ಫೆ.21: ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೂರು ದಿನಗಳ ಕಾಲ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಡ್‌ಟೆಕ್-2026’

ಪುತ್ತೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಮತ್ತು ಯು.ಎಸ್. ಕಮ್ಯುನಿಕೇಶನ್ಸ್ ವತಿಯಿಂದ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಎಂಟರ್‌ಪ್ರೈಸಸ್‌ನ ಸಹಯೋಗದೊಂದಿಗೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಸ್ ಟೆಕ್ -2026* ಫೆ.21ರಿಂದ ಮೂರು ದಿನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಲಿರುವುದಾಗಿ ಅಸೋಸಿಯೇಶನ್‌ ಆಫ್ ಕನ್ಸಲಿಂಗ್ ಸಿವಿಲ್ ಇಂಜಿನಿಯರ್ ಪುತ್ತೂರು ಸೆಂಟರ್‌ನ ಅಧ್ಯಕ್ಷ ಶಿವರಾಮ ಮತಾವು ತಿಳಿಸಿದ್ದಾರೆ. ಈ ಮೂರು ದಿನದ […]

ಫೆ.21: ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೂರು ದಿನಗಳ ಕಾಲ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಡ್‌ಟೆಕ್-2026’ Read More »

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ‌ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ಸಹ ವಿಚಾರಣೆ ನಡೆದಿದ್ದು, ಧರ್ಮಸ್ಥಳ ಕ್ಷೇತ್ರದ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಇಂದು ವಾದ ಮಂಡನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ಹಾನಿಯಾಗಿದೆ‌. ಅವರನ್ನು ಸಂತ್ರಸ್ತರು ಎಂದು ಪರಿಗಣಿಸಬೇಕು. ಕಾನೂನಿನಡಿ ಸಂತ್ರಸ್ತ ಪದದ ವ್ಯಾಖ್ಯಾನದ ಬಗೆಗೂ ತಿಳಿಸಿದ ಅವರು, ಈ ಪ್ರಕರಣದಲ್ಲಿ ಕ್ಷೇತ್ರದವರನ್ನು ಸಂತ್ರಸ್ತರನ್ನಾಗಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಅವರು ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ SIT

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ Read More »

ಐತಿಹಾಸಿಕ ಲಾಲ್‌ಚೌಕ್‌ನಲ್ಲಿ RSS ಧ್ವಜಯಾತ್ರೆ ಕಾಶ್ಮೀರ – ಕನ್ಯಾಕುಮಾರಿ‌ಗೆ ಚಾಲನೆ

ಶ್ರೀನಗರ: RSS ಕುರಿತಾಗಿ ಕೆಲವರಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಉದ್ದೇಶದಿಂದ ‘ಧ್ವಜ ಯಾತ್ರೆ’ ಯನ್ನು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಚಾಲನೆ ನೀಡಲಾಯಿತು. ಈ ಸಾಂಕೇತಿಕ ಯಾತ್ರೆಯು ಲಾಲ್‌ಚೌಕ್‌ನಿಂದ ಪ್ರವಾಸಿ ಸ್ವೀಕರಣಾ ಕೇಂದ್ರದ ವರೆಗೆ ಸಾಗಿತು. ಅಲ್ಲಿಂದ ಈ ಯಾತ್ರೆಯನ್ನು ಮುಂದುವರೆಸಿಕೊಂಡು ಹೋಗುವವರು ದೇಶದ ವಿವಿಧ ಭಾಗಗಳತ್ತ ವಾಹನಗಳ ಮೂಲಕ ಯಾತ್ರೆ ಮುಂದುವರೆಸಿದರು. ಜನರಿಗೆ ಈ ವರೆಗೆ RSS ಬಗ್ಗೆ ತಿರುಚಿದ ಇತಿಹಾಸವನ್ನು ಹೇಳಲಾಗಿದ್ದು, ನಿಜವಾದ ಇತಿಹಾಸವನ್ನು

ಐತಿಹಾಸಿಕ ಲಾಲ್‌ಚೌಕ್‌ನಲ್ಲಿ RSS ಧ್ವಜಯಾತ್ರೆ ಕಾಶ್ಮೀರ – ಕನ್ಯಾಕುಮಾರಿ‌ಗೆ ಚಾಲನೆ Read More »

ಮಗಳ ಸಾವಿಗೆ ಕಾರಣವಾದ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ತಾಯಿ

ನಂತೂರಿನಲ್ಲಿ ಸ್ಕೂಟಿಗೆ ಬಸ್‌ ಡಿಕ್ಕಿಯಾಗಿ ಯುವತಿ ಮೃತಪಟ್ಟ ಘಟನೆ ಮಂಗಳೂರು: ನಗರದ ನಂತೂರು ಬಸ್ ನಿಲ್ದಾಣದ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಹೃದಯ ವಿದ್ರಾವಕ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದೀಪ್ತಿ (24) ಎಂಬ ಯುವತಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಅತ್ಯಂತ ನೋವಿನ ಅಂಶವೆಂದರೆ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಅದೇ ಬಸ್‌ನಲ್ಲಿ ಅವರ ತಾಯಿಯೂ ಪ್ರಯಾಣಿಸುತ್ತಿದ್ದರು. ಚಾಲಕ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಗುರುವಾರ ಕದ್ರಿ ಪೊಲೀಸ್‌ ಠಾಣೆಯ ಎದುರು ಬಂಧುಗಳು ದೀಪ್ತಿಯ

