ವಿಧಾನ ಪರಿಷತ್ ಉಪಚುನಾವಣೆ | ಬಂಟ್ವಾಳದಲ್ಲಿ ಜನಪ್ರತಿನಿಧಿಗಳ ಸಮಾವೇಶ

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ  ವಿಧಾನ ಪರಿಷತ್ ನ ಉಪಚುನಾವಣೆಯ ಜನಪ್ರತಿನಿಧಿಗಳ ಸಮಾವೇಶ ಇಂದು ಬಂಟ್ವಾಳ ದ ಸ್ಪರ್ಶ ಸಭಾಂಗಣದಲ್ಲಿ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಎಂದೂ ಅಧಿಕಾರಕ್ಕಾಗಿ ಆಸೆ ಪಡದ ಸಂಘದ ಶಿಸ್ತಿನ ಸಿಪಾಯಿಗೆ ಪಕ್ಷ ಟಿಕೆಟ್ ನೀಡಿದೆ ಅವರನ್ನು ನಾವೆಲ್ಲರೂ ಸೇರಿಸಿ ಗೆಲ್ಲಿಸಬೇಕು. ಪುತ್ತೂರು ಹಾಗೂ ಉಳ್ಳಾಲದಲ್ಲಿ ನಮ್ಮ ಶಾಸಕರಿಲ್ಲ ಎಂಬ ಕೊರಗನ್ನು ನೀಗಿಸುವ  ಶಕ್ತಿ ಕಿಶೋರ್ ಗೆ […]

ವಿಧಾನ ಪರಿಷತ್ ಉಪಚುನಾವಣೆ | ಬಂಟ್ವಾಳದಲ್ಲಿ ಜನಪ್ರತಿನಿಧಿಗಳ ಸಮಾವೇಶ Read More »

ಬಾಬಾ ಸಿದ್ದಿಕಿ ಹತ್ಯೆ : ಬಾಲಿವುಡ್‌ನಲ್ಲಿ ಆಘಾತದ ಅಲೆ

ಅಂತಿಮ ದರ್ಶನಕ್ಕೆ ಧಾವಿಸಿದ ತಾರೆಯರು; ಬಿಕ್ಕಿ ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ (66) ಹತ್ಯೆ ಬಾಲಿವುಡ್‌ನಲ್ಲಿ ಆಘಾತದ ಅಲೆಯೆಬ್ಬಿಸಿದೆ. ಸಲ್ಮಾನ್‌ ಖಾನ್‌, ಶಾರೂಕ್‌ ಖಾನ್‌, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ತಾರೆಯರು ಸಾವಿನ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ಶಿಲ್ಪಾ ಶೆಟ್ಟಿ ಆಸ್ಪತ್ರೆಗೆ ಬರುವಾಗ ಬಿಕ್ಕಿ ಬಿಕ್ಕಿ ಅಳುತಿದ್ದರು. ಕಾರಿನಲ್ಲಿ ಕುಳಿತು ಕೂಡ ಅವರು ಅಳುತ್ತಿರುವುದು ಕಾಣಿಸಿತು.ನಿನ್ನೆ ರಾತ್ರಿ ಉಪನಗರ

ಬಾಬಾ ಸಿದ್ದಿಕಿ ಹತ್ಯೆ : ಬಾಲಿವುಡ್‌ನಲ್ಲಿ ಆಘಾತದ ಅಲೆ Read More »

ಕೇಂದ್ರ ಸಹಕಾರಿ ಬ್ಯಾಂಕ್‍ ಪುತ್ತೂರು ಶಾಖಾ ನಿವೃತ್ತ ಮ್ಯಾನೇಜರ್ ಉಮೇಶ್ ಗೌಡ ನಿಧನ

ಪುತ್ತೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ಪುತ್ತೂರು ಶಾಖಾ ನಿವೃತ್ತ ಮ್ಯಾನೇಜರ್, ಕೊಂಬೆಟ್ಟು ನಿವಾಸಿ ಉಮೇಶ್‍ ಗೌಡ (72) ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು 38 ವರ್ಷಗಳ ಕಾಲ ಕೇಂದ್ರ ಸಹಕಾರಿ ಬ್ಯಾಂಕ್‍ ನಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ಬೆಂಗಳೂರಿನಲ್ಲಿದ್ದ ಅವರು ಅಲ್ಲಿ ಹೃದಯಾಘಾತದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕೇಂದ್ರ ಸಹಕಾರಿ ಬ್ಯಾಂಕ್‍ ಪುತ್ತೂರು ಶಾಖಾ ನಿವೃತ್ತ ಮ್ಯಾನೇಜರ್ ಉಮೇಶ್ ಗೌಡ ನಿಧನ Read More »

