ಸುದ್ದಿ

ನೇಪಾಲದ ಮಾಜಿ ಪ್ರಧಾನಮಂತ್ರಿ, ಗೃಹ ಸಚಿವ ಬೆಳ್ಳಂಬೆಳಗ್ಗೆ ಅರೆಸ್ಟ್‌

ಹೊಸ ಸರ್ಕಾರ ಬಂದ ಮರುದಿನವೇ ಮಾಜಿಗಳ ವಿರುದ್ಧ ಕ್ರಮ ಕಠ್ಮಂಡು: ನೇಪಾಳದ ಪ್ರಧಾನಮಂತ್ರಿಯಾಗಿ ಬಾಲೇಂದ್ರ ಶಾ ನೂತನ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ಮರುದಿನವೇ ಕಳೆದ ವರ್ಷ ನೇಪಾಳದಾದ್ಯಂತ ನಡೆದಿದ್ದ ಜನರೇಷನ್ ಝಡ್‌ (ಝೆನ್ ಜಿ) ಪ್ರತಿಭಟನೆಯನ್ನು ಹತ್ತಿಕ್ಕಿದ ಆರೋಪದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದಿದ್ದ ಝೆನ್ ಜಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಓಲಿ ಹಾಗೂ ಲೇಖಕ್‌ ಅವರನ್ನು […]

ನೇಪಾಲದ ಮಾಜಿ ಪ್ರಧಾನಮಂತ್ರಿ, ಗೃಹ ಸಚಿವ ಬೆಳ್ಳಂಬೆಳಗ್ಗೆ ಅರೆಸ್ಟ್‌ Read More »

ಮಾ: 28: ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮಂಗಳೂರು: ಮಾ. 28 ರಂದು ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯದ 44 ನೇ ಘಟಿಕೋತ್ಸವವು ನಡೆಯಲಿದ್ದು ಈ ಸಂದರ್ಭದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಕ್ಷೇತ್ರದ ಸಾಧಕ ಪದ್ಮಶ್ರೀ ಹರೇಕಳ ಹಾಜಬ್ಬ, ಮರಣೋತ್ತರವಾಗಿ ಇತ್ತೀಚೆಗೆ ಮೃತರಾದ ಯಕ್ಷಗಾನದ ಮೇರು ನಟ ಸೂರಿಕುಮೇರು ಗೋವಿಂದ ಭಟ್, ದೈವನರ್ತಕ ಡಾ. ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ನಡೆಯಲಿರುವುದಾಗಿ ಕುಲಪತಿ ಪ್ರೊ. ಕೆ. ಎಲ್. ಧರ್ಮ ತಿಳಿಸಿದ್ದಾರೆ. ಹರೇಕಳ ಹಾಜಬ್ಬ: ಇವರು ಕಿತ್ತಳೆ

ಮಾ: 28: ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ Read More »

ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ

ಉಡುಪಿ: ರೆಸಾರ್ಟ್ ನಿರ್ಮಾಣ ವಿಷಯದಲ್ಲಿ ಉಡಾ (ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ) ದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅವರು ನಡೆಸಿದ ಅನಿರ್ಧಿಷ್ಟಾವಧಿ ಧರಣಿಗೆ 12 ಗಂಟೆಗಳೊಳಗೆ ಫಲ ಸಿಕ್ಕಿದೆ. ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಿಂಗಲ್ ಲೇಔಟ್ ನಕ್ಷೆ ನೀಡದೆ ಉಡಾ ಸತಾಯಿಸುತ್ತಿತ್ತು. ಅದರ ವಿರುದ್ಧ ರಘುಪತಿ ಭಟ್ ಅವರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಕುಳಿತಿದ್ದರು. ಅವರ ಪ್ರತಿಭಟನೆಗೆ ಮಣಿದು ಉಡಾ ತಾತ್ಕಾಲಿಕ ಅನುಮತಿ ಪತ್ರವನ್ನು ನೀಡಿದೆ. ಹಾಗೆಯೇ ಎಲ್ಲಾ ಕಾನೂನು ಪ್ರಕ್ರಿಯೆಗಳ ಪರಿಶೀಲನೆಯ ಬಳಿಕ ಪ್ರಾಧಿಕಾರದ

ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಪುತ್ತೂರು ಘಟಕದ ಸಭೆ ಸ್ವಾಗತ ಹೋಟೆಲ್ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಪುತ್ತೂರು ಆನಂದಾಶ್ರಮಕ್ಕೆ ಭೇಟಿ, ಜಿಲ್ಲಾ ಸಂಚಾಲಕರ ಭಾಸ್ಕರ್ ಬಾರ್ಯ ಅಗಸ್ತ್ಯ ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದು, ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ ಸಮಾರಂಭ, ಎಪ್ರಿಲ್ 14ರಂದು ಬಾರ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಲಿರುವ ಶ್ರೀ ಮಹಾವಿಷ್ಣು ಯಾಗದಲ್ಲಿ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ Read More »

