ಸುದ್ದಿ

ಟಿ20 ವಿಶ್ವಕಪ್‌ : ಇಂದು ಭಾರತ-ಇಂಗ್ಲಂಡ್‌ ಸೆಮಿ ಫೈನಲ್‌ ಕಾದಾಟ

ಸತತ ಮೂರನೇ ಸಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ಇಂಡಿಯಾ-ಇಂಗ್ಲಂಡ್‌ ಮುಂಬೈ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನ ಎರಡನೇ ಪಂದ್ಯ ಇಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲಂಡ್‌ ನಡುವೆ ನಡೆಯಲಿದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ನ್ಯೂಜಿಲೆಂಡ್‌ ಮಖಾಡೆ ಮಲಗಿಸಿ ಫೈನಲ್‌ಗೇರಿದೆ. ನ್ಯೂಜಿಲೆಂಡ್‌ ಲೆಕ್ಕಕ್ಕೆ ಇಲ್ಲ ಎಂಬ ದಾಟಿಯಲ್ಲಿ ಮಾತನಾಡುತ್ತಿದ್ದ ದಕ್ಷಿಣ ಆಫ್ರಿಕ ಹೀನಾಯವಾಗಿ ಸೋತು ಗರ್ವಭಂಗವಾಗಿ ಕೂಟದಿಂದ ನಿರ್ಗಮಿಸಿದೆ. ಭಾರತ ತಂಡ ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ […]

ಟಿ20 ವಿಶ್ವಕಪ್‌ : ಇಂದು ಭಾರತ-ಇಂಗ್ಲಂಡ್‌ ಸೆಮಿ ಫೈನಲ್‌ ಕಾದಾಟ Read More »

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ

ಪುತ್ತೂರು: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಖಾಲಿ ಇರುವ ಅಕೌಂಟಿಂಗ್ – ಕಚೇರಿ ಸಹಾಯಕರ ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿರುವ, ಅಕೌಂಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಂಪ್ಯೂಟರ್ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗೆ: 9901355730 ನಂಬರ್ ಗೆ resume ಕಳುಹಿಸಿ.

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ Read More »

ಬೈಕ್ ಮೂಲಕ ರಸ್ತೆಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ

ಬೆಳ್ತಂಗಡಿ: ರಸ್ತೆಗಳಲ್ಲಿ ವಿವಿಧ ಭಂಗಿಗಳಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ನಿರ್ಲಕ್ಷ್ಯತನದಿಂದ ‌ಮಾಡಿ ಸಾಮಾಜಿಕ ಜಾಲತಾಣಗಳ್ಲಿ ‌ಪೋಸ್ಟ್ ಮಾಡುತ್ತಿದ್ದ ಯುವಕನನ್ನು ಬೆಳ್ತಂಗಡಿಯ ‌ಸಂಚಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯನ್ನು ನೂಜಿಲ ನಿವಾಸಿ ಸಂಪತ್(30) ಎಂದು ಗುರುತಿಸಲಾಗಿದೆ. ಆರೋಪಿ ವಿವಿಧ ಕಡೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸಿ, ಸ್ಟಂಟ್ ‌ಮಾಡಿ, ಹೆಲ್ಮೆಟ್ ರಹಿತ ಚಾಲನೆ ಮಾಡುವ ಮೂಲಕ ಅಪರಾಧ ಎಸಗಿದ್ದ. ಫೆ. 8 ರಂದು ಸಾರ್ವಜನಿಕರಿಗೆ ಅಪಾಯ ಸಂಭವಿಸುವ ರೀತಿಯಲ್ಲಿ ಹೆಲ್ಮೆಟ್ ಸಹ ಧರಿಸದೆ ಅಪಾಯಕಾರಿ ಎಂಬಂತೆ ವೀಲಿಂಗ್ ‌ಮಾಡಿ ಬೈಕ್

ಬೈಕ್ ಮೂಲಕ ರಸ್ತೆಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ Read More »

