ಜ.22-25: ಪೈಕ ಕರಿಮಜಲಿನಲ್ಲಿ ಗ್ರಾಮ ದೈವಗಳ ನೇಮ

ಪುಣ್ಚತ್ತಾರು: ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ಶ್ರೀ ಅಮ್ಮನವರ ಮತ್ತು ಪರಿವಾರ ದೈವ ಸ್ಥಾನ ಪೈಕ, ಕರಿಮಜಲು, ಪುಣ್ಚತ್ತಾರು ಇಲ್ಲಿ ಜ.22 – ಜ. 25 ರ ವರೆಗೆ ಗ್ರಾಮ ದೈವಗಳ ನೇಮ ನಡೆಯಲಿದೆ. ದಿನಾಂಕ : 22-01-2026ನೇ ಗುರುವಾರ ರಾತ್ರಿ ಗಂಟೆ 8.00ರಿಂದ: ಪೈಕ ಮಾಲೈಯಲ್ಲಿ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ನೇಮೋತ್ಸವರಾತ್ರಿ ಗಂಟೆ 9-15ಕ್ಕೆ: ಪೈಕ ಮಾಲ್ಯೆ ಮನೆಯವರಿಂದ ಅನ್ನಸಂತರ್ಪಣೆ ದಿನಾಂಕ : 24-01-2026ನೇ ಶನಿವಾರ ಬೆಳಿಗ್ಗೆ […]

ಜ.22-25: ಪೈಕ ಕರಿಮಜಲಿನಲ್ಲಿ ಗ್ರಾಮ ದೈವಗಳ ನೇಮ Read More »

ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್

ನವದೆಹಲಿ: ಅಸಂಖ್ಯಾತ ದಾಖಲೆಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಬರೆದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ತಮ್ಮ 27 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಡಿ. 27, 2025 ರಂದು ಅವರು ನಿವೃತ್ತರಾಗಿರುವುದಾಗಿ ನಾಸಾ ಘೋಷಿಸಿದೆ. ಸುನೀತಾ ಅವರ ಕೊನೆಯ ಬಾಹ್ಯಾಕಾಶ ಯಾನವು ಅತ್ಯಂತ ರೋಚಕವಾಗಿತ್ತು. ಕೇವಲ 10 ದಿನಗಳ ಮಿಷನ್ ಎಂದು ಜೂನ್ 2024ರಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ತೆರಳಿದ್ದ ಅವರು, ತಾಂತ್ರಿಕ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬರೋಬ್ಬರಿ ಒಂಬತ್ತುವರೆ ತಿಂಗಳುಗಳ

ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ Read More »

ಜ.22-26: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ದಿ ರಿಪಬ್ಲಿಕ್ ಸೇಲ್’

ಪುತ್ತೂರು: ನಗರದ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಜ. 22 ರಿಂದ ಜ. 26 ರ ವರೆಗೆ ‘ದಿ ರಿಪಬ್ಲಿಕ್ ಸೇಲ್’ ನಡೆಯಲಿದೆ. ಆ ಪ್ರಯುಕ್ತ ವಜ್ರಾಭರಣಗಳ ಕ್ಯಾರಟ್ ಮೇಲೆ 5000 ರೂ. ಫ್ಲ್ಯಾಟ್ ಡಿಸ್ಕೌಂಟ್, ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ 10 ಗ್ರಾಂ ಗೆ ಫ್ಲ್ಯಾಟ್ 3500 ರೂ. ರಿಯಾಯಿತಿ ದೊರೆಯಲಿದೆ. 24ಕ್ಯಾರೆಟ್ ಚಿನ್ನದ ದರ 15,000 ದಾಟಿದೆ. ಈ ಫೆಸ್ಟಿವ್ ಶಾಪಿಂಗ್ ಸೀಸನ್‌ ನಲ್ಲಿ ಚಿನ್ನದ ದರ ಬೆಲೆ

ಜ.22-26: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ದಿ ರಿಪಬ್ಲಿಕ್ ಸೇಲ್’ Read More »

ಜ.29: ಪುತ್ತೂರಿನಲ್ಲಿ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ / ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಪುತ್ತೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ/ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಜನವರಿ 29 ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ನಡೆಯಲಿದೆ. ಕಿರಿಯರ ವಿಭಾಗ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2026-27ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ

ಜ.29: ಪುತ್ತೂರಿನಲ್ಲಿ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ / ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ Read More »