ನಿಧಿಯಾಸೆಗೆ ಪುರಾತನ ದೇವಾಲಯ ಧ್ವಂಸ, ಶಿವಲಿಂಗ ಭಗ್ನ

ಕಲ್ಬುರ್ಗಿ: ಪುರಾತನ ದೇಗುಲವೊಂದು ದುಷ್ಕರ್ಮಿಗಳ ನಿಧಿಯಾಸೆಗೆ ಧ್ವಂಸವಾದ ಘಟನೆ ಅಫ್ಜಲಪುರದ ಬಡದಾಳ ಗ್ರಾಮದಲ್ಲಿ ನಡೆದಿದೆ. ಬಡದಾಳದ ಬಸವಣ್ಣ ದೇಗುಲದಲ್ಲಿ ನಿಧಿ ಇದೆ ಎಂದು ದುಷ್ಕರ್ಮಿಗಳು ರಾತ್ರಿ ವೇಳೆ ಶೋಧ ಕಾರ್ಯ ನಡೆಸಿದ್ದಾರೆ. ದೇಗುಲದ ಒಳಕ್ಕೆ ನುಗ್ಗಿ ಶಿವಲಿಂಗ ಸೇರಿದಂತೆ ದೇವರ ಇನ್ನಿತರ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಹಾಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇಂತಹ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

ನಿಧಿಯಾಸೆಗೆ ಪುರಾತನ ದೇವಾಲಯ ಧ್ವಂಸ, ಶಿವಲಿಂಗ ಭಗ್ನ Read More »

ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದವಳ ಪುತ್ರನಿಂದ ಪತ್ನಿ ಮತ್ತು ಆಕೆಯ ಸಹೋದರನ ಕೊಲೆ

ಬೆಂಗಳೂರು: ತನ್ನ ತಾಯಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದವನ ಪತ್ನಿ ಮತ್ತು ಅವಳ ಸಹೋದರನಿಗೆ ಚಾಕು ಚುಚ್ಚಿ ಕೊಲೆ ಮಾಡಿರುವ ಘಟನೆ ಪೀಣ್ಯಾ‌ದ ನೆಲಗೆದರನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ತಿಗಳರಪಾಳ್ಯದ ಯಮುನಾ (36) ಮತ್ತು ಆಕೆಯ ಸಹೋದರ ಸುದೀಪ್ (34) ಎಂದು ಗುರುತಿಸಲಾಗಿದೆ. ಈ ಕೃತ್ಯವನ್ನು ಅಪರಾಧಿಗಳಾದ ಛಾಯಾ ಮತ್ತು ಆಕೆಯ ಅಪ್ರಾಪ್ತ ಪುತ್ರ ಎಸಗಿದ್ದಾಗಿದೆ. ಎಚ್‌ಎಂ‌ಟಿ ‌ಲೇ ಔಟ್‌ನ ಛಾಯಾಳ ಮನೆಯಲ್ಲೇ ಈ ಹತ್ಯೆ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಮುನಾ ಎಂಬವರ ಗಂಡ ಮಲ್ಲೇಗೌಡನಿಗೆ ಮತ್ತು

ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದವಳ ಪುತ್ರನಿಂದ ಪತ್ನಿ ಮತ್ತು ಆಕೆಯ ಸಹೋದರನ ಕೊಲೆ Read More »

ಹರ್ಮುಜ್ ಜಲಸಂಧಿ ಮಿತ್ರ ರಾಷ್ಟ್ರಗಳಿಗೆ ಮುಕ್ತ: ನಿಲುವು ಸ್ಪಷ್ಟಪಡಿಸಿದ ಇರಾನ್

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಸದ್ಯಕ್ಕೆ ಮುಗಿಯದ ಇಕ್ಕಟ್ಟು ಎಂಬಂತಾಗಿದೆ. ಇರಾನ್ ದೇಶವು ಹರ್ಮುಜ್ ಜಲಸಂಧಿಗೆ ‌ಸಂಬಂಧಿಸಿದ ಹಾಗೆ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟನಿಯಾ ಗುಟೆರಸ್ ಅವರ ಜೊತೆಗೆ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತುಕತೆ ನಡೆಸಿದ್ದು, ದೇಶದ ಭದ್ರತೆಯ ಹಿನ್ನೆಲೆಯಲ್ಲಿ ಮಿತ್ರರಿಗೆ ಜಲಸಂಧಿ ತೆರೆಯುವ ಮತ್ತು ಶತ್ರುಗಳಿಗೆ ಜಲಸಂಧಿ ಮುಚ್ಚುವ ಸಂಪೂರ್ಣ ಹಕ್ಕು ಇರಾನಿಗೆ ಇದೆ ಎಂದು ಹೇಳಿದ್ದಾರೆ. ಅಮೆರಿಕಾ ಮತ್ತು ಇಸ್ರೇಲಿನ ಆಕ್ರಮಣಕಾರಿ ಧೋರಣೆಯಿಂದ ಗಲ್ಫ್