ಪವಿತ್ರಾ ಗೌಡಗಿಲ್ಲ ಮನೆಯೂಟ: ಹೈಕೋರ್ಟ್

ಬೆಂಗಳೂರು: ಮನೆಯೂಟದ ‌ವಿಚಾರದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ‌ಕೊಲೆ‌ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು ಇನ್ನಿಬ್ಬರು ಆರೋಪಿಗಳಿಗೆ ಹಿನ್ನಡೆಯಾಗಿದೆ. ಇತ್ತೀಚೆಗೆ ಪವಿತ್ರಾ ‌ಗೌಡ‌ಗೆ ಜೈಲಿನಲ್ಲಿ ಮನೆಯೂಟ ‌ನೀಡಲು ಅವಕಾಶ ಕಲ್ಪಿಸುವಂತೆ ಅವರ ಪರ ವಾಸಿಸುತ್ತಿರುವ ವಕೀಲರು ಸೆಶನ್ಸ್ ‌ಕೋರ್ಟ್‌ಗೆ ಮನವಿ ಮಾಡಿದ್ದರು. ಪವಿತ್ರಾ ಅವರಂತೆಯೇ ಆರೋಪಿಗಳಾದ ನಾಗ ರಾಜು ಮತ್ತು ಲಕ್ಷ್ಮಣ್ ಸಹ ಮನೆಯೂಟ ನೀಡುವಂತೆ ಕೋರ್ಟ್‌ಗೆ ‌ಮನವಿ ಸಲ್ಲಿಸಿದ್ದರು. ಸೆಶನ್ಸ್ ಕೋರ್ಟ್ ದಿನಕ್ಕೊಮ್ಮೆ ‌ಮನೆಯೂಟ ನೀಡುವ ಆದೇಶವನ್ನು ಆರಂಭದಲ್ಲಿ ನೀಡಿತ್ತು. ಬಳಿಕ ಆದೇಶವನ್ನು ಮಾರ್ಪಾಡು ಮಾಡಿ

ಪವಿತ್ರಾ ಗೌಡಗಿಲ್ಲ ಮನೆಯೂಟ: ಹೈಕೋರ್ಟ್ Read More »

ಹತ್ತು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಕುಂದಾಪುರ ಪೊಲೀಸರ ಬಲೆಗೆ

ಕುಂದಾಪುರ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ಹೀಗೆ ಹತ್ತು ವರ್ಷಗಳಿಂದ ಚಳ್ಳೆಹಣ್ಞು ತಿನ್ನಿಸಿ ನಾಪತ್ತೆಯಾಗಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಕುಂದಾಪುರ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಆರೋಪಿಯನ್ನು ಸಿದ್ದಾಪುರ ಗ್ರಾಮದ ಅಕ್ಕುಂಜೆಯ ಶಶಿಕಾಂತ ಶೆಟ್ಟಿ (44) ಎಂದು ಗುರುತಿಸಲಾಗಿದೆ. ಕುಂದಾಪುರದ ಯುವತಿಯ ಜೊತೆಗೆ 2015 ರಲ್ಲಿ ಆರೋಪಿ ಶಶಿಕಾಂತ ಶೆಟ್ಟಿ ಮದುವೆಯಾಗಿದ್ದು, ವರದಕ್ಷಿಣೆಗೆ ಸಂಬಂಧಿಸಿದ ಹಾಗೆ ಈ ಮದುವೆ ಮುರಿದು ಬಿದ್ದಿತ್ತು. ಅದರಂತೆ ಆತನ ಪತ್ನಿ ನೀಡಿದ ದೂರಿನನ್ವಯ ಕುಂದಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಆತ ತಲೆಮರೆಸಿಕೊಂಡಿದ್ದ. ಸದ್ಯ

ಹತ್ತು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಕುಂದಾಪುರ ಪೊಲೀಸರ ಬಲೆಗೆ Read More »

ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ವಾಹನ ಪಲ್ಟಿ: ಚಾಲಕನಿಗೆ ಗಾಯ

ದೊಡ್ಡಬಳ್ಳಾಪುರ: ಮೇಷ್ಟ್ರು ಮನೆ ಸರ್ಕಲ್ ಸಮೀಪ ಕಲ್ಲಂಗಡಿ ಹಣ್ಣುಗಳನ್ನು ಸಾಗಾಟ‌ ಮಾಡುತ್ತಿದ್ದ ಕ್ಯಾಂಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ ಅವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲಂಗಡಿ ಹಣ್ಣುಗಳನ್ನು ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ‌ಸಾಗಿಸಲಾಗುತ್ತಿತ್ತು. ಈ ವೇಳೆ ಅನಿರೀಕ್ಷಿತವಾಗಿ ಈ ದುರ್ಘಟನೆ ನಡೆದಿದೆ. ಪಲ್ಟಿಯಾದ ರಭಸಕ್ಕೆ ವಾಹನದಲ್ಲಿದ್ದ ಕಲ್ಲಂಗಡಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದೆ. ಸಾರ್ವಜನಿಕರು ಈ ಹಣ್ಣುಗಳನ್ನು ತೆಗೆದುಕೊಂಡು ಹೋದ ಘಟನೆ ನಡೆದಿದೆ.

ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ವಾಹನ ಪಲ್ಟಿ: ಚಾಲಕನಿಗೆ ಗಾಯ Read More »

ಮಧ್ಯಪ್ರಾಚ್ಯದ ಎಂಟು ರಾಷ್ಟ್ರಗಳ ಜೊತೆ ಪ್ರಧಾನಿ ಮೋದಿ ಮಾತು: ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚೆ

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಬಿಗಡಾಯಿಸುತ್ತಿರುವ ಹಿನ್ನೆಲೆ ಭಾರತದ ಪ್ರಧಾನಿ ಮೋದಿ ಅವರು ಒಮಾನ್, ಕತಾರ್, ಕುವೈಟ್ ಸೇರಿದಂತೆ ಎಂಟು ರಾಷ್ಟ್ರಗಳ ಜೊತೆಗೆ ಮಾತುಕತೆ ಮಾಡಿದ್ದಾರೆ. ಆ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ವಿಚಾರಿಸಿರುವ ಅವರು, ಇರಾನ್ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇರಾನ್‌ನ ಪ್ರತೀಕಾರದ ದಾಳಿಗೆ ತುತ್ತಾಗಿರುವ ಒಮಾನ್‌ನ ಸುಲ್ತಾನ ಹೈತಮ್ ಬಿನ್ ತಾರಿಕ್, ಕುವೈತ್ ರಾಜಕುಮಾರ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್ -ಸಬಾಹ್ ಮತ್ತು ಕತಾರ್‌ನ ಅಮೀರ ಶೇಖ್ ತಮೀಮ್ ಬಿನ್

ಮಧ್ಯಪ್ರಾಚ್ಯದ ಎಂಟು ರಾಷ್ಟ್ರಗಳ ಜೊತೆ ಪ್ರಧಾನಿ ಮೋದಿ ಮಾತು: ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚೆ Read More »

ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ: ಇರಾನ್ ಸಂಚಿದೆಯೇ ‌ಎಂಬ ನೆಲೆಯಲ್ಲಿ ತನಿಖೆ

ಟೆಕ್ಸಾಸ್: ಕಳೆದ ಭಾನುವಾರ ಆಸ್ಟಿನ್‌ನಲ್ಲಿ ‌ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ‌ಸಹ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಟೆಕ್ಸಾಸ್ ವಿವಿಯ ವಿದ್ಯಾರ್ಥಿನಿ ‌ಸವಿತಾ ಷಣ್ಮುಗ ಸುಂದರಂ ಮೃತ ವಿದ್ಯಾರ್ಥಿನಿ.‌ ದಾಳಿ ಮಾಡಿದ ಬಂದೂಕುದಾರಿಯನ್ನು ಹತ್ಯೆ ಮಾಡಲಾಗಿದ್ದು, ಈ ದಾಳಿ ಸಂಭಾವ್ಯ ಭಯೋತ್ಪಾದಕ ದಾಳಿ ಎಂಬ ನೆಲೆಯಲ್ಲಿ ಎಫ್‌ಬಿಐ ತನಿಖೆ ಮಾಡುತ್ತಿದೆ. ಇರಾನ್ ಸಂಘರ್ಷ ಮತ್ತು ಈ ದಾಳಿಗೆ ಏನಾದರೂ ಸಂಪರ್ಕ ಇದೆಯೇ? ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಮೇ

ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ: ಇರಾನ್ ಸಂಚಿದೆಯೇ ‌ಎಂಬ ನೆಲೆಯಲ್ಲಿ ತನಿಖೆ Read More »

ಉದ್ಯೋಗ ನಿಮಿತ್ತ ಇರಾನಿಗೆ ತೆರಳಿದ್ದ ಯುವಕನ ಸುಳಿವಿಲ್ಲದೆ ಕಂಗಾಲಾದ ಕುಟುಂಬ

ಚಿಕ್ಕಮಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಉದ್ಯೋಗ ನಿಮಿತ್ತ ಇರಾನ್‌ಗೆ ತೆರಳಿದ್ದ ಮರ್ಚಂಟ್ ನೇವಿ ಉದ್ಯೋಗಿ ಕೊಪ್ಪ ತಾಲೂಕಿನ ನಿಶ್ಚಿತ್ ಕುಟುಂಬಸ್ಥರ ‌ಸಂಪರ್ಕಕ್ಕೆ ಸಿಗದೇ ಇದ್ದು, ಪೋಷಕರು ಕಂಗಾಲಾಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ನಿಶ್ಚಿತ್ ಇರಾನಿಗೆ ತೆರಳಿದ್ದರು. ಇದೀಗ ಅಲ್ಲಿ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದು, ನಿಶ್ಚಿತ್‌ನ ಸುರಕ್ಷತೆಯ ಬಗ್ಗೆ ಕುಟುಂಬ ವರ್ಗ ಆತಂಕ ವ್ಯಕ್ತಪಡಿಸಿರುವುದಾಗಿದೆ. ಕಳೆದ ಕೆಲ ದಿನಗಳಿಂದ ನಿಶ್ಚಿತ್ ಅವರ ಫೋನ್ ಸ್ವಿಚ್‌ಆಫ್ ಆಗಿದೆ. ಅವರ ಸ್ಥಿತಿಗತಿಗಳ ಬಗ್ಗೆ ಯಾವುದೇ ಮಾಹಿತಿ

ಉದ್ಯೋಗ ನಿಮಿತ್ತ ಇರಾನಿಗೆ ತೆರಳಿದ್ದ ಯುವಕನ ಸುಳಿವಿಲ್ಲದೆ ಕಂಗಾಲಾದ ಕುಟುಂಬ Read More »

ಪುತ್ತೂರು: ಪಿಸ್ತೂಲು ತೋರಿಸಿ ಬೆದರಿಸಿದ ಅಪರಿಚಿತ ವ್ಯಕ್ತಿ

ಪುತ್ತೂರು: ಬೈಕ್‌ನಲ್ಲಿ ಬಂದ ವ್ಯಕ್ತಿ ದರ್ಬೆ ಸಮೀಪ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ದೂರು ನೀಡಿದವರು. ಅವರು ದರ್ಬೆಯಲ್ಲಿ ಕಾರು ನಿಲ್ಲಿಸಿ ರಿಕ್ಷಾ ಚಾಲಕರ ಮಧ್ಯೆ ನಡೆದ ಮಾತಿನ ಚಕಮಕಿಯನ್ನು ಸಮಾಧಾನಿಸಿ ಹಿಂದಿರುಗಿ ಹೊರಡುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ವ್ಯಕ್ತಿ ಪಿಸ್ತೂಲ್ ತೋರಿಸಿ ಬೆದರಿಸಿದಾಗ ಹಕೀಂ ಮತ್ತು ಇತರರು ಸೇರಿ ಆತನನ್ನು ಹಿಡಿಯಲು ಹೋದಾಗ ವ್ಯಕ್ತಿ ಬೈಕ್‌

ಪುತ್ತೂರು: ಪಿಸ್ತೂಲು ತೋರಿಸಿ ಬೆದರಿಸಿದ ಅಪರಿಚಿತ ವ್ಯಕ್ತಿ Read More »

error: Content is protected !!
Scroll to Top