ದೇಶ

ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಯಂಗ್‌ ಇಂಡಿಯಾ : ಗಿಲ್‌ ಪಡೆ ಸಾಧನೆಗೆ ಭರಪೂರ ಮೆಚ್ಚುಗೆ

ಸೋಲಿನ ದವಡೆಯಿಂದ ಗೆಲುವನ್ನು ಕಸಿದು ಬೀಗಿದ ಟೀಮ್‌ ಇಂಡಿಯಾ–ಭಾರತ ಮಾಡಿತು ಹಲವು ಹೊಸ ದಾಖಲೆ ಲಂಡನ್‌: ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಭಾರತ 6 ರನ್‌ಗಳಿಂದ ರೋಚಕ ಗೆಲುವು ಸಾಧಿಸುವ ಮೂಲಕ ಬರೋಬ್ಬರಿ 77 ವರ್ಷಗಳ ನಂತರ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಗೆದ್ದ ದಾಖಲೆ ಮಾಡಿದೆ. ಈ ಗೆಲುವಿನೊಂದಿಗೆ ಭಾರತ 2-2ರ ಸಮಬಲದೊಂದಿಗೆ ಸರಣಿಯನ್ನು ಪೂರ್ಣಗೊಳಿಸಿದೆ. ಈ ಟೆಸ್ಟ್‌ ಸರಣಿ ಭಾರತದ ಪಾಲಿಗೆ ಸ್ಮರಣೀಯವಾಗಿ […]

ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಯಂಗ್‌ ಇಂಡಿಯಾ : ಗಿಲ್‌ ಪಡೆ ಸಾಧನೆಗೆ ಭರಪೂರ ಮೆಚ್ಚುಗೆ Read More »

ನೀವು ನಿಜವಾದ ಭಾರತೀಯನೇ ಆಗಿದ್ದರೆ… : ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ಛೀಮಾರಿ

ಭಾರತ್‌ ಜೋಡೊ ಯಾತ್ರೆ ಸಂದರ್ಭ ನೀಡಿದ ಹೇಳಿಕೆಗೆ ಸರ್ವೋಚ್ಚ ನ್ಯಾಯಾಲಯದಿಂದ ತೀಕ್ಷ್ಣ ತರಾಟೆ ನವದೆಹಲಿ: ಮಾನನಷ್ಟ ಪ್ರಕಣಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಇಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಯನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದು, ನೀವು ನಿಜವಾದ ಭಾರತೀಯನಾಗಿದ್ದರೆ ಈ ರೀತಿ ಹೇಳುತ್ತಿರಲಿಲ್ಲ ಎಂದು ಛೀಮಾರಿ ಹಾಕಿದೆ. ಇದೇ ವೇಳೆ ಈ ಮಾನನಷ್ಟ ಮೊಕದ್ದಮೆಗೆ ತಡೆ ನೀಡಿದೆ. ಭಾರತದ 2,000 ಕಿ.ಮೀ. ನೆಲವನ್ನು ಚೀನ ಕಬಳಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ವೇಳೆ ಸುಪ್ರೀಂ

ನೀವು ನಿಜವಾದ ಭಾರತೀಯನೇ ಆಗಿದ್ದರೆ… : ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ಛೀಮಾರಿ Read More »

ಐದನೇ ಟೆಸ್ಟ್‌ : ಸೋಲಿನತ್ತ ಮುಖ ಮಾಡಿದ ಭಾರತ

ಗೆಲ್ಲಲು ಇಂಗ್ಲೆಂಡಿಗೆ 35 ರನ್‌, ಭಾರತಕ್ಕೆ 4 ವಿಕೆಟ್‌ ಬೇಕು ಓವಲ್: ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ನಿರ್ಣಾಯಕ ದಿನವಾದ 4ನೇ ದಿನ ಭಾರತ ಸೋಲಿನತ್ತ ಮುಖ ಮಾಡಿದೆ. ಇಂಗ್ಲೆಂಡ್‌ಗೆ ಗೆಲುವು ಸಾಧಿಸಲು 35 ರನ್ ಅಗತ್ಯವಿದ್ದರೆ, ಭಾರತದ ಗೆಲುವು 4 ವಿಕೆಟ್ ದೂರದಲ್ಲಿದೆ. ಇನ್ನು ಒಂದಿಡೀ ದಿನದ ಆಟ ಉಳಿದಿದ್ದು, ಪವಾಡವೇನಾದರೂ ಸಂಭವಿಸಿದರೆ ಮಾತ್ರ ಭಾರತ ಗೆಲ್ಲಬಹುದು ಎಂಬ ಸ್ಥಿತಿಯಿದೆ. ಭಾರತದ 396 ರನ್ ಗುರಿ ಬೆನ್ನಟ್ಟಿದ

ಐದನೇ ಟೆಸ್ಟ್‌ : ಸೋಲಿನತ್ತ ಮುಖ ಮಾಡಿದ ಭಾರತ Read More »

