ಹಿಮ್ಮುಖವಾಗಿ ಚಲಿಸಿದ ಜೀಪು : ಹಿಂದೆ ನಿಂತಿದ್ದ ವ್ಯಕ್ತಿಗೆ ಜೀಪು ಡಿಕ್ಕಿ ಹೊಡೆದು ಮೃತ್ಯು

ಕಡಬ : ತಾಲೂಕಿನ ಬಿಳಿನೆಲೆ ಗ್ರಾಮದ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಸಂಭವಿಸಿದ ದುರಂತದಲ್ಲಿ ಧರ್ಮಪಾಲ (68) ಎಂಬ ಹಿರಿಯ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಮೃತರ ಮಗ ಏರು ರಸ್ತೆಯಲ್ಲಿ ಜೀಪು ಚಲಾಯಿಸುತ್ತಿದ್ದ ವೇಳೆ, ವಾಹನ ಮೇಲಕ್ಕೆ ಏರದ ಕಾರಣ ಧರ್ಮಪಾಲರು ಕೆಳಗೆ ಇಳಿದು ಹಿಂಬದಿ ನಿಂತಿದ್ದರು. ಈ ವೇಳೆ ಜೀಪು ಏಕಾಏಕಿ ಹಿಮ್ಮುಖವಾಗಿ ಚಲಿಸಿ ನಿಯಂತ್ರಣ ತಪ್ಪಿ ಅವರ ಮೇಲೆ ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರ ನೆರವಿನಿಂದ ಕಡಬ ಸರ್ಕಾರಿ ಆಸ್ಪತ್ರೆಗೆ […]

ಹಿಮ್ಮುಖವಾಗಿ ಚಲಿಸಿದ ಜೀಪು : ಹಿಂದೆ ನಿಂತಿದ್ದ ವ್ಯಕ್ತಿಗೆ ಜೀಪು ಡಿಕ್ಕಿ ಹೊಡೆದು ಮೃತ್ಯು Read More »

ಬೀಡಿಕಾರ್ಮಿಕರ ಬೋನಸ್ ಸಾವಿರ ಬೀಡಿಗೆ ರೂ. 43.34

ಪುತ್ತೂರು: ಪ್ರತಿ ವರ್ಷದಂತೆ ಈ ವರ್ಷವೂ ಬೀಡಿಕಾರ್ಮಿಕರ ಬೋನಸ್, ರಜಾಸಂಬಳ, ಹಬ್ಬದ ರಜಾಸಂಬಳ ಒಟ್ಟಿಗೆ ಬಿಡುಗಡೆಯಾಗಿದ್ದು ಪ್ರತಿ ಸಾವಿರ ಬೀಡಿಗೆ ರೂ. 43.34 ರಂತೆ ಅಂದರೆ ಒಂದು ಲಕ್ಷ ಬೀಡಿಕಟ್ಟಿದವರಿಗೆತಲಾ ರೂ.4,334 ಬೋನಸ್ ಸಿಗಲಿದೆ ಎಂದು ಪುತ್ತೂರು ತಾಲೂಕು ಬೀಡಿಕೆಲಸಗಾರರ ಸಂಘದ ಅಧ್ಯಕ್ಷ, ನ್ಯಾಯವಾದಿ ಪಿ.ಕೆ.ಸತೀಶನ್, ಕಾರ್ಯದರ್ಶಿ ಬಿ.ಎಂ.ಭಟ್, ಖಜಾಂಜಿ ಈಶ್ವರಿ ಶಂಕರ್ ಮುಂಡೂರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದಲ್ಲದೆ ಸರಕಾರ ನಿಗದಿ ಪಡಿಸಿದ ಹೊಸ ಕನಿಷ್ಟ ಕೂಲಿ ಪ್ರತಿ ಸಾವಿರ ಬೀಡಿಗೆ ರೂ. 391.92 ರಂತೆ

ಬೀಡಿಕಾರ್ಮಿಕರ ಬೋನಸ್ ಸಾವಿರ ಬೀಡಿಗೆ ರೂ. 43.34 Read More »

