ಮನೆ ಮೇಲೆ ಉರುಳಿದ ಪಿಕಪ್ | ಮನೆಯೊಳಗೆ ಸಿಲುಕಿಕೊಂಡ ಮಹಿಳೆ

ಬಂಟ್ವಾಳ: ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ವಿಟ್ಲ ಸಮೀಪ ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ. ಪಿಕಪ್ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಒಳಗಿದ್ದ ಮಹಿಳೆ ಹೊರಬರಲಾಗದೆ ಸಿಲುಕಿಕೊಂಡಿದ್ದಾರೆ. ಕೂರೇಲು ಮಧ್ಯದ ಅಂಗಡಿಯ ಸಮೀಪ ರಸ್ತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದಿದೆ. ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಮಹಿಳೆ ಗಂಭೀರ ಪರಿಸ್ಥಿಯಲ್ಲಿದ್ದಾರೆ. ವಾಹನವನ್ನು ತೆರವು ಮಾಡದೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ […]

ಮನೆ ಮೇಲೆ ಉರುಳಿದ ಪಿಕಪ್ | ಮನೆಯೊಳಗೆ ಸಿಲುಕಿಕೊಂಡ ಮಹಿಳೆ Read More »

ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನ-ಕರುಗಳ ಸಾಗಾಟ | ನಾಲ್ವರು ಆರೋಪಿಗಳ ಬಂಧನ

ಪುತ್ತೂರು: ಹಿಂಸಾತ್ಮಕರ ರೀತಿಯಲ್ಲಿ ದಕನಕರುಗಳನ್ನು ಪತ್ತೆಹಚ್ಚಿದ ಧರ್ಮಸ್ಥಳ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಕ್ರಿಯ ಬಿಜೆಪಿ ಕಾರ್ಯಕರ್ತರೆನ್ನಲಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್ ಹಾಗೂ ಹಾಸನ ಜಿಲ್ಲೆಯ ಕಸಬಾ ಹೋಬಳಿ ಅರಕಲಗೂಡು ನಿವಾಸಿ ಚೆನ್ನಕೇಶವ ಮತ್ತು ಹೊಳೆನರಸೀಪುರ ನಿವಾಸಿ ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸಾಗಾಟಕ್ಕೆ ಬಳಸಿದ ಮೂರು ವಾಹನಗಳು, 6 ದನ ಹಾಗೂ 2 ಗಂಡು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಧರ್ಮಸ್ಥಳ ಠಾಣೆಯ ಎಸ್‍.ಐ. ಅನಿಲ್ ಕುಮಾರ್

ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನ-ಕರುಗಳ ಸಾಗಾಟ | ನಾಲ್ವರು ಆರೋಪಿಗಳ ಬಂಧನ Read More »

ವಿವಿಧ ಹಣ್ಣು, ಹೂವಿನ ಗಿಡಗಳ ತಳಿಗಳಿಗೆ ಭೇಟಿ ನೀಡಿ ಆಕಾಶ್ ನರ್ಸರಿ & ಫಾರ್ಮ್ಸ್ ಗೆ | ಮಲ್ಲಿಗೆ ಗಿಡ ನಾಟಿಯ ಮಾಹಿತಿಯೂ ಲಭ್ಯ