ಕಾಶ್ಮೀರದ ಕಾಡಿನಲ್ಲಿ ಉಗ್ರರ ನಾಮಾವಶೇಷಕ್ಕೆ ನಡೆಯುತ್ತಿದೆ ಅತಿ ಭೀಕರ ಆಪರೇಷನ್‌ ಅಖಾಲ್‌

ಇಷ್ಟರ ತನಕ ಆರು ಭಯೋತ್ಪಾದಕರು ಫಿನಿಷ್‌ – ಓರ್ವ ಯೋಧನಿಗೆ ತೀವ್ರ ಗಾಯ ಶ್ರೀನಗರ: ಉಗ್ರರ ವಿರುದ್ಧ ಗಡಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ಕಾರ್ಯಾಚರಣೆ ಆಪರೇಷನ್‌ ಅಖಾಲ್‌ ಮೂರನೇ ದಿನಕ್ಕೆ ಪ್ರವೇಶಿಸಿದ್ದು, ಮೂವರು ಉಗ್ರರನ್ನು ಭದ್ರತಾ ಪಡೆ ಸದೆ ಬಡಿದಿದೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಮೂವರು ಉಗ್ರರನ್ನು ಸೇನೆ ಸಾಯಿಸಿತ್ತು. ಇದರೊಂದಿಗೆ ಆಪರೇಷನ್‌ ಅಖಾಲ್‌ನಲ್ಲಿ ಆರು ಉಗ್ರರನ್ನು ಮುಗಿಸಿದಂತಾಗಿದೆ. ಕಾಶ್ಮೀರದ ದಕ್ಷಿಣಕ್ಕಿರುವ ಕುಲ್‌ಗಾಂವ್‌ ಜಿಲ್ಲೆಯ ಅಖಾಲ್‌ ಕಾಡಿನಲ್ಲಿ ಕಳೆದ ಮೂರು ದಿನಗಳಿಂದ ಉಗ್ರರನ್ನು ಮುಗಿಸುವ

ಕಾಶ್ಮೀರದ ಕಾಡಿನಲ್ಲಿ ಉಗ್ರರ ನಾಮಾವಶೇಷಕ್ಕೆ ನಡೆಯುತ್ತಿದೆ ಅತಿ ಭೀಕರ ಆಪರೇಷನ್‌ ಅಖಾಲ್‌ Read More »

ಖ್ಯಾತ ಹಾಸ್ಯನಟ ಮದನ್‌ ಬಾಬು ನಿಧನ

ಕಮಲಹಾಸನ್‌, ರಜನಿಕಾಂತ್‌ರಂಥ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದ ಕಲಾವಿದ ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಮದನ್ ಬಾಬ್ (71) ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶನಿವಾರ ಸಂಜೆ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಮದನ್‌ ಬಾಬ್‌, ಕಮಲಹಾಸನ್, ರಜನಿಕಾಂತ್, ಅಜಿತ್ ಕುಮಾರ್‌, ಸೂರ್ಯ ಮತ್ತು ವಿಜಯ್ ಅವರಂತಹ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದಾರೆ. ಹಾಸ್ಯ, ಖಳನಾಯಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ರಂಜಿಸಿದ್ದರು. ಸುದೀರ್ಘ ವೃತ್ತಿಜೀವನದಲ್ಲಿ, ಅವರು 150ಕ್ಕೂ ಹೆಚ್ಚು

ಖ್ಯಾತ ಹಾಸ್ಯನಟ ಮದನ್‌ ಬಾಬು ನಿಧನ Read More »

ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತ ಉದ್ದೇಶಪೂರ್ವಕ ದುಷ್ಕೃತ್ಯ : ತನಿಖಾ ವರದಿಯಲ್ಲಿ ಬಹಿರಂಗ

ಹಳಿಯ ಇಂಟರ್‌ಲಾಕ್‌ ಕಿತ್ತು ಹಾಕಿದ ಪರಿಣಾಮ ಭೀಕರ ಅಪಘಾತ ಚೆನ್ನೈ: ಕಳೆದ ವರ್ಷ ಮೈಸೂರಿನಿಂದ ದರ್ಭಾಂಗಗೆ ಹೋಗುತ್ತಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಉದ್ದೇಶಿತ ದುಷ್ಕೃತ್ಯ. ಹಳಿ ಇಂಟರ್‌ಲಾಕ್ ತೆಗೆದು ದುಷ್ಕೃತ್ಯ ಎಸಗಿದ್ದಾರೆ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ಈ ಕುರಿತು ದಕ್ಷಿಣ ರೈಲ್ವೆ ವಲಯದ ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಎ.ಎಂ.ಚೌಧರಿ, ಕಳೆದ ವರ್ಷ ಅಕ್ಟೋಬರ್‌ 11ರಂದು ಚೆನ್ನೈ ಸಮೀಪದ ಕವರೈ ಪಟ್ಟಿ ರೈಲ್ವೆ

ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತ ಉದ್ದೇಶಪೂರ್ವಕ ದುಷ್ಕೃತ್ಯ : ತನಿಖಾ ವರದಿಯಲ್ಲಿ ಬಹಿರಂಗ Read More »

