ದೇಶ

65 ಲಕ್ಷ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿದ ಚುನಾವಣಾ ಆಯೋಗ

ನವದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗವು 65 ಲಕ್ಷ ನಕಲಿ ಮತದಾರರನ್ನು ಪಟ್ಟಿಯಿಂದ ಅಳಿಸಿ ಹಾಕಿದೆ ಮತ್ತು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಆರಂಭ ಮಾಡಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಸಮಯದಲ್ಲಿ ಅಳಿಸಿ ಹಾಕಲಾದ 65 ಲಕ್ಷ ಮತದಾರರ ಹೆಸರುಗಳನ್ನು ಬಹಿರಂಗ ಮಾಡಿರುವುದಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪಟ್ಟಿಯ ಭಾಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾದ 65 ಲಕ್ಷ […]

65 ಲಕ್ಷ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿದ ಚುನಾವಣಾ ಆಯೋಗ Read More »

ರಥಕ್ಕೆ ವಿದ್ಯುತ್‌ ತಂತಿ ಸ್ಪರ್ಶಿಸಿ ಐವರ ದುರ್ಮರಣ

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ರಥಯಾತ್ರೆಯಲ್ಲಿ ಸಂಭವಿಸಿದ ದುರಂತ ಹೈದರಾಬಾದ್: ಕೃಷ್ಣ ಜನ್ಮಾಷ್ಟಮಿ ಆಚರಣೆಯ ಭಾಗವಾಗಿ ನಡೆದ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಕನಿಷ್ಠ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೃತರನ್ನು ಕೃಷ್ಣಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ. ರಾಮಂತಪುರದ ಗೋಕುಲನಗರದಲ್ಲಿ ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು

ರಥಕ್ಕೆ ವಿದ್ಯುತ್‌ ತಂತಿ ಸ್ಪರ್ಶಿಸಿ ಐವರ ದುರ್ಮರಣ Read More »

ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲೂ ಅಚ್ಚರಿ ತೋರಿಸಿದ ಬಿಜೆಪಿ

ತಮಿಳುನಾಡಿನ ಹಿರಿಯ ನಾಯಕ ಸಿ.ಪಿ.ರಾಧಾಕೃಷ್ಣನ್‌ಗೆ ಒಲಿದು ಬಂದ ಭಾಗ್ಯ ನವದೆಹಲಿ: ಜಗದೀಪ್‌ ಧನ್‌ಕರ್‌ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಅಭ್ಯರ್ಥಿಯನ್ನು ಆಯಕೆ ಮಾಡುವಲ್ಲೂ ಬಿಜೆಪಿ ಅಚ್ಚರಿಯೆ ನಡೆ ತೋರಿಸಿದೆ. ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸಹಿತ ಹಲವು ಪ್ರಮುಖರು ಉಪರಾಷ್ಟ್ರಪತಿ ರೇಸ್‌ನಲ್ಲಿ ಇದ್ದರೂ ಕೊನೆಗೆ ಆಯ್ಕೆಯಾಗಿರುವುದು ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌. ಅಷ್ಟರ ತನಕ ರಾಧಾಕೃಷ್ಣನ್‌ ಹೆಸರು ಉಲ್ಲೇಖದಲ್ಲೇ ಇರಲಿಲ್ಲ ಎನ್ನುವುದು ಗಮನಾರ್ಹ ಅಂಶ. ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿನ್ನೆ

ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲೂ ಅಚ್ಚರಿ ತೋರಿಸಿದ ಬಿಜೆಪಿ Read More »

ಭಾರತಕ್ಕೆ ಆಗಮಿಸಿದ ಗಗನಯಾತ್ರಿ ಶುಭಾಂಶು ಶುಕ್ಲ

ದಿಲ್ಲಿ, ಸಿಎಂ, ಕೇಂದ್ರ ಸಚಿವರು ಸಹಿತ ಗಣ್ಯರಿಂದ ನಸುಕಿನ ಹೊತ್ತು ಅದ್ದೂರಿ ಸ್ವಾಗತ ನವದೆಹಲಿ: ನಾಸಾದ ಗಗನಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಶುಭಾಂಶು ಶುಕ್ಲಾ ಇಂದು ನಸುಕಿನ ಹೊತ್ತು ಭಾರತಕ್ಕೆ ಆಗಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಮೊದಲ ಬಾರಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ತಾಯ್ನಾಡಿಗೆ ಮರಳಿದ್ದು, ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಕೇಂದ್ರ ಸಚಿವ

ಭಾರತಕ್ಕೆ ಆಗಮಿಸಿದ ಗಗನಯಾತ್ರಿ ಶುಭಾಂಶು ಶುಕ್ಲ Read More »

