ದೇಶ

ಹಿಂದೂಯೇತರ ಉದ್ಯೋಗಿಗಳಿಗೆ ಗೇಟ್‌ಪಾಸ್ ‌ನೀಡಿದ TTD

ಆಂಧ್ರಪ್ರದೇಶ: ಹಿಂದೂಯೇತರ ಧರ್ಮವನ್ನು ಪಾಲಿಸುತ್ತಿದ್ದ ನಾಲ್ವರನ್ನು ಕೆಲಸದಿಂದ ವಜಾ ಮಾಡಿ ತಿರುಪತಿ ತಿರುಮಲ ದೇಗುಲ ಅಮಾನತು ಮಾಡಿ ಆದೇಶ ಹೊರಡಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಕ್ರೈಸ್ತ ಮತವನ್ನು ಈ ಉದ್ಯೋಗಿಗಳು ಆಚರಿಸುತ್ತಿದ್ದರು. ಇದು ಟಿಟಿಡಿ ಟ್ರಸ್ಟ್‌ನ ಸಾಂಸ್ಥಿಕ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಈ ಕಾರಣದಿಂದ ಅವರನ್ನು ವಜಾ ಮಾಡಲಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ನಿರೀಕ್ಷಿತ ಧಾರ್ಮಿಕ ನಡವಳಿಕೆಯನ್ನು ಅನುಸರಿಸುವಲ್ಲಿ ಅಮಾನತಾದ ಉದ್ಯೋಗಿಗಳು ವಿಫಲರಾಗಿದ್ದಾಗಿಯೂ ಟ್ರಸ್ಟ್ ತಿಳಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ […]

ಹಿಂದೂಯೇತರ ಉದ್ಯೋಗಿಗಳಿಗೆ ಗೇಟ್‌ಪಾಸ್ ‌ನೀಡಿದ TTD Read More »

ಉಗ್ರ ನಿಗ್ರಹಕ್ಕೆ ಜಮ್ಮು ಕಾಶ್ಮೀರದ ಹಲವೆಡೆ ಸಿಐಕೆ ಕಾರ್ಯಾಚರಣೆ

ಶ್ರೀನಗರ: ಉಗ್ರರನ್ನು ಮಟ್ಟ ಹಾಕಿ, ಭಯೋತ್ಪಾದನೆಯನ್ನು ನಿಗ್ರಹಿಸುವ ಸಲುವಾಗಿ ಕಣಿವೆಯ ಹಲವು ಕಡೆಗಳಲ್ಲಿ ಜಮ್ಮು ಕಾಶ್ಮೀರದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ್ ವಿಭಾಗದ ತಂಡಗಳು ಕಾಶ್ಮೀರದ ಕಣಿವೆಯಲ್ಲ 10 ಕಡೆಗಳಲ್ಲಿ ಉಗ್ರ ದಮನ ಕಾರ್ಯಾಚರಣೆಯ ಭಾಗವಾಗಿ ಶೋಧ ಕಾರ್ಯಗಳನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಉಗ್ರರ ‌ನೇಮಕಾತಿ ನೆಲೆಗಳು ಮತ್ತು ಸ್ಲೀಪರ್ ಸೆಲ್ ಘಟಕಗಳ ಪತ್ತೆಗೆ ಈ ಶೋಧ ಕಾರ್ಯಗಳನ್ನು ನಡೆಸಲಾಗುತ್ತಿದೆ. ಗುಂಡೇರ್ಬಾಲ್, ಬುದ್ಗಾಮ್, ಪುಲ್ವಾಮಾ, ಶ್ರೀನಗರಗಳಿಗೆ ‌ಸಂಬಂಧಿಸಿದಂತೆ ಈ

ಉಗ್ರ ನಿಗ್ರಹಕ್ಕೆ ಜಮ್ಮು ಕಾಶ್ಮೀರದ ಹಲವೆಡೆ ಸಿಐಕೆ ಕಾರ್ಯಾಚರಣೆ Read More »

