ಬೆಂಗಳೂರು ತುಳುಕೂಟದಿಂದ ಪುದ್ವಾರ್ ವಣಸ್ದ ಗಮ್ಮತ್ತ್, | ಶಾಸಕರಿಗೆ ಸನ್ಮಾನ

ಪುತ್ತೂರು: ಬೆಂಗಳೂರು ತುಳುಕೂಟದ ವತಿಯಿಂದ ಬೆಂಗಳೂರು ಅತ್ತಿಗುಪ್ಪೆ ಬಂಟರಭವನದಲ್ಲಿ ನಡೆದ ಪುದ್ವಾರ್ ವಣಸ್ದ ಗಮ್ಮತ್ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ತುಳುಕೂಟದ ವತಿಯಿಂದ ಸನ್ಮಾನಿಸಲಾಯಿತು. ಹೊಸ ಅಕ್ಕಿ ಊಟ ಸವಿದು ಪುದ್ವಾರ್ ಕಾರ್ಯಕ್ರಮದಲ್ಲಿ ಜಿಲ್ಲೆಯ ತುಳು ಬಾಂಧವರು ಪುದ್ವಾರ್ ಆಚರಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ತುಳುಕೂಟದ ಅಧ್ಯಕ್ಷ ರಾಜೇಂದ್ರ ಕುಮಾರ್, ತುಳುಕೂಟದ ಪ್ರಮುಖರಾದ ಸುಂದರ್‌ರಾಜ್ ರೈ, ರವೀಂದ್ರನಾಥ ಮಾರ್ಲ, ಅಜಿತ್ ಹೆಗ್ಡೆ ಜಿ, ಸಹಿತಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಬೆಂಗಳೂರು ತುಳುಕೂಟದಿಂದ ಪುದ್ವಾರ್ ವಣಸ್ದ ಗಮ್ಮತ್ತ್, | ಶಾಸಕರಿಗೆ ಸನ್ಮಾನ Read More »

ಹಿಟ್ ಆಂಡ್ ರನ್ : ಸ್ಕೂಟರ್ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರು | ಒಳಮೊಗ್ರು ಗ್ರಾಪಂ ಸದಸ್ಯರಿಬ್ಬರು ‌ಆಸ್ಪತ್ರೆಗೆ ದಾಖಲು

ಪುತ್ತೂರು: ಆಕ್ಟಿವಾ ಸ್ಕೂಟರಿಗೆ 800 ಕಾರು ಡಿಕ್ಕಿಯಾಗಿದ್ದು,ಡಿಕ್ಕಿ ಹೊಡೆದ ಕಾರು ಎಸ್ಕೇಪ್ ಆಗಿದ್ದು ಸ್ಕೂಟರ್‌ನಲ್ಲಿ ತೆಳುತ್ತಿದ್ದ ಗ್ರಾಪಂ ಸದಸ್ಯರಿಬ್ಬರಿಗೆ ಗಾಯಗಳಾಗಿವೆ. ಒಳಮೊಗ್ರು ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ ಹಾಗೂ ಚಿತ್ರ ರವರು ಆಕ್ಟಿವಾ ಸ್ಕೂಟರಿನಲ್ಲಿ ತೆರಳುವಾಗ ಕುಂಬ್ರ ಸಮೀಪ ಕಾರು ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಸ್ಕೂಟರ್ ಪಲ್ಟಿಯಾಗಿದೆ. ಕಾರು ಚಾಲಕ ಕಾರನ್ನು‌ ನಿಲ್ಲಿಸದೆ ಎಸ್ಕೇಪ್ ಆಗಿದ್ದಾನೆ. ಗಾಯಾಳುಗಳಿಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಿಟ್ ಆಂಡ್ ರನ್ : ಸ್ಕೂಟರ್ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರು | ಒಳಮೊಗ್ರು ಗ್ರಾಪಂ ಸದಸ್ಯರಿಬ್ಬರು ‌ಆಸ್ಪತ್ರೆಗೆ ದಾಖಲು Read More »

ಮರೀಲ್ ನಿವಾಸಿ ಯತೀಶ್ ನಿಧನ

ಪುತ್ತೂರು: ಇಲ್ಲಿಯ ಮರೀಲ್ ನಿವಾಸಿ ಯತೀಶ್ (31) ನಿಧನರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಮರೀಲ್ ನಿವಾಸಿ ಯತೀಶ್ ನಿಧನ Read More »

