ದೇಶ

ರಂಜಿತಾ ಸಾವನ್ನು ಅಣಕಿಸಿದ್ದ ಡೆಪ್ಯುಟಿ ತಹಸೀಲ್ದಾರ್ ಅಮಾನತು

ವಿಮಾನ ದುರಂತದಲ್ಲಿ ಸಾವಿಗೀಡಾದ ರಂಜಿತಾ ಬಗ್ಗೆ ವ್ಯಂಗ್ಯವಾಗಿ ಕಮೆಂಟ್‌ ಕಾಸರಗೋಡು: ಅಹಮದಾಬಾದ್‌ ವಿಮಾನ ದುರಂತದಲ್ಲಿ ಕೇರಳದ ನರ್ಸ್‌ ರಂಜಿತಾ ಅವರ ಸಾವನ್ನು ವ್ಯಂಗ್ಯಮಾಡಿ ಅಣಕಿಸಿದ್ದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ಡೆಪ್ಯುಟಿ ತಹಸೀಲ್ದಾರ್ ಎ.ಪವಿತ್ರನ್ ಅವರನ್ನು ಕೇರಳ ಸರ್ಕಾರ ಅಮಾನತು ಮಾಡಿದೆ. ಕೇರಳ ಸರ್ಕಾರಕ್ಕೆ ರಜೆ ಹಾಕಿ ಹೋಗಿದ್ದಕ್ಕೆ ರಂಜಿತಾಗೆ ಸಾವು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪವಿತ್ರನ್ ವ್ಯಂಗ್ಯವಾಗಿ ಕಮೆಂಟ್ ಹಾಕಿದ್ದರು. ಇನ್ನೊಂದು ಪೋಸ್ಟ್‌ ಮಾಡಿ ಆಕೆ ಇನ್ನೂ ಎತ್ತರಕ್ಕೇರಲಿ ಎಂದು ಪವಿತ್ರನ್‌ ಕಮೆಂಟ್‌ ಮಾಡಿದ್ದರು. ಪವಿತ್ರನ್‌ […]

ರಂಜಿತಾ ಸಾವನ್ನು ಅಣಕಿಸಿದ್ದ ಡೆಪ್ಯುಟಿ ತಹಸೀಲ್ದಾರ್ ಅಮಾನತು Read More »

ದೈವ ನರ್ತಕನ ಹತ್ಯೆ : ಆರೋಪಿ ಚಿದಾನಂದ ಬಂಧನ

ಮುಳ್ಳೇರಿಯ: ಅದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ಕಲಾವಿದ ಟಿ. ಸತೀಶನ್ ಯಾನೆ ಬಿಜು (46) ಅವರ ಸಾವು ಕೊಲೆಯೆಂದು ತನಿಖೆಯಲ್ಲಿ ತಿಳಿದುಬಂದಿದ್ದು, ಆರೋಪಿಯಾದ ಸ್ನೇಹಿತ ಚಿದಾನಂದನನ್ನು (32) ಪೊಲೀಸರು ಬಂಧಿಸಿದ್ದಾರೆ. ಚೋಮಣ್ಣ ಎಂಬವರ ಮನೆಯಲ್ಲಿ ಜೂ.9 ರಂದು ಚಿದಾನಂದ ಹಾಗೂ ಸತೀಶನ್‍ ಇಬ್ಬರು ಮದ್ಯ ಸೇವಿಸುತ್ತಿದ್ದರು. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಈ ಸಂದರ್ಭ ಚಿದಾನಂದ ಸತೀಶನ್ ಅವರನ್ನು ಕೆಳಗೆ ತಳ್ಳಿದ್ದಾನೆ. ಸತೀಶನ್‍ ತಲೆಗೆ ಗಾಯವಾಗಿದೆ.  ಸತೀಶನ್‍ ಮನೆಗೆ

ದೈವ ನರ್ತಕನ ಹತ್ಯೆ : ಆರೋಪಿ ಚಿದಾನಂದ ಬಂಧನ Read More »

ಭೀಕರ ವಿಮಾನ ಅವಘಡದಲ್ಲಿ ಏಕೈಕ ಪ್ರಯಾಣಿಕ ಬದುಕಿ ಉಳಿದದ್ದಾದರೂ ಹೇಗೆ?