ಎನ್‌ಕೌಂಟರ್‌ನಲ್ಲಿ ಆರು ನಕ್ಸಲರ ಹತ್ಯೆ

ಅಪಾರ ಎಕೆ 47 ರೈಫಲ್‌, ಸ್ಫೋಟಕ ಪತ್ತೆ ರಾಯ್‌ಪುರ: ಛತ್ತೀಸ್‌ಗಢದ ದಟ್ಟಾರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 6 ಮಾವೋವಾದಿ ನಕ್ಸಲರು ಹತ್ಯೆಗೀಡಾಗಿದ್ದಾರೆ. ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಹಲವು ಎಕೆ 47 ಮತ್ತು ಎಸ್‌ಎಕ್‌ಆರ್‌ ರೈಫಲ್‌ಗಳು, ಸ್ಫೋಟಕಗಳು ಪತ್ತೆಯಾಗಿವೆ. ನಾರಾಯಣಪುರ ಜಿಲ್ಲೆಯ ಅಬುಜ್‌ಮದ್ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ನಕ್ಸಲ್‌ ಭದ್ರಕೋಟೆಯಾದ ಅಬುಜ್‌ಮದ್ ಕೋರ್ ವಲಯದಲ್ಲಿ ನಕ್ಸಲರ ವಿರುದ್ಧ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಈ ಎನ್‌ಕೌಂಟರ್ ಸಹ

ಎನ್‌ಕೌಂಟರ್‌ನಲ್ಲಿ ಆರು ನಕ್ಸಲರ ಹತ್ಯೆ Read More »

ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿ, ಆಪರೇಷನ್ ಸಿಂಧೂರ್ ಮುಂದುವರೆಸಿ : ಅಸಾವುದ್ದೀನ್ ಒವೈಸಿ

ನವದೆಹಲಿ: ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಮುಂದುವರೆಸುವಂತೆ AIMIM ಅಧ್ಯಕ್ಷ, ಸಂಸದ ಅಸಾವುದ್ದೀನ್ ಒವೈಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಭಾರತೀಯ ಸೇನೆಯ ಆಪರೇಷನ್ ಸಿಂಧೂರ್‌ಗೆ ಪಿಒಕೆ ಮತ್ತು ಪಾಕ್‌ನ ಭಯೋತ್ಪಾದಕ ನೆಲೆಗಳನ್ನು, ಅಡಗುದಾಣಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಲಾಗಿದೆ. ಈ ಕಾರ್ಯಾಚರಣೆಯನ್ನು ಮುಂದುವರೆಸಿ ದಾಳಿಯ ಹಿಂದಿರುವ ಉಗ್ರರನ್ನು ‌ನಾಶ ಮಾಡಬೇಕು. ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಚೀನಾದ ಪ್ರಭಾವ ಹೆಚ್ಚಾಗುತ್ತಿದೆ. ಇಲ್ಲಿ ಮಸೀದಿಗಳನ್ನು ‌ಕೆಡಹುವ, ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳಲು

ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿ, ಆಪರೇಷನ್ ಸಿಂಧೂರ್ ಮುಂದುವರೆಸಿ : ಅಸಾವುದ್ದೀನ್ ಒವೈಸಿ Read More »

ಭಾರತದ ಸೇನಾ ಬತ್ತಳಿಕೆಗೆ ‘ಶೇರ್’ ಶಕ್ತಿ

ಲಕ್ನೋ: ಭಾರತೀಯ ಸಶಸ್ತ್ರ ಪಡೆಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಕಲಾಶ್ನಿಕೋವ್ ಸರಣಿಯ ಅತ್ಯಾಧುನಿಕ ಆವೃತ್ತಿಯ ನೂತನ ರೈಫಲ್ ಎಕೆ-203 ಸೇರಲಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಅಮೇತಿಯಲ್ಲಿರುವ ರೈಫಲ್ ತಯಾರಿಸುವ ಸಂಸ್ಥೆ ಇಂಡೋ – ರಷ್ಯನ್ ಪ್ರೈ.ಲಿ. ಯು ದೇಶೀಯವಾಗಿ ಇದನ್ನು ಸಿದ್ಧಪಡಿಸಿದ್ದು, ಇದಕ್ಕೆ ‘ಶೇರ್’ ಎಂದು ಹೆಸರನ್ನಿರಿಸಲಾಗಿದೆ. ಇದನ್ನು ಸಶಸ್ತ್ರ ಪಡೆಗಳಿಗೆ ಸರಬರಾಜು ಮಾಡಲು ಕಂಪನಿ ಸಿದ್ಧವಾಗಿದೆ. ಈ ರೈಫಲ್‌ನಲ್ಲಿ ನಿಮಿಷಕ್ಕೆ 700 ಗುಂಡುಗಳನ್ನು ಹಾರಿಸಬಹುದಾಗಿದ್ದು, ಇದಕ್ಕೆ ಗುಂಡುಗಳನ್ನು 800 ಮೀ. ವರೆಗೆ ಕ್ರಮಿಸುವ ಶಕ್ತಿ