ಎನ್‌ಕೌಂಟರ್‌ಗೆ ಇನ್ನೋರ್ವ ಉಗ್ರ ಬಲಿ

ರಾತ್ರಿಯಿಡೀ ನಡೆದ ಕಾರ್ಯಾಚರಣೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್‌ ಅಖಾಲ್‌ʼ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ʻಆಪರೇಷನ್‌ ಅಖಾಲ್‌ʼ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತು. ಅರಣ್ಯ ಪ್ರದೇಶ ಸುತ್ತುವರಿದು ಶೋಧ ಆರಂಭಿಸಿದ ಭದ್ರತಾ

ಎನ್‌ಕೌಂಟರ್‌ಗೆ ಇನ್ನೋರ್ವ ಉಗ್ರ ಬಲಿ Read More »

ಮಲಯಾಳಂ ಚಿತ್ರರಂಗದ ಜನಪ್ರಿಯ ಹಾಸ್ಯನಟ ಹೋಟೆಲ್‌ ಕೋಣೆಯಲ್ಲಿ ನಿಗೂಢವಾಗಿ ಸಾವು

ಶೂಟಿಂಗ್‌ ಮುಗಿಸಿ ಬಂದ ನಟ ಶವವಾಗಿ ಪತ್ತೆ ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಜನಪ್ರಿಯ ಹಾಸ್ಯನಟ ಕಲಾಭವನ್ ನವಾಸ್ (51) ಶುಕ್ರವಾರ ರಾತ್ರಿ ಛೋಟಾನಿಕ್ಕರದಲ್ಲಿರುವ ಹೋಟೆಲ್ ಒಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ನವಾಸ್ ಮುಂದಿನ ‘ಪ್ರಕಂಬನಂʼ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಶುಕ್ರವಾರ ರಾತ್ರಿ ಚಿತ್ರೀಕರಣ ಮುಗಿಸಿ ಹೋಟೆಲ್‌ನಿಂದ ಚೆಕ್‌ಔಟ್ ಮಾಡಬೇಕಿತ್ತು. ಆದರೆ, ಸಮಯಕ್ಕೆ ತಮ್ಮ ಕೋಣೆಯಿಂದ ನಿರ್ಗಮಿಸದ ಕಾರಣ ರೂಮ್ ಬಾಯ್ ಅವರು ಹೋಗಿ ನೋಡಿದಾಗ ನವಾಸ್ ಅವರು ಪ್ರಜ್ಞೆತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು,

ಮಲಯಾಳಂ ಚಿತ್ರರಂಗದ ಜನಪ್ರಿಯ ಹಾಸ್ಯನಟ ಹೋಟೆಲ್‌ ಕೋಣೆಯಲ್ಲಿ ನಿಗೂಢವಾಗಿ ಸಾವು Read More »

ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೋಹನ್‌ ಭಾಗವತ್‌ರನ್ನು ಸಿಲುಕಿಸಲು ಆದೇಶಿಸಲಾಗಿತ್ತು

ತನಿಖೆ ನಡೆಸಿದ ಎಟಿಎಸ್‌ ಅಧಿಕಾರಿ ಬಹಿರಂಗಪಡಿಸಿದ ಸ್ಫೋಟಕ ಮಾಹಿತಿ ಮುಂಬೈ : ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರ್​​ಎಸ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ಸಿಲುಕಿಸುವ ಪಿತೂರಿ ನಡೆದಿತ್ತು ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆಯ (ಎಟಿಎಸ್‌) ಮಾಜಿ ಅಧಿಕಾರಿ ಮೆಹಬೂಬ್ ಮುಜಾವರ್ ಬಹಿರಂಗಪಡಿಸಿದ್ದಾರೆ. 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಅಧಿಕಾರಿಯೊಬ್ಬರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಒತ್ತಡವಿತ್ತು ಮತ್ತು

ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೋಹನ್‌ ಭಾಗವತ್‌ರನ್ನು ಸಿಲುಕಿಸಲು ಆದೇಶಿಸಲಾಗಿತ್ತು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 34 ರೂ. ಇಳಿಕೆ

ನಾಲ್ಕು ತಿಂಗಳಲ್ಲಿ ಸತತ ಕಡಿತ ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 33.50ರೂ.ನಷ್ಟು ಕಡಿತ ಮಾಡಿವೆ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಅತಿ ಹೆಚ್ಚು ಕಡಿತ ಮಾಡಲಾಗಿದೆ. ಆದರೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮಹಾನಗರಗಳಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 33.5 ರೂ.ಗಳಿಂದ 34.5 ರೂ.ಗಳಿಗೆ ಇಳಿಸಲಾಗಿದೆ. ಚೆನ್ನೈಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ ಪ್ರತಿ ಸಿಲಿಂಡರ್‌ಗೆ 1,800 ರೂ.ಗಳಿಗಿಂತ

ಗ್ಯಾಸ್‌ ಸಿಲಿಂಡರ್‌ ಬೆಲೆ 34 ರೂ. ಇಳಿಕೆ Read More »

error: Content is protected !!
Scroll to Top