ಸುಳ್ಯದಲ್ಲಿ ಕಲ್ಲಡ್ಕದ ಯುವಕ ನೇಣಿಗೆ ಶರಣು

ಸುಳ್ಯ: ಗೂನಡ್ಕದ ಕೊಠಡಿ ಒಂದರಲ್ಲಿ ಕಲ್ಲಡ್ಕದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತನನ್ನು ಕಲ್ಲಡ್ಕದ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ. ತಿಲಕ್ ಅವರು ನಿನ್ನೆ ಸಂಜೆ ಕಾರಿನಲ್ಲಿ ಮಡಿಕೇರಿಗೆಂದು ಕಲ್ಲಡ್ಕದಿಂದ ಹೊರಟಿದ್ದರು. ಸಂಜೆ ವೇಳೆ ಗೂನಡ್ಕ ಎಂಬಲ್ಲಿ ರೂಮ್ ಮಾಡಿಕೊಂಡಿದ್ದರು. ಅಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಸಮಾಜ ಸೇವಕ ತಾಜ್ ಟರ್ಲಿ ಎಂಬವರು ಮಾಡಿನ ಮೂಲಕ ರೂಮಿನೊಳಕ್ಕೆ ಪ್ರವೇಶಿಸಿ ತಿಲಕ್ ಮೃತದೇಹವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣ […]

ಸುಳ್ಯದಲ್ಲಿ ಕಲ್ಲಡ್ಕದ ಯುವಕ ನೇಣಿಗೆ ಶರಣು Read More »

ದೇಶದಲ್ಲಿ ಡಿಜಿಟಲ್ ಅರೆಸ್ಟ್ ‌ವಂಚನೆ ತಡೆಯಲು ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ವಂಚನೆಗೆ ಬಳಕೆ ಮಾಡುವ ಮೊಬೈಲ್ ಡಿವೈಸ್ ಐಡಿ‌ಗಳನ್ನು ‌ಶಾಶ್ವತವಾಗಿ ಬ್ಲಾಕ್ ಮಾಡುವಂತೆ ವಾಟ್ಸಾಪ್ ‌ಸಂಸ್ಥೆಗೆ ಸೂಚನೆ ನೀಡಲಾಗಿದೆ. ವಂಚಕರು ಬಳಸುವ ಸಾಧನವನ್ನು ಗುರುತಿಸಿದ ತಕ್ಷಣ ಅದರ ಡಿವೈಸ್ ಐಡಿಯನ್ನು ನಿರ್ಬಂಧಿಸುವುದರಿಂದ, ಅದೇ ಫೋನ್ ಮೂಲಕ ಮತ್ತೆ ಖಾತೆ ತೆರೆಯುವ ಅವಕಾಶ ಕಡಿಮೆಯಾಗಲಿದೆ. ಜೊತೆಗೆ, ಅಳಿಸಲಾದ ಖಾತೆಗಳ ಮಾಹಿತಿಯನ್ನು ಕನಿಷ್ಠ 180 ದಿನಗಳವರೆಗೆ ಉಳಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ,

ದೇಶದಲ್ಲಿ ಡಿಜಿಟಲ್ ಅರೆಸ್ಟ್ ‌ವಂಚನೆ ತಡೆಯಲು ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ Read More »

ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರಲಿವೆ ಮತ್ತೆರಡು ಎಲ್‌ಪಿ‌ಜಿ ಹೊತ್ತ ಹಡಗುಗಳು?

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತದ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್‌ಗಳು ಭಾರತೀಯ ಧ್ವಜದೊಂದಿಗೆ ಹರ್ಮುಜ್ ಜಲಸಂಧಿ ದಾಟಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಇರಾನ್ ಮತ್ತು ಇಸ್ರೇಲ್, ಅಮೆರಿಕಾ ನಡುವಿನ ಯುದ್ಧ ಆರಂಭವಾದಾಗಿಂದ ಈ ಜಲಸಂಧಿಯ ಮೂಲಕ ಈ ವರೆಗೆ ಭಾರತದ ಅನಿಲ ತುಂಬಿದ ಹಡಗುಗಳನ್ನು ಬಿಟ್ಟು ಬೇರೆ ಯಾವ ರಾಷ್ಟ್ರದ ಹಡಗುಗಳಿಗೂ ಅನಿಲ ರವಾನೆಗೆ ಇರಾನ್ ಅವಕಾಶ ನೀಡಿಲ್ಲ. ಆದರೆ ಭಾರತದ ರಾಜತಾಂತ್ರಿಕ ನೀತಿಯಿಂದಾಗಿ ಭಾರತದ ಶಿವಾಲಿಕ್ ಮತ್ತು ನಂದಾದೇವಿ

ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರಲಿವೆ ಮತ್ತೆರಡು ಎಲ್‌ಪಿ‌ಜಿ ಹೊತ್ತ ಹಡಗುಗಳು? Read More »

ಅಸೌಖ್ಯದಿಂದ ಮಹಿಳೆ ಮೃತ್ಯು

ಕಾಣಿಯೂರು: ಅಸೌಖ್ಯದಿಂದ ಕಾಣಿಯೂರು ಗ್ರಾಮದ ಕೆನ್ನಾರುವಿನ ರಂಜಿತಾ(33) ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮೃತರು ಪತಿ ರಾಘವೇಂದ್ರ, ಪುತ್ರರಾದ ದಿಶಾಂತ್, ಸುಮಂತ್, ಅತ್ತೆ ಪುಷ್ಪಾವತಿ ಅವರನ್ನು ಅಗಲಿದ್ದಾರೆ.

ಅಸೌಖ್ಯದಿಂದ ಮಹಿಳೆ ಮೃತ್ಯು Read More »

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು

ಬಂಟ್ವಾಳ: ಮೆಲ್ಕಾರಿನ ಬೊಗೋಡಿಯಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿ ಒಂದರಲ್ಲಿ ಹಲ್ಲೆ ಮತ್ತು ವಸ್ತುಗಳಿಗೆ ಹಾನಿ ಎಸಗಿದ ಘಟನೆಗೆ ಸಂಬಂಧಿಸಿದ ಹಾಗೆ ಮ್ಯಾನೇಜರ್ ಕುನಲ್ ಎಂಬವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮಾ. 20 ರಂದು ಅಟೋರಿಕ್ಷಾ ಚಾಲಕನೊಬ್ಬ ತನ್ನ ಅಟೋವನ್ನು ಪಂಪ್ ಒಳಗೆ ತಂದಿದ್ದು, ಕಚೇರಿಯ ಸಿಬ್ಬಂದಿ ಅಶ್ವಿನ್ ಎಂಬುವವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಹಾಗೆಯೇ ಆ ಬಳಿಕ ಪಂಪ್‌ನ ಸೊತ್ತುಗಳಿಗೆ ಹಾನಿ ಎಸಗಿದ್ದಾನೆ. ಈ ಘಟನೆಯಿಂದ ಸುಮಾರು ನಲವತ್ತೆಂಟು ಸಾವಿರ

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು Read More »

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ

ಉಜಿರೆ: ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಯಕ್ಷಭಾರತಿ ರಿ. ಕನ್ಯಾಡಿ ಹನ್ನೊಂದನೇ ವಾರ್ಷಿಕ ಸಮಾರಂಭದಲ್ಲಿ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ರೂಪಿಸಲಾದ “ದಶಪರ್ವ” ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಶಾಸಕ ಪ್ರತಾಪಸಿಂಹ ನಾಯಕ್ ಲೋಕಾರ್ಪಣೆಗೊಳಿಸಿದರು. ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಕಲಾ ಪೋಷಕ ಶ್ರೀಪತಿ ಭಟ್, ಮೂಡಬಿದಿರೆ ಸಂಪಾದಕ ಮಂಡಳಿಯ ಮಹೇಶ ಕನ್ಯಾಡಿ, ಹರಿದಾಸ ಗಾಂಭೀರ, ಭವ್ಯ ಹೊಳ್ಳ, ಕೌಶಿಕ್ ರಾವ್ ಕನ್ಯಾಡಿ, ರತ್ನವರ್ಮ ಜೈನ್ ಧರ್ಮಸ್ಥಳ ಉಪಸ್ಥಿತರಿದ್ದರು. ದಶಪರ್ವದ ಸಂಪಾದಕ

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ Read More »