ಇಲ್ಲಿದೆ ವಿಶ್ವಾಸ್ ಕುಮಾರ್ ರಮೇಶ್‌ಗೆ ಪುನರ್ಜನ್ಮ ಸಿಕ್ಕಿದ ಪೂರ್ಣ ಮಾಹಿತಿ ಅಹಮದಾಬಾದ್ : ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಬದುಕುಳಿದದ್ದಾರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಈಗ ಕಾಡುತ್ತಿದೆ. ಇಡೀ ವಿಮಾನ ಬೆಂಕಿಯುಂಡೆಯಂತಾಗಿ ಕಟ್ಟಡಕ್ಕೆ ಅಪ್ಪಳಿಸಿದ್ದು, 1.25 ಲಕ್ಷ ಲೀಟರ್‌ ಪೆಟ್ರೋಲ್‌ ಸ್ಫೋಟಗೊಂಡಿದೆ. ವಿಮಾನದಲ್ಲಿ ಇದ್ದವರು ಯಾರೂ ಬದುಕುಳಿಯುವ ಸಾಧ್ಯತೆಯಿಲ್ಲ ಎಂದೇ ಭಾವಿಸಿರುವಾಗ ವಿಶ್ವಾಸ್‌ ಕುಮಾರ್‌ ರಮೇಶ್‌ ಪವಾಡ ಎಂಬಂತೆ ಬದುಕುಳಿದಿದ್ದಾರೆ. ಅದೂ ಹೆಚ್ಚೇನೂ ಗಂಭೀರ ಗಾಯಗಳಿಲ್ಲದೆ. ಇದು

ಭೀಕರ ವಿಮಾನ ಅವಘಡದಲ್ಲಿ ಏಕೈಕ ಪ್ರಯಾಣಿಕ ಬದುಕಿ ಉಳಿದದ್ದಾದರೂ ಹೇಗೆ? Read More »

ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ : ತುರ್ತು ಭೂ ಸ್ಪರ್ಶ

ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ನವದೆಹಲಿ : ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಇನ್ನೂ ದೇಶ ಮಮ್ಮಲ ಮರುಗುತ್ತಾ ಇರುವಾಗಲೇ ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.ಥಾಯ್ಲೆಂಡ್‌ನಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದ್ದು, ಈ ಕಾರಣದಿಂದ ತಕ್ಷಣ ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದೆ ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಹೇಳಿದ್ದಾರೆ. ಇದೀಗ ವಿಮಾನ AI 379 ಲ್ಯಾಂಡ್ ಆಗಿದ್ದು, ಹಾರಾಟ

ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ : ತುರ್ತು ಭೂ ಸ್ಪರ್ಶ Read More »

ಬೆಂದು ಹೋದ ಜೀವಗಳು – ಕರಟಿ ಹೋದ ಕನಸುಗಳು…

ವಿಮಾನ ದುರಂತದ ಮನಕಲಕುವ ಕಥೆಗಳು ಅಹದಾಬಾದ್‌: ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಕರಟಿ ಹೋದ ಕನಸುಗಳೆಷ್ಟೋ, ಬೆಂದು ಹೋದ ಬದುಕುಗಳೆಷ್ಟೋ? ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದವರು ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಗುರುತು ಕೂಡ ಸಿಗದಷ್ಟು ಭೀಕರವಾಗಿ ಸಾಯಬಹುದು ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಕ್ಕಿಲ್ಲ. ಮನೆ ಕಟ್ಟಲು ತೊಡಗಿದ್ದ ನರ್ಸ್‌, ಸುಖಸಾಗರದಲ್ಲಿ ತೇಲಾಡುತ್ತಿದ್ದ ಸುಂದರ ಕುಟುಂಬ, ಹೆಂಡತಿಯನ್ನು ಕರೆತರಲು ಹೋಗುತ್ತಿದ್ದ ಮಾಜಿ ಮುಖ್ಯಮಂತ್ರಿ… ಹೀಗೆ ಒಂದೊಂದೇ ದುರಂತ ಕಥೆಗಳು ಹೊರಬರುತ್ತಿವೆ. ವಿಮಾನದಲ್ಲಿದ್ದ

ಬೆಂದು ಹೋದ ಜೀವಗಳು – ಕರಟಿ ಹೋದ ಕನಸುಗಳು… Read More »