ಮಗಳ ಸಾವಿಗೆ ಕಾರಣವಾದ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ತಾಯಿ Read More »

ಚೆನ್ನೈಯಲ್ಲಿ ಪಕ್ಷಿಜ್ವರ ಹಾವಳಿ : ನೂರಾರು ಕಾಗೆಗಳು ಬಲಿ

ನಗರದಲ್ಲಿ ಸತ್ತು ಬೀಳುತ್ತಿರುವ ಕಾಗೆಗಳು, ಕೋಳಿ ಫಾರಂಗಳಿಗೆ ಕಟ್ಟೆಚ್ಚರ ಘೋಷಣೆ ಚೆನ್ನೈ: ಚೆನ್ನೈಯಲ್ಲಿ ಪಕ್ಷಿಜ್ವರ ಅಥವಾ ಎಚ್‌5ಎನ್‌1 ವೈರಾಣು ಹಾವಳಿ ಪ್ರಾರಂಭವಾಗಿದ್ದು, ನೂರಾರು ಕಾಗೆಗಳು ಈ ವೈರಸ್‌ ತಗಲಿ ಮೃತಪಟ್ಟಿರುವುದು ದೃಢಪಟ್ಟಿದೆ. ನಗರದೆಲ್ಲೆಡೆ ಕಾಗೆಗಳು ಸತ್ತು ಬಿದ್ದಿರುವ ದೃಶ್ಯ ಕಂಡುಬಂದಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಹೈಅಲರ್ಟ್‌ ಘೋಷಿಸಿದೆ. ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಎಚ್‌5ಎನ್‌1 ವೈರಾಣು ಹರಡುವುದನ್ನು ತಡೆಯಲು ಸತ್ತಿರುವ ಕಾಗೆಗಳನ್ನು ಹಾಗೂ ಕೋಳಿಗಳನ್ನು ಆರೋಗ್ಯ ಅಧಿಕಾರಿಗಳ ಸೂಚನೆ ಪ್ರಕಾರ ನಾಶ ಮಾಡಬೇಕು

ಚೆನ್ನೈಯಲ್ಲಿ ಪಕ್ಷಿಜ್ವರ ಹಾವಳಿ : ನೂರಾರು ಕಾಗೆಗಳು ಬಲಿ Read More »

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ

ಬಳ್ಳಾರಿ: ನಾಗಲಕೆರೆಯಲ್ಲಿರುವ ದೇವಾಲಯವೊಂದರಲ್ಲಿ ಮಾಂಸದ ಚೀಲವೊಂದು ಪತ್ತೆಯಾದ ಘಟನೆ ನಡೆದಿದೆ. ಆಂಜನೇಯ ದೇವಾಲಯದ ಹಿಂದಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದಿರುವ ಗರುಡ ಸ್ಥಂಬದ ಮುಂದೆ ಮಾಂಸದ ಕವರ್ ಪತ್ತೆಯಾಗಿರುವುದಾಗಿದೆ. ಬೆಳಗ್ಗಿನ ವೇಳೆ ದೇಗುಲದ ಅರ್ಚಕರ ಗಮನಕ್ಕೆ ಈ ಮಾಂಸದ ಚೀಲ ಬಂದಿದ್ದು, ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಮಾಂಸದ ಕವರ್ ಅನ್ನು ತೆರವು ಮಾಡಿದ್ದು, ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ನಾಯಿಗಳು ತಂದು ಹಾಕಿರುವುದೋ ಎನ್ನುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ Read More »

ಹೃದಯಾಪಘಾತದಿಂದ ಶಂಭುಗ ಸೀತಾರಾಮ ಶೆಟ್ಟಿ ನಿಧನ

ಮಾಣಿ: ಉಳ್ಳಾಲ್ತಿ ದೈವಸ್ಥಾನದಲ್ಲಿ ಗುಡ್ಡೆ ಚಾಮುಂಡಿ ದೈವದ ಪಾತ್ರಿಯಾಗಿದ್ದ ಶಂಭುಗ ಸೀತಾರಾಮ ಶೆಟ್ಟಿ(61) ಅವರು ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ, ನಾಲ್ಕು ಜನ ಪುತ್ರರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶಂಭುಗದಲ್ಲಿರುವ ಅವರ ಸ್ವಗೃಹದಲ್ಲಿ ಶುಕ್ರವಾರ ರಾತ್ರಿ 7 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಹೃದಯಾಪಘಾತದಿಂದ ಶಂಭುಗ ಸೀತಾರಾಮ ಶೆಟ್ಟಿ ನಿಧನ Read More »