ಧರ್ಮಸ್ಥಳ ಪ್ರಕರಣ : ಪುನೀತ್‌ ಕೆರೆಹಳ್ಳಿ, ಮಟ್ಟಣ್ಣವರ್‌, ತಿಮರೋಡಿ ವಿರುದ್ಧ ಎಫ್‌ಐಆರ್‌

ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಕೇಸ್‌ ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನಡೆದ ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಪುನೀತ್ ಕೆರೆಹಳ್ಳಿ ವಿರುದ್ಧ ಪ್ರತ್ಯೇಕ ದೂರುಗಳು ದಾಖಲಾಗಿವೆ. ಧರ್ಮಸ್ಥಳದಲ್ಲಿ ಬುಧವಾರ ಸಂಭವಿಸಿದ ಗಲಭೆ ಪ್ರಕರಣದಲ್ಲಿ ಗಲಾಟೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಪುನೀತ್ ಕೆರೆಹಳ್ಳಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಧರ್ಮಸ್ಥಳದಲ್ಲಿ ನಡೆದ ಗಲಭೆಯಲ್ಲಿ ಅಪರಾಧಿಕ ಕೃತ್ಯಗಳನ್ನು ನಡೆಸಲು ದುಷ್ಪ್ರೇರಣೆಯಾಗುವಂತೆ ಮಾತನಾಡಿದ್ದಾರೆ

ಧರ್ಮಸ್ಥಳ ಪ್ರಕರಣ : ಪುನೀತ್‌ ಕೆರೆಹಳ್ಳಿ, ಮಟ್ಟಣ್ಣವರ್‌, ತಿಮರೋಡಿ ವಿರುದ್ಧ ಎಫ್‌ಐಆರ್‌ Read More »

ಬಾಲಿವುಡ್‌ ನಟಿ ಹುಮಾ ಖುರೇಶಿ ಸಹೋದರನ ಬರ್ಬರ ಹತ್ಯೆ

ಸ್ಕೂಟಿ ಪಾರ್ಕಿಂಗ್‌ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಮುಂಬಯಿ: ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ಹಿಂದಿಯ ಜನಪ್ರಿಯ ನಟಿ ಹುಮಾ ಖುರೇಷಿ ಅವರ ಸಹೋದರ ಆಸಿಫ್ ಖುರೇಷಿ ಬರ್ಬರವಾಗಿ ಕೊಲೆಯಾಗಿದ್ದಾರೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ಸ್ಕೂಟಿ ಪಾರ್ಕಿಂಗ್ ವಿಚಾರದಲ್ಲಿ ಜಗಳ ನಡೆದು ಆಸಿಫ್‌ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಸಿಫ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಇಬ್ಬರು ಆರೋಪಿಗಳನ್ನು ಅಲ್ಪಾವಧಿಯಲ್ಲಿಯೇ ಬಂಧಿಸಿದ್ದಾರೆ. ಗುರುವಾರ ನಿಜಾಮುದ್ದೀನ್‌ನ ಜಂಗ್‌ಪುರ ಭೋಗಲ್ ಬಜಾರ್ ಲೇನ್‌ನಲ್ಲಿ ರಾತ್ರಿ 11

ಬಾಲಿವುಡ್‌ ನಟಿ ಹುಮಾ ಖುರೇಶಿ ಸಹೋದರನ ಬರ್ಬರ ಹತ್ಯೆ Read More »