12ರ ಬಾಲಕಿ ಮೇಲೆ 200 ಮಂದಿಯಿಂದ ಅತ್ಯಾಚಾರ : ಮುಂಬಯಿಯಲ್ಲಿ ಬೆಳಕಿಗೆ ಬಂದ ಭಯಾನಕ ಕೃತ್ಯ

ಅಮಲು ಬರುವ ಪಾನೀಯ, ಚುಚ್ಚುಮದ್ದು ನೀಡಿ ಲೈಂಗಿಕ ಶೋಷಣೆ ಮುಂಬಯಿ : ಬಾಂಗ್ಲಾದೇಶ ಮೂಲದ 12 ವರ್ಷದ ಬಾಲಕಿಯ ಮೇಲೆ ಮೂರು ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿದ ಭಯಾನಕ ಕೃತ್ಯವೊಂದು ಮುಂಬಯಿಯಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಕಾರಣ ಬೇಸರಗೊಂಡು ಪರಿಚಯಸ್ಥ ಮಹಿಳೆಯೊಬ್ಬಳ ಜತೆಗೆ ದೇಶಬಿಟ್ಟು ಓಡಿಬಂದಿದ್ದ ಬಾಲಕಿ ಮುಂಬಯಿಯಲ್ಲಿ ಮಾನವ ಕಳ್ಳಸಾಗಣೆ ಜಾಲದಲ್ಲಿ ಆಕೆ ಸಿಕ್ಕಿಬಿದ್ದು ನರಕ ಯಾತನೆ ಅನುಭವಿಸಿದ್ದಾಳೆ. ಯಾರೋ ಆಕೆಗೆ ಭಾರತದೊಳಗೆ ನುಸುಳಲು ಅವಕಾಶ ಮಾಡಿಕೊಟ್ಟಿದ್ದರು. ಇಲ್ಲಿ ಮಾನವ ಕಳ್ಳಸಾಗಣೆ ಜಾಲದಲ್ಲಿ

12ರ ಬಾಲಕಿ ಮೇಲೆ 200 ಮಂದಿಯಿಂದ ಅತ್ಯಾಚಾರ : ಮುಂಬಯಿಯಲ್ಲಿ ಬೆಳಕಿಗೆ ಬಂದ ಭಯಾನಕ ಕೃತ್ಯ Read More »

ಸಂಚಾರ ವ್ಯವಸ್ಥೆ ಸರಿಪಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಬೆಂಗಳೂರಿನ ಪುಟಾಣಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಪುಟ್ಟ ಹುಡುಗಿಯೊಬ್ಬಳು ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಅಭಿರೂಪ್ ಎಂಬವರ ಐದು ವರ್ಷದ ಪುತ್ರಿ ಆರ್ಯ ಪ್ರಧಾನಿ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿದ್ದಾಳೆ. ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಇದ್ದು, ಇದರಿಂದ ಶಾಲೆ ಮತ್ತು ಕಾಲೇಜುಗಳಿಗೆ ತಲುಪುವುದು ತಡವಾಗುತ್ತಿದೆ. ರಸ್ತೆ ತುಂಬಾ ಕೆಟ್ಟದಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾಳೆ.

ಸಂಚಾರ ವ್ಯವಸ್ಥೆ ಸರಿಪಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಬೆಂಗಳೂರಿನ ಪುಟಾಣಿ Read More »

ಭಾರತದ ಅಭಿವೃದ್ಧಿಯನ್ನು ಅಮೆರಿಕಾಗೆ ‌ಸಹಿಸಲು ಆಗುತ್ತಿಲ್ಲ: ರಾಜನಾಥ್ ಸಿಂಗ್ ಟಾಂಗ್

ನವದೆಹಲಿ: ಭಾರತದ ಆರ್ಥಿಕ ಅಭಿವೃದ್ಧಿ ಕ್ರಿಯಾತ್ಮಕ ಮತ್ತು ವೇಗವಾದ ಬೆಳವಣಿಗೆ ಕಾಣುತ್ತಿದೆ. ಈ ಅಂಶ ಜಗತ್ತಿನ ಬಾಸ್ ಎಂದು ಕರೆಸಿಕೊಳ್ಳುವ ದೊಡ್ಡಣ್ಣನಿಗೆ ಸಹಿಸುವುದಕ್ಕೆ ‌ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕಾ ವಿರುದ್ಧ ರಕ್ಷಣಾ ಸಚಿವ ರಾಜ ನಾಥ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಭಾರತದ ಮೇಲೆ ಸುಂಕ ಯುದ್ಧ ಹೇರಿದ ಅಮೆರಿಕಾ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ ‌ನಡೆಸಿದ ಅವರು, ಭಾರತದ ಆರ್ಥಿಕ‌ ಬೆಳವಣಿಗೆಯ ವೇಗ ಗಮನಿಸಿದರೆ ಜಗತ್ತಿನ ಮಹಾಶಕ್ತಿಯಾಗಿ ಹೊಮ್ಮುವುದನ್ನು ತಡೆಯಲು ಯಾವ ಜಾಗತಿಕ ಶಕ್ತಿಗೂ ‌ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತದ ಅಭಿವೃದ್ಧಿಯನ್ನು ಅಮೆರಿಕಾಗೆ ‌ಸಹಿಸಲು ಆಗುತ್ತಿಲ್ಲ: ರಾಜನಾಥ್ ಸಿಂಗ್ ಟಾಂಗ್ Read More »