ಸೀತಾಮಾತೆಯನ್ನು ಹುಡುಕಲು ಹೋದ ʼವಾನರʼರು ಪಲಾಯನ

ತೀವ್ರ ಮುಜುಗರದ ಸ್ಥಿತಿಯಲ್ಲಿ ಜೈಲು ಅಧಿಕಾರಿಗಳು ಹೊಸದಿಲ್ಲಿ: ಸೀತಾಮಾತೆಯನ್ನು ಹುಡುಕಲು ಹೋದ ʼವಾನರʼರಿಬ್ಬರು ಇನ್ನೂ ಹಿಂದಿರುಗದಿರುವುದು ಜೈಲು ಅಧಿಕಾರಿಗಳಿಗೆ ಚಿಂತೆಯನ್ನುಂಟು ಮಾಡಿದೆ. ಇದು ಶುಕ್ರವಾರ ರಾತ್ರಿ ನಡೆದ ಘಟನೆ. ಉತ್ತರಾಖಂಡದ ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿ ದಸರಾ ಅಂಗವಾಗಿ ಜೈಲಿನಲ್ಲಿ ರಾಮಲೀಲಾ ನಾಟಕ ಆಡಿಸಲಾಗಿತ್ತು. ಕೈದಿಗಳು ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸುತ್ತಿದ್ದರು. ವಾನರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಮಾತ್ರ ಸೀತಾಮಾತೆಯನ್ನು ಹುಡುಕಲೇಂದು ಹೋದವರು ಪರಾರಿಯಾಗಿದ್ದು, ಮಂಕುಬೂದಿ ಎರಚಿಸಿಕೊಂಡ ಜೈಲು ಅಧಿಕಾರಿಗಳನ್ನು ನೋಡಿ ಜನರು ಮುಸಿಮುಸಿ ನಗುತ್ತಿದ್ದಾರೆ. ಪೊಲೀಸರು ಮತ್ತು

ಸೀತಾಮಾತೆಯನ್ನು ಹುಡುಕಲು ಹೋದ ʼವಾನರʼರು ಪಲಾಯನ Read More »

ಉಪನ್ಯಾಸಕಿ, ಲೇಖಕಿ ಉಷಾ ಕೆ. ಅವರ ಕೃತಿ ‘ತೆರೆದ ಗವಾಕ್ಷಿ’ ಲೋಕಾರ್ಪಣೆ

ಪುತ್ತೂರು: ಕಳೆದ 35 ವರ್ಷಗಳಿಂದ ಉಪನ್ಯಾಸಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಉಷಾ ಕೆ.  ಅವರು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ವೈಚಾರಿಕ – ಮಾನವೀಯ ಮೌಲ್ಯಗಳುಳ್ಳ ಲೇಖನಗಳ ಸಂಗ್ರಹ ‘ತೆರೆದ ಗವಾಕ್ಷಿ’ ಕೃತಿ ಪುತ್ತೂರಿನ ಅನುರಾಗ ವಠಾರದಲ್ಲಿ ಲೋಕಾರ್ಪಣೆಗೊಂಡಿತು. ರಾಜೇಶ್‍ ಪವರ್ ಪ್ರೆಸ್ ಮಾಲಕ ರಘುನಾಥ ರಾವ್ ಕೃತಿ ಲೋಕಾರ್ಪಣೆ ಗೊಳಿಸಿದರು. ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಕೃತಿ ಕುರಿತು, ಸಾರಸ್ವತ ಸೌರಭದ ವ್ಯವಸ್ಥಾಪಕ ಸಂಪಾದಕ ಸುಳ್ಳಿ ರಾಧಾಕೃಷ್ಣ ನಾಯಕ್ ಕೃತಿಕಾರರ ಕುರಿತು  ಮಾತನಾಡಿದರು. ಹಿರಿಯ

ಉಪನ್ಯಾಸಕಿ, ಲೇಖಕಿ ಉಷಾ ಕೆ. ಅವರ ಕೃತಿ ‘ತೆರೆದ ಗವಾಕ್ಷಿ’ ಲೋಕಾರ್ಪಣೆ Read More »

ಇತಿಹಾಸ ಪ್ರಸಿದ್ಧ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ | ಕರ್ನಾಟಕ-ಕೇರಳದ ಕಲಾತಂಡಗಳ ಆಕರ್ಷಣೀಯ ಪ್ರದರ್ಶನ.

