ಪುತ್ತೂರು

ಫೆ.25 : 6ನೇ ಕರ್ನಾಟಕ ಗಡಿನಾಡ ಸಮ್ಮೇಳನ |  ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು : ಫೆಬ್ರವರಿ 25 ರಂದು ಒಡ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ 6ನೇ ಕರ್ನಾಟಕ ಗಡಿನಾಡ ಸಮ್ಮೇಳನ 2023ರ ಆಮಂತ್ರಣ ಪತ್ರಿಕೆ ವಡ್ಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು. ಕರಾವಳಿಯ ಪ್ರತಿಷ್ಠಿತ ಗಡಿನಾಡ ಧ್ವನಿ ಮಾಸ ಪತ್ರಿಕೆ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸಹಕಾರದೊಂದಿಗೆ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ […]

ಫೆ.25 : 6ನೇ ಕರ್ನಾಟಕ ಗಡಿನಾಡ ಸಮ್ಮೇಳನ |  ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಫೆ. 19: 510 ಕೆಜಿಯ ಲೆವೆಲ್ ಮಾದರಿಯ ಹಗ್ಗಜಗ್ಗಾಟ

ಪುತ್ತೂರು: ಸರ್ವೆ ಹಿಂದು ಜಾಗರಣ ವೇದಿಕೆಯ ರಕ್ತೇಶ್ವರಿ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಫೆ. 19ರಂದು ಮಧ್ಯಾಹ್ನ 2 ಗಂಟೆಗೆ ಸರ್ವೆ ರಕ್ತೇಶ‍್ವರಿ ಕಟ್ಟೆಯಲ್ಲಿ ಸರ್ವೆಯಲ್ಲಿ ಇದೇ ಮೊದಲ ಬಾರಿಗೆ 510 ಕೆಜಿ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. 7 ಜನರ ತಂಡದಲ್ಲಿ ನಡೆಯುವ ಈ ಹಗ್ಗಜಗ್ಗಾಟ ಸ್ಪರ್ಧೆಯೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದೆ. ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ 5555 ರೂ. ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 3333 ರೂ. ಹಾಗೂ ಟ್ರೋಫಿ, ತೃತೀಯ

ಫೆ. 19: 510 ಕೆಜಿಯ ಲೆವೆಲ್ ಮಾದರಿಯ ಹಗ್ಗಜಗ್ಗಾಟ Read More »

ಫೆ.19 : ಡಾ.ಶ್ರೀಧರ ಭಂಡಾರಿ “ಯಕ್ಷ ದೇಗುಲ” ಪ್ರಶಸ್ತಿ ಪ್ರಧಾನ ಸಮಾರಂಭ

ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ಅಭಿಮನ್ಯು ಕೀರ್ತಿಶೇಷ ಸ್ವರ್ಗೀಯ ಪುತ್ತೂರು ಡಾ.ಶ್ರೀಧರ ಭಂಡಾರಿ ಸಂಸ್ಮರಣಾ ಕಾರ್ಯಕ್ರಮ “ಡಾ.ಶ್ರೀಧರ ಭಂಡಾರಿ “ಯಕ್ಷದೇಗುಲ” ಪ್ರಶಸ್ತಿ ಪ್ರದಾನ ಸಮಾರಂಭ ಫೆ.19 ಭಾನುವಾರ ಸಂಜೆ 5 ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ. ಕಾಸರಗೋಡು ಶ್ರೀ ಎಡನೀರು ಮಠದ ಜಗದ್ಗುರು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ

ಫೆ.19 : ಡಾ.ಶ್ರೀಧರ ಭಂಡಾರಿ “ಯಕ್ಷ ದೇಗುಲ” ಪ್ರಶಸ್ತಿ ಪ್ರಧಾನ ಸಮಾರಂಭ Read More »

