ದೇಶ

ಹರಿಯಾಣದ ಆಸ್ಪತ್ರೆಯಿಂದ 360 ಆರ್‌ಡಿಎಕ್ಸ್‌ ಸ್ಫೋಟಕ ವಶ

ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಇಬ್ಬರು ಡಾಕ್ಟರ್‌ಗಳು ಸೆರೆ ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಪರಿಯಾಣದ ಫರಿದಾಬಾದ್‌ನ ಆಸ್ಪತ್ರೆಯೊಂದಕ್ಕೆ ದಾಳಿ ಮಾಡಿರುವ ಪೊಲೀಸರು 360 ಕಿ.ಗ್ರಾಂ ಆರ್‌ಡಿಎಕ್ಸ್‌ ಸ್ಫೋಟಕ ಮತ್ತು ಒಂದು ಎ.ಕೆ. 47 ರೈಫಲ್‌ ವಶಪಡಿಸಿಕೊಂಡು ಇಬ್ಬರು ಡಾಕ್ಟರ್‌ಗಳನ್ನು ಬಂಧಿಸಿದ್ದಾರೆ. ದೇಶದಲ್ಲಿ ಇನ್ನೊಂದು ಬೃಹತ್‌ ವಿಧ್ವಂಸಕ ಕೃತ್ಯವನ್ನು ಈ ಮೂಲಕ ಪೊಲೀಸರು ವಿಫಲಗೊಳಿಸಿದ್ದಾರೆ. ಫರಿದಾಬಾದ್‌ನ ಅಲ್‌ ಫಲಾಹ ಆಸ್ಪತ್ರೆಯಿಂದ ಈ ಬೃಹತ್‌ ಪ್ರಮಾಣದ ಅಪಾಯಕಾರಿ ಸ್ಫೋಟಕವನ್ನು ಜಮ್ಮು-ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸೆರೆಯಾದ ಡಾಕ್ಟರ್‌ ನೀಡಿದ […]

ಹರಿಯಾಣದ ಆಸ್ಪತ್ರೆಯಿಂದ 360 ಆರ್‌ಡಿಎಕ್ಸ್‌ ಸ್ಫೋಟಕ ವಶ Read More »

ಅಲ್‌ಖೈದಾ ಜಿಹಾದಿಗಳಿಂದ ಐವರು ಭಾರತೀಯರ ಅಪಹರಣ

ಹಿಂಸಾತ್ರಸ್ತ ಮಾಲಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಗಳು ಮಾಲಿ : ಅಶಾಂತಿ ಮತ್ತು ಜಿಹಾದಿ ಹಿಂಸಾಚಾರದಿಂದ ತತ್ತರಿಸಿರುವ ಪಶ್ಚಿಮ ಆಫ್ರಿಕಾದ ದೇಶವಾದ ಮಾಲಿಯಲ್ಲಿ ಅಲ್‌ ಖೈದಾ ಜಿಹಾದಿಗಳು ಐವರು ಭಾರತೀಯ ಪ್ರಜೆಗಳನ್ನು ಅಪಹರಿಸಿದ್ದಾರೆ ಎಂದು ಅವರ ಕಂಪನಿ ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಪಶ್ಚಿಮ ಮಾಲಿಯ ಕೊಬ್ರಿ ಬಳಿ ಗುರುವಾರ ಬಂದೂಕುಧಾರಿಗಳು ಕಾರ್ಮಿಕರನ್ನು ಅಪಹರಿಸಿದ್ದಾರೆ. ವಿದ್ಯುದೀಕರಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಐವರು ಭಾರತೀಯ ಪ್ರಜೆಗಳ ಅಪಹರಣವನ್ನು ನಾವು ದೃಢಪಡಿಸುತ್ತೇವೆ ಎಂದು

ಅಲ್‌ಖೈದಾ ಜಿಹಾದಿಗಳಿಂದ ಐವರು ಭಾರತೀಯರ ಅಪಹರಣ Read More »