ಪುತ್ತೂರು: ಉತ್ತಮ ತಳಿಯ ವಾಣಿಜ್ಯ ಬೆಳೆಗಳ ಖರೀದಿಗಾಗಿ ಉತ್ಸಾಹಿತರಾಗಿದ್ದೀರಾ. ಹಾಗಾದರೆ ತಡವೇಕೆ ಒಮ್ಮೆ ಭೇಟಿ ನೀಡಿ ಆಕಾಶ್ ನರ್ಸರಿ & ಫಾರ್ಮ್ಸ್ ಗೆ ಪುತ್ತೂರು ನಗರದ ಧನ್ವಂತರಿ ಆಸ್ಪತ್ರೆ ಬಳಿ ಹಾಗೂ ತಿಂಗಳಾಡಿ-ಪಂಜಳ ರಸ್ತೆಯಲ್ಲಿರುವ ಪಂಜಳದಲ್ಲಿ ಆಕಾಶ್ ನರ್ಸರಿ & ಫಾರ್ಮ್ಸ್  ಕಾರ್ಯಾಚರಿಸುತ್ತಿದೆ. ಪಂಜಳದಲ್ಲಿ ಹಲವಾರು ಎಕ್ರೆಯಲ್ಲಿ ನರ್ಸರಿ ಹರಡಿಕೊಂಡಿದೆ. ಆಕಾಶ್ ನರ್ಸರಿಯಲ್ಲಿ ಉತ್ತಮ ಇಳುವರಿ ನೀಡುವ ವಿವಿಧ ತಳಿಯ ಅಡಿಕೆ, ತೆಂಗು, ಹಲಸು, ಮಾವು ಹಾಗೂ ವಿವಿಧ ಹಣ್ಣುಗಳ ಸಸಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ಒಂದೇ ಸೂರಿನಡಿ

ವಿವಿಧ ಹಣ್ಣು, ಹೂವಿನ ಗಿಡಗಳ ತಳಿಗಳಿಗೆ ಭೇಟಿ ನೀಡಿ ಆಕಾಶ್ ನರ್ಸರಿ & ಫಾರ್ಮ್ಸ್ ಗೆ | ಮಲ್ಲಿಗೆ ಗಿಡ ನಾಟಿಯ ಮಾಹಿತಿಯೂ ಲಭ್ಯ Read More »

ಗ್ರಾಮ ಪಂಚಾಯಿತಿ ಉಪ ಚುನಾವಣೆ | ಮಾಜಿ ಶಾಸಕರ ನೇತೃತ್ವದಲ್ಲಿ ಮತ ಬೇಟೆ

ಪುತ್ತೂರು: ನಿಡ್ಪಳ್ಳಿ  ಗ್ರಾಮ ಪಂಚಾಯತ್ ಉಪಚುನಾವಣೆಗೆ ಮಾಜಿ ಶಾಸಕ ಸಂಜೀವ ಮಂಠದೂರು ನೇತೃತ್ವದಲ್ಲಿ ಮತಯಾಚನೆ ಗುರುವಾರ ನಡೆಯಿತು. ಅಭ್ಯರ್ಥಿ ಚಂದ್ರಶೇಖರ ಪ್ರಭು ಪರ ಮತ ಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಗೀತಾ ಸಂತೋಷ್, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ನಿಕಟ ಪೂರ್ವ ನಗರಸಭೆ  ಅಧ್ಯಕ್ಷ ಜೀವಂಧರ್ ಜೈನ್, ನಿತೀಶ್ ಕುಮಾರ್ ಶಾಂತಿವನ, ಅಪ್ಪಯ್ಯ ಮಣಿಯಾಣಿ, ಪದ್ಮನಾಭ ಬೋರ್ಕರ್, ರಾಧಾಕೃಷ್ಣ ಬೋರ್ಕರ್, ಆರ್ ಸಿ ನಾರಾಯಣ್ ರೆಂಜ, ಪುನೀತ್ ಮಾಡತ್ತಾರ್, ಹರಿಪ್ರಸಾದ್ ಯಾದವ್ ಮತ್ತಿತರರು

ಗ್ರಾಮ ಪಂಚಾಯಿತಿ ಉಪ ಚುನಾವಣೆ | ಮಾಜಿ ಶಾಸಕರ ನೇತೃತ್ವದಲ್ಲಿ ಮತ ಬೇಟೆ Read More »

ಉಚಿತ “ಶಕ್ತಿ” ಯೋಜನೆಯಿಂದಾಗಿ ಬಸ್‍ ನಲ್ಲಿ ಫುಲ್ ರಶ್ | ಪುಟ್‍ ಬೋರ್ಡ್‍ನಲ್ಲಿ ಪುಟ್ಟ ಮಗುವಿನೊಂದಿಗೆ ಕುಳಿತ ವೃದ್ಧೆ

