ದೇಶ

ಟಿ20 ವಿಶ್ವಕಪ್‌ ಸೆಮಿಫೈನಲ್‌ : ಕಿರು ಕ್ರಿಕೆಟಿನ ಎಲ್ಲ ರೋಚಕತೆಯನ್ನು ಉಣಬಡಿಸಿದ ಕಾದಾಟ

7 ರನ್‌ನಿಂದ ಆಂಗ್ಲರನ್ನು ಮಣಿಸಿ ಭಾರತ ಫೈನಲ್‌ಗೆ ಮುಂಬೈ: ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ಭಾರತ ಮತ್ತು ಇಂಗ್ಲಂಡ್‌ ನಡುವೆ ನಡೆದ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯ 20-20 ಪಂದ್ಯದ ಎಲ್ಲ ರೋಚಕತೆಯನ್ನು ಪ್ರೇಕ್ಷಕರಿಗೆ ಉಣಬಡಿಸಿ ನಿಜವಾದ ಅರ್ಥದಲ್ಲಿ ರಣರೋಚಕ ಎನಿಸಿಕೊಂಡಿತು. ಕೊನೆಯ ಎಸೆತದ ತನಕ ಶತಕೋಟಿ ಕ್ರಿಕೆಟ್‌ ಅಭಿಮಾನಿಗಳು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿದ ಪಂದ್ಯದಲ್ಲಿ ಭಾರತ 7 ರನ್‌ಗಳ ರೋಚಕ ಗೆಲುವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶೀಸಿದೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ […]

ಟಿ20 ವಿಶ್ವಕಪ್‌ ಸೆಮಿಫೈನಲ್‌ : ಕಿರು ಕ್ರಿಕೆಟಿನ ಎಲ್ಲ ರೋಚಕತೆಯನ್ನು ಉಣಬಡಿಸಿದ ಕಾದಾಟ Read More »

ಎಲ್ಲಾ ಸಮಸ್ಯೆಗೂ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಪ್ರಧಾನಿ ಮೋದಿ

ನವದೆಹಲಿ: ಯಾವ ಸಮಸ್ಯೆಗೂ ಮಿಲಿಟರಿ ಸಂಘರ್ಷವೇ ಪರಿಹಾರ ನೀಡಲಾರದು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಗಳಿಗೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಫಿನ್‍ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಜೊತೆಗೆ ಸುಧೀರ್ಘ ಮಾತುಕತೆ ನಡೆಸಿ ಬಳಿಕ ಈ ಸಂದೇಶವನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ನೀಡಿರುವುದಾಗಿದೆ. ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಫಿನ್ಲೆಂಡ್‌ಗಳೆರಡೂ ಕಾನೂನು ಆಡಳಿತ, ಸಂವಾದ, ರಾಜತಾಂತ್ರಿಕತೆಯಲ್ಲಿ ಗಟ್ಟಿಯಾದ ನಂಬಿಕೆ ಇರಿಸಿವೆ. ಸಂಘರ್ಷಗಳಿಗೆ ಇತಿಶ್ರೀ

ಎಲ್ಲಾ ಸಮಸ್ಯೆಗೂ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಪ್ರಧಾನಿ ಮೋದಿ Read More »

ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ‌ಸಿಲುಕಿದ್ದ 50 ಮಂದಿ ಕನ್ನಡಿಗರು ಮರಳಿ ತಾಯ್ನೆಲಕ್ಕೆ

ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಕಾರಣವಾದ ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಕಾರಣದಿಂದ ದುಬೈ‌ನಲ್ಲಿ ‌ಸಿಲುಕಿ ಸಂಕಷ್ಟದಲ್ಲಿದ್ದ 50 ಮಂದಿ ಕನ್ನಡಿಗರು ಶಾಸಕ ಬಿ. ನಾಗೇಂದ್ರ ಅವರ ಸಹಕಾರದಿಂದ ಮತ್ತೆ ತಾಯ್ನಾಡಿಗೆ ಮರಳುವಂತಾಗಿದೆ. ಬಳ್ಳಾರಿಯ 35 ಮಂದಿ , ಚಿತ್ರದುರ್ಗದ 15 ಜನರು ಸೇರಿ 246 ಮಂದಿ ಕನ್ನಡಿಗರು ಮಾ. 4 ರಂದು ಶಾರ್ಜಾದಿಂದ ಕೊಚ್ಚಿನ್‌ಗೆ ಬಂದಿಳಿದಿದ್ದರು. ರಾಜ್ಯದ 50 ಜನರಿಗೆ ಅಲ್ಲಿಂದ ಬೆಂಗಳೂರಿಗೆ ಬರಲು ನಾಗೇಂದ್ರ ಅವರು ವಿಮಾನದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಬೆಂಗಳೂರಿಗೆ ಅವರೆಲ್ಲರೂ

ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ‌ಸಿಲುಕಿದ್ದ 50 ಮಂದಿ ಕನ್ನಡಿಗರು ಮರಳಿ ತಾಯ್ನೆಲಕ್ಕೆ Read More »

ಟಿ20 ವಿಶ್ವಕಪ್‌ : ಇಂದು ಭಾರತ-ಇಂಗ್ಲಂಡ್‌ ಸೆಮಿ ಫೈನಲ್‌ ಕಾದಾಟ

ಸತತ ಮೂರನೇ ಸಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ಇಂಡಿಯಾ-ಇಂಗ್ಲಂಡ್‌ ಮುಂಬೈ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನ ಎರಡನೇ ಪಂದ್ಯ ಇಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲಂಡ್‌ ನಡುವೆ ನಡೆಯಲಿದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ನ್ಯೂಜಿಲೆಂಡ್‌ ಮಖಾಡೆ ಮಲಗಿಸಿ ಫೈನಲ್‌ಗೇರಿದೆ. ನ್ಯೂಜಿಲೆಂಡ್‌ ಲೆಕ್ಕಕ್ಕೆ ಇಲ್ಲ ಎಂಬ ದಾಟಿಯಲ್ಲಿ ಮಾತನಾಡುತ್ತಿದ್ದ ದಕ್ಷಿಣ ಆಫ್ರಿಕ ಹೀನಾಯವಾಗಿ ಸೋತು ಗರ್ವಭಂಗವಾಗಿ ಕೂಟದಿಂದ ನಿರ್ಗಮಿಸಿದೆ. ಭಾರತ ತಂಡ ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ

ಟಿ20 ವಿಶ್ವಕಪ್‌ : ಇಂದು ಭಾರತ-ಇಂಗ್ಲಂಡ್‌ ಸೆಮಿ ಫೈನಲ್‌ ಕಾದಾಟ Read More »

ಮಧ್ಯಪ್ರಾಚ್ಯದ ಎಂಟು ರಾಷ್ಟ್ರಗಳ ಜೊತೆ ಪ್ರಧಾನಿ ಮೋದಿ ಮಾತು: ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚೆ

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಬಿಗಡಾಯಿಸುತ್ತಿರುವ ಹಿನ್ನೆಲೆ ಭಾರತದ ಪ್ರಧಾನಿ ಮೋದಿ ಅವರು ಒಮಾನ್, ಕತಾರ್, ಕುವೈಟ್ ಸೇರಿದಂತೆ ಎಂಟು ರಾಷ್ಟ್ರಗಳ ಜೊತೆಗೆ ಮಾತುಕತೆ ಮಾಡಿದ್ದಾರೆ. ಆ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ವಿಚಾರಿಸಿರುವ ಅವರು, ಇರಾನ್ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇರಾನ್‌ನ ಪ್ರತೀಕಾರದ ದಾಳಿಗೆ ತುತ್ತಾಗಿರುವ ಒಮಾನ್‌ನ ಸುಲ್ತಾನ ಹೈತಮ್ ಬಿನ್ ತಾರಿಕ್, ಕುವೈತ್ ರಾಜಕುಮಾರ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್ -ಸಬಾಹ್ ಮತ್ತು ಕತಾರ್‌ನ ಅಮೀರ ಶೇಖ್ ತಮೀಮ್ ಬಿನ್

ಮಧ್ಯಪ್ರಾಚ್ಯದ ಎಂಟು ರಾಷ್ಟ್ರಗಳ ಜೊತೆ ಪ್ರಧಾನಿ ಮೋದಿ ಮಾತು: ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚೆ Read More »

ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ: ಇರಾನ್ ಸಂಚಿದೆಯೇ ‌ಎಂಬ ನೆಲೆಯಲ್ಲಿ ತನಿಖೆ

ಟೆಕ್ಸಾಸ್: ಕಳೆದ ಭಾನುವಾರ ಆಸ್ಟಿನ್‌ನಲ್ಲಿ ‌ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ‌ಸಹ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಟೆಕ್ಸಾಸ್ ವಿವಿಯ ವಿದ್ಯಾರ್ಥಿನಿ ‌ಸವಿತಾ ಷಣ್ಮುಗ ಸುಂದರಂ ಮೃತ ವಿದ್ಯಾರ್ಥಿನಿ.‌ ದಾಳಿ ಮಾಡಿದ ಬಂದೂಕುದಾರಿಯನ್ನು ಹತ್ಯೆ ಮಾಡಲಾಗಿದ್ದು, ಈ ದಾಳಿ ಸಂಭಾವ್ಯ ಭಯೋತ್ಪಾದಕ ದಾಳಿ ಎಂಬ ನೆಲೆಯಲ್ಲಿ ಎಫ್‌ಬಿಐ ತನಿಖೆ ಮಾಡುತ್ತಿದೆ. ಇರಾನ್ ಸಂಘರ್ಷ ಮತ್ತು ಈ ದಾಳಿಗೆ ಏನಾದರೂ ಸಂಪರ್ಕ ಇದೆಯೇ? ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಮೇ

ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ: ಇರಾನ್ ಸಂಚಿದೆಯೇ ‌ಎಂಬ ನೆಲೆಯಲ್ಲಿ ತನಿಖೆ Read More »

ಉದ್ಯೋಗ ನಿಮಿತ್ತ ಇರಾನಿಗೆ ತೆರಳಿದ್ದ ಯುವಕನ ಸುಳಿವಿಲ್ಲದೆ ಕಂಗಾಲಾದ ಕುಟುಂಬ

ಚಿಕ್ಕಮಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಉದ್ಯೋಗ ನಿಮಿತ್ತ ಇರಾನ್‌ಗೆ ತೆರಳಿದ್ದ ಮರ್ಚಂಟ್ ನೇವಿ ಉದ್ಯೋಗಿ ಕೊಪ್ಪ ತಾಲೂಕಿನ ನಿಶ್ಚಿತ್ ಕುಟುಂಬಸ್ಥರ ‌ಸಂಪರ್ಕಕ್ಕೆ ಸಿಗದೇ ಇದ್ದು, ಪೋಷಕರು ಕಂಗಾಲಾಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ನಿಶ್ಚಿತ್ ಇರಾನಿಗೆ ತೆರಳಿದ್ದರು. ಇದೀಗ ಅಲ್ಲಿ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದು, ನಿಶ್ಚಿತ್‌ನ ಸುರಕ್ಷತೆಯ ಬಗ್ಗೆ ಕುಟುಂಬ ವರ್ಗ ಆತಂಕ ವ್ಯಕ್ತಪಡಿಸಿರುವುದಾಗಿದೆ. ಕಳೆದ ಕೆಲ ದಿನಗಳಿಂದ ನಿಶ್ಚಿತ್ ಅವರ ಫೋನ್ ಸ್ವಿಚ್‌ಆಫ್ ಆಗಿದೆ. ಅವರ ಸ್ಥಿತಿಗತಿಗಳ ಬಗ್ಗೆ ಯಾವುದೇ ಮಾಹಿತಿ

ಉದ್ಯೋಗ ನಿಮಿತ್ತ ಇರಾನಿಗೆ ತೆರಳಿದ್ದ ಯುವಕನ ಸುಳಿವಿಲ್ಲದೆ ಕಂಗಾಲಾದ ಕುಟುಂಬ Read More »

