ಪುತ್ತೂರು

ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು

ವಿಟ್ಲ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ತೋಟದ ನಡುವಿನ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕೊಳ್ನಾಡಿನ ಸಾಲೆತ್ತೂರು ಎಂಬಲ್ಲಿ ನಡೆದಿದೆ. ಸಾಲೆತ್ತೂರಿನ ಕೋಡಿ ನಿವಾಸಿ, ಕೃಷಿಕ ಕೃಷ್ಣಪ್ಪ ಪೂಜಾರಿ (70) ಎಂಬವರೇ ಮೃತ ದುರ್ದೈವಿ. ಸಂಜೆ ವೇಳೆ ಸಾಲೆತ್ತೂರಿಗೆ ಹೋಗಿ ರಾತ್ರಿ ವಾಪಸ್ಸಾಗುತ್ತಿದ್ದಾಗ‌ ಈ ಘಟನೆ ನಡೆದಿದೆ.

ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು Read More »

ಕಾವು:ನೋವಿಗೆ ಸ್ಪಂದಿಸಿದ ಮಾನವೀಯ ಕೈಗಳು

ಅರುಣ್ ಕುಮಾರ್ ಪುತ್ತಿಲರಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಧನ ಪುತ್ತೂರು: ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಜೀವನದ ದಾರಿಯೇ ಕತ್ತಲಾಗಿ ಕಾಣುತ್ತಿದ್ದ ಕಾವು–ಮಾಡ್ನೂರು ಗ್ರಾಮದ ಹಲವು ಕುಟುಂಬಗಳಿಗೆ ಮಾನವೀಯತೆಯ ಬೆಳಕಾಗಿ ಸಮಾಜಸೇವಕ ಹಾಗೂ ಹಿಂದೂ ಮುಖಂಡ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಜೊತೆ ನಿಂತರು. ಗ್ರಾಮಸ್ಥರು ಸಂಗ್ರಹಿಸಿದ ಸಹಾಯಧನವನ್ನು ಪುತ್ತಿಲ ಪರಿವಾರದ ಕಾವು ಘಟಕದ ಮೂಲಕ ಮನೆಮನೆಗೆ ತೆರಳಿ ಹಸ್ತಾಂತರಿಸಿದ ಅವರು, ಕೇವಲ ಹಣವಷ್ಟೇ ಅಲ್ಲ — ನೋವಿನಲ್ಲಿ ಮುಳುಗಿದ್ದ

ಕಾವು:ನೋವಿಗೆ ಸ್ಪಂದಿಸಿದ ಮಾನವೀಯ ಕೈಗಳು Read More »

ಡ್ರಗ್ಸ್‌ ಜಾಲ ಭೇದಿಸಿದ ಪುತ್ತೂರು ಪೊಲೀಸರು : 6.50 ಲ.ರೂ. ಮೌಲ್ಯದ ಮಾದಕ ವಸ್ತು ವಶ

ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಎಂಡಿಎಂಎ ಮಾರುತ್ತಿದ್ದ ನಾಲ್ವರು ಸೆರೆ ಪುತ್ತೂರು : ಬೆಟ್ಟಂಪಾಡಿ, ಇರ್ದೆ, ರೆಂಜ ಹಾಗೂ ಅರ್ಲಪದವು ಪರಿಸರದಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಪುತ್ತೂರಿನ ಮೊಹಮ್ಮದ್ ಹರ್ಷದ್, ಮಹಮ್ಮದ್ ಆರೀಶ್, ಇಬ್ರಾಹಿಂ ಅಶ್ರಫ್ ಹಾಗೂ ಅವರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಬಂಟ್ವಾಳದ ಮುಸ್ತಾಫ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 50,000 ರೂ. ಮೌಲ್ಯದ 6.39 ಗ್ರಾಂ ಎಂಡಿಎಂಎ ಹಾಗೂ ಗಾಂಜಾ

ಡ್ರಗ್ಸ್‌ ಜಾಲ ಭೇದಿಸಿದ ಪುತ್ತೂರು ಪೊಲೀಸರು : 6.50 ಲ.ರೂ. ಮೌಲ್ಯದ ಮಾದಕ ವಸ್ತು ವಶ Read More »