ತಾಂತ್ರಿಕ ದೋಷದಿಂದ ವಿಮಾನ ತುರ್ತು ಲ್ಯಾಂಡಿಂಗ್‌ : ಕೂದಲೆಳೆ ಅಂತರದಲ್ಲಿ ಬಚಾವಾದ ಸಂಸದರು, ಪ್ರಯಾಣಿಕರು

ಕಾಂಗ್ರೆಸ್‌ ಎಂಪಿ ಕೆ.ಸಿ.ವೇಣುಗೋಪಾಲ್‌ ಸಹಿತ ಹಲವು ಸಂಸದರು, ನೂರಾರು ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಚೆನ್ನೈ : ಕೇರಳದ ಕಾಂಗ್ರೆಸ್‌ ಸಂಸದ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವಾರು ಸಂಸದರು ಮತ್ತು ನೂರಾರು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಭಾನುವಾರ ಸಂಜೆ ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ವಿಮಾನ AI2455ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅಲ್ಲದೆ, ಹವಾಮಾನ ವೈಪರೀತ್ಯವೂ ತುರ್ತು ಲ್ಯಾಂಡಿಂಗ್​ಗೆ ಕಾರಣವಾಯಿತು

ತಾಂತ್ರಿಕ ದೋಷದಿಂದ ವಿಮಾನ ತುರ್ತು ಲ್ಯಾಂಡಿಂಗ್‌ : ಕೂದಲೆಳೆ ಅಂತರದಲ್ಲಿ ಬಚಾವಾದ ಸಂಸದರು, ಪ್ರಯಾಣಿಕರು Read More »

ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್‌

ರಿಟರ್ನ್‌ ಟಿಕೆಟ್‌ಗಳ ಮೇಲೆ ಸಿಗಲಿದೆ ಈ ವಿಶೇಷ ರಿಯಾಯಿತಿ ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ಭಾರತೀಯ ರೈಲ್ವೆ ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್ ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಅಕ್ಟೋಬರ್ 13ರಿಂದ 26 ರವರೆಗೆ ನಿಗದಿಪಡಿಸಲಾಗುವ ಪ್ರಯಾಣಗಳಿಗೆ ಬುಕ್ಕಿಂಗ್ ಆಗಸ್ಟ್ 14ರಿಂದ ಶೇ.20ರಷ್ಟು ಡಿಸ್ಕೌಂಟ್‌ ಸಿಗಲಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿ ಸುಗಮ ಪ್ರಯಾಣಕ್ಕೆ ಅನುಕೂಲ

ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್‌ Read More »

ನಿರ್ಮಲಾ ಸೀತಾರಾಮನ್‌ಗೆ ಉಡುಪಿ ಕೃಷ್ಣ ಮಠದಿಂದ ಭಾರತ ಲಕ್ಷ್ಮಿ ಬಿರುದು ಪ್ರದಾನ

ಮಠದಲ್ಲಿ ಜನಸಾಮಾನ್ಯರಂತೆ ವಿವಿಧ ಸೇವೆಗಳನ್ನು ನೆರವೇರಿಸಿದ ಕೇಂದ್ರ ವಿತ್ತ ಸಚಿವೆ ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಸಂದರ್ಭದಲ್ಲಿ ಶನಿವಾರ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಭಾರತ ಲಕ್ಷ್ಮಿ ಎಂಬ ಗೌರವ ಬಿರುದನ್ನು ಪ್ರದಾನ ಮಾಡಲಾಯಿತು. ಪುತ್ತಿಗೆ ಮಠದ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಈ ಗೌರವವನ್ನು ನಿರ್ಮಲಾ ಸೀತಾರಾಮನ್‌ಗೆ ಪ್ರದಾನ ಮಾಡಿದರು. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ನಿರ್ಮಲಾ ಸೀತಾರಾಮನ್‌ಗೆ ಉಡುಪಿ ಕೃಷ್ಣ ಮಠದಿಂದ ಭಾರತ ಲಕ್ಷ್ಮಿ ಬಿರುದು ಪ್ರದಾನ Read More »

error: Content is protected !!
Scroll to Top