ಕೊಪ್ಪಳ: ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ಬಂದಾಗಿನಿಂದ ಕೆ.ಎಸ್‍.ಆರ್‍.ಟಿಸಿ ಬಸ್‍ಗಳಲ್ಲಿ ಜನವೋ ಜನ. ಕುಳಿತುಕೊಳ್ಳಲು ಸೀಟು ಸಿಗುವುದು ಬಿಡಿ ಕಾಲಿಡಲೂ ಜಾಗವಿಲ್ಲದಷ್ಟು ರಶ್. ಇದಕ್ಕೆ ಉದಾಹರಣೆ ಎಂಬಂತೆ ವೃದ್ಧೆಯೊಬ್ಬರು ಬಸ್‍ನಲ್ಲಿ ಜಾಗವಿಲ್ಲದೆ ತನ್ನ ಪುಟ್ಟ ಮೊಮ್ಮಗುವಿನೊಂದಿಗೆ ಬಸ್‍ನ ಫುಟ್ ಬೋರ್ಡ್‍ನಲ್ಲಿ ಕುಳಿತು ಪ್ರಯಾಣಿಸಿದ ಘಟನೆ ನಡೆದಿದೆ. ಕೊಪ್ಪಳದಲ್ಲಿ ಈ ಘಟನೆ ನಡೆದಿದ್ದು ಬಹುತೇಕ ಬಸ್ ಪ್ರಯಾಣಿಕರಿಂದ ಕಿಕ್ಕಿರಿದು ತುಂಬುತ್ತಿದೆ. ಬೇರೆ ಮಾರ್ಗವಿಲ್ಲದೇ ವೃದ್ಧೆ ತನ್ನ ಮೊಮ್ಮಗುವನ್ನು ಕೈಯಲ್ಲಿ ಎತ್ತಿಕೊಂಡು ಬಸ್ ನ ಪುಟ್

ಉಚಿತ “ಶಕ್ತಿ” ಯೋಜನೆಯಿಂದಾಗಿ ಬಸ್‍ ನಲ್ಲಿ ಫುಲ್ ರಶ್ | ಪುಟ್‍ ಬೋರ್ಡ್‍ನಲ್ಲಿ ಪುಟ್ಟ ಮಗುವಿನೊಂದಿಗೆ ಕುಳಿತ ವೃದ್ಧೆ Read More »

ಪಡ್ನೂರು ಗ್ರಾಮದಲ್ಲಿ ಔಷಧೀಯ ಗಿಡ ನೆಡುವ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಪಡ್ನೂರು ಗ್ರಾಮದಲ್ಲಿ ಗ್ರಾಮ ವಿಕಾಸದ ಗ್ರಾಮಸ್ಥರನ್ನು ಸೇರಿಸಿಕೊಂಡು ದೈವಸ್ಥಾನ ಹಾಗೂ ಔಷಧಿ ವನದಲ್ಲಿ ಔಷಧೀಯ ಗಿಡಗಳನ್ನು ನೆಡಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಈ ವರ್ಷದ ಕಾರ್ಯಕ್ರಮ ವಿವೇಕಸಂಜೀವಿನಿಯ ಅಡಿಯಲ್ಲಿ ಪಡ್ನೂರು ಗ್ರಾಮದಲ್ಲಿ ಗ್ರಾಮ ವಿಕಾಸದ ಗ್ರಾಮಸ್ಥರನ್ನು ಸೇರಿಸಿಕೊಂಡು ಔಷಧೀಯ ಗಿಡಗಳನ್ನು ರುದ್ರಾಕ್ಷಿ ನೇತ್ರಾಂಡಿ ದೈವಸ್ಥಾನದ ಸುತ್ತಲೂ ಮತ್ತು ಪಡ್ನೂರಿನ  ಔಷಧಿ ವನದಲ್ಲೂ ನೆಡಲಾಯಿತು. ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ, ಸದಸ್ಯ ರವಿ ಮುಂಗ್ಲಿಮನೆ, ವಿದ್ಯಾವರ್ಧಕ

ಪಡ್ನೂರು ಗ್ರಾಮದಲ್ಲಿ ಔಷಧೀಯ ಗಿಡ ನೆಡುವ ಕಾರ್ಯಕ್ರಮ Read More »

ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಹಾಗೂ ಗ್ರಾಮ ವಿಕಾಸ ಯೋಜನೆಯಡಿ “ವಿವೇಕ ಸಂಜೀವಿನಿ” ‘ಗಿಡ ನೆಡುವ ಹಾಗೂ ನಾಟಿ ವೈದ್ಯರಿಗೆ  ಗೌರವಾರ್ಪಣೆ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಹಾಗೂ ಗ್ರಾಮ ವಿಕಾಸ ಯೋಜನೆಯಡಿ “ವಿವೇಕ ಸಂಜೀವಿನಿ” ‘ಗಿಡ ನೆಡುವ ಹಾಗೂ ನಾಟಿ ವೈದ್ಯರಿಗೆ  ಗೌರವಾರ್ಪಣೆ’ ಕಾರ್ಯಕ್ರಮ ಕುಂಜೂರು ಹಿ. ಪ್ರಾ. ಶಾಲೆಯಲ್ಲಿ ನಡೆಯಿತು. ನಾಟಿ ವೈದ್ಯ ಮಹಾಲಿಂಗ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ನಾಟಿ ವೈದ್ಯ ಪದ್ಧತಿಯ ಅನುಕೂಲತೆಯ ಬಗ್ಗೆ ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಜೂರು ಶಾಲಾ ಮುಖ್ಯ ಶಿಕ್ಷಕಿ ಇಂದಿರಾ. ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ,  ಗಿಡಮರಗಳು ಭೂಮಿಯ ಸಂರಕ್ಷಣೆಯನ್ನು ಮಾಡುತ್ತವೆ

ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಹಾಗೂ ಗ್ರಾಮ ವಿಕಾಸ ಯೋಜನೆಯಡಿ “ವಿವೇಕ ಸಂಜೀವಿನಿ” ‘ಗಿಡ ನೆಡುವ ಹಾಗೂ ನಾಟಿ ವೈದ್ಯರಿಗೆ  ಗೌರವಾರ್ಪಣೆ ಕಾರ್ಯಕ್ರಮ Read More »

ಪ್ರತಿಷ್ಠಿತ ವಿದ್ಯಾಸಂಸ್ಥೆಗೆ ಉಪನ್ಯಾಸಕರು ಬೇಕಾಗಿದ್ದಾರೆ

ಪುತ್ತೂರು: ಪ್ರತಿಷ್ಠಿತ ವಿದ್ಯಾಸಂಸ್ಥೆಗೆ ಎಂ.ಎಸ್ಸಿ ಬಯೋಲಜಿ ಅಥವಾ ಬಿ.ಎಸ್ಸಿ, ಬಿಎಡ್ (ಬಿಝೆಡ್ ಸಿ) ವಿದ್ಯಾರ್ಹತೆ ಹೊಂದಿರುವ ಮಹಿಳೆ/ಪುರುಷ ಉಪನ್ಯಾಸಕರು ಬೇಕಾಗಿದ್ದಾರೆ. ಆಸಕ್ತ ಅಭ್ಯರ್ಥಿಗಳು “ಪ್ರೇರಣಾ”, ಪ್ರಥಮ ಮಹಡಿ, ಪ್ರಭು ಬಿಲ್ಡಿಂಗ್, ಅರುಣಾ ಥಿಯೇಟರ್ ಎದುರು, ಕೆನರಾ ಬ್ಯಾಂಕ್ ಬಳಿ ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ : ಮೊ: 8904877721, 7204977721, 08251-200721

ಪ್ರತಿಷ್ಠಿತ ವಿದ್ಯಾಸಂಸ್ಥೆಗೆ ಉಪನ್ಯಾಸಕರು ಬೇಕಾಗಿದ್ದಾರೆ Read More »