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ

ತೆಹ್ರಾನ್: ಇರಾನ್ ಮತ್ತು ಅಮೆರಿಕಾ, ಇಸ್ರೇಲ್ ನಡುವಿನ ಜಟಾಪಟಿಯಲ್ಲಿ ಇರಾನಿನ ಪರಿಸ್ಥಿತಿ ಹದೆಗೆಟ್ಟಿದೆ. ಭದ್ರತಾ ಪರಿಸ್ಥಿತಿ ಬಿಗುವಾಗಿದೆ. ಯುದ್ಧದ ಭೀತಿಯ ಕಾರಣಕ್ಕಾಗಿ ಅಲ್ಲಿನ ಭಾರತೀಯರಿಗೆ ಸಂಬಂಧಿಸಿದ ಹಾಗೆ ಭಾರತೀಯ ರಾಯಭಾರ ಕಚೇರಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಇರಾನಿನಲ್ಲಿರುವ ಎಲ್ಲಾ ಭಾರತೀಯರು ಅನಗತ್ಯ ಓಡಾಟ ತಪ್ಪಿಸಿ, ಆದಷ್ಟು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಸ್ಥಳೀಯ ಸುದ್ದಿಗಳು, ರಾಯಭಾರ ಕಚೇರಿಯ ಪ್ರಕಟಣೆಗಳನ್ನು ಗಮನಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಪ್ರತಿಭಟನೆ ನಡೆವ ಸ್ಥಳಗಳಿಂದ ದೂರವಿರುವಂತೆಯೂ ಎಚ್ಚರಿಕೆ

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ Read More »

ಗಲ್ಫ್‌ನಲ್ಲಿ ಸಿಲುಕಿರುವವರನ್ನು ಕರೆತರಲು ವಿಮಾನ ರವಾನೆ

ಪರ್ಯಾಯ ವಾಯು ಮಾರ್ಗಗಳ ಮೂಲಕ ಭಾರತೀಯರನ್ನು ಕರೆತರಲು ವಿಶೇಷ ಕಾರ್ಯಾಚರಣೆ ನವದೆಹಲಿ: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಮಧ್ಯಪ್ರಾಚ್ಯದ ವಿವಿಧೆಡೆ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಸಂಭಾವ್ಯ ವಾಯುಪ್ರದೇಶಗಳ ಮೂಲಕ ಭಾರತೀಯರನ್ನು ಕರೆತರಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂಡಿಗೋ ಏರ್​ಲೈನ್ಸ್​ನ 10 ವಿಶೇಷ ವಿಮಾನಗಳು ಮಂಗಳವಾರ ಜೆದ್ದಾಗೆ ತೆರಳಿ ಭಾರತೀಯರನ್ನು ಕರೆತರಲು ಉದ್ದೇಶಿಸಿವೆ ಎಂದು ಸಚಿವಾಲಯ ತಿಳಿಸಿದೆ. ಜೆದ್ದಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಇಂಡಿಗೋ ಸಂಪರ್ಕದಲ್ಲಿದೆ. ಯಾವ ವಾಯುಮಾರ್ಗದ

ಗಲ್ಫ್‌ನಲ್ಲಿ ಸಿಲುಕಿರುವವರನ್ನು ಕರೆತರಲು ವಿಮಾನ ರವಾನೆ Read More »

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ

ದೇವಾಲಯದ ಸಂಪ್ರದಾಯ, ಭಕ್ತರ ನಂಬಿಕೆ ಎತ್ತಿ ಹಿಡಿಯಲು ಆದ್ಯತೆ ತಿರುವಂತಪುರ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂಬ ಮಹತ್ವದ ತೀರ್ಮಾನವನ್ನು ತಿರುವಾಂಕೂರು ದೇವಸ್ವಂ ಮಂಡಳಿ ತೆಗೆದುಕೊಂಡಿದೆ. ಋತುಮತಿಯರಾಗುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್‌ 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ದೇವಸ್ವಂ ಬೋರ್ಡ್‌ ಅಧ್ಯಕ್ಷ ಕೆ.ಜಯಕುಮಾರ್ ತಿಳಿಸಿದ್ದಾರೆ. ಟಿಡಿಬಿಯು ಶಬರಿಮಲೆ ಪದ್ಧತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಕಾಪಾಡಲು ಒತ್ತು ಕೊಡುತ್ತದೆ.

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ Read More »

error: Content is protected !!
Scroll to Top