ಪುತ್ತೂರು: ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ನಡೆಸಲಾಗುತ್ತಿರುವ 90 ನೇ ವರ್ಷದ ಶ್ರೀ ಶಾರದೋತ್ಸವದ ಅದ್ದೂರಿ ಶೋಭಾಯಾತ್ರೆಯು ಶನಿವಾರ ಸಂಜೆ ನಡೆಯಿತು.  ಶೋಭಾಯಾತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೇರಳದ ಕೇರಳದ ಪಂದಳಾಟಮ್, ಸಿಂಗಾರಿ ಕಾವಡಿ, ಕಥಕ್ಕಳಿ, ಮಹಿಳಾ ಸಿಂಗಾರಿ ಮೇಳಮ್, ತಿರಾಯಾಟ್ಟಮ್, ಸಿಂಗಾರಿ ಮೇಳ ಕಲಾತಂಡಗಳು ಭಾಗವಹಿಸಿತ್ತು.  ಇದರೊಂದಿಗೆ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಕಡೆಗಳ ಕಲಾತಂಡ ಭಜನಾ ತಂಡಗಳು ಪಾಲ್ಗೊಂಡಿತ್ತು, , ಮಹಿಳೆಯರಿಂದ ವೇದಘೋಷ, ಚೆಂಡೆ ಮೇಳ, ವಾದ್ಯಘೋಷ,

ಇತಿಹಾಸ ಪ್ರಸಿದ್ಧ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ | ಕರ್ನಾಟಕ-ಕೇರಳದ ಕಲಾತಂಡಗಳ ಆಕರ್ಷಣೀಯ ಪ್ರದರ್ಶನ. Read More »

ಹುಲಿ ನೃತ್ಯಕ್ಕೆ ಫಿದಾ ಆದ ಮುನ್ನಾಭಾಯಿ

ಕಟೀಲು, ಕುದ್ರೋಳಿ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂಜಯ್‌ ದತ್‌ ಮಂಗಳೂರು : ಕರಾವಳಿಯ ಹುಲಿ ನೃತ್ಯ ನೋಡಿ ಬಾಲಿವುಡ್‌ ನಟ ಸಂಜಯ್‌ ದತ್‌ ಫಿದಾ ಆಗಿದ್ದಾರೆ. ಶನಿವಾರ ಹುಲಿ ನೃತ್ಯ ಸ್ಪರ್ಧೆಗೆ ಭೇಟಿ ನೀಡಿದ ಸಂಜಯ್‌ ದತ್‌ ಕೆಲ ಹೊತ್ತು ಹುಲಿ ನೃತ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳೂರಿಗೆ ಬರುವ ಮೊದಲು ಸಂಜಯ್‌ ದತ್‌ ಕಟೀಲು ಕ್ಷೇತ್ರಕ್ಕೆ ಹೋಗಿ ದೇವಿಯ ದರ್ಶನ ಪಡೆದಿದ್ದರು. ಬಳಿಕ ಮಂಗಳೂರು ಕುದ್ರೋಳಿ ದೇವಳಕ್ಕೆ ಬಂದು ದೇವರ ಆಶೀರ್ವಾದ ಪಡೆದರು. ಎರಡೂ ದೇವಳಗಳಲ್ಲಿ

ಹುಲಿ ನೃತ್ಯಕ್ಕೆ ಫಿದಾ ಆದ ಮುನ್ನಾಭಾಯಿ Read More »

ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಿಷ್ಣೋಯ್‌ ಗ್ಯಾಂಗ್‌ ಕೃತ್ಯ?