ಚುನಾವಣಾ ತಯಾರಿ ಬಗ್ಗೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತು

ಪುತ್ತೂರು: ಚುನಾವಣಾ ದಿನ ಹತ್ತಿರ ಬರುತ್ತಿದೆ. ಜನಪ್ರತಿನಿಧಿಗಳ ತಯಾರಿಯೂ ಜೋರಾಗಿಯೇ ಇದೆ. ಕಾಂಗ್ರೆಸ್ ಪಾಳಯದಲ್ಲೂ ತಯಾರಿಗಳು ಎಗ್ಗಿಲ್ಲದೇ ನಡೆಯುತ್ತಿವೆ. ಈಗಾಗಲೇ 13-14 ಹೆಸರುಗಳು ಮುನ್ನೆಲೆಗೂ ಬಂದಿವೆ. ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ನಾಯಕಿ. ಈ ಹಿಂದೆ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ ಅನುಭವಿ. ಸಾಕಷ್ಟು ಬಾರಿ ಪುತ್ತೂರಿನ ಶಾಸಕ ಸ್ಥಾನದ ಟಿಕೇಟ್ ನೀಡಬೇಕೆಂದು ಬೇಡಿಕೆಯನ್ನು ಮುಂದಿಟ್ಟಿದ್ದರು. ಇದಕ್ಕಾಗಿ ನಾಯಕರ ಜೊತೆ ಮಾತುಕತೆ ನಡೆಸಿದ್ದು ಮಾತ್ರವಲ್ಲ, ತಳಮಟ್ಟದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಸಾಕಷ್ಟು ಓಡಾಟಗಳನ್ನು

ಚುನಾವಣಾ ತಯಾರಿ ಬಗ್ಗೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತು Read More »

ಅಂಚೆ ಇಲಾಖೆ ಪುತ್ತೂರು  ವಿಭಾಗದಿಂದ “ಜೈನ ತೀರ್ಥಂಕರರ ಮೋಕ್ಷ ಭೂಮಿ” ಚಿತ್ರಿತ ಪೋಸ್ಟ್ ಕಾರ್ಡ್ ಅನಾವರಣ

ಪುತ್ತೂರು : ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಶ್ರೀ ಕ್ಷೇತ್ರ ವರಂಗ ಜೈನ್ ಮಠ ಇವರ ಸಹಯೋಗದೊಂದಿಗೆ “ಜೈನ ತೀರ್ಥಂಕರರ ಮೋಕ್ಷ ಭೂಮಿ” ಎಂಬ ಚಿತ್ರಿತ ಪೋಸ್ಟ್ ಕಾರ್ಡ್ ನ್ನು ಇತ್ತೀಚೆಗೆ ಹಿರಿಯ ಅಂಚೆ ಅಧೀಕ್ಷಕ ಡಾ. ಏಂಜಲ್ ರಾಜ್ ಅವರ ಮೂಲಕ ಅನಾವರಣಗೊಳಿಸಿತು. ಈ ಚಿತ್ರಿತ ಪೋಸ್ಟ್ ಕಾರ್ಡುಗಳು ಜೈನ ಧರ್ಮದ ಎಲ್ಲಾ 24 ಜೈನ ತೀರ್ಥಂಕರರ ಹೆಸರನ್ನು ಹೊಂದಿದ್ದು, ಅವರು ಮೋಕ್ಷಹೊಂದಿದ ಸ್ಥಳದ ಚಿತ್ರವನ್ನೊಳಗೊಂಡಿದೆ. ಈ ಅಂಚೆ ಕಾರ್ಡಿನಲ್ಲಿ ಕ್ಯೂಆರ್ ಕೋಡ್ ಲಭ್ಯವಿದ್ದು,

ಅಂಚೆ ಇಲಾಖೆ ಪುತ್ತೂರು  ವಿಭಾಗದಿಂದ “ಜೈನ ತೀರ್ಥಂಕರರ ಮೋಕ್ಷ ಭೂಮಿ” ಚಿತ್ರಿತ ಪೋಸ್ಟ್ ಕಾರ್ಡ್ ಅನಾವರಣ Read More »

