ವಿದೇಶ

ಆರ್‌ಎಸ್‌ಎಸ್‌ ಶಿಬಿರಗಳ ಮೇಲೆ ದಾಳಿ : ಪಾಕಿಸ್ಥಾನದ ಬೆದರಿಕೆಗೆ ಆಕ್ರೋಶ

ಆರ್‌ಎಸ್‌ಎಸ್ ಶಿಬಿರಗಳ ಮೇಲೆ ದಾಳಿ ಮಾಡುತ್ತೇವೆ ಎಂದ ಪಾಕ್‌ ಸಚಿವ ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವೆ ಮತ್ತೆ ಉದ್ವಿಗ್ನತೆ ಕಾಣಿಸಿಕೊಂಡಿದೆ. ಗಡಿ ಉದ್ವಿಗ್ನತೆಯ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಆರ್‌ಎಸ್‌ಎಸ್‌ ಶಿಬಿರಗಳ ಮೇಲೆ ದಾಳಿ ಮಾಡುವ ಕುರಿತು ಭಾರತಕ್ಕೆ ಬಹಿರಂಗ ಬೆದರಿಕೆಯೊಡ್ಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ಬಾರಿ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ನಡೆದರೆ ಅದು ಕೇವಲ 200-250 ಕಿ.ಮೀ.ಗೆ ಸೀಮಿತವಾಗಿರುವುದಿಲ್ಲ. ನಾವು ಭಾರತದ ಗಡಿಯೊಳಗೆ ನುಗ್ಗಿ, ಅವರ ಮನೆಗಳೊಳಗೆ ಹಾಗೂ […]

ಆರ್‌ಎಸ್‌ಎಸ್‌ ಶಿಬಿರಗಳ ಮೇಲೆ ದಾಳಿ : ಪಾಕಿಸ್ಥಾನದ ಬೆದರಿಕೆಗೆ ಆಕ್ರೋಶ Read More »

ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಸಂಪನ್ಮೂಲ ಸಂಗ್ರಹಕ್ಕೆ ಸಗಣಿ ತೆರಿಗೆ!

ಜಾನುವಾರು ಸಾಕುವವರಿಗೆ ಹೊಸ ತೆರಿಗೆ ಹಾಕಲು ಮುಂದಾದ ಸರ್ಕಾರ ಇಸ್ಲಾಮಾಬಾದ್: ಪಾಕಿಸ್ತಾನ ಇದೀಗ ಹೊಸ ತೆರಿಗೆಯೊಂದನ್ನು ಜಾರಿಗೆ ತಂದಿದೆ. ಈ ಮೂಲಕ ಸ್ವಚ್ಛತೆಯ ದೃಷ್ಟಿಯಿಂದ ಎಮ್ಮೆ ಸಾಕಿದವರಿಗೆ ಇನ್ಮುಂದೆ ಸಗಣಿ ತೆರಿಗೆ ವಿಧಿಸಲಿದೆ. ಇಷ್ಟು ಕಾಲ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಹಣಕ್ಕಾಗಿ ವಿದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಬಾಗಿಲು ಬಡಿಯುತ್ತಿತ್ತು. ಆದರೆ ಇದೀಗ ತನ್ನ ಜನರ ಜೇಬಿಗೆ ಕತ್ತರಿ ಹಾಕಿ, ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಎಮ್ಮೆಗಳನ್ನು ಸಾಕಿದವರಿಂದ `ಸೆಗಣಿ ತೆರಿಗೆ ವಸೂಲಿ’ ಮಾಡುವುದಾಗಿ

ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಸಂಪನ್ಮೂಲ ಸಂಗ್ರಹಕ್ಕೆ ಸಗಣಿ ತೆರಿಗೆ! Read More »

ಸೇನಾ ದಂಡನಾಯಕನನ್ನು ಕಿತ್ತು ಹಾಕಿದ ಟ್ರಂಪ್‌

ಯುದ್ಧದ ನಡುವೆ ಅಚ್ಚರಿಯ ನಿರ್ಧಾರ ವಾಷಿಂಗ್ಟನ್‌: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೇನಾ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರಿಗೆ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಇರಾನ್‌ ವಿರುದ್ಧದ ಯುದ್ಧದಲ್ಲಿ ಟ್ರಂಪ್‌ ಸರ್ಕಾರ ಕೈಗೊಂಡ ಈ ನಿರ್ಧಾರ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನರಲ್ ರಾಂಡಿ ಜಾರ್ಜ್ ಅವರು 2023 ರಲ್ಲಿ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅವರ ಅವಧಿಯು 2027ರವರೆಗೆ ಇತ್ತು. ಪೀಟ್ ಹೆಗ್ಸೆತ್ ಅವರು ಜನರಲ್ ರಾಂಡಿ ಜಾರ್ಜ್ ನಾಯಕತ್ವದ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು

ಸೇನಾ ದಂಡನಾಯಕನನ್ನು ಕಿತ್ತು ಹಾಕಿದ ಟ್ರಂಪ್‌ Read More »

ಹಾರ್ಮುಜ್‌ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ತಡೆಯಿಲ್ಲ : ಇರಾನ್‌ ಭರವಸೆ

ನಮ್ಮ ಭಾರತೀಯ ಸ್ನೇಹಿತರು ಚಿಂತಿಸುವ ಅಗತ್ಯವಿಲ್ಲ ಎಂದ ಇರಾನ್‌ ಟೆಹ್ರಾನ್ : ಹಾರ್ಮುಜ್‌ ಜಲಸಂಧಿಯ ಬಗ್ಗೆ ನಮ್ಮ ಭಾರತೀಯ ಸ್ನೇಹಿತರು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್‌ ಭರವಸೆ ನೀಡಿದೆ. ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಸ್ತವ್ಯಸ್ತಗೊಂಡಿರುವ ಪ್ರಮುಖ ಹಡಗು ಮಾರ್ಗವಾದ ಹಾರ್ಮುಜ್‌ ಜಲಸಂಧಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ. ಅವರು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ. ‘ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ. ಚಿಂತಿಸಬೇಡಿ’

ಹಾರ್ಮುಜ್‌ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ತಡೆಯಿಲ್ಲ : ಇರಾನ್‌ ಭರವಸೆ Read More »

ಯುದ್ಧದಲ್ಲಿ ಅಮೆರಿಕಕ್ಕೆ ಅಭೂತಪೂರ್ವ ಜಯ : ಟ್ರಂಪ್‌ ಘೋಷಣೆ

ಷರತ್ತುಗಳಿಗೆ ಒಪ್ಪಿಕೊಳ್ಳದಿದ್ದಲ್ಲಿ ಇರಾನ್‌ ಮೇಲಿನ ಆಕ್ರಮಣ ಇನ್ನಷ್ಟು ತೀವ್ರ ವಾಷಿಂಗ್ಟನ್:‌ ಇರಾನ್‌ ಯುದ್ಧದಲ್ಲಿ ಅಮೆರಿಕ ಅಭೂತಪೂರ್ವ ಜಯ ಗಳಿಸಿದ್ದು, ನಮ್ಮ ಉದ್ದೇಶಗಳನ್ನು ಪೂರೈಸಲು ಸಾಕಷ್ಟು ಹತ್ತಿರವಾಗಿದ್ದೇವೆ. ಆದಾಗ್ಯೂ, ಇರಾನ್‌ನೊಂದಿಗಿನ ಮಾತುಕತೆಗಳು ವಿಫಲವಾದಲ್ಲಿ ಆಕ್ರಮಣಕಾರಿ ದಾಳಿಗೆ ಅಮೆರಿಕ ಸಜ್ಜಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಹೊರ್ಮುಜ್‌ ಜಲಸಂಧಿಯಾಗಲಿ ಅವರ ತೈಲವಾಗಲಿ ನಮಗೆ ಬೇಡ ಎಂದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಟ್ರಂಪ್‌ ಹೇಳಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇರಾನ್‌ ಮೇಲೆ ಅಮೆರಿಕ ನಡೆಸುತ್ತಿರುವ ಆಪರೇಷನ್‌ ಎಪಿಕ್‌ ಫ್ಯೂರಿಯಲ್ಲಿ

ಯುದ್ಧದಲ್ಲಿ ಅಮೆರಿಕಕ್ಕೆ ಅಭೂತಪೂರ್ವ ಜಯ : ಟ್ರಂಪ್‌ ಘೋಷಣೆ Read More »