ಎನ್‌ಸಿಪಿ ನಾಯಕನ ಹತ್ಯೆಯಿಂದ ನಟ ಸಲ್ಮಾನ್‌ ಖಾನ್‌ಗೆ ನಡುಕ ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ, ಪ್ರಭಾವಿ ಮುಸ್ಲಿಂ ನಾಯಕ ಬಾಬಾ ಸಿದ್ದಿಕಿ ಅವರನ್ನು ದಸರಾ ದಿನವೇ ಹತ್ಯೆ ಮಾಡಿರುವುದು ಆಘಾತದ ಅಲೆ ಎಬ್ಬಿಸಿದೆ. ಇದು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಕೃತ್ಯವೇ ಎಂಬ ಅನುಮಾನ ಮೂಡಿದೆ. ಹತ್ಯೆ ಕೃತ್ಕಕ್ಕೆ ಸಂಬಂಧಿಸಿ ಸೆರೆಯಾಗಿರುವ ಇಬ್ಬರು ಶಂಕಿತರು ತಮ್ಮನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರು ಎಂದು ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಬಾಲಿವುಡ್‌ನಲ್ಲೂ ಬಾಬಾ ಸಿದ್ದಿಕಿಯ ಹತ್ಯೆ ತಲ್ಲಣ ಮೂಡಿಸಿದೆ. ನಿರ್ದಿಷ್ಟವಾಗಿ ನಟ

ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಿಷ್ಣೋಯ್‌ ಗ್ಯಾಂಗ್‌ ಕೃತ್ಯ? Read More »

ಶೋಕವು ಶ್ಲೋಕವಾದ ಕತೆ ರಾಮಾಯಣ

ಆದಿ ಕವಿ ವಾಲ್ಮೀಕಿ, ಆದಿ ಕಾವ್ಯ ರಾಮಾಯಣ ಕೂಜನ್ತಂ ರಾಮ ರಾಮೇತಿಮಧುರ ಮಧುರಾಕ್ಷರಮ್|ಆರುಹ್ಯ ಕವಿತಾ ಶಾಖಾಂವಂದೇ ವಾಲ್ಮೀಕಿ ಕೋಕಿಲಂ|| ಈ ಒಂದು ಶ್ಲೋಕ ಸಾಕು ಆದಿಕವಿ ವಾಲ್ಮೀಕಿಯ ಮಹತ್ವವನ್ನು ಅಳೆಯಲು. ರಾಮ,ರಾಮ ಎಂಬ ಸುಮಧುರ ಅಕ್ಷರವನ್ನು ಕೂಗುತ್ತ ಕವಿತೆಯೆಂಬ ರೆಂಬೆಯನ್ನು ಆರೋಹಣ ಮಾಡಿರುವ ವಾಲ್ಮೀಕಿ ಎಂಬ ಕವಿ ಕೋಗಿಲೆಗೆ ನನ್ನ ನಮಸ್ಕಾರಗಳು ಎಂಬುದು ಆ ಶ್ಲೋಕದ ಅರ್ಥ. ಜಗತ್ತಿನ ಮೊದಲ ಕವಿ ವಾಲ್ಮೀಕಿ ಮತ್ತು ಮೊದಲ ಕಾವ್ಯ ರಾಮಾಯಣ. ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನೆಯೇ

ಶೋಕವು ಶ್ಲೋಕವಾದ ಕತೆ ರಾಮಾಯಣ Read More »

ಆಲಂಕಾರಿನಲ್ಲಿ ‘ದೈವಾನುಗ್ರಹ’ ಮೆಡಿಕಲ್ ಶುಭಾರಂಭ

ಆಲಂಕಾರು: ನೂತನ ‘ದೈವಾನುಗ್ರಹ ಮೆಡಿಕಲ್’ ಇಂದು ಆಲಂಕಾರಿನಲ್ಲಿ ಶುಭಾರಂಭಗೊಂಡಿತು. ಮಾಜಿ ಸಚಿವ ಎಸ್‍.ಅಂಗಾರ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ರಿಬ್ಬನ್ ಕಟ್‍ ಮಾಡುವ ಮೂಲಕ ಉದ್ಘಾಟಿಸಿದರು. ಭಾಸ್ಕರ ಗೌಡ ದೇವಸ್ಯ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶಿಲಾ, ಪ್ರವೀಣ್‍ ಕುಂಟ್ಯಾನ, ಜಿನ್ನಪ್ಪ ಮಳುವೇಲು, ಪಂಚಾಯಿತಿ ಉಪಾಧ್ಯಕ್ಷ ರವಿ, ಆಶಾ ತಿಮ್ಮಪ್ಪ, ದಾಮೋದರ ಗೌಡ ಕಕ್ವೆ, ಸುಚಿತಾ ಬರೆಂಬೆಟ್ಟು, ಪ್ರದೀಪ್‍ ರೈ

ಆಲಂಕಾರಿನಲ್ಲಿ ‘ದೈವಾನುಗ್ರಹ’ ಮೆಡಿಕಲ್ ಶುಭಾರಂಭ Read More »

error: Content is protected !!
Scroll to Top