ಪುತ್ತೂರು

ಜ.22-25: ಪೈಕ ಕರಿಮಜಲಿನಲ್ಲಿ ಗ್ರಾಮ ದೈವಗಳ ನೇಮ

ಪುಣ್ಚತ್ತಾರು: ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ಶ್ರೀ ಅಮ್ಮನವರ ಮತ್ತು ಪರಿವಾರ ದೈವ ಸ್ಥಾನ ಪೈಕ, ಕರಿಮಜಲು, ಪುಣ್ಚತ್ತಾರು ಇಲ್ಲಿ ಜ.22 – ಜ. 25 ರ ವರೆಗೆ ಗ್ರಾಮ ದೈವಗಳ ನೇಮ ನಡೆಯಲಿದೆ. ದಿನಾಂಕ : 22-01-2026ನೇ ಗುರುವಾರ ರಾತ್ರಿ ಗಂಟೆ 8.00ರಿಂದ: ಪೈಕ ಮಾಲೈಯಲ್ಲಿ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ನೇಮೋತ್ಸವರಾತ್ರಿ ಗಂಟೆ 9-15ಕ್ಕೆ: ಪೈಕ ಮಾಲ್ಯೆ ಮನೆಯವರಿಂದ ಅನ್ನಸಂತರ್ಪಣೆ ದಿನಾಂಕ : 24-01-2026ನೇ ಶನಿವಾರ ಬೆಳಿಗ್ಗೆ […]

ಜ.22-25: ಪೈಕ ಕರಿಮಜಲಿನಲ್ಲಿ ಗ್ರಾಮ ದೈವಗಳ ನೇಮ Read More »

ಜ.22-26: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ದಿ ರಿಪಬ್ಲಿಕ್ ಸೇಲ್’

ಪುತ್ತೂರು: ನಗರದ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಜ. 22 ರಿಂದ ಜ. 26 ರ ವರೆಗೆ ‘ದಿ ರಿಪಬ್ಲಿಕ್ ಸೇಲ್’ ನಡೆಯಲಿದೆ. ಆ ಪ್ರಯುಕ್ತ ವಜ್ರಾಭರಣಗಳ ಕ್ಯಾರಟ್ ಮೇಲೆ 5000 ರೂ. ಫ್ಲ್ಯಾಟ್ ಡಿಸ್ಕೌಂಟ್, ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ 10 ಗ್ರಾಂ ಗೆ ಫ್ಲ್ಯಾಟ್ 3500 ರೂ. ರಿಯಾಯಿತಿ ದೊರೆಯಲಿದೆ. 24ಕ್ಯಾರೆಟ್ ಚಿನ್ನದ ದರ 15,000 ದಾಟಿದೆ. ಈ ಫೆಸ್ಟಿವ್ ಶಾಪಿಂಗ್ ಸೀಸನ್‌ ನಲ್ಲಿ ಚಿನ್ನದ ದರ ಬೆಲೆ

ಜ.22-26: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ದಿ ರಿಪಬ್ಲಿಕ್ ಸೇಲ್’ Read More »

ಜ.29: ಪುತ್ತೂರಿನಲ್ಲಿ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ / ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಪುತ್ತೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ/ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಜನವರಿ 29 ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ನಡೆಯಲಿದೆ. ಕಿರಿಯರ ವಿಭಾಗ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2026-27ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ

ಜ.29: ಪುತ್ತೂರಿನಲ್ಲಿ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ / ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ Read More »

ಅಂಗಡಿಗೆ ನುಗ್ಗಿ ಮಾಲಕಿಗೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

ಪುತ್ತೂರು: ವಸ್ತುಗಳನ್ನು ಖರೀದಿ ಮಾಡಲು ಬಂದ ಇಬ್ಬರು ಯುವಕರು ಜಗಳ ಮಾಡಿ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿ ಮಾಲಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಪಾಣಾಜೆಯ ದೈತೋಟದಲ್ಲಿ ನಡೆದಿದೆ. ಈ ಸಂಬಂಧ ಅಂಗಡಿಯ ಮಾಲಕಿ ‌ವಿಮಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಜ. 18 ರಂದು ಆರ್ಲಪದವು ಕಡೆಯಿಂದ ಬಂದ ಅಜಯ್ ಮತ್ತು ಪುನೀತ್ ಎಂಬವರು ಅಂಗಡಿಗೆ ಬಂದು ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಜಗಳ ತೆಗೆದು, ಅಲ್ಲಿದ್ದ ವಸ್ತುಗಳನ್ನೆಲ್ಲಾ ಹಾಳು ಮಾಡಿದ್ದಾರೆ. ಇದರಿಂದ ಸುಮಾರು 5000 ರೂ.

