ಇನ್ನು ಸಿಎಂ, ಸಚಿವರು, ಶಾಸಕರಿಗೆ ದುಪ್ಪಟ್ಟು ಸಂಬಳ

ಸದ್ದಿಲ್ಲದೆ ವೇತನ ಏರಿಸಿಕೊಂಡ ಸರಕಾರ ಬೆಂಗಳೂರು : ಜನರು ಬೆಲೆ ಏರಿಕೆಯಿಂದ ನಿತ್ಯ ಖರ್ಚುವೆಚ್ಚಗಳನ್ನು ಸರಿದೂಗಿಸಲು ಒದ್ದಾಡುತ್ತಿರುವಾಗಲೇ ಸರಕಾರ ಮಾತ್ರ ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲ ಸಚಿವರ ಮತ್ತು ಶಾಸಕರ ವೇತವನ್ನು ಸದ್ದಿಲ್ಲದೆ ಹೆಚ್ಚಿಸಿಕೊಂಡಿದೆ. ಸಚಿವರು ಮತ್ತು ಶಾಸಕರ ವೇತನವನ್ನು ಶೇ.100ರಷ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ರಾಜ್ಯಪಾಲರಿಂದ ಅನುತಿಯೂ ದೊರೆತಿದೆ. ಕಲಾಪ ವ್ಯವಹಾರಗಳ ಸಲಹಾ ಸಮಿತಿಯ ನಿರ್ಣಯದಂತೆ ‘ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ […]

ಇನ್ನು ಸಿಎಂ, ಸಚಿವರು, ಶಾಸಕರಿಗೆ ದುಪ್ಪಟ್ಟು ಸಂಬಳ Read More »

ಐಪಿಎಲ್‌ ಕ್ರಿಕೆಟ್‌ ಹಬ್ಬಕ್ಕೆ ಕ್ಷಣಗಣನೆ : ಈ ಸಲ ಹಲವು ನಿಯಮ ಬದಲಾವಣೆ

ನಾಳೆಯಿಂದ ಶುರುವಾಗಲಿದೆ ಎರಡು ತಿಂಗಳ ಕ್ರಿಕೆಟ್‌ ಸಂಭ್ರಮ ಮುಂಬಯಿ: ಚಾಂಪಿಯನ್‌ ಟ್ರೋಫಿ ಮುಗಿದ ಬೆನ್ನಿಗೆ ಇಂಡಿಯನ್ ಪ್ರೀಮಿಯರ್ ಲೀಗ್-2025 (ಐಪಿಎಲ್‌) ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಪ್ರಾರಂಭವಾಗಿದೆ. 10 ತಂಡಗಳು ಎರಡು ತಿಂಗಳ ಕ್ರಿಕೆಟ್‌ ಹಬ್ಬಕ್ಕೆ ತಯಾರಾಗಿರುವಂತೆಯೇ ಬಿಸಿಸಿಐ ಈ ಸಲ ಐಪಿಎಲ್‌ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.ಮಾರ್ಚ್ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಚುಟುಕು ಕ್ರಿಕೆಟ್ ಟೂರ್ನಿ ಶುರುವಾಗುತ್ತದೆ. ಐಪಿಎಲ್ 18ನೇ ಋತುವಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದ್ದು, ಕೊರೊನಾ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಹಳೆ ನಿಯಮ

ಐಪಿಎಲ್‌ ಕ್ರಿಕೆಟ್‌ ಹಬ್ಬಕ್ಕೆ ಕ್ಷಣಗಣನೆ : ಈ ಸಲ ಹಲವು ನಿಯಮ ಬದಲಾವಣೆ Read More »

ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಪಾಂಡುರಂಗ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ರಾಮಮೋಹನ್ ರೈ ಆಯ್ಕೆ

ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ದ.ಕ.ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪಾಂಡುರಂಗ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ರಾಮಮೋಹನ್ ರೈ ಅವರು ಅಯ್ಕೆಯಾಗಿದ್ದಾರೆ. ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಗೆ ಮಾ.20ಕ್ಕೆ ನಾಮಪತ್ರ ಸಲ್ಲಿಸಿ, ಅದೇ ದಿನ ನಾಮಪತ್ರ ಹಿಂಪಡೆಯಲು ಹಾಗು ಬಳಿಕ ಮತದಾನವೂ ಒಂದೆ ದಿನಕ್ಕೆ ನಿಗದಿ ಮಾಡಿದಂತೆ ಎಲ್ಲಾ 13 ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಜಿತ್ ಕುಮಾರ್ ಕೆ, ರಾಮಮೋಹನ್ ರೈ ಎಂ.ಕೆ, ರಘುನಾಥ ಬಿ, ಎ.ನಾಗೇಶ ರಾವ್,

ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಪಾಂಡುರಂಗ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ರಾಮಮೋಹನ್ ರೈ ಆಯ್ಕೆ Read More »

ದಿಶಾ ಸಾಲ್ಯಾನ್‌ ಸಾವಿನ ಕೇಸಿಗೆ ಮರುಜೀವ : ಆದಿತ್ಯ ಠಾಕ್ರೆಗೆ ಎದುರಾಯಿತು ಸಂಕಷ್ಟ

ಐದು ವರ್ಷಗಳ ಬಳಿಕ ಸಾವಿನ ಮರುತನಿಖೆ ಆಗ್ರಹಿಸಿ ಹೈಕೋರ್ಟ್‌ ಮೆಟ್ಟಿಲೇರಿದ ತಂದೆ ಮುಂಬಯಿ: ಮುಂಬಯಿಯಲ್ಲಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸೇರಿದಂತೆ ಸಿನೆಮಾ ತಾರೆಯರು ಮತ್ತು ಸೆಲೆಬ್ರಿಟಿಗಳಿಗೆ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ದಿಶಾ ಸಾಲ್ಯಾನ್‌ ಎಂಬ ಯುವತಿಯ ಸಾವಿನ ಕೇಸ್‌ ಮರುಜೀವ ಪಡೆದುಕೊಂಡಿದೆ. ದಿಶಾ ಸಾಲ್ಯಾನ್‌ ಸಾವಿಗೀಡಾಗಿ ಐದು ವರ್ಷಗಳ ಬಳಿಕ ಅವರ ತಂದೆ ಸತೀಶ್‌ ಸಾಲ್ಯಾನ್‌ ಮಗಳನ್ನು ಗ್ಯಾಂಗ್‌ರೇಪ್‌ ಮಾಡಿ ಸಾಯಿಸಲಾಗಿದೆ ಮತ್ತು ಇದರ ಹಿಂದೆ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ

ದಿಶಾ ಸಾಲ್ಯಾನ್‌ ಸಾವಿನ ಕೇಸಿಗೆ ಮರುಜೀವ : ಆದಿತ್ಯ ಠಾಕ್ರೆಗೆ ಎದುರಾಯಿತು ಸಂಕಷ್ಟ Read More »

ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ದೂರು ದಾಖಲು

ಬೆಳ್ತಂಗಡಿ: ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ಯಾಗ್ ಎಳೆದು ತೊಂದರೆ ನೀಡಿರುವ ಕುರಿತು ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿನಿಗೆ ಪರಿಚಯಸ್ಥ ವೇಣೂರು ಗ್ರಾಮದ ಶಿವಾಜಿನಗರ ಕಾಲೋನಿ ನಿವಾಸಿ ಆಸ್ಪಕ್ (27) ಎಂಬಾತ ತೊಂದರೆ ನೀಡಿದಾತ. ಬುಧವಾರ ಮೂಡುಬಿದ್ರೆಯಿಂದ ವೇಣೂರಿಗೆ ಬಸ್ಸಿನಲ್ಲಿ ಬರುವಾಗ ಆಕೆ ಕುಳಿತಿದ್ದ ಸೀಟಿನ ಬಳಿ ನಿಂತುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಗ್ ಎಳೆದು ತೊಂದರೆ ನೀಡಿದ್ದಾನೆ ಎಂದು ಕುರಿತು ದೂರಿನಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ದೂರು ದಾಖಲು Read More »