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಬೀದಿ ನಾಟಕ, ಜಾಥಾ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ, ಎನ್‌.ಸಿ.ಸಿ.ಯ ಭೂದಳ ಮತ್ತು ನೌಕಾದಳ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ಇಕೋ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಭಾರತ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆ ನಮ್ಮ ಮನೆ ಪರಿಸರ ಗ್ರಾಮದಿಂದ ಪ್ರಾರಂಭವಾಗಬೇಕು. ಪರಿಸರವನ್ನು ಸ್ವಚ್ಛವಾಗಿರಿಸುವುದು ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಿದೆ. ಕೇಂದ್ರ ಸರಕಾರವು ಸ್ವಚ್ಛತೆಗೆ ಹಲವು ಮಾನದಂಡಗಳನ್ನು ನಿಯೋಜಿಸಿದೆ. ಅವುಗಳನ್ನೆಲ್ಲ ಪಾಲಿಸಿದ್ದೇ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಬೀದಿ ನಾಟಕ, ಜಾಥಾ Read More »

ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಮಹಾಸಭೆ | ಸದಸ್ಯರಿಂದ ರಕ್ತದಾನ

ಪುತ್ತೂರು: ಪುತ್ತೂರು ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಮಹಾಸಭೆ ಭಾನುವಾರ ಅನುರಾಗ ವಠಾರದಲ್ಲಿ ನಡೆಯಿತು. ಸಭೆಯ ಬಳಿಕ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನಲ್ಲಿ ಸಂಘದ ಹಲವಾರು ಸದಸ್ಯರಿಂದ ರಕ್ತದಾನ ನಡೆಯಿತು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ನಾಗ ಸನ್ನಿಧಿ, ಅಯ್ಯಪ್ಪ ಸನ್ನಿಧಿ ಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಮುಕ್ವೆ, ಕೋಶಾಧಿಕಾರಿ

ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಮಹಾಸಭೆ | ಸದಸ್ಯರಿಂದ ರಕ್ತದಾನ Read More »

ಅ.7: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಕೆ.ಎಂ.ಸಿ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಅ.7 ಶನಿವಾರ ಟ್ರಸ್ಟ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಾಮಾನ್ಯ ರೋಗ, ಕಣ್ಣು, ಗ್ಯಾಸ್ಟ್ರೋಂಟಾರಲಾಜಿ, ಹೃದಯ ರೋಗ, ಎಲುಬು, ಕೀಲು ರೋಗ, ಮೂತ್ರಶಾಸ್ತ್ರ ವಿಭಾಗ ಚಿಕಿತ್ಸೆ ಲಭ್ಯವಿದೆ. ಅಲ್ಲದೆ ಬಿ.ಪಿ ಮತ್ತು ಮಧುಮೇಹ ತಪಾಸಣೆ, ಅಗತ್ಯ ಇರುವವರಿಗೆ ಇ.ಸಿ.ಜಿ ಪರೀಕ್ಷೆ, ಔಷಧ ವಿತರಣೆ, ಓದುವ ಕನ್ನಡಕ ವಿತರಣೆ ಉಚಿತವಾಗಿ ಲಭ್ಯವಿದೆ. ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆ.ಎಂ.ಸಿ ಆಸ್ಪತ್ರೆಯ

ಅ.7: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ Read More »

ಶೀಘ್ರದಲ್ಲಿ ಆರಂಭಗೊಳ್ಳಲಿದೆ ಭಗವದ್ಗೀತೆ ಶ್ಲೋಕಗಳ ತರಗತಿ

ಪುತ್ತೂರು: ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಸ್ಪಷ್ಟವಾಗಿ ಓದಲು ಕಲಿಸುವ ತರಗತಿಗಳನ್ನು ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ತರಗತಿಯ ಅವಧಿ ಒಂದು ಗಂಟೆಯಾಗಿದ್ದು, 140 ದಿವಸಗಳಲ್ಲಿ ನಿರಂತರವಾಗಿ, ನಿಯಮಿತವಾಗಿ ಸೇರಬೇಕಾದ್ದು ಕಡ್ಡಾಯ. ಹೊಸ ತರಗತಿಗಳ ಸಮಯ ಈ ಕೆಳಗಿನಂತಿದೆ. ಮಧ್ಯಾಹ್ನ 3 ಗಂಟೆ , ಸಂಜೆ 6.30 ಹಾಗೂ ರಾತ್ರಿ 7.30, 8 ಹಾಗೂ 8.30. ಭಗವದ್ಗೀತೆ ಕಲಿಯಲು ಆಸಕ್ತಿ ಇರುವವರು ಈ ಕೆಳಗಿನ ಗೂಗಲ್ ಫಾರ್ಮನ್ನು ಅ.2, 2023ರ ಒಳಗೆ ಭರ್ತಿ ಮಾಡಿ ಕಳಿಸಬೇಕು. ಗೂಗಲ್ ಫಾರ್ಮ್ ಭರ್ತಿ ಮಾಡಿದವರೆಲ್ಲರಿಗೂ

ಶೀಘ್ರದಲ್ಲಿ ಆರಂಭಗೊಳ್ಳಲಿದೆ ಭಗವದ್ಗೀತೆ ಶ್ಲೋಕಗಳ ತರಗತಿ Read More »

ಮತ್ತೆ ದುಬಾರಿಯಾಯ್ತು ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್!!