ಕರಾವಳಿಯಲ್ಲಿ ಕಾರುಗಳ ಮಾರಾಟ ಶೇ. 30 ಹೆಚ್ಚಳ

ಜಿಎಸ್‌ಟಿ ಇಳಿಕೆ; ಹಬ್ಬದ ಕೊಡುಗೆಗಳ ಪರಿಣಾಮ ಗರಿಗೆದರಿದ ವ್ಯಾಪಾರ ವಹಿವಾಟು ಮಂಗಳೂರು : ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಕೆ ಮಾಡಿದ ಪರಿಣಾಮವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲೂ ವ್ಯಾಪಾ ವಹಿವಾಟುಗಳು ವೃದ್ಧಿ ಕಂಡಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರುಗಳ ಮಾರಾಟ ಶೇ.30ರಷ್ಟು ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸೀಸನ್‌ನಲ್ಲಿ ವಾಹನಗಳ ಖರೀದಿ ಗಣನೀಯವಾಗಿ ಹೆಚ್ಚಾಗಿದೆ. ಅನೇಕರು ದೀಪಾವಳಿಯನ್ನು ಹೊಸ ವಾಹನಗಳೊಂದಿಗೆ ಸಂಭ್ರಮಿಸಿದ್ದಾರೆ. ದಸರಾದಿಂದಲೇ

ಕರಾವಳಿಯಲ್ಲಿ ಕಾರುಗಳ ಮಾರಾಟ ಶೇ. 30 ಹೆಚ್ಚಳ Read More »

ಉಡುಪಿ: ಲಕ್ಷಕಂಠ ಗೀತಾ ಪಾರಾಯಣದಲ್ಲಿ ಶ್ಲೋಕ ಪಠಿಸಲಿರುವ ಮೋದಿ

ನ.28ರಂದು ಪ್ರಧಾನಿಯಿಂದ ಸುವರ್ಣ ತೀರ್ಥ ಮಂಟಪ, ಚಿನ್ನದ ಕನಕನ ಕಿಂಡಿ, ಕನಕ ಕವಚ ಉದ್ಘಾಟನೆ ಉಡುಪಿ : ನ.28ರಂದು ಉಡುಪಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿ ಶ್ಲೋಕ ಪಠಿಸಲಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ನವೆಂಬರ್ 8ರಿಂದ ಡಿಸೆಂಬರ್ 7ರವರೆಗೆ ಭವ್ಯವಾದ ಗೀತೋತ್ಸವವನ್ನು ಆಚರಿಸಲಾಗುವುದು. ಈ ಕಾರ್ಯಕ್ರಮವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಪ್ರತಿದಿನ ವಿದ್ವಾಂಸರಿಂದ ಗೀತಾ

ಉಡುಪಿ: ಲಕ್ಷಕಂಠ ಗೀತಾ ಪಾರಾಯಣದಲ್ಲಿ ಶ್ಲೋಕ ಪಠಿಸಲಿರುವ ಮೋದಿ Read More »

ಇಂದು ವಂದೇ ಮಾತರಂ 150ನೇ ವರ್ಷಾಚರಣೆ

ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಡು ನವದೆಹಲಿ : ರಾಷ್ಟ್ರಗೀತೆಯಷ್ಟೇ ಮನ್ನಣೆ ಹೊಂದಿರುವ ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಇಂದು 150ನೇ ವರ್ಷಾಚರಣೆಯ ಸಂಭ್ರಮ. ವಂದೇ ಮಾತರಂ 150ನೇ ವರ್ಷಾಚರಣೆ ನಿಮಿತ್ತ ಇಂದು ದೇಶಾದ್ಯಂತ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಅದರಲ್ಲಿ 150 ಕಡೆಗಳಲ್ಲಿ ವಂದೇ ಮಾತರಂ ಹಾಡುವುದು ಸೇರಿದೆ. ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಹಲವು ಪೀಳಿಗೆಯ ಭಾರತೀಯರು ಒಂದಾಗಲು, ಎದ್ದುನಿಲ್ಲಲು ಮತ್ತು ರಾಷ್ಟ್ರದ ಚೈತನ್ಯವನ್ನು ಬಲಪಡಿಸಲು ಪ್ರೇರೇಪಿಸಿದ ಹಾಡು

ಇಂದು ವಂದೇ ಮಾತರಂ 150ನೇ ವರ್ಷಾಚರಣೆ Read More »

ರಾಹುಲ್‌ ಗಾಂಧಿ ತೋರಿಸಿದ್ದು ಬ್ರಝಿಲ್‌ ರೂಪದರ್ಶಿಯ ಹಳೆಯ ಫೋಟೊ!