ಭಾರತದ ಸೇನಾ ಬತ್ತಳಿಕೆಗೆ ‘ಶೇರ್’ ಶಕ್ತಿ Read More »

ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗಿನ್ನು ಆರೋಗ್ಯಪೂರ್ಣ ಆಹಾರ ವಿತರಣೆ

ನವದೆಹಲಿ: ಸಂಸತ್ ಭವನದಲ್ಲಿ ಆರೋಗ್ಯಕರ ಆಹಾರ ವಿತರಿಸುವ ನಿಟ್ಟಿನಲ್ಲಿ ರಾಗಿ ಇಡ್ಲಿ, ಗ್ರಿಲ್ ಫಿಶ್ ಜೊತೆಗೆ ತರಕಾರಿ, ಜೋಳದ ಉಪ್ಪಿಟ್ಟು ಮೊದಲಾದ ಆಹಾರಗಳನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಸಂಸದರು ಮತ್ತು ಅಧಿಕಾರಿಗಳಿಗೆ ಆಹಾರ ನೀಡಲಾಗುವ ಸಂಸತ್ತಿನ ಕ್ಯಾಂಟೀನಿನ ಊಟದ ಮೆನು ಪರಿಷ್ಕರಿಸಲಾಗಿದ್ದು, ರುಚಿಯಲ್ಲಿ ಮತ್ತು ಆರೋಗ್ಯದ ವಿಚಾರದಲ್ಲಿ ರಾಜಿಯಾಗದಂತೆ ಎಚ್ಚರ ವಹಿಸಲಾಗಿದೆ. ಪರಿಷ್ಕೃತ ಮೆನು‌ವಿನಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಊಟ, ನಾರುಯುಕ್ತ ‌ಸಲಾಡ್, ಪ್ರೊಟೀನ್ ಉಳ್ಳ ಸೂಪ್ ನೀಡಲು ನಿರ್ಧರಿಸಲಾಗಿದೆ. ಪ್ರತಿ ಆಹಾರ ಒಳಗೊಂಡ ಕ್ಯಾಲರಿ

ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗಿನ್ನು ಆರೋಗ್ಯಪೂರ್ಣ ಆಹಾರ ವಿತರಣೆ Read More »

ನಿಮಿಷಾ‌ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತ

ಬ್ಲಡ್ ಮನಿ, ಕ್ಷಮಾದಾನ ‌ನಿರಾಕರಿಸಿದ ತಲಾಲ್ ಮೆಹದಿ ಕುಟುಂಬ ಸನಾ: ಯೆಮನ್ ನಾಗರಿಕ ತಲಾಲ್ ಮೆಹದಿ ಹತ್ಯೆಗೆ ಸಂಬಂಧಿಸಿದ ಹಾಗೆ ಆರೋಪಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತವಾಗಿದೆ. ಮೃತ ತಲಾಲ್ ಕುಟುಂಬಸ್ಥರು ಬ್ಲಡ್ ಮನಿ ನಿರಾಕರಿಸಿದ್ದು, ಆರೋಪಿ ನಿಮಿಷಾಗೆ ಶರಿಯಾ ಕಾನೂನಿನ ಅನ್ವಯ ಕಿಸಾಸ್ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ. ತಲಾಲ್ ಮೆಹದಿಯನ್ನು ಹತ್ಯೆ ಮಾಡಿದ ನಿಮಿಷಾಳಿಂದ ಕ್ಷಮೆ ಅಥವಾ ಪರಿಹಾರವನ್ನು ಸ್ವೀಕರಿಸುವ ಮಾತೇ ಇಲ್ಲ ಎಂದು ಮೃತನ ಕುಟುಂಬಸ್ಥರು ತೀರ್ಮಾನ ತಿಳಿಸಿದ್ದಾರೆ.

