ಪುತ್ತೂರು

ಬಿಸಿಲಿನ ಧಗೆಯಿಂದ  ಧಗಿಸುತ್ತಿದ್ದ ಭೂಮಿಗೆ ತಂಪೆರೆದ ಮಳೆ

ಪುತ್ತೂರು: ಹಲವಾರು ಸಮಯದ ನಿರೀಕ್ಷೆಯಲ್ಲಿದ್ದ ಪುತ್ತೂರಿನ ಜನತೆಗೆ ಇದೀಗ ವರುಣ ರಾಯ ಮಳೆಯ ಕೃಪೆ ತೋರಿದ್ದಾನೆ. ಕಳೆದ ಸೋಮವಾರ ಪುತ್ತೂರಿನ ಒಡೆಯ ಮಹಾಲಿಂಗೇಶ್ವರ ದೇವರಿಗೆ ಮಳೆಗಾಗಿ ಸೀಯಾಳಭಿಷೇಕ ಮಾಡಲಾಗಿತ್ತು ಅದರ ಫಲವೆಂಬತೆ ಇಂದು ಈಗ ಮಳೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ಮಳೆಯಾಗುವ ಮೂಲಕ ಬಿಸಿಲಿನ ಬೆಗೆಯಿಂದ ಧಗಿಸುತ್ತಿದ್ದ ಭೂಮಿಗೆ ತಂಪಿನ ಸಿಂಚನ ಉಂಟಾಯಿತು.

ಬಿಸಿಲಿನ ಧಗೆಯಿಂದ  ಧಗಿಸುತ್ತಿದ್ದ ಭೂಮಿಗೆ ತಂಪೆರೆದ ಮಳೆ Read More »

ಪಕ್ಷೇತರ ಅಭ್ಯರ್ಥಿ ತಾರಾ ಪ್ರಚಾರಕರನ್ನು ಬಳಸಿ ಜಾಹೀರಾತು ನೀಡಿಕೆ : ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ದೂರು

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರು ಬಿಜೆಪಿ ತಾರಾ ಪ್ರಚಾರಕರನ್ನು  ಬಳಸಿಕೊಂಡು ಕಾನೂನು ಬಾಹಿರ ಪ್ರಚಾರ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದು, ಈ ಕುರಿತು ಬಿಜೆಪಿ ಅಭ್ಯರ್ಥಿ ಏಜೆಂಟ್ ರಾಜೇಶ್ ಬನ್ನೂರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಈಗಾಗಲೇ ತಾರಾ ಪ್ರಚಾರಕರನ್ನು ಬಳಸಿಕೊಳ್ಳುತ್ತಿರುವ ಕುರಿತು  ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಮೇ.6 ರಂದು ಯೋಗಿ ಆದಿತ್ಯನಾಥ ಪುತ್ತೂರಿಗೆ ಆಗಮಿಸಲಿದ್ದು, ಅವರಿಗೆ ಸ್ವಾಗತಿಸುವ ಜಾಹೀರಾತು ನೀಡಿರುವುದು ನಮ್ಮ ಗಮನಕ್ಕೆ ಬಂದಿದ್ದು ಚುನಾವಣಾ

ಪಕ್ಷೇತರ ಅಭ್ಯರ್ಥಿ ತಾರಾ ಪ್ರಚಾರಕರನ್ನು ಬಳಸಿ ಜಾಹೀರಾತು ನೀಡಿಕೆ : ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ದೂರು Read More »

ಗೂಂಡಾಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗದಂತೆ ಪ್ರಜ್ಞಾವಂತ ಮತದಾರರು ಚಿಂತಿಸಬೇಕಾಗಿದೆ : ರವೀಂದ್ರ