ನಾಸಾದ ಮೂನ್‌ ಮಿಷನ್‌ ಆರ್ಟೆಮಿಸ್ ಯಶಸ್ವಿ ಉಡಾವಣೆ

50 ವರ್ಷಗಳ ಬಳಿಕ ಚಂದ್ರನ ಅನ್ವೇಷಣೆ – ನಾಲ್ವರು ಗಗನಯಾತ್ರಿಗಳಿರುವ ನೌಕೆ ಫ್ಲೋರಿಡಾ: 50 ವರ್ಷಗಳ ಬಳಿಕ ಚಂದ್ರನ ಅನ್ವೇಷಣೆಗೆ ಹೊರಟಿರುವ ನಾಸಾ ಐತಿಹಾಸಿಕ ಆರ್ಟೆಮಿಸ್-(Artemis II) ಮಿಷನ್‌ ಉಡಾವಣೆ ಯಶಸ್ವಿಯಾಗಿದೆ. ಅಮೆರಿಕದ ಕಾಲಮಾನ ಬುಧವಾರ ಸಂಜೆ 6:35 (ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ4.05) ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳಿದ್ದ ಒರಾಯನ್ ಬಾಹ್ಯಾಕಾಶ ನೌಕೆಯನ್ನು ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಉಡಾವಣೆಯಾದ ಸುಮಾರು 8.5 ನಿಮಿಷಗಳ ನಂತರ

ನಾಸಾದ ಮೂನ್‌ ಮಿಷನ್‌ ಆರ್ಟೆಮಿಸ್ ಯಶಸ್ವಿ ಉಡಾವಣೆ Read More »

11 ಸಾವಿರ ಪ್ಯಾಲೆಸ್ತೀನ್‌ ಕೈದಿಗಳನ್ನು ಗಲ್ಲಿಗೇರಿಸುವ ಕಾನೂನು ಸಂಸತ್ತಿನಲ್ಲಿ ಪಾಸ್‌

90 ದಿನಗಳಲ್ಲಿ ಗಲ್ಲಿಗೇರಿಸಲು ಸರ್ಕಾರಕ್ಕೆ ಅಧಿಕಾರ ಕೊಟ್ಟ ಮಸೂದೆ ಟೆಲ್‌ ಅವೀವ್‌: ಇಸ್ರೇಲ್‌ ಸಂಸತ್ತು ಪ್ಯಾಲೆಸ್ತೀನಿಯನ್ನರ ಮರಣದಂಡನೆಗೆ ಅಧಿಕಾರ ನೀಡುವ ಕಾನೂನನ್ನು ಅಂಗೀಕರಿಸಿದೆ. ಈ ಕಾನೂನಿನಡಿಯಲ್ಲಿ ಇಸ್ರೇಲ್‌ ಜೈಲುಗಳಲ್ಲಿ ಇರಿಸಲಾಗಿರುವ ವೆಸ್ಟ್‌ಬ್ಯಾಂಕ್ ಕೈದಿಗಳನ್ನು 90 ದಿನಗಳಲ್ಲಿ ಗಲ್ಲಿಗೇರಿಸುವ ಅಧಿಕಾರ ಸರ್ಕಾರಕ್ಕೆ ಸಿಕ್ಕಿದೆ. . ಪ್ರಸ್ತುತ ಇಸ್ರೇಲಿನ ಜೈಲುಗಳಲ್ಲಿ 4,500 ಮಕ್ಕಳು ಸೇರಿದಂತೆ 11,000 ಪ್ಯಾಲೆಸ್ತೀನ್‌ ಕೈದಿಗಳಿದ್ದಾರೆ. ಅವರೆಲ್ಲರನ್ನೂ ಯಾವುದೇ ಸಮಯದಲ್ಲಿ ಗಲ್ಲಿಗೇರಿಸಬಹುದು. ಪ್ಯಾಲೆಸ್ತೀನಿಯನ್ನರಿಗೆ ಮರಣದಂಡನೆಯನ್ನು ಅಧಿಕೃತಗೊಳಿಸುವ ಕಾನೂನು ಅಂಗೀಕಾರವಾದ ನಂತರ ರಾಷ್ಟ್ರೀಯ ಭದ್ರತಾ ಸಚಿವ ಬೆನ್‌ಗ್ವಿರ್ ಸಂಸತ್ತಿನ

11 ಸಾವಿರ ಪ್ಯಾಲೆಸ್ತೀನ್‌ ಕೈದಿಗಳನ್ನು ಗಲ್ಲಿಗೇರಿಸುವ ಕಾನೂನು ಸಂಸತ್ತಿನಲ್ಲಿ ಪಾಸ್‌ Read More »