ಅಹಮದಾಬಾದ್‌ ವಿಮಾನ ದುರಂತ : ಆಸ್ಪತ್ರೆಗೆ ಆಗಮಿಸಿದ ಮೋದಿ

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಅಹಮದಾಬಾದ್‌ಗೆ ಬಂದಿಳಿದಿದ್ದು, ಇಲ್ಲಿನ ಸಿವಿಲ್ ಆಸ್ಪತ್ರೆಗೆ ಆಗಮಿಸಿ ಅಹಮದಾಬಾದ್ ವಿಮಾನ ಪತನ ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಗುರುವಾರ ಮಧ್ಯಾಹ್ನ ಸಂಭವಿಸಿದ್ದ ಭೀಕರ ವಿಮಾನ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 265 ಜನ ಮೃತಪಟ್ಟಿದ್ದಾರೆ. ಮೆಡಿಕಲ್ ಕಾಲೇಜು ಹಾಸ್ಟೆಲ್​ ಮೇಲೆಯೇ ವಿಮಾನ ಪತನವಾಗಿದ್ದರಿಂದ ಅಲ್ಲಿದ್ದವರೂ ಅನೇಕರು ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ಅಧಿಕೃತ ಘೋಷಣೆ ಡಿಎನ್​ಎ ಪರೀಕ್ಷೆಯ ನಂತರ ಪ್ರಕಟವಾಗಲಿದೆ.

ಅಹಮದಾಬಾದ್‌ ವಿಮಾನ ದುರಂತ : ಆಸ್ಪತ್ರೆಗೆ ಆಗಮಿಸಿದ ಮೋದಿ Read More »

ಅಹಮದಾಬಾದ್‌ ವಿಮಾನ ದುರಂತ : ಇಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ: ಏರ್‌ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ಸಾವನ್ನಪ್ಪಿರುವ ಅಹಮದಾಬಾದ್‌ನ ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಲಿದ್ದಾರೆ. ಸಚಿವರು ಮತ್ತು ಅಧಿಕಾರಿಗಳ ಜೊತೆ ನಿನ್ನೆಯಿಂದೀಚೆಗೆ ನಿರಂತರ ಸಂಪರ್ಕದಲ್ಲಿರುವ ಮೋದಿ ಇಂದು ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ವಿಮಾನ ಪತನಗೊಂಡ ಸ್ಥಳಕ್ಕೆ ಮೋದಿ ಭೇಟಿ ನೀಡಲಿದ್ದು, ಅಧಿಕಾರಿಗಳಿಂದ ದುರಂತದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ, ಬದುಕುಳಿದ ಏಕೈಕ ಪ್ರಯಾಣಿಕನ ಆರೋಗ್ಯ ವಿಚಾರಿಸಲಿದ್ದಾರೆ. ನಿನ್ನೆಯೂ ಅವಘಡದ ಕುರಿತು ಕೇಂದ್ರ

ಅಹಮದಾಬಾದ್‌ ವಿಮಾನ ದುರಂತ : ಇಂದು ಪ್ರಧಾನಿ ಮೋದಿ ಭೇಟಿ Read More »

ಅಹಮದಾಬಾದ್‌ವಿಮಾನ ದುರಂತ ಸಾವಿನ ಸಂಖ್ಯೆ 265ಕ್ಕೇರಿಕೆ

ಡ್ರೀಮ್‌ಲೈನರ್‌ನಲ್ಲಿ ಪ್ರಯಾಣಿಸುತ್ತಿದ್ದವರ ಕನಸುಗಳೆಲ್ಲ ಆಕಾಶದಲ್ಲೇ ಸುಟ್ಟು ಕರಕಲಾಯಿತು 1.25 ಲಕ್ಷ ಲೀಟರ್‌ನಷ್ಟು ಪೆಟ್ರೋಲ್‌ ಸ್ಫೋಟಿಸಿ ಭೀಕರ ಅವಘಡ ನವದೆಹಲಿ: ಡ್ರೀಮ್‌ಲೈನರ್‌ ವಿಮಾನದಲ್ಲಿ ಬದುಕಿನ ನಾನಾ ಕನಸುಗಳನ್ನು ಹೊತ್ತು ಪ್ರಯಾಣಿಸುತ್ತಿದ್ದವರ ಕನಸುಗಳೆಲ್ಲ ಆಕಾಶದಲ್ಲೇ ಹೊತ್ತಿ ಉರಿದು ಕರಟಿ ಹೋಗಿವೆ. ದೇಶ ಕಂಡ ಮಹಾ ವಿಮಾನ ದುರಂತವೊಂದು 265 ಮಂದಿಯ ಪ್ರಾಣ ಕಸಿದುಕೊಂಡಿದೆ. ಅಹಮದಾಬಾದ್‌ನಲ್ಲಿ ಗುರುವಾರ ಮಧ್ಯಾಹ್ನ ಏರ್‌ ಇಂಡಿಯಾ ವಿಮಾನ ಪತನಗೊಂಡು ಸಂಭವಿಸಿದ ಮಹಾದುರಂತದಲ್ಲಿ ಒಟ್ಟು 265 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 242 ಮಂದಿಯ ಪೈಕಿ ಓರ್ವ ಮಾತ್ರ