ಹೊಸದಿಲ್ಲಿ: ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳು ಮತ್ತೆ ತುಟ್ಟಿಯಾಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಭಾನುವಾರ ವಾಣಿಜ್ಯ ಎಲ್ ಪಿಜಿ ಸಿಲಿಂಡರ್‌ ಗಳ ಬೆಲೆಯನ್ನು 209 ರೂ.ಗಳಷ್ಟು ಹೆಚ್ಚಿಸಿವೆ. ಇವು ತಕ್ಷಣದಿಂದಲೇ ಜಾರಿಗೆ ಬರುತ್ತವೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಗಳ ಬೆಲೆಯನ್ನು 158 ರೂ. ಕಡಿತಗೊಳಿಸಿದ ಸುಮಾರು ಒಂದು ತಿಂಗಳ ನಂತರ ಬೆಲೆಯಲ್ಲಿ ಈ ಹೆಚ್ಚಳವಾಗಿದೆ. ಗಮನಾರ್ಹವಾಗಿ, ವಾಣಿಜ್ಯ ಮತ್ತು ಗೃಹಬಳಕೆಯ ಎಲ್ ಪಿಜಿ (ದ್ರವೀಕೃತ ಪೆಟ್ರೋಲಿಯಂ

ಮತ್ತೆ ದುಬಾರಿಯಾಯ್ತು ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್!! Read More »

ಫೊಟೋ ಎಡಿಟ್ ಮಾಡಿ ವೈರಲ್: ಠಾಣೆಗೆ ದೂರು

ಪುತ್ತೂರು: ಫೊಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವ ವಿಚಾರದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪನಡ್ಕ ನಿವಾಸಿ ನವೀನ್ ರೈ ಕೈಕಾರ ಎಂಬವರು ದಿನೇಶ್ ಪುತ್ತೂರು ಎಂಬವರ ವಿರುದ್ಧ ದೂರು ನೀಡಿದ್ದಾರೆ. ತನ್ನ ಫೊಟೋದ ಜೊತೆ ಇನ್ನೊಂದು ಹುಡುಗಿಯ ಫೊಟೋವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಈ ಫೊಟೋವನ್ನು ಪುತ್ತಿಲ ಪರಿವಾರ – 1 ವಾಟ್ಸಆ್ಯಪ್ ಗ್ರೂಪಿನಲ್ಲಿ ಹರಿಯಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫೊಟೋ ಎಡಿಟ್ ಮಾಡಿ ವೈರಲ್: ಠಾಣೆಗೆ ದೂರು Read More »

ಸಾವಯವ ಕೃಷಿ ತರಬೇತಿ, ಪ್ರಾತ್ಯಕ್ಷಿಕೆ

ಕೆದಿಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ವಿಟ್ಲ ಪೆರ್ನೆ ವಲಯದ ಕೆದಿಲ ಎ ಹಾಗೂ ಬಿ ಒಕ್ಕೂಟದ ವತಿಯಿಂದ “ಸಾವಯವ ಕೃಷಿ  ತರಬೇತಿ ಮತ್ತು ಪ್ರಾತ್ಯಕ್ಷಿಕೆ ಪ್ರಗತಿಪರ ಕೃಷಿಕ ಬಾಬು ಮೂಲ್ಯರ ಮನೆಯಲ್ಲಿ ಅ.1 ಭಾನುವಾರ ನಡೆಯಿತು. ಕಜೆ ಬಾಬು ಮೂಲ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಜಗದೀಶ್ ಪ್ರಾರ್ಥನೆ ಹಾಡಿದರು. ಸೇವಾಪ್ರತಿನಿಧಿ ಶಾರದ ಸ್ವಾಗತಿಸಿ,

ಸಾವಯವ ಕೃಷಿ ತರಬೇತಿ, ಪ್ರಾತ್ಯಕ್ಷಿಕೆ Read More »

error: Content is protected !!
Scroll to Top