ನಿಮಿಷಾ‌ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತ Read More »

ಮೂರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಚಿಂತನೆ

ಮತ್ಸ್ಯ ಸಂಪತ್ತು ಉಳಿಸುವ ಸಲುವಾಗಿ ಹೊಸ ನಿಯಮ ಮಂಗಳೂರು: ಕಡಲಲ್ಲಿ ಮತ್ಸ್ಯ ಸಂಪತ್ತು ಬರಿದಾಗುತ್ತಿದೆ ಎನ್ನುವುದು ಇತ್ತೀಚೆಗೆ ವ್ಯಾಪಕವಾಗಿ ಕೇಳಿ ಬರುತ್ತಿರುವ ಆತಂಕ. ಹೀಗಾಗಿ ಮೀನು ಸಂತಾನೋತ್ಪತ್ತಿ ಕಾಲದಲ್ಲಿ ಯಾಂತ್ರೀಕೃತ ಬೋಟ್‌ಗಳು ಕಡಲಿಗೆ ಇಳಿಯದಿದ್ದರೆ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗಲಿದೆ ಎಂಬುದು ಲೆಕ್ಕಚಾರ. ಈ ಕಾರಣಕ್ಕೆ ಮಳೆಗಾಲದಲ್ಲಿ ಎರಡು ತಿಂಗಳು ಮೀನಿಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ನಿಷೇಧ ಜಾರಿಗೆ ಬರುವುದರಿಂದ ನಿಷೇಧದ ನೈಜ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಇಡೀ

ಮೂರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಚಿಂತನೆ Read More »

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಹೆಸರಿನಲ್ಲಿ ಕರೆ ಮಾಡಿ ನಿವೃತ್ತ ವಿಜ್ಞಾನಿಗೆ ವಂಚನೆ

ಕಾಂಬೋಡಿಯಾದ ಸೈಬರ್‌ ವಂಚಕರ ಹೊಸ ತಂತ್ರ ಬೆಂಗಳೂರು: ಮುಂಬಯಿಯ ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಪೊಲೀಸ್‌ ಅಧಿಕಾರಿ ಕನ್ನಡಿಗ ದಯಾ ನಾಯಕ್ಹೆಸರು ಹೇಳಿ ಚಿಕ್ಕಬಳ್ಳಾಪುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಭೂ ವಿಜ್ಞಾನಿಗೆ ಸೈಬರ್​ ವಂಚಕರು ಲಕ್ಷಾಂತರ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಸಬ್ಬೇನಹಳ್ಳಿಯಲ್ಲಿ ಭೂ ವಿಜ್ಞಾನಿ ಬಿ.ಕೆ. ರಾಮಚಂದ್ರಪ್ಪ ಹಾಗೂ ಇವರ ಪತ್ನಿ ಸುಜಾತ ಅವರಿಗೆ ದಯಾ ನಾಯಕ್ ಹೆಸರಿನಲ್ಲಿ ಸೈಬರ್ ವಂಚಕರು ಕರೆ ಮಾಡಿದ್ದಾರೆ. ಮುಂಬೈಯ ಕೆನರಾ ಬ್ಯಾಂಕ್​ನಲ್ಲಿ

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಹೆಸರಿನಲ್ಲಿ ಕರೆ ಮಾಡಿ ನಿವೃತ್ತ ವಿಜ್ಞಾನಿಗೆ ವಂಚನೆ Read More »

ದೇಶದ ಮೊದಲ ಟೆಸ್ಲಾ ಕಾರು ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‍

ಮುಂಬಯಿ: ವಿಶ್ವದ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ,ಎಲೆಕ್ಟಿಕ್ ಕಾರು ತಯಾರಕ ಸಂಸ್ಥೆಯಾದ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಮುಂಬಯಿಯ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿ ತನ್ನ ಮೊದಲ ಎಕ್ಷೀರಿಯನ್ಸ್ ಸೆಂಟರ್ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ವಿಶ್ವದ ಅತ್ಯಂತ ಸ್ಮಾರ್ಟ್ ಕಾರು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಮುಂಬಯಿಗೆ ಬರುತ್ತಿರುವುದು ಸಂತೋಷದ ವಿಷಯ. ಟೆಸ್ಲಾ ತನ್ನ ಎಕ್ಸಿರಿಯನ್ಸ್ ಸೆಂಟರ್ ಮೂಲಕ ಮಹಾರಾಷ್ಟ್ರದಿಂದ ಭಾರತಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದೆ ಎಂದು ಫಡ್ನವೀಸ್ ಘೋಷಿಸಿದರು. ಮುಂಬಯಿಯಲ್ಲಿ ಈಗ ಟೆಸ್ಲಾ ಕಾರುಗಳ

ದೇಶದ ಮೊದಲ ಟೆಸ್ಲಾ ಕಾರು ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‍ Read More »

error: Content is protected !!
Scroll to Top