ಅಂಗಡಿಗೆ ನುಗ್ಗಿ ಮಾಲಕಿಗೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು Read More »

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ

ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕನಾಗಿದ್ದ ಕಾಮುಕ ಎಲಿಯಾಸ್ ಪಿಂಟೋ‌ನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಎಲಿಯಾಸ್ ಪಿಂಟೋ(55) ತಾನು ಕಾರ್ಯ ನಿರ್ವಹಿಸುತ್ತಿದ್ದ ಕಾಲೇಜಿನ ಪ್ರಥಮ ಪಿಯುಸಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ತನ್ನ ಲೈಂಗಿಕ ಕಾಮನೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದ. ಸಂತ್ರಸ್ತ ಹುಡುಗಿ ಕ್ರೀಡಾ ಅಭ್ಯಾಸಕ್ಕೆ ಬಂದು ಒಂದು ಸುತ್ತು ಓಡಿ ಆ ಬಳಿಕ ವರಾಂಡದಲ್ಲಿ ನಿಂತಿದ್ದಳು. ಈ ವೇಳೆ ಆರೋಪಿ ಪಿಂಟೋ ಕಾರಣ ಕೇಳಿದ್ದು,

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ Read More »

ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು

ಕಾಳುಮೆಣಸು ಕೊಯ್ಯಲು ಮರ ಏರಿದಾಗ ಸಂಭವಿಸಿದ ದುರ್ಘಟನೆ ಪುತ್ತೂರು : ನಿವೃತ್ತ ಶಿಕ್ಷಕರೊಬ್ಬರು ತೆಂಗಿನಮರದಿಂದ ಬಿದ್ದು ಮೃತಪಟ್ಟಿರುವ ದುರ್ಘಟನೆ ಬೆಟ್ಟಂಪಾಡಿಯಲ್ಲಿ ಸೋಮವಾರ ಸಂಭವಿಸಿದೆ. ಬೆಟ್ಟಂಪಾಡಿ ಗ್ರಾಮದ ಗುಮ್ಮಟಿಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಮೃತಪಟ್ಟಿರುವ ವ್ಯಕ್ತಿ. ಗುಮ್ಮಟಿಗದ್ದೆಯಲ್ಲಿ ಸೋಮವಾರ ಕಾಳುಮೆಣಸು ಕೀಳಲೆಂದು ತೆಂಗಿನಮರ ಏರಿದ್ದ ನಾರಾಯಣ ನಾಯ್ಕ ಬಿದ್ದು ಮೃತಪಟ್ಟಿದ್ದಾರೆ. ಅಲ್ಯುಮಿನಿಯಂ ಏಣಿ ಇಟ್ಟು ಅವರು ಕಾಳುಮೆಣಸು ಕೊಯ್ಯುತ್ತಿದ್ದರು. ಈ ವೇಳೆ ಏಣಿ ಜಾರಿ ಏಣಿ ಸಮೇತ ಬಿದ್ದ ನಾರಾಯಣ ನಾಯ್ಕ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು.

ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು Read More »

ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಸಾಲೆತ್ತೂರು ವಲಯ ಕುಲಾಲ್ ಎಂಬಲ್ಲಿ ವಾಸವಿರುವ ಲೀಲಾವತಿ ತಿಮಪ್ಪ ದಂಪತಿಗಳಿಗೆ ಕಳೆದ 6 ವರ್ಷದಿಂದ ಶ್ರೀ ಕ್ಷೇತ್ರದಿಂದ ಮಾಶಾಸನ ದೊರೆಯುತ್ತಿದ್ದು ಇವರಿಗೆ ವಾಸಕ್ಕೆ ಯೋಗ್ಯವಾದ ಮನೆ ಇಲ್ಲದ ಕಾರಣ ಕ್ಷೇತ್ರದಿಂದ ವಾತ್ಸಲ್ಯ ಮನೆ ಮಂಜೂರಾಗಿದೆ. ಈ ಮನೆಯ ಗುದ್ದಲಿ ಪೂಜೆಯನ್ನು ವಲಯದ ಭಜನಾ ಪರಿಷತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಜನಜಾಗೃತಿ ಸದಸ್ ರಾಜಾರಾಮ್ ಹೆಗ್ಡೆ ಕುದ್ರಿಯ

ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ Read More »

ವಿದ್ಯಾರಶ್ಮಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿದ 2025 – 2026ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಹಾಜರಾದ ಸವಣೂರು ವಿದ್ಯಾರಶ್ಮಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ 23ನೇ ಬಾರಿಗೆ ನೂರು ಶೇಕಡಾ ಫಲಿತಾಂಶ ದಾಖಲಾಗಿದೆ. 9ನೇ ತರಗತಿಯ ಆಯಿಷತ್ ಜಸ್ನ – 461, ದ್ಯಾನ್ – 446, ಫಾತಿಮತ್ ಶೈಮ – 460, ಹೃತೇಶ್ ಬಿ. ಎಸ್. – 480, ಲಿಬಾ ಫಾತಿಮ – 443, ಹೈಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ

ವಿದ್ಯಾರಶ್ಮಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ Read More »

ಕಡಬ: ಬಾರ್‌ನಲ್ಲಿ ಹಲ್ಲೆ; ದೂರು ದಾಖಲು

ಕಡಬ : ಕಡಬ ಗ್ರಾಮದ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಹಲ್ಲೆ, ಜಾತಿ ನಿಂದನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಪಾಲ್ತಾಡು ಗ್ರಾಮದ ನಿವಾಸಿ ಜಗದೀಶ್ (28) ಜನವರಿ 16ರಂದು ರಾತ್ರಿ ಕಡಬ ಗ್ರಾಮದ ಕಲಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಹತ್ತಿರ ನಿಂತಿದ್ದಾಗ ಪರಿಚಯಸ್ಥರಾದ ಅಜಯ್, ಬೇಬಿ ಮತ್ತು ಅನಿಲ್ ಎಂಬವರು ವಿನಾಕಾರಣ ಜಗಳ ಆರಂಭಿಸಿ ಜಾತಿನಿಂದನೆ ಮಾಡಿ, ಕೈಯಿಂದ

ಕಡಬ: ಬಾರ್‌ನಲ್ಲಿ ಹಲ್ಲೆ; ದೂರು ದಾಖಲು Read More »

ಪುತ್ತೂರು : ವಿದ್ಯುತ್‌ ಕಂಬದ ಬಳಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

ಬಲೂನ್‌ ವಿದ್ಯುತ್‌ ತಂತಿಗೆ ತಗುಲಿದಾಗ ಸಂಭವಿಸಿದ ಅವಘಡ ಪುತ್ತೂರು : ಗ್ಯಾಸ್ ಬಲೂನ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಶ್ರೀ ಪೂಮಾಣಿ-ಕಿನ್ನಿಮಾನಿ ಬಳಿಯ ಪಡುಮಲೆ ಹಾಗೂ ಬಡಗನ್ನೂರು ಗ್ರಾಮ ಪಂಚಾಯತ್‌ನ ಮೈಂದಿನಡ್ಕ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿಯ ಪಡುಮಲೆಯಲ್ಲಿ ಭಾನುವಾರ ನಡೆದಿದೆ. ದೈವಸ್ಥಾನ ಜಾತ್ರಾ ಮಹೋತ್ಸವ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದೇವಾಲಯದ ಆವರಣದಲ್ಲಿರುವ ವಿದ್ಯುತ್ ಕಂಬದ ಬಳಿ ಕಾರು ಪಾರ್ಕಿಂಗ್‌ ಮಾಡಲಾಗಿತ್ತು. ಆ ಸಮಯದಲ್ಲಿ, ಹತ್ತಿರದ ಜಾತ್ರೆಯಿಂದ

ಪುತ್ತೂರು : ವಿದ್ಯುತ್‌ ಕಂಬದ ಬಳಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ Read More »

error: Content is protected !!
Scroll to Top