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ *ಅಖಿಲನಿನಾದ “

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಮಕ್ಕಳಿಂದು ಅಖಿಲ ನಿನಾದದ ಸವಿಯುಂಡರು. ಪರೀಕ್ಷೆ ಮುಗಿಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಲು ಸಂಗೀತ ವೇದಿಕೆಯನ್ನು ಸಜ್ಜು ಗೊಳಿಸಲಾಗಿತ್ತು. ವಿಶೇಷವಾಗಿ  ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಿ ಆ ಮೂಲಕ ಸಂಗೀತ ಭೂಮಿಕೆಯನ್ನು ನಿರ್ಮಿಸಲಾಗಿತ್ತು. ಸಂಗೀತ ದೇಸಿ ಕಲೆ : ಸಂಗೀತವೊಂದು ಸಮ್ಮೋಹನ ಕಲೆ. ಅದು ಎಲ್ಲಾ ಜೀವಿಗಳಿಗೂ ಇಷ್ಟವಾಗುವ ಕಲೆ. ಸಂಗೀತವನ್ನು ಆಲಿಸಿದ ದನಗಳು ಯತೇಚ್ಛವಾಗಿ ಹಾಲು ಕೊಡುತ್ತದೆ. ಮರಗಳು ಹೂ,ಕಾಯಿ, ಹಣ್ಣು ಕೊಡುತ್ತದೆ. ಇಡೀ ಪರಿಸರವೇ ಧನಾತ್ಮಕವಾಗಿ ಇರುತ್ತದೆ. ಅಂತಹ ಅದ್ಭುತ

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ *ಅಖಿಲನಿನಾದ “ Read More »

ಕೊನೆಗೂ ಸಿಕ್ಕಿತು ಹನಿಟ್ರ್ಯಾಪ್‌ ಸೂತ್ರಧಾರನ ಸುಳಿವು : ಕಾಂಗ್ರೆಸ್‌ನಲ್ಲಿ ನಡುಕ

ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಹನಿಟ್ರ್ಯಾಪ್‌ ಕೃತ್ಯ ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ನಿನ್ನೆ ಹನಿಟ್ರ್ಯಾಪ್‌ ಕುರಿತು ಜೋರು ಚರ್ಚೆ ನಡೆದ ಬೆನ್ನಿಗೆ ಹನಿಟ್ರ್ಯಾಪ್‌ನ ರೂವಾರಿ ಯಾರು ಮತ್ತು ಯಾರಿಗೆಲ್ಲ ಹನಿಟ್ರ್ಯಾಪ್‌ ಬಲೆ ಹೆಣೆಯಲಾಗಿತ್ತು ಎಂಬ ಮಾಹಿತಿಗಳು ಹೊರಬರತೊಡಗಿವೆ. ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ ತನ್ನನ್ನೂ ಸೇರಿಸಿ ರಾಜ್ಯ ಮತ್ತು ಕೇಂದ್ರದ 48 ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಶಾಸಕ ಸುನಿಲ್‌ ಕುಮಾರ್‌ ಕೂಡ ಹನಿಟ್ರ್ಯಾಪ್‌ ಕುರಿತಂತೆ ಸರಕಾರದ ಮೇಲೆ

ಕೊನೆಗೂ ಸಿಕ್ಕಿತು ಹನಿಟ್ರ್ಯಾಪ್‌ ಸೂತ್ರಧಾರನ ಸುಳಿವು : ಕಾಂಗ್ರೆಸ್‌ನಲ್ಲಿ ನಡುಕ Read More »

ಹಿರಿಯ ನಿರ್ದೆಶಕ ಎ.ಟಿ.ರಘು ನಿಧನ

ಅಂಬರೀಷ್‌, ರಜನಿಕಾಂತ್‌ ಚಿತ್ರಗಳನ್ನು ನಿರ್ದೆಶಿಸಿದ್ದ ನಿರ್ದೇಶಕ ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಎ.ಟಿ.ರಘು (76) ಗುರುವಾರ ರಾತ್ರಿ ನೀಧನರಾಗಿದ್ದಾರೆ. ಮಂಡ್ಯದ ಗಂಡು ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶನ ಮಾಡಿದ್ದರು. ಹಿಂದಿ ಮತ್ತು ಮಳಯಾಲಂ ಚಿತ್ರಗಳಲ್ಲೂ ಕೆಲಸ ಮಾಡಿದ್ದರು. ಅವರ ನಿಧನ ವಾರ್ತೆ ತಿಳಿದು ಚಿತ್ರರಂಗದ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.ಅಂಬರೀಷ್‌ ನಾಯಕನಾಗಿ ನಟಿಸಿದ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ ಎ.ಟಿ.ರಘು ಅವರಿಗಿದೆ. ತೀವ್ರ ಅನಾರೋಗ್ಯದಿಂದ ರಘು ಬಳಲುತ್ತಾ ಇದ್ದರು. ನಿರಂತರವಾಗಿ