ಅಧಿಕ ಶ್ರಾವಣ ಮಾಸದ ಅಮವಾಸ್ಯೆ | ಆಚರಣೆಯಲ್ಲಿ ಗೊಂದಲ | ಯಾವಾಗ ಆಚರಿಸಬೇಕು –ಇಲ್ಲಿದೆ ಡಿಟೈಲ್ಸ್

ಪುತ್ತೂರು: ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ ಬರಲಿದೆ. ಒಂದು ಜುಲೈ 17 ಮತ್ತೊಂದು ಆಗಸ್ಟ್ 16. ಮೊದಲನೆಯದ್ದು ಆಷಾಢಮಾಸದ ಅಮಾವಾಸ್ಯೆ. ಎರಡನೆಯದ್ದು ಅಧಿಕ ಶ್ರಾವಣಮಾಸದ ಅಮಾವಾಸ್ಯೆ. ಹಾಗಿರುವಾಗ ಯಾವ ಅಮಾವಾಸ್ಯೆಯನ್ನು ಆಟಿಅಮಾವಾಸ್ಯೆ ಎಂದು ಆಚರಿಸಬೇಕೆಂಬ ಗೊಂದಲ ಹಲವರಿಗೆ ಇದೆ.  ಪ್ರಸ್ತುತ ಆಟಿ ಅಮಾವಾಸ್ಯೆ ಎನ್ನುವ ದಿನವನ್ನು ಶ್ರದ್ಧೆಯಿಂದ ಆಚರಿಸುವ ಕ್ರಮ ಪ್ರಾದೇಶಿಕವಾದದ್ದು. ನಮ್ಮ ಊರಲ್ಲಿ ಇರುವಂತಹ ಕ್ರಮ.   ಇಂತಹ ಸಂದರ್ಭದಲ್ಲಿ ಕೆಲವು ಹಬ್ಬಗಳನ್ನು ಎರಡೂ ದಿನಗಳಲ್ಲಿ ಆಚರಿಸುವ  ಕ್ರಮ ಇದೆ . ಆದರೆ ಅಟಿ ಅಮಾವಾಸ್ಯೆಯ

ಅಧಿಕ ಶ್ರಾವಣ ಮಾಸದ ಅಮವಾಸ್ಯೆ | ಆಚರಣೆಯಲ್ಲಿ ಗೊಂದಲ | ಯಾವಾಗ ಆಚರಿಸಬೇಕು –ಇಲ್ಲಿದೆ ಡಿಟೈಲ್ಸ್ Read More »

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಹುನಿರೀಕ್ಷಿತ ಚಂದ್ರಯಾನ-3 ರ ಉಡಾವಣೆ | ದಿನಾಂಕ ಪ್ರಕಟ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಹು ನಿರೀಕ್ಷಿತ ಚಂದ್ರಯಾನ-3ರ ಉಡಾವಣೆ ದಿನಾಂಕ ಪ್ರಕಟಿಸಿದ್ದು, ಚಂದ್ರಯಾನ-3ನ್ನು ಜು. 14 ರಂದು ಮಧ್ಯಾಹ್ನ 2:35 ಕ್ಕೆ ಉಡಾವಣೆ ಮಾಡುವುದಾಗಿ ಇಸ್ರೋ ಗುರುವಾರ ಘೋಷಿಸಿದೆ. ಈ ಹಿಂದೆ ಚಂದ್ರಯಾನ 3 ನ್ನು ಚಂದ್ರನ ಮೇಲ್ಮೈಗೆ ಕಳುಹಿಸಲು ಜುಲೈ 12 ಮತ್ತು 19 ರ ನಡುವೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಇಸ್ರೋ ವಿಜ್ಞಾನಿಗಳ ಸಂಪೂರ್ಣ ಗಮನವು ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ರ ಸುರಕ್ಷಿತ ಲ್ಯಾಂಡಿಂಗ್ ಮಾಡುವುದರ ಮೇಲಿದೆ. ಚಂದ್ರಯಾನ-3 ಮಿಷನ್ ಅಡಿಯಲ್ಲಿ, ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಹುನಿರೀಕ್ಷಿತ ಚಂದ್ರಯಾನ-3 ರ ಉಡಾವಣೆ | ದಿನಾಂಕ ಪ್ರಕಟ Read More »

error: Content is protected !!
Scroll to Top