ಹರಿಯಾಣದಲ್ಲಿ ಮತ ಕಳ್ಳತನ ಆರೋಪಕ್ಕೆ ಬಳಸಿದ್ದ ಫೊಟೊ ನವದೆಹಲಿ : ನಿನ್ನೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹರಿಯಾಣದಲ್ಲಿ ಭಾರಿ ಪ್ರಮಾಣದ ಮತಕಳ್ಳತನವಾಗಿದೆ ಎಂದು ಆರೋಪಿಸಲು ಬಳಸಿಕೊಂಡಿದ್ದ ಯುವತಿಯ ಫೋಟೊ ಬ್ರಝಿಲ್‌ನ ಮೋಡೆಲ್‌ ಒಬ್ಬರ ಹಳೆಯ ಫೋಟೊ ಎನ್ನುವುದು ಬಹಿರಂಗವಾಗಿದೆ.ಬ್ರಝಿಲ್‌ನ ರೂಪದರ್ಶಿ ಲಾರಿಸ್ಸಾ ಎಂಬವರ ಫೋಟೊ ಇದು ಎನ್ನುವುದು ಖಾಸಗಿ ವಾಹಿನಿಗಳು ನಡೆಸಿದ ತನಿಖೆಯಿಂದ ಗೊತ್ತಾಗಿದೆ. ಸ್ವತಹ ಲಾರಿಸ್ಸಾ ಈ ವಿಚಿತ್ರ ವಿದ್ಯಮಾನಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಬಿಜೆಪಿ ಚುನಾವಣಾ

ರಾಹುಲ್‌ ಗಾಂಧಿ ತೋರಿಸಿದ್ದು ಬ್ರಝಿಲ್‌ ರೂಪದರ್ಶಿಯ ಹಳೆಯ ಫೋಟೊ! Read More »

1 ಗಂಟೆಯಲ್ಲಿ 20 ಮತ ಹಾಕುವುದು ಸಾಧ್ಯನಾ? : ರಾಹುಲ್‌ ಗಾಂಧಿ ಆರೋಪಕ್ಕೆ ಬಿಜೆಪಿ ವ್ಯಂಗ್ಯ

ಕಾಂಗ್ರೆಸ್‌ ನಾಯಕ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕೆ ನವದೆಹಲಿ: ಹರಿಯಾಣದಲ್ಲಿ ವೋಟ್‌ ಚೋರಿ ನಡೆದಿದೆ ಎಂಬ ರಾಹುಲ್‌ ಗಾಂಧಿ ಆರೋಪವನ್ನು ಬಿಜೆಪಿ ವ್ಯಂಗ್ಯ ಮಾಡಿದೆ. ಯಾರಾದ್ರೂ ಒಂದು ಗಂಟೆಯಲ್ಲಿ 20 ಹಾಕುವುದಕ್ಕೆ ಸಾಧ್ಯವಾ ಎಂದು ಬಿಜೆಪಿ ಪ್ರಶ್ನಿಸಿದೆ. ನಿನ್ನೆ ಸುದ್ದಿಗೋಷ್ಠಿ ನಡೆಸಿದ ರಾಹುಲ್‌ ಗಾಂಧಿ, ಹರಿಯಾಣದಲ್ಲಿ ದೊಡ್ಡ ಪ್ರಮಾಣದ ಮತದಾರರ ವಂಚನೆ ನಡೆದಿದೆ. ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸುವ ಪ್ರಯತ್ನ ಎಂದು ಆರೋಪಿಸಿದ್ದರು. ಅದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಭಾರತ

1 ಗಂಟೆಯಲ್ಲಿ 20 ಮತ ಹಾಕುವುದು ಸಾಧ್ಯನಾ? : ರಾಹುಲ್‌ ಗಾಂಧಿ ಆರೋಪಕ್ಕೆ ಬಿಜೆಪಿ ವ್ಯಂಗ್ಯ Read More »