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ರಿಪಬ್ಲಿಕ್ ಸೇಲ್‌ಗೆ ಬಹುಪರಾಕ್ ಎಂದ ಗ್ರಾಹಕರು

ಪುತ್ತೂರು: ನಗರದ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ‌ದಲ್ಲಿ ಜ. 22 ರಿಂದ ಜ. 26 ರ ವರೆಗೆ ರಿಪಬ್ಲಿಕ್ ಸೇಲ್ ನಡೆದಿದ್ದು, ಗ್ರಾಹಕರು ಇದಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಪ್ರಸ್ತುತ ದಿನಗಳಲ್ಲಿ ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ರಿಪಬ್ಲಿಕ್ ಸೇಲ್‌ನಲ್ಲಿ ಮೇಕಿಂಗ್ ಚಾರ್ಜಸ್ ಮೇಲೆ ಸಂಸ್ಥೆ ಭಾರೀ ರಿಯಾಯಿತಿ ನೀಡುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಸಂಸ್ಥೆ ಈ ಆಫರ್ ನೀಡಿತ್ತು. ಪುತ್ತೂರು, ಸುಳ್ಯ, ಹಾಸನ,

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ರಿಪಬ್ಲಿಕ್ ಸೇಲ್‌ಗೆ ಬಹುಪರಾಕ್ ಎಂದ ಗ್ರಾಹಕರು Read More »

ಡಿವೈಡರ್‌ ಹತ್ತಿದ ಸರ್ಕಾರಿ ಬಸ್‌

ಪುತ್ತೂರು: ಮಾಣಿ ಸಮೀಪ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಹೆದ್ದಾರಿಯ ಡಿವೈಡರ್‌ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಬಸ್‌ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದೆ ಎನ್ನಲಾಗಿದೆ. ಅಪಘಾತದಲ್ಲಿ ಬಸ್‌ಗೆ ಭಾಗಶಃ ಹಾನಿ ಉಂಟಾಗಿದ್ದು, ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಡಿವೈಡರ್‌ ಹತ್ತಿದ ಸರ್ಕಾರಿ ಬಸ್‌ Read More »

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಯಾವಾಗ ಗೊತ್ತಾ?

ಪುತ್ತೂರು: ಮೂವತ್ತಮೂರನೇ ವರ್ಷದ ಪ್ರಖ್ಯಾತ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಜ. 24 -25 ರಂದು ನಡೆಯಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿನ ದೇವರಮಾರು ಗದ್ದೆಯಲ್ಲಿ ‌ನೂರಾರು ಜೋಡಿ ಕೋಣಗಳು ಸ್ಪರ್ಧಿಸುವ ಮೂಲಕ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಬಾರಿ ನಡೆಯುವ ಈ ಐತಿಹಾಸಿಕ ಕಂಬಳಕ್ಕೆ ಪ್ರತಿ ಬಾರಿಯಂತೆ ಚಲನಚಿತ್ರ ತಾರೆಯರು, ಪ್ರಖ್ಯಾತ ವ್ಯಕ್ತಿಗಳು ಆಗಮಿಸುವ ಮೂಲಕ ಕಂಬಳದ ಮೆರುಗನ್ನು ಹೆಚ್ಚಿಸಲಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ, ಬಿಗ್‌ಬಾಸ್‌ ನಲ್ಲಿ ಫಸ್ಟ್ ರನ್ನರ್ ಅಪ್

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಯಾವಾಗ ಗೊತ್ತಾ? Read More »

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್

ಪುತ್ತೂರು: ಹಿಂದೂ ನಾಯಕ, RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ‌ಸಂಬಂಧಿಸಿದ ಹಾಗೆ ಮಹತ್ವದ ಆದೇಶವೊಂದನ್ನು ಹೈ ಕೋರ್ಟ್ ನೀಡಿದೆ. ಈ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆದಿದ್ದು, ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಯಾವುದೇ ಬಲವಂತದ ಅಥವಾ ಒತ್ತಡದ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಿದೆ. ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದ್ದು, ಪ್ರಭಾಕರ ಭಟ್

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ Read More »