ಫೆ.18 : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶತರುದ್ರಾಭಿಷೇಕ

ಪುತ್ತೂರು : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ಫೆ.18 ಶನಿವಾರ ನಡೆಯಲಿರುವುದು. ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಪುಣ್ಯ ಕಾರ್ಯದ ಅಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ಶನಿಪ್ರದೋಷ ಪ್ರಯುಕ್ತ ಸಾಮೂಹಿಕ ಶನೈಶ್ಚರ ಪೂಜೆಯೂ ಜರಗಲಿದೆ. ಸೇವೆ ಮಾಡಲಿಚ್ಛಿಸುವವರು ಶ್ರೀ ಸಂಸ್ಥಾನದ ಸೇವಾ ವಿಭಾಗದಲ್ಲಿ ಹೆಸರು ನೋಂದಾಯಿಸಬಹುದು ಎಂದು ಸಂಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.18 : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶತರುದ್ರಾಭಿಷೇಕ Read More »

ಬಾಂಧವ್ಯ ಟ್ರೋಫಿ-2023 ಮುಂದೂಡಿಕೆ

ಪುತ್ತೂರು: ಫೆ. 26ರಂದು ನೆಹರೂನಗರದ ವಿವೇಕಾನಂದ ಕಾಲೇಜು ಮೈದಾನದಲ್ಲಿ ಪುತ್ತೂರು ಬಾಂಧವ್ಯ ಫ್ರೆಂಡ್ಸ್ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾಟ “ಬಾಂಧವ್ಯ ಟ್ರೋಫಿ-2023” ನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಕಳೆದ 7 ವರ್ಷಗಳಿಂದ ಪುತ್ತೂರಿನಲ್ಲಿ ನಡೆಸುತ್ತಿದ್ದ ಬಾಂಧವ್ಯ ಟ್ರೋಫಿ, ಇಲಾಖಾ ಮಟ್ಟದ ಪಂದ್ಯವಾಗಿ ಜನಮನ್ನಣೆ ಪಡೆದಿದೆ. ಹೆಸರಿನಿಂದ ಇದು ನಿಜಾರ್ಥದ ಬಾಂಧವ್ಯ ಟ್ರೋಫಿಯಾಗಿ ಗುರುತಿಸಿಕೊಂಡಿದೆ. ಇದೀಗ ಪಂದ್ಯವನ್ನು ಮುಂದೂಡಿದ್ದು, ಮುಂದಿನ ದಿನಾಂಕ ಇನ್ನು ಖಚಿತ ಪಡಿಸಿಲ್ಲ. ಅತೀ ಶೀಘ್ರದಲ್ಲಿ ಪಂದ್ಯದ ದಿನವನ್ನು ತಿಳಿಸಲಾಗುವುದು. ಎಲ್ಲರೂ ಸಹಕರಿಸಬೇಕೆಂದು ಬಾಂಧವ್ಯ ಫ್ರೆಂಡ್ಸ್ ಪ್ರಕಟಣೆ

ಬಾಂಧವ್ಯ ಟ್ರೋಫಿ-2023 ಮುಂದೂಡಿಕೆ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಮರದ ಮುಹೂರ್ತ

ಪುತ್ತೂರು : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಪ್ರಯುಕ್ತ ಮರದ ಮುಹೂರ್ತ ಮಚ್ಚಿಮಲೆ ರಾಮಭಟ್ ಅವರ ಜಾಗದಲ್ಲಿ ನೆರವೇರಿತು. ಕಿರಾಲುಬೋಗಿ ಮರಕ್ಕೆ ಪೂಜೆಗೈದು ಪ್ರಾರ್ಥಿಸಿ, ಮರದ ಶಿಲ್ಪಿ ಮೂಲಕ ಕೊಡಲಿ ಹಾಕುವ ಮುಹೂರ್ತ ನಡೆಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್‍ ಆರ್ಯಾಪು, ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್‍ ರಾಧಾಕೃಷ್ಣ ರೈ, ಭಕ್ತಾದಿಗಳು ಪಾಲ್ಗೊಂಡಿದ್ದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಮರದ ಮುಹೂರ್ತ Read More »

