಿಸಿರುತ್ತಾರೆ. ಅವರು ಪತ್ನಿ, ಮಕ್ಕಳು  ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ

ಅಡಿಲು ಮೋನಪ್ಪ ಕರ್ಕೇರಾ ನಿಧನ Read More »

ಸಚಿವ ಅಂಗಾರರಿಗೆ ಅವಕಾಶ ನೀಡದಿರುವುದು ಮೊಗೇರ ಸಮುದಾಯಕ್ಕೆ ಬೇಸರ ತಂದಿದೆ : ಪ್ರಸಾದ್ ಬೊಲ್ಮಾರು

ಪುತ್ತೂರು: ಯಾವುದೇ ಭ್ರಷ್ಟಾಚಾರ, ಕ್ರಿಮಿನಲ್ ಕೇಸ್ ಇಲ್ಲದ ಸಚಿವ ಸುಳ್ಯದ ಅಂಗಾರ ಅವರಿಗೆ ಈ ಬಾರಿ ಅವಕಾಶ ನೀಡದಿರುವುದು ಜಿಲ್ಲಾ ಮೊಗೇರ ಸಮುದಾಯಕ್ಕೆ ಅತೀವ ಬೇಸರ ತಂದಿದೆ ಎಂದು ಜಿಲ್ಲಾ ಮೊಗೇರ ಸಂಘದ ಸದಸ್ಯ ಪ್ರಸಾದ್ ಬೊಲ್ಮಾರ್ ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷದಿಂದ ಭಾಗೀರಥಿ ಮುರುಳ್ಯ ಅವರಿಗೆ ಅವಕಾಶ ನೀಡಿರುವುದಕ್ಕೆ ನಮಗೆ ಯಾವುದೇ ಬೇಸರವಿಲ್ಲ. ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಭ್ರಷ್ಟಾಚಾರ, ಕ್ರಿಮಿನಲ್ ಕೇಸ್ ಗಳ ಯಾವುದೇ ಕಳಂಕವನ್ನು ಹೊತ್ತುಕೊಳ್ಳದ

ಸಚಿವ ಅಂಗಾರರಿಗೆ ಅವಕಾಶ ನೀಡದಿರುವುದು ಮೊಗೇರ ಸಮುದಾಯಕ್ಕೆ ಬೇಸರ ತಂದಿದೆ : ಪ್ರಸಾದ್ ಬೊಲ್ಮಾರು Read More »

error: Content is protected !!
Scroll to Top