ಮಂಗಳೂರೇ ಭಾರತದಲ್ಲಿ ಅತ್ಯಂತ ಸುರಕ್ಷಿತ ನಗರ

ಜಾಗತಿಕವಾಗಿ ನಡೆದ ಸಮೀಕ್ಷೆಯಲ್ಲಿ ಕುಡ್ಲಕ್ಕೆ ಸಿಕ್ಕಿದ ಅಪೂರ್ವ ಹಿರಿಮೆ ಮಂಗಳೂರು: ದೇಶದಲ್ಲೇ ಅತ್ಯಂತ ಸುರಕ್ಷಿತ ನಗರ ಎಂದರೆ ನಮ್ಮ ಮಂಗಳೂರು. ಜಾಗತಿಕ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಮಂಗಳೂರಿಗೆ ಈ ಅಪೂರ್ವವಾದ ಹಿರಿಮೆ ಸಿಕ್ಕಿದೆ. ಡೇಟಾ ಸಂಸ್ಥೆ ನಂಬಿಯೊ ಪ್ರಕಟಿಸಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕ ವರದಿಯಲ್ಲಿ ಮಂಗಳೂರು ನಗರ ಭಾರತದ ಅತ್ಯಂತ ಸುರಕ್ಷಿತ ನಗರವೆಂಬ ಸ್ಥಾನವನ್ನು ಪಡೆದುಕೊಂಡಿದೆ. 74.2 ಸುರಕ್ಷತಾ ಅಂಕಗಳೊಂದಿಗೆ ದೇಶದಲ್ಲಿ ಅಗ್ರಸ್ಥಾನದಲ್ಲಿರುವ ಮಂಗಳೂರು ಜಾಗತಿಕ ಮಟ್ಟದಲ್ಲಿ 49ನೇ ಶ್ರೇಯಾಂಕವನ್ನು ಗಳಿಸಿದೆ. ನಗರದ ಈ ಉನ್ನತ

ಮಂಗಳೂರೇ ಭಾರತದಲ್ಲಿ ಅತ್ಯಂತ ಸುರಕ್ಷಿತ ನಗರ Read More »

ಕಿವಿಗೆ ವಿಷ ಸುರಿದು ಗಂಡನನ್ನು ಕೊಂದ ಮಹಿಳೆ!

ಯೂಟ್ಯೂಬ್‌ ನೋಡಿ ಸಾಯಿಸುವ ಖತರ್‌ನಾಕ್‌ ಐಡಿಯಾ ಕಂಡುಕೊಂಡಿದ್ದ ಹೆಂಡತಿ ಹೈದರಾಬಾದ್‌: ಆಹಾರದಲ್ಲಿ ವಿಷಬೆರೆಸಿ ಸಾಯಿಸುವುದು ಸಾಮಾನ್ಯ ವಿಚಾರ. ಆದರೆ ತೆಲಂಗಾಣದ ಮಹಿಳೆಯೊಬ್ಬಳು ಗಂಡನನ್ನು ಸಾಯಿಸಲು ಬೇರೆಯೇ ಆದ ವಿಧಾನ ಅನುಸರಿಸಿದ್ದಾಳೆ. ಈಕೆ ಕಿವಿಗೆ ವಿಷ ಸುರಿದು ಗಂಡನನ್ನು ಸಾಯಿಸಿದ್ದಾಳೆ. ಈಕೆಗೆ ಈ ಖತರ್‌ನಾಕ್‌ ಐಡಿಯಾ ಸಿಕ್ಕಿದ್ದು ಯೂಟ್ಯೂಬ್‌ನಲ್ಲಂತೆ. ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಎಷ್ಟು ಚೆನ್ನಾಗಿ ಸಂಚು ರೂಪಿಸಲಾಗಿತ್ತೆಂದರೆ ಮೊದಲು ಪೊಲೀಸರಿಗೆ ಕೂಡ ಈ ರೀತಿ

ಕಿವಿಗೆ ವಿಷ ಸುರಿದು ಗಂಡನನ್ನು ಕೊಂದ ಮಹಿಳೆ! Read More »

ಲಕ್ಷ ದಾಟಿದ ಚಿನ್ನ, ಬೆಳ್ಳಿ ಬೆಲೆ : ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆ

ಟ್ರಂಪ್‌ ಡಬ್ಬಲ್‌ ಸುಂಕದಿಂದ ಚಿನ್ನದ ಮಾರುಕಟ್ಟೆಯಲ್ಲಿ ಬಿರುಗಾಳಿ ನವದೆಹಲಿ: ಭಾರತೀಯ ಆಮದುಗಳ ಮೇಲೆ ಟ್ರಂಪ್‌ ಹೆಚ್ಚುವರಿ ಶೇ.25 ಸುಂಕ ವಿಧಿಸಿದ ಪರಿಣಾಮ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ.ಭಾರತದ ಮೇಲೆ ಟ್ರಂಪ್‌ ಸುಂಕ ಘೋಷಿಸಿದ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಚಿನ್ನದ ಬೆಲೆ 3,600 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,02,620 ರೂ.ಗೆ ತಲುಪಿ ದಾಖಲೆ ಮಾಡಿದೆ.‌ ಅಖಿಲ ಭಾರತ ಸರಾಫ ಸಂಘದ ಪ್ರಕಾರ ಶೇ.99.9 ಶುದ್ಧತೆಯ ಚಿನ್ನ ಬುಧವಾರ 10 ಗ್ರಾಂಗೆ