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಪ್ರಸಿದ್ಧ ಚಲನಚಿತ್ರ ನಟ, ಕರುನಾಡ ಅಣ್ಣಾವ್ರು ವರನಟ ಡಾ‌. ರಾಜ್‌ಕುಮಾರ್ ಅವರ ಅಭಿಮಾನಿಗಳ ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ಮೂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ರಾಜ್‌ಕುಮಾರ್ ಅವರ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ರಾಜ್ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ. ರಾಜ್‌ಕುಮಾರ್ ಅಭಿನಯದ ಶ್ರೀ ಕೃಷ್ಣದೇವರಾಯ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಅವರು ‘ದೇವಿಯ ಮೇಲಿನ ನಂಬಿಕೆ ಭಕ್ತರಿಗೆ ಹೊಸ ಶಕ್ತಿ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ Read More »

ಫಾರ್ಚೂನರ್ ಕಾರಿನಲ್ಲಿ ಜಾನುವಾರು ಸಾಗಿಸಿದ ಆರೋಪಿಗಳು ಸೆರೆ

ಪೊಲೀಸರು ತಡೆದಾಗ ಕಾರು ಬಿಟ್ಟು ಪಲಾಯನ ಮಾಡಿದ್ದ ಆರೋಪಿಗಳು ಮಂಗಳೂರು: ಬಡಗ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಸಮೀಪ ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ತಡೆದಾಗ ಸ್ಥಳದಿಂದ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪೆರ್ಮುದೆಯ ಭಟ್ರಕೆರೆ ನಿವಾಸಿಯಾಗಿ ಪೇಜಾವರ ಕೊಂಚಾರ ಮೂಲದ ನಿಸಾರ್ ಅಲಿಯಾಸ್ ನಿಸಾರುದ್ದೀನ್ ಅಲಿಯಾಸ್ ಪಾರಿವಾಳ ನಿಸಾರ್ (28) ಮತ್ತು ಉಳಾಯಿಬೆಟ್ಟು ಪೆರ್ಮಂಕಿಯ ಅಕ್ಕೋಡಿ ಹೌಸ್ ನಿವಾಸಿ ಮೊಹಮ್ಮದ್ ಜಮಾಲುದ್ದೀನ್ ಅಲಿಯಾಸ್ ಜಮಾಲ್ (24)

ಫಾರ್ಚೂನರ್ ಕಾರಿನಲ್ಲಿ ಜಾನುವಾರು ಸಾಗಿಸಿದ ಆರೋಪಿಗಳು ಸೆರೆ Read More »

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ

ಕೊಟ್ಟಿಗೆಹಾರ: ಟಿಟಿ ‌ವಾಹನವೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯಲ್ಲಿ ‌ನಡೆದಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಈ ವಾಹನವು ಭದ್ರಾವತಿಯಿಂದ ಧರ್ಮಸ್ಥಳದತ್ತ ಹೋಗುತ್ತಿತ್ತು. ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ ಇದು, ಗಾಯಾಳು ಒಂಬತ್ತು ಜನರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಥಳೀಯರು ಘಟನೆ ನಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಗಾಯ ಆಲಿ ಗಳನ್ನು ನೆರೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ Read More »

ಸರ್ಕಾರಿ ಬಸ್ ಪಲ್ಟಿ: ಎಂಟು ಜನರಿಗೆ ಗಾಯ

ಚಿಕ್ಕಮಗಳೂರು: ವಿದ್ಯುತ್ ಕಂಬವೊಂದಕ್ಕೆ ಸರ್ಕಾರಿ ಬಸ್ ಗುದ್ದಿದ್ದು, ಎಂಟು ಮಂದಿ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಕೊಡಾಳ್ ಸಮೀಪ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸು ಕುಕ್ಕನೂರಿನಿಂದ ಧರ್ಮಸ್ಥಳದತ್ತ ತೆರಳುತ್ತಿತ್ತು. ನಲವತ್ತಕ್ಕೂ ಅಧಿಕ ಪ್ರಯಾಣಿಕರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಗಾಯಾಳು ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಪಘಾತದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ‌ತನಿಖೆ ನಡೆಸುತ್ತಿದ್ದಾರೆ.

ಸರ್ಕಾರಿ ಬಸ್ ಪಲ್ಟಿ: ಎಂಟು ಜನರಿಗೆ ಗಾಯ Read More »

error: Content is protected !!
Scroll to Top