ಹರ್ಮುಜ್ ಜಲಸಂಧಿ ಮಿತ್ರ ರಾಷ್ಟ್ರಗಳಿಗೆ ಮುಕ್ತ: ನಿಲುವು ಸ್ಪಷ್ಟಪಡಿಸಿದ ಇರಾನ್ Read More »

ನಿಮ್ಮ ದೇಶದಲ್ಲೇ ಶಾಂತಿ ಇಲ್ಲ, ಜನರಿಗೆ ಊಟವಿಲ್ಲ : ಪಾಕಿಸ್ತಾನವನ್ನು ಅಪಮಾನಿಸಿದ ಅಮೆರಿಕ

ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುವ ಪಾಕಿಸ್ತಾನದ ಕೊಡುಗೆಗೆ ಹಿಗ್ಗಾಮುಗ್ಗಾ ಲೇವಡಿ ವಾಷಿಂಗ್ಟನ್‌ : ಅಮೆರಿಕ ಮತ್ತು ಇರಾನ್‌ ನಡುವೆ ಮಧ್ಯಸ್ಥಿಕೆ ವಹಿಸಲು ಬಂದ ಪಾಕಿಸ್ತಾನ ಅದೇ ಅಮೆರಿಕದಿಂದ ಅಪಮಾನಕ್ಕೆ ಗುರಿಯಾಗಿದೆ. ಅಮೆರಿಕದ ರಕ್ಷಣಾ ತಜ್ಞ ಮತ್ತು ಭೌಗೋಳಿಕ ರಾಜಕೀಯ ಸಲಹೆಗಾರ ಡೌಗ್ಲಾಸ್‌ ಮ್ಯಾಕ್‌ಗ್ರೆಗರ್‌ ಪಾಕಿಸ್ತಾನದ ಸಂಧಾನದ ಕೊಡುಗೆಯನ್ನು ಹಾಸ್ಯಾಸ್ಪದ ಮತ್ತು ಅಸಂಬದ್ಧತೆ ಎಂದು ಲೇವಡಿ ಮಾಡಿದ್ದಾರೆ. ಮಧ್ಯಪ್ರಾಚ್ಯ ಸಂಘರ್ಷ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಜ್ಜಾದ ಇಸ್ಲಾಮಾಬಾದ್‌ ವಿಶ್ವಾಸಾರ್ಹತೆಯನ್ನೇ ಪ್ರಶ್ನಸಿರುವ ಡೌಗ್ಲಾಸ್ ಮ್ಯಾಕ್‌ಗ್ರೆಗರ್, ಪಾಕಿಸ್ತಾನದ ಆಂತರಿಕ ಅಸ್ಥಿರತೆ ಮತ್ತು

ನಿಮ್ಮ ದೇಶದಲ್ಲೇ ಶಾಂತಿ ಇಲ್ಲ, ಜನರಿಗೆ ಊಟವಿಲ್ಲ : ಪಾಕಿಸ್ತಾನವನ್ನು ಅಪಮಾನಿಸಿದ ಅಮೆರಿಕ Read More »

ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಂವಾದ

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ದೇಶದ ಒಟ್ಟಾರೆ ಸಿದ್ಧತೆ ಬಗ್ಗೆ ಚರ್ಚೆ ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ದೇಶದ ಒಟ್ಟಾರೆ ಸಿದ್ಧತೆ ಮತ್ತು ಯೋಜನೆಗಳನ್ನು ಪರಿಶೀಲಿಸುವ ಮುಖ್ಯ ಉದ್ದೇಶವನ್ನು ಈ ಸಭೆ ಹೊಂದಿದೆ. ಆದರೆ ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಸಂಹಿತೆ ಕಾರಣದಿಂದ ಈ ಸಭೆಯಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಬದಲಿಗೆ,

ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಂವಾದ Read More »

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು : ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಹತ್ಯೆ

ತೊಕ್ಕೊಟ್ಟು ಫ್ಲೈ ಓವರ್‌ನಲ್ಲಿ ನಸುಕಿನ ಹೊತ್ತು ಬರ್ಬರ ಕೊಲೆ ಮಂಗಳೂರು: ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ನೆತ್ತರು ಹರಿದಿದೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಫೈಓವರ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಅಲಿಯಾಸ್‌ ಟಾಬ್ಲೆಟ್ ಆರಿಫ್ (40) ಕೊಲೆಯಾದ ರೌಡಶೀಟರ್. ಆತನ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ಯಾವುದೇ ಪ್ರಕರಣಗಳು ಇರಲಿಲ್ಲ ಎಂದು ತಿಳಿದುಬಂದಿದೆ. 2022ರಲ್ಲಿ ಆತನನ್ನು ಕೊಲೆ ಮಾಡುವ ಯತ್ನ ಉಚ್ಚಿಲದ ಬಳಿ ನಡೆದಿತ್ತು. ಈ ಸಂಬಂಧ

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು : ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಹತ್ಯೆ Read More »

error: Content is protected !!
Scroll to Top