ಮದುವೆಯಾಗುವುದಾಗಿ ಹೇಳಿದ್ದಕ್ಕೆ ‌ನಾಮಕರಣ ಮುಂದೂಡಿಕೆ: ಪ್ರತಿಭಾ ಕುಳಾಯಿ

ಪುತ್ತೂರು: ಇಡೀ ರಾಜ್ಯದೆಲ್ಲೆಡೆ ‌ಸುದ್ದಿಯಾಗಿದ್ದ ಲವ್, ಸೆಕ್ಸ್, ಮಗು ಕೊಟ್ಟು ಮದುವೆಯಾಗದೆ ಯುವತಿಗೆ ‌ವಂಚಿಸಿದ ಆರೋಪಿ ಕೃಷ್ಣ ಜೆ. ರಾವ್ ಮದುವೆಗೆ ಒಪ್ಪಿದ್ದಾನೆ ಎಂಬ ಕಾರಣಕ್ಕೆ ಆ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಫೆ. 7 ಕ್ಕೆ ಮುಂದೂಡಿರುವುದಾಗಿ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ. ಜ. 24 ಕ್ಕೆ ನಾಮಕರಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಅವರಾಗಿಯೇ ಮದುವೆಯಾಗುವುದಾಗಿ ಹೇಳಿ ಈಗ ಮುಂದೆ ಬಂದಿದ್ದಾರೆ. ಜ. 31 ರ ಒಳಗಾಗಿ ಕೃಷ್ಣ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂದು ಪ್ರತಿಭಾ ಹೇಳಿದ್ದಾರೆ. ಸಂತ್ರಸ್ತೆಯ ‌ತಾಯಿಗೆ

ಮದುವೆಯಾಗುವುದಾಗಿ ಹೇಳಿದ್ದಕ್ಕೆ ‌ನಾಮಕರಣ ಮುಂದೂಡಿಕೆ: ಪ್ರತಿಭಾ ಕುಳಾಯಿ Read More »

ಡಾ.ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲು

ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಪುತ್ತೂರು : ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಡಾ.ಕಲ್ಲಡ ಪ್ರಭಾಕರ ಭಟ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನಿವಾಸಿ ರಾಮಚಂದ್ರ ಕೆ. ಎಂಬವರು ನೀಡಿದ ದೂರಿನ ಪ್ರಕಾರ 12.01.2026ರಂದು ಪುತ್ತೂರಿನ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ.ಕಲ್ಲಡ ಪ್ರಭಾಕರ ಭಟ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತೆ, ಕೋಮುಧ್ವೇಷ ಹಾಗೂ

ಡಾ.ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲು Read More »

ಜ.22-25: ಪೈಕ ಕರಿಮಜಲಿನಲ್ಲಿ ಗ್ರಾಮ ದೈವಗಳ ನೇಮ

ಪುಣ್ಚತ್ತಾರು: ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ಶ್ರೀ ಅಮ್ಮನವರ ಮತ್ತು ಪರಿವಾರ ದೈವ ಸ್ಥಾನ ಪೈಕ, ಕರಿಮಜಲು, ಪುಣ್ಚತ್ತಾರು ಇಲ್ಲಿ ಜ.22 – ಜ. 25 ರ ವರೆಗೆ ಗ್ರಾಮ ದೈವಗಳ ನೇಮ ನಡೆಯಲಿದೆ. ದಿನಾಂಕ : 22-01-2026ನೇ ಗುರುವಾರ ರಾತ್ರಿ ಗಂಟೆ 8.00ರಿಂದ: ಪೈಕ ಮಾಲೈಯಲ್ಲಿ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ನೇಮೋತ್ಸವರಾತ್ರಿ ಗಂಟೆ 9-15ಕ್ಕೆ: ಪೈಕ ಮಾಲ್ಯೆ ಮನೆಯವರಿಂದ ಅನ್ನಸಂತರ್ಪಣೆ ದಿನಾಂಕ : 24-01-2026ನೇ ಶನಿವಾರ ಬೆಳಿಗ್ಗೆ

ಜ.22-25: ಪೈಕ ಕರಿಮಜಲಿನಲ್ಲಿ ಗ್ರಾಮ ದೈವಗಳ ನೇಮ Read More »

error: Content is protected !!
Scroll to Top