ಅಡಿಕೆಯ ಕನಿಷ್ಠ ಆಮದು ದರ ಹೆಚ್ಚಿಸಿದ ಕೇಂದ್ರ: ಕ್ಯಾಂಪ್ಕೊ ಶ್ಲಾಘನೆ

ಪುತ್ತೂರು: ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕೇಂದ್ರ ಸರಕಾರ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಕೇಂದ್ರ ಸರಕಾರದ ಕ್ರಮಕ್ಕೆ ಅಡಿಕೆ ಬೆಳೆಗಾರರ ಹಿತರಕ್ಷಕ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ. ಕೆಲವು ತಿಂಗಳುಗಳಿಂದ ಏರಿಳಿತದ ಮೂಲಕ ಮಾರುಕಟ್ಟೆಯಲ್ಲಿ ಅಡಿಕೆಯ ದರ ಅನಿಶ್ಚಿತತೆಯಿಂದ ಕೂಡಿತ್ತು. ಇದರಿಂದ ರೈತರಲ್ಲಿ ಹತಾಶೆಯ ಭಾವನೆ ಮೂಡಿಸಿತ್ತು. ಕೇಂದ್ರದ ಕ್ರಮದಿಂದಾಗಿ ಕಳಪೆ

ಅಡಿಕೆಯ ಕನಿಷ್ಠ ಆಮದು ದರ ಹೆಚ್ಚಿಸಿದ ಕೇಂದ್ರ: ಕ್ಯಾಂಪ್ಕೊ ಶ್ಲಾಘನೆ Read More »

ಅಫಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳೀಕೃಷ್ಣ ಭಟ್ ಮೃತದೇಹದ ಮೆರವಣಿಗೆ, ಅಂತಿಮ ದರ್ಶನ | ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಗೆಳೆಯನಿಗೆ ‘ಅಕ್ಷರ ನಮನ’

ಪುತ್ತೂರು: ಬೆಟ್ಟಂಪಾಡಿ ಮಂಡಲದ ನಿಡ್ಪಳ್ಳಿಯ ಸಕ್ರೀಯ ಬಿಜೆಪಿ ಕಾರ್ಯಕರ್ತ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುರಳೀಕೃಷ್ಣ ಭಟ್ ಮುಂಡೂರು ಅವರ ಮೃತದೇಹದ ಅಂತಿಮಯಾತ್ರೆ ಹಾಗೂ ಅಂತಿಮ ದರ್ಶನ ಬುಧವಾರ ಮಧ್ಯಾಹ್ನ ನಡೆಯಿತು. ವಾಹನದ ಮೂಲಕ ಸಾಗಿಬಂದ ಅಂತಿಮ ಯಾತ್ರೆಯಲ್ಲಿ ಹಲವಾರು ಮಂದಿ ಜೊತೆಗೂಡಿದರು. ಬಳಿಕ ಅಂತಿಮ ದರ್ಶನವನ್ನು ವೀಕ್ಷಿಸಿದ ಮಂದಿಯ ಕಣ್ಣಾಲಿಗಳು ತುಂಬಿ ಬಂದವು. ಸಂಟ್ಯಾರಿನ ಬಳಕ್ಕದಲ್ಲಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಮುರಳೀಕೃಷ್ಣ ಭಟ್ ಅವರು ಕೊನೆಯುಸಿರೆಳೆದಿದ್ದರು. ಮುರಳೀಕೃಷ್ಣ ಭಟ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ

ಅಫಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳೀಕೃಷ್ಣ ಭಟ್ ಮೃತದೇಹದ ಮೆರವಣಿಗೆ, ಅಂತಿಮ ದರ್ಶನ | ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಗೆಳೆಯನಿಗೆ ‘ಅಕ್ಷರ ನಮನ’ Read More »

error: Content is protected !!
Scroll to Top