ಅಂಗಡಿಗೆ ನುಗ್ಗಿ ಮಾಲಕಿಗೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

ಪುತ್ತೂರು: ವಸ್ತುಗಳನ್ನು ಖರೀದಿ ಮಾಡಲು ಬಂದ ಇಬ್ಬರು ಯುವಕರು ಜಗಳ ಮಾಡಿ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿ ಮಾಲಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಪಾಣಾಜೆಯ ದೈತೋಟದಲ್ಲಿ ನಡೆದಿದೆ. ಈ ಸಂಬಂಧ ಅಂಗಡಿಯ ಮಾಲಕಿ ‌ವಿಮಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಜ. 18 ರಂದು ಆರ್ಲಪದವು ಕಡೆಯಿಂದ ಬಂದ ಅಜಯ್ ಮತ್ತು ಪುನೀತ್ ಎಂಬವರು ಅಂಗಡಿಗೆ ಬಂದು ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಜಗಳ ತೆಗೆದು, ಅಲ್ಲಿದ್ದ ವಸ್ತುಗಳನ್ನೆಲ್ಲಾ ಹಾಳು ಮಾಡಿದ್ದಾರೆ. ಇದರಿಂದ ಸುಮಾರು 5000 ರೂ.

ಅಂಗಡಿಗೆ ನುಗ್ಗಿ ಮಾಲಕಿಗೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು Read More »

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಳ್ಳ ಪೊಲೀಸರ ಬಲೆಗೆ

ಬೆಂಗಳೂರು: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಸೈಕೋ ಕಳ್ಳನೊಬ್ಬ ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ಕೇರಳ ಮೂಲದ ಅಮಲ್ (23) ಎಂದು ಗುರುತಿಸಲಾಗಿದೆ. ಮನೆಗಳನ್ನು ದೂರದಿಂದಲೇ ಗುರುತು ಮಾಡಿ ಅಲ್ಲಿ ಒಣ ಹಾಕಿರುತ್ತಿದ್ದ ‌ಮಹಿಳೆಯರ ಒಳ ಉಡುಪುಗಳನ್ನು ಯಾರೂ ಇಲ್ಲದ ಸಮಯ ನೋಡಿ ಕಳ್ಳತನ ಮಾಡುತ್ತಿದ್ದ. ಅವುಗಳನ್ನು ಧರಿಸಿ ಫೋಟೋ ತೆಗೆದು ವಿಕೃತ ಆನಂದ ಅನುಭವಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಮಲ್ ವಾಸವಿದ್ದ ‌ಮನೆಯಲ್ಲೂ ಮಹಿಳೆಯರ ಒಳ ಉಡುಪು ಸಂಗ್ರಹಿಸಿ ಇಟ್ಟುಕೊಂಡಿದ್ದ ಎಂದು ತನಿಖೆಯ ವೇಳೆ

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಳ್ಳ ಪೊಲೀಸರ ಬಲೆಗೆ Read More »

ಉದಯನಿಧಿ ಸ್ಟಾಲಿನ್‌ನ ಹಿಂದೂ ವಿರೋಧಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮ: ಮದ್ರಾಸ್ ಹೈಕೋರ್ಟ್

ಚೆನ್ನೈ: ತಮಿಳುನಾಡಿನ ಉಪಮುಖ್ಯಮಂತ್ರಿ ಉದಯ ನಿಧಿ ಸ್ಟಾಲಿನ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮಾನವಾದವು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಹೈಕೋರ್ಟಿನ ಮಧುರೈ ಪೀಠವು ಕಠಿಣ ಪದಗಳಲ್ಲಿ ಅವಲೋಕನ ಮಾಡಿದ್ದು, ಡಿಎಂಕೆಯಿಂದ ನೂರು ವರ್ಷಗಳಲ್ಲಿ ಹಿಂದೂ ಧರ್ಮದ ಮೇಲೆ ಸ್ಪಷ್ಟ ದಾಳಿ ನಡೆದಿದೆ. ಅದೇ ಸೈದ್ಧಾಂತಿಕ ವಂಶಕ್ಕೆ ಉದಯ ನಿಧಿ ಸೇರಿದವರು ಎಂದು ಹೇಳಿದೆ. ಜೊತೆಗೆ ದ್ವೇಷ ಭಾಷಣ ಆರಂಭಿಸಿದವರು ಶಿಕ್ಷೆಗೆ ಒಳಗಾಗದೆ ಉಳಿಯುತ್ತಾರೆ ಎನ್ನುವ ಕಳವಳವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಕಳೆದ 100