ಆಪಲ್, ಗೂಗಲ್, ಮೆಟಾ ಕಂಪನಿಗಳ ಮೇಲೆ ಇಂದು ರಾತ್ರಿಯಿಂದ ದಾಳಿ : ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ನಾಯಕರ ಹತ್ಯೆಗೆ ಪ್ರತೀಕಾರ ತೀರಿಸಲು ಅಮೆರಿಕದ ಟೆಕ್‌ ಕಂಪನಿಗಳ ಮೇಲೆ ದಾಳಿ ನಡೆಸುವ ಬೆದರಿಕೆ ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ತನ್ನ ನಾಯಕರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕದ ಆಪಲ್, ಗೂಗಲ್ ಮತ್ತು ಮೆಟಾದಂತಹ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ ಮಂಗಳವಾರ ಎಚ್ಚರಿಕೆ ನೀಡಿದೆ. ಏಪ್ರಿಲ್ 1ರ ಟೆಹ್ರಾನ್ ಸಮಯ ರಾತ್ರಿ 8 ರಿಂದ ಪ್ರಾರಂಭವಾಗುವ ಈ ದಾಳಿ ಇರಾನ್‌ನಲ್ಲಿ ನಡೆಯುವ ಪ್ರತಿಯೊಂದು ಹತ್ಯೆಗೆ ಪ್ರತೀಕಾರವಾಗಿರುತ್ತದೆ. ಅಮೆರಿಕದ ಕಂಪನಿಗಳು ಘಟಕಗಳು

ಆಪಲ್, ಗೂಗಲ್, ಮೆಟಾ ಕಂಪನಿಗಳ ಮೇಲೆ ಇಂದು ರಾತ್ರಿಯಿಂದ ದಾಳಿ : ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ Read More »

ಇರಾನ್‌ ಮೇಲೆ 907 ಕೆ.ಜಿ. ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದ ಅಮೆರಿಕ

ಬದ್ರ್‌ ಮಿಲಿಟರಿ ವಾಯುನೆಲೆಯ ಮೇಲೆ ದಾಳಿ ಟೆಹ್ರಾನ್‌ : ಇರಾನ್‌ನ ಇಸ್ಪಹಾನ್‌ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ ಸುಮಾರು 907 ಕೆಜಿ ಬಂಕರ್‌ ಬಸ್ಟರ್‌ ಬಾಂಬ್‌ಗಳಿಂದ ದಾಳಿ ನಡೆಸಿದೆ. ಈ ಸ್ಫೋಟದ ವೀಡಿಯೊವೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದಲ್ಲಿ ಈ ಸ್ಫೋಟ ಸಂಭವಿಸಿದೆ. ದಾಳಿಯ ತೀವ್ರತೆಯಿಂದ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಚಿಮ್ಮುವ ದೃಶ್ಯ ವೈರಲ್‌ ಆಗಿದೆ. ಟ್ರಂಪ್ ಈ ವೀಡಿಯೊ ಬಗ್ಗೆ ಯಾವುದೇ ನಿಖರ ಮಾಹಿತಿ ಉಲ್ಲೇಖಿಸಿಲ್ಲ. ಆದರೆ

ಇರಾನ್‌ ಮೇಲೆ 907 ಕೆ.ಜಿ. ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದ ಅಮೆರಿಕ Read More »

ಜೈಶ್‌ ಉಗ್ರ ಮಸೂದ್‌ ಅಜರ್‌ ಸಹೋದರ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವು

ಉಗ್ರ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಅನ್ವರ್‌ ಸಾವನ್ನು ಒಪ್ಪಿಕೊಂಡ ಜೈಶ್‌ ನವದೆಹಲಿ: ಸಂಸತ್‌ ಮೇಲಿನ ಉಗ್ರ ದಾಳಿಯ ರೂವಾರಿ ಜೈಶ್‌ ಇ ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನ ಸಹೋದರ ಮೊಹಮ್ಮದ್‌ ತಾಹಿರ್‌ ಅನ್ವರ್‌ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾನೆ. ಮಸೂದ್‌ ಅಜರ್‌ನ ಬಳಿಕ ಜೈಶ್‌ ಇ ಮೊಹಮ್ಮದ್‌ ಸಂಘಟನೆಯ ಪ್ರಮುಖ ನಾಯಕನಾಗಿದ್ದ ಅನ್ವರ್‌ನ ಸಾವನ್ನು ಜೈಶ್‌