ಬಿಹಾರದಲ್ಲಿ ಮೊದಲ ಹಂತದ ಮತದಾನ ಶುರು

121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನಕ್ಕೆ ಉತ್ಸಾಹದಿಂದ ಧಾವಿಸಿದ ಮತದಾರರು ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಜನರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ. ಇಂದು ಮೊದಲ ಹಂತದ ಮತದಾನದಲ್ಲಿ, 18 ಜಿಲ್ಲೆಗಳಾದ್ಯಂತ 121 ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಈ ಹಂತವು ರಾಜ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವುದಲ್ಲದೆ, ಎನ್​ಡಿಎ ಮತ್ತು ಮಹಾ ಮೈತ್ರಿಕೂಟ ಎರಡಕ್ಕೂ ಅಗ್ನಿಪರೀಕ್ಷೆ ಇದಾಗಿರಲಿದೆ. ಆಡಳಿತವು ಪ್ರತಿ ಮತಗಟ್ಟೆಯಲ್ಲಿ ಸಶಸ್ತ್ರ ಪಡೆಗಳನ್ನು

ಬಿಹಾರದಲ್ಲಿ ಮೊದಲ ಹಂತದ ಮತದಾನ ಶುರು Read More »

ನ.17ರಿಂದ ಶಬರಿಮಲೆ ಯಾತ್ರೆ ಶುರು

ಡಿ.27ರಂದು ಮಂಡಲ ಪೂಜೆ ; ಜ.14ಕ್ಕೆ ಮಕರ ಜ್ಯೋತಿ ದರ್ಶನ ಶಬರಿಮಲೆ : ಶಬರಿಮಲೆಯಲ್ಲಿ ಈ ಬಾರಿಯ ಮಂಡಲ ಮಹೋತ್ಸವಕ್ಕೆ ಸಿದ್ಧತೆ ಶುರುವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವ್ರತಾಚರಣೆ ಶುರು ಮಾಡಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆ ಶ್ರೀ ಧರ್ಮಶಾಸ್ತ್ರಾ ದೇವಸ್ಥಾನದ ಗರ್ಭಗುಡಿಯ ಬಾಗಿಲು ನ.17ರಂದು ತೆರೆಯಲಿದೆ. ಡಿ.27ರಂದು ಮಂಡಲ ಪೂಜೆ ನಡೆಯಲಿದ್ದು, 2026ರ ಜ.14ರಂದು ಮಕರ ಸಂಕ್ರಮಣ ಮಹೋತ್ಸವ ನಡೆಯಲಿದೆ. ಶಬರಿಮಲೆ ಮಂಡಲ ಮಹೋತ್ಸವಕ್ಕೆ ಆನ್‌ಲೈನ್ ಬುಕ್ಕಿಂಗ್ ಆರಂಭಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 70 ಸಾವಿರ

ನ.17ರಿಂದ ಶಬರಿಮಲೆ ಯಾತ್ರೆ ಶುರು Read More »

ತೆಲಂಗಾಣ ಅಪಘಾತದಲ್ಲಿ ಮೂವರು ಒಡಹುಟ್ಟಿದ ಸಹೋದರಿಯರು ಸಾವು

ಜಲ್ಲಿ ಸಾಗಿಸುತ್ತಿದ್ದ್‌ ಟ್ರಕ್‌ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ದುರಂತ ಹೈದರಾಬಾದ್ : ತೆಲಂಗಾಣದಲ್ಲಿ ಸೋಮವಾರ ಬೆಳಗ್ಗೆ ಜಲ್ಲಿ ಸಾಗಿಸುತ್ತಿದ್ದ ಟ್ರಕ್‌ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಡಹುಟ್ಟಿದ ಮೂವರು ಸಹೋದರಿಯರು ಕೂಡ ಸಾವನ್ನಪ್ಪಿದ್ದಾರೆ. ಮನೆಗೆ ಬೆಳಕಾಗಿದ್ದ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿದೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬವರ ಮೂವರು ಹೆಣ್ಣುಮಕ್ಕಳು

ತೆಲಂಗಾಣ ಅಪಘಾತದಲ್ಲಿ ಮೂವರು ಒಡಹುಟ್ಟಿದ ಸಹೋದರಿಯರು ಸಾವು Read More »

error: Content is protected !!
Scroll to Top