ಉದಯನಿಧಿ ಸ್ಟಾಲಿನ್‌ನ ಹಿಂದೂ ವಿರೋಧಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮ: ಮದ್ರಾಸ್ ಹೈಕೋರ್ಟ್ Read More »

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ

ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕನಾಗಿದ್ದ ಕಾಮುಕ ಎಲಿಯಾಸ್ ಪಿಂಟೋ‌ನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಎಲಿಯಾಸ್ ಪಿಂಟೋ(55) ತಾನು ಕಾರ್ಯ ನಿರ್ವಹಿಸುತ್ತಿದ್ದ ಕಾಲೇಜಿನ ಪ್ರಥಮ ಪಿಯುಸಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ತನ್ನ ಲೈಂಗಿಕ ಕಾಮನೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದ. ಸಂತ್ರಸ್ತ ಹುಡುಗಿ ಕ್ರೀಡಾ ಅಭ್ಯಾಸಕ್ಕೆ ಬಂದು ಒಂದು ಸುತ್ತು ಓಡಿ ಆ ಬಳಿಕ ವರಾಂಡದಲ್ಲಿ ನಿಂತಿದ್ದಳು. ಈ ವೇಳೆ ಆರೋಪಿ ಪಿಂಟೋ ಕಾರಣ ಕೇಳಿದ್ದು,

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ Read More »

ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ರಾಮಾಯಣದ ಪುರಾತನ ಸಂಸ್ಕೃತ ಹಸ್ತಪ್ರತಿ

ನವದೆಹಲಿ: ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ರಾಮಾಯಣದ 233 ವರುಷಗಳಷ್ಟು ಹಳೆಯದಾದ‌ ಬಲು ಅಪರೂಪದ ಸಂಸ್ಕೃತ ಹಸ್ತಪ್ರತಿಯನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಸಂಸ್ಕೃತ ವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅವರು ಈ ಕೃತಿಯನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ವ ನೃಪೇಂದ್ರ ಮಿಶ್ರಾ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಹಸ್ತಪ್ರತಿಯು ಕ್ರಿ. ಶ. 1792 ಕ್ಕೆ ಸೇರಿದ್ದಾಗಿದೆ. ಆದಿಕವಿ ವಾಲ್ಮೀಕಿ

ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ರಾಮಾಯಣದ ಪುರಾತನ ಸಂಸ್ಕೃತ ಹಸ್ತಪ್ರತಿ Read More »

ಅಕ್ರಮ ಗೋಮಾಂಸ‌‌ ಸಾಗಾಟ: ಆರೋಪಿ ಜಾಹಿದ್ ಅಹ್ಮದ್ ಬಂಧನ

ಮಡಿಕೇರಿ: ವಿರಾಜಪೇಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನ ಬಂಧನವಾಗಿದೆ. ಬಂಧಿತ ಆರೋಪಿಯನ್ನು ಜಾಹಿದ್ ಅಹ್ಮದ್ ಎಂದು ಗುರುತಿಸಲಾಗಿದೆ. ಅಲ್ಟೋ – 800 ಕಾರಿನಲ್ಲಿ ಗೋಮಾಂಸವನ್ನು ಅಕ್ರಮವಾಗಿ ತುಂಬಿಕೊಂಡು ಗೋಣಿಕೊಪ್ಪಲಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಲೆಗೆ ಕೆಡಹಿದ್ದಾರೆ. ಕಾರಿನಲ್ಲಿ 150 KG ಗೋಮಾಂಸ ಪತ್ತೆಯಾಗಿದೆ. ಹುಣಸೂರಿನ ರತ್ನಗಿರಿಯಿಂದ ಗೋಮಾಂಸ ತಂದು ವಿರಾಜಪೇಟೆ ಪರಿಸರದಲ್ಲಿ ಮಾರಾಟ ನಡೆಸುವ ಕೆಲಸವನ್ನು ಈ ಖದೀಮ ಮಾಡುತ್ತಿದ್ದ ಎಂದು

ಅಕ್ರಮ ಗೋಮಾಂಸ‌‌ ಸಾಗಾಟ: ಆರೋಪಿ ಜಾಹಿದ್ ಅಹ್ಮದ್ ಬಂಧನ Read More »

error: Content is protected !!
Scroll to Top