ಅಹಮದಾಬಾದ್‌ವಿಮಾನ ದುರಂತ ಸಾವಿನ ಸಂಖ್ಯೆ 265ಕ್ಕೇರಿಕೆ Read More »

ಅಹಮದಾಬಾದ್‍ ನಲ್ಲಿ ಪತನಗೊಂಡ ವಿಮಾನದಲ್ಲಿ ಗುಜರಾತ್‍ ಮಾಜಿ ಸಿಎಂ ವಿಜಯ್ ರೂಪಾನಿ‌ ಮೃತಪಟ್ಟಿರುವ ಶಂಕೆ | ವಿಮಾನದಲ್ಲಿದ್ದ ಫೋಟೊ ವೈರಲ್‍

ಗುಜರಾತಿನ ಅಹಮದಾಬಾದ್ ನ ಮೇಘನಿ ನಗರದಲ್ಲಿ ಪತನಗೊಂಡ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ‌ ಇರುವ ಕುರಿತು ಫೋಟೊಗಳು ವೈರಲ್‍ ಆಗುತ್ತಿದೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಅವಘಡದಲ್ಲಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. 2016-2021ರವರೆಗೆ ಮುಖ್ಯಮಂತ್ರಿಯಾಗಿದ್ದ ರೂಪಾನಿ ಅವರು ಕುಳಿತಿರುವುದನ್ನು ಸೆಲ್ಫಿ ತೆಗೆದ ಸಹಪ್ರಯಾಣಿಕೆಯ ಫೊಟೋ ಇದೀಗ ವೈರಲ್ ಆಗುತ್ತಿದೆ. ಮೇಘಾನಿ ನಗರದ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಪತನಗೊಂಡ ವಿಮಾನ ಬಿದ್ದಿದ್ದು, ಹಲವು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು‌ ತಿಳಿದುಬಂದಿದೆ. ವಿಮಾನದ

ಅಹಮದಾಬಾದ್‍ ನಲ್ಲಿ ಪತನಗೊಂಡ ವಿಮಾನದಲ್ಲಿ ಗುಜರಾತ್‍ ಮಾಜಿ ಸಿಎಂ ವಿಜಯ್ ರೂಪಾನಿ‌ ಮೃತಪಟ್ಟಿರುವ ಶಂಕೆ | ವಿಮಾನದಲ್ಲಿದ್ದ ಫೋಟೊ ವೈರಲ್‍ Read More »

ಗುಜರಾತಿನ ಅಹಮದಾಬಾದ್‍ ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

ಟೇಕ್ ಆಫ್ ಆದ ತಕ್ಷಣದಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವೊಂದು ಗುಜರಾತಿನ ಅಹಮದಾಬಾದ್‌ನಲ್ಲಿ ಪತನವಾದ ದುರಂತ ಇಂದು ಸಂಭವಿಸಿದೆ. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಹಲವಾರು ಸಾವುನೋವುಗಳ ಭೀತಿ ಎದುರಾಗಿದೆ. ಆದರೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದರ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇಂದು ಮಧ್ಯಾಹ್ನ ಗುಜರಾತ್‌ ನ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿ ಏ‌ರ್ ಇಂಡಿಯಾ ವಿಮಾನ ಪತನವಾಗಿದೆ. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್

ಗುಜರಾತಿನ ಅಹಮದಾಬಾದ್‍ ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ Read More »

error: Content is protected !!
Scroll to Top