ಪುತ್ತೂರು: ದೈವಸ್ಥಾನದ ಹೆಸರು ಹೇಳಿ ಅಮಾಯಕರ ಮೇಲೆ ಹಲ್ಲೆ ಹಿಂದುತ್ವವೇ ? ಹೆಣ್ಣು ಮಕ್ಕಳ ಮೇಲ ಕೊಲೆ ಯತ್ನ ನಡೆಸಿರುವುದು ಹಿಂದುತ್ವ ಆಧಾರದ ಮಹಿಳೆಯರ ರಕ್ಷಣೆಯೇ ? ಇಂತಹಾ ಗೂಂಡಾ ವ್ಯಕ್ತಿಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗದಂತೆ ಪ್ರಜ್ಞಾವಂತ ಮತದಾರರು ಚಿಂತಿಸಬೇಕಾಗಿದೆ ಎಂದು ಮುಂಡೂರು ಗ್ರಾಮದ ಮುಳಾರು ನಿವಾಸಿ ರವೀಂದ್ರ ಅವರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಅವರ ಮೇಲೆ ಕಿಡಿ ಕಾರಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಕೃಷಿಕನಾಗಿದ್ದು, ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯುವ

ಗೂಂಡಾಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗದಂತೆ ಪ್ರಜ್ಞಾವಂತ ಮತದಾರರು ಚಿಂತಿಸಬೇಕಾಗಿದೆ : ರವೀಂದ್ರ Read More »

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕುಂಬ್ರ ದಲಿತ ಕಾಲನಿಗೆ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಒಳಮೊಗ್ರು ಗ್ರಾಮದ ಕುಂಬ್ರ ಶಾಲಾ ಬಳಿಯ ದಲಿತ ಕಾಲನಿಗೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಕ್ತಾರ ಅಮಲ ರಾಮಚಂದ್ರ, ಮುಖಂಡರು, ಕಾರ್ಯಕರ್ತರು, ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕುಂಬ್ರ ದಲಿತ ಕಾಲನಿಗೆ ಭೇಟಿ Read More »

ಶಾಂತಿಗೋಡಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಯಾಚನೆ

ಪುತ್ತೂರು: ಶಾಂತಿಗೋಡು  ಬೂತ್ ವತಿಯಿಂದ  ಬಿಜೆಪಿ  ಅಭ್ಯರ್ಥಿ ಆಶಾ ತಿಮಪ್ಪರ ಪರ  ಮತ ಯಾಚನೆ ನಡೆಯಿತು. ಶಾಂತಿಗೋಡು ಗ್ರಾಮದ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿಕೇಂದ್ರ ಅಧ್ಯಕ್ಷ ಶ್ಯಾಮ್ ಭಟ್, ಬೂತ್ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಉಪಾಧ್ಯಕ್ಷ ದೇವರಾಜ್ ಕಲ್ಕಾರ್, ಯುವ ಮೋರ್ಚಾ ಕಾರ್ಯದರ್ಶಿ ವಿನೋದ್ ಕರ್ಪೂತಮೂಲೆ, ದೇವಪ್ಪ ಓಲಾಡಿ, ಹೊನ್ನಪ್ಪ ಕೈಂಡಾಡಿ, ಶಿವಪ್ರಸಾದ್ ಕೈಂದಾಡಿ, ಸತೀಶ್ ಪರಕಮೆ,  ಪ್ರಸಾದ್ ಕಕ್ವೆ,

ಶಾಂತಿಗೋಡಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಯಾಚನೆ Read More »

ಮೇ 10ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹೆಚ್ಚಿನ ಬಸ್ ಗಳ ಬಳಕೆ | ಮೇ 9 ಹಾಗೂ 10 ರಂದು ಬಸ್ ಗಳ ಓಡಾಟದಲ್ಲಿ ವ್ಯತ್ಯಯ

ಪುತ್ತೂರು : ಮೇ 10 ರಂದು ನಡೆಯುವ ಚುನಾವಣೆ ಹಿನ್ನೆಯಲ್ಲಿ ಪುತ್ತೂರು ಕೆಎಸ್ ಆರ್ ಟಿಸಿ ನಿಗಮದ ಬಸ್ ಗಳನ್ನು ಪುತ್ತೂರು, ಸುಳ್ಯ, ಮಡಿಕೇರಿ, ಬಂಟ್ವಾಳ, ಬೆಳ್ತಂಗಡಿ ಹಾಗೂ ವಿರಾಜಪೇಟೆ ವಿಧಾಸಭಾ ಕ್ಷೇತ್ರದ ಚುನಾವಣೆ ಕಾರ್ಯಕ್ಕಾಗಿ ಬಳಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮೇ 9 ಹಾಗೂ 10 ರಂದು ಬಸ್ ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಎಸ್ ಆರ್ ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಚುನಾವಣೆ ಸಂದರ್ಭ ಪೊಲೀಸ್್ ಬಂದೋಬಸ್ತ್ ಗಾಡಿ ಬಸ್ ಗಳನ್ನು ಬಳಸಲಾಗುತ್ತಿದ್ದು,