ಮಹಿಳಾ ಅಧಿಕಾರಿಯ ರಹಸ್ಯ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಮೂವರ ಬಂಧನ

ಬೆಡ್‌ರೂಮ್‌ನ ಲೈಟಿಂಗ್ ವೋಲ್ಟರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದದ ಪಾತಕಿಗಳು ಬೆಂಗಳೂರು : ಬೆಳಗಾವಿಯ ಮಹಿಳಾ ಅಧಿಕಾರಿಯೊಬ್ಬರ ಬೆಡ್‌ರೂಮ್‌ನೊಳಗೆ ಕ್ಯಾಮರಾ ಇಟ್ಟು ಖಾಸಗಿ ಕ್ಷಣಗಳನ್ನು ಸೆರೆ ಹಿಡಿದು 50 ಲಕ್ಷ ರೂ. ಕೊಡುವಂತೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ನಕಲಿ ಪತ್ರಕರ್ತರನ್ನು ಬೆಳಗಾವಿ ಪೊಲೀಸರು ಬಂದಿಸಿ ಜೈಲಿಗಟ್ಟಿದ್ದಾರೆ. ಮನೆಗೆ ನುಗ್ಗಿ ಬೆಡ್‌ರೂಮ್‌ನಲ್ಲಿದ್ದ ಲೈಟಿಂಗ್ ವೋಲ್ಟರ್‌‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ ಆರೋಪಿಗಳು ಖಾಸಗಿ ದೃಶ್ಯ ಸೆರೆಯಾದ ಬಳಿಕ ಮಹಿಳಾ ಅಧಿಕಾರಿಗೆ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು‌. ಹಣ ಕೊಡದಿದ್ದರೆ

ಮಹಿಳಾ ಅಧಿಕಾರಿಯ ರಹಸ್ಯ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಮೂವರ ಬಂಧನ Read More »

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್‌ ಯಾದವ್‌ ತಿಹಾರ್‌ ಜೈಲುಪಾಲು

ಕೇಸಿನಲ್ಲಿ ರಿಲೀಫ್‌ ನೀಡಲು ನಿರಾಕರಿಸಿದ ನ್ಯಾಯಾಲಯ ನವದೆಹಲಿ: ಬಾಲಿವುಡ್‌ನ ಹಾಸ್ಯ ನಟ ರಾಜ್​ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದಾರೆ. ಪ್ರಕರಣದಲ್ಲಿ ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ಕಾರಣದಿಂದ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಅವರು ಜೈಲಿಗೆ ಹೋಗಿದ್ದು, ಅಧಿಕಾರಿಗಳು ಆ ಬಳಿಕ ತಮ್ಮ ಪ್ರಕ್ರಿಯೆ ನಡೆಸಿದ್ದಾರೆ. ಅವರನ್ನು ಈಗ ಜೈಲಿನಲ್ಲಿ ಇಡಲಾಗಿದೆ. ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಾಜ್​​ಪಾಲ್ ವಿರುದ್ಧ

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್‌ ಯಾದವ್‌ ತಿಹಾರ್‌ ಜೈಲುಪಾಲು Read More »

ರಾಹುಲ್ ಗಾಂಧಿ ಪರ ರಾಜ್ಯಸಭೆಯಲ್ಲಿ ಖರ್ಗೆ ಬ್ಯಾಟಿಂಗ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡುವುದಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದು, ಈ ವಿಷಯ ಮೇಲ್ಮನೆಯಲ್ಲಿ ಕೋಲಾಹಲ ಸೃಷ್ಟಿಸಿತು. ರಾಹುಲ್ ಗಾಂಧಿಗೆ ನರವಣೆ ಅವರ ಪುಸ್ತಕ ಉಲ್ಲೇಖಿಸಲು ಬಿಡುತ್ತಿಲ್ಲ. ಚೀನಾ ವಿಚಾರ ಎತ್ತಿದರೆ ಕೇಂದ್ರ ಸರ್ಕಾರಕ್ಕೆ ತುರಿಸುತ್ತದೆ ಎಂದರು. ಇದಕ್ಕೆ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ವಿರೋಧ ವ್ಯಕ್ತಪಡಿಸಿದ್ದು, ಲೋಕಸಭೆಯ ಸಂಗತಿಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡುವುದು ನಿಯಮ ಬಾಹಿರ ಎಂದು ಹೇಳಿದರು. ಹೀಗಿದ್ದರೂ ಮಾತು ಮುಂದುವರಿಸಿದ ಖರ್ಗೆ, ಸಂಸತ್ತು

ರಾಹುಲ್ ಗಾಂಧಿ ಪರ ರಾಜ್ಯಸಭೆಯಲ್ಲಿ ಖರ್ಗೆ ಬ್ಯಾಟಿಂಗ್ Read More »

error: Content is protected !!
Scroll to Top