ಲಕ್ಷ ದಾಟಿದ ಚಿನ್ನ, ಬೆಳ್ಳಿ ಬೆಲೆ : ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆ Read More »

ಕಾರು ಚಾಲಕ ಆತ್ಮಹತ್ಯೆ ಪ್ರಕರಣ : ಸಂಸದ ಕೆ.ಸುಧಾಕರ್‌ ವಿರುದ್ಧ ಎಫ್‌ಐಆರ್‌

ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಚಾಲಕ ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಸಂಸದ ಡಾ.ಕೆ.ಸುಧಾಕರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಡಾ.ಕೆ.ಸುಧಾಕರ್ ಹಾಗೂ ಅವರ ಬೆಂಬಲಿಗರ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕೆ.ಸುಧಾಕರ್ ಹಾಗೂ ಇಬ್ಬರು ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಒಂದನೇ ಆರೋಪಿಯಾಗಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಹೆಸರಿಸಲಾಗಿದೆ. ನಾಗೇಶ ಮತ್ತು

ಕಾರು ಚಾಲಕ ಆತ್ಮಹತ್ಯೆ ಪ್ರಕರಣ : ಸಂಸದ ಕೆ.ಸುಧಾಕರ್‌ ವಿರುದ್ಧ ಎಫ್‌ಐಆರ್‌ Read More »

ಧರ್ಮಸ್ಥಳ: ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಓರ್ವ ಸೆರೆ

150ಕ್ಕೂ ಮಂದಿಯ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಸಂಭವಿಸಿದ ಘರ್ಷಣೆ ಸಂಬಂಧ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಧರ್ಮಸ್ಥಳ ಗ್ರಾಮದ ಕನ್ಯಾಡಿಯ ನಿವಾಸಿ, ಜೀಪು ಚಾಲಕ ಸೋಮನಾಥ ಸಪಲ್ಯ (48) ಬಂಧಿತ ಆರೋಪಿ. ಆರೋಪಿಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆಂದು ಆರೋಪಿಸಿ ಯೂಟ್ಯೂಬರ್‌ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 150ಕ್ಕೂ ಅಧಿಕ ಜನರ ವಿರುದ್ಧ ಪ್ರತ್ಯೇಕ

ಧರ್ಮಸ್ಥಳ: ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಓರ್ವ ಸೆರೆ Read More »

ಮಡೆನೂರು ಮನು ವಿರುದ್ಧದ ಪ್ರಕರಣ ಹಿಂಪಡೆದ ‌ನಟಿ

ಬೆಂಗಳೂರು: ನಟ ಮಡೆನೂರು ‌ಮನು ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದ ಹಾಗೆ ದೂರು ನೀಡಿದ್ದ ನಟಿ ಆ ಕೇಸನ್ನು ಹಿಂಪಡೆಯಲು ಮುಂದಾಗಿದ್ದಾರೆ. ಮಡೆನೂರು ಮನು ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದು, ಕೇಸು ಹಿಂದಕ್ಕೆ ಪಡೆದಿರುವುದಾಗಿ ವಿಡಿಯೋ ಮೂಲಕ ಹೇಳಲಾಗಿದೆ. ಈ ಪ್ರಕರಣ ಅಂತ್ಯವಾಗಿದೆ ಎಂದು ವಕೀಲರು ಹೇಳಿದ್ದಾರೆ. ಈ ಪ್ರಕರಣವನ್ನು ಮನಃಪೂರ್ವಕವಾಗಿ ಹಿಂಪಡೆದಿರುವುದಾಗಿ ನಟಿ ಹೇಳಿದ್ದು, ಇದು ಮಡೆನೂರು ಮನು‌ಗೆ ‌ನಿರಾಳತೆ ನೀಡಿದೆ.

ಮಡೆನೂರು ಮನು ವಿರುದ್ಧದ ಪ್ರಕರಣ ಹಿಂಪಡೆದ ‌ನಟಿ Read More »

error: Content is protected !!
Scroll to Top