ಹಿರಿಯ ನಿರ್ದೆಶಕ ಎ.ಟಿ.ರಘು ನಿಧನ Read More »

ಮಾ.22-23 : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮೋತ್ಸವ

ಪುತ್ತೂರು : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮ ಮಾ.22 ಶನಿವಾರದಿಂದ ಮಾ. 23 ಭಾನುವಾರದವರೆಗೆ ನಡೆಯಲಿದೆ.ಮಾ.22 ರಂದು ಶನಿವಾರ ಬೆಳಗ್ಗೆ 4ಗಂಟೆಗೆ ಶ್ರೀ ರಣಮಂಗಲ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಿಂದ ದೈವಗಲ ಭಂಡಾರ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಆಗಮಿಸಲಿದೆ. ರಾತ್ರಿ 7ಗಂಟೆಗೆ ಶ್ರೀ ಕ್ಷೇತ್ರದಲ್ಲಿ ದೈವಗಳ ತಂಬಿಲ, ರಾತ್ರಿ 8ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ರಾತ್ರಿ 9ಗಂಟೆಗೆ ಶ್ರೀ ಕ್ಷೇತ್ರದಿಂದ ದೈವಗಳ ಭಂಡಾರ ಬಾಲ್ಯೊಟ್ಟು ಮನೆಗೆ ಬರಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಾ,23

ಮಾ.22-23 : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮೋತ್ಸವ Read More »

ಒಂದು ತಿಂಗಳು ಪೂರೈಸಿದ ಸಿನಿಮಾ – ಭಾವ ತೀರ ಯಾನ | 21ರಂದು ಸಂಜೆ 4 ಗಂಟೆಯ ಪ್ರದರ್ಶನದಲ್ಲಿ ಸಂಭ್ರಮಾಚರಣೆ| ಚಿತ್ರ ತಂಡದ ನಟ-ನಟಿಯರ ಉಪಸ್ಥಿತಿ-ಸಂವಾದ

ಪುತ್ತೂರು : ಫೆಬ್ರುವರಿ 21ರಂದು ರಾಜ್ಯಾದ್ಯಂತ ತೆರೆ ಕಂಡು ಪ್ರೇಕ್ಷಕರ ಮನಗೆದ್ದ ಇದೀಗ 30 ದಿನಗಳ ಯಶಸ್ವೀ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ಭಾವ ತೀರ ಯಾನ ಚಿತ್ರ ಮಾರ್ಚ್ 21ರಂದು ತಿಂಗಳ ಸಂಭ್ರಮಾಚರಣೆ ನಡೆಸಲಿದೆ. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನರ್ ಆಗಿ ಪುತ್ತೂರಿನ GL ONE ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ‘ಭಾವ ತೀರ ಯಾನ’ ತೆರೆ ಕಂಡಿತ್ತು. ಮಾರ್ಚ್ 21ರಂದು  ಸಂಜೆ 4ಕ್ಕೆ ನಡೆಯುವ ಪ್ರದರ್ಶನದಲ್ಲಿ ಚಿತ್ರತಂಡದ ತಾರೆಯರು ಮತ್ತು ನಿರ್ಮಾಪಕ, ನಿರ್ದೇಶಕರು ಭಾಗವಹಿಸಲಿದ್ದಾರೆ. ಇದೇ

ಒಂದು ತಿಂಗಳು ಪೂರೈಸಿದ ಸಿನಿಮಾ – ಭಾವ ತೀರ ಯಾನ | 21ರಂದು ಸಂಜೆ 4 ಗಂಟೆಯ ಪ್ರದರ್ಶನದಲ್ಲಿ ಸಂಭ್ರಮಾಚರಣೆ| ಚಿತ್ರ ತಂಡದ ನಟ-ನಟಿಯರ ಉಪಸ್ಥಿತಿ-ಸಂವಾದ Read More »

error: Content is protected !!
Scroll to Top