ಮೇ 10ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹೆಚ್ಚಿನ ಬಸ್ ಗಳ ಬಳಕೆ | ಮೇ 9 ಹಾಗೂ 10 ರಂದು ಬಸ್ ಗಳ ಓಡಾಟದಲ್ಲಿ ವ್ಯತ್ಯಯ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್

ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ಎನ್ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ ಪ್ರಮುಖ ಆರೋಪಿಗಳಾದ. ತುಫೈಲ್ ಎಂ.ಎಚ್. ಹಾಗೂ ಮೊಹಮ್ಮದ್ ಜಬೀರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಒಟ್ಟು 21 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದಂತಾಗಿದೆ. ಪಿಎಫ್ಐಯ ಸಕ್ರೀಯ ಸದಸ್ಯನಾಗಿದ್ದ ತುಫೈಲ್ ಕೊಡಗು ಮೂಲದವನಾಗಿದ್ದು, ಮಾಸ್ಟರ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ. ಮಿತ್ತೂರಿನಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ Read More »

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ, ರಾಧಾಕೃಷ್ಣ ಭಕ್ತ ನಿಧನ.

ಪುತ್ತೂರು: ಪುತ್ತೂರು ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದಲ್ಲಿ ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಉದ್ಯಮಿ, ಸಂಘಟನಾ ಚತುರ ರಾಧಾಕೃಷ್ಣ ಭಕ್ತ (72) ಗುರುವಾರ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಅಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ರಾಧಕೃಷ್ಣ ಭಕ್ತರು ಧಾರ್ಮಿಕ ಮುಂದಾಳುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಪುತ್ತೂರಿನಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜ್‌ ಸ್ಥಾಪನೆಯ ಮುಖ್ಯ ರೂವಾರಿಯಾಗಿದ್ದರು. ಹಲವು ವರ್ಷಗಳ ಕಾಲ ಪುತ್ತೂರಿನ ಲಕ್ಷ್ಮೀ

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ, ರಾಧಾಕೃಷ್ಣ ಭಕ್ತ ನಿಧನ. Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನ

ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಬುಧವಾರ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ಆಯುಕ್ತಡಾ| ಗಿರಿಧರ ರಾವ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳ ಮೇಲೆಬಹಳ ದೊಡ್ಡ ಸಾಮಾಜಿಕ ಜವಾಬ್ದಾರಿ ಇದೆ. ಮುಂದೆ ಉದ್ಯೋಗ ದೊರಕಿದ ಮೇಲೆ ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳನ್ನೇ ಮಾಡಬೇಕು ಎಂದರು.

ಸಂತ ಫಿಲೋಮಿನಾ ಕಾಲೇಜಿನಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನ Read More »

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಈಶ್ವರಮಂಗಲದ ಬಸಿರಡ್ಕ, ಕೊರಗಜ್ಜ ಕಟ್ಟೆಗೆ ಭೇಟಿ | ಕಾರ್ಯಕರ್ತರ ಜತೆ ಸಂವಾದ

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗುರುವಾರ ಈಶ್ವರಮಂಗಲದ ಬಸಿರಡ್ಕ ಮತ್ತು ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದರು. ಬಳಿಕ ಕಾರ್ಯಕರ್ತರ ಜೊತೆ ಮಾತನಾಡಿ, ಬಿಜೆಪಿ ಸರಕಾರದ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯನ್ನು ಜನರಿಗೆ ಮನದಟ್ಟು ಮಾಡಬೇಕು ಎಂದರು. ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ, ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸಲಿದೆ. ಆದ್ದರಿಂದ ಇದಕ್ಕೆ ಆಸ್ಪದ ನೀಡಬಾರದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಈಶ್ವರಮಂಗಲದ ಬಸಿರಡ್ಕ, ಕೊರಗಜ್ಜ ಕಟ್ಟೆಗೆ ಭೇಟಿ | ಕಾರ್ಯಕರ್ತರ ಜತೆ ಸಂವಾದ Read More »

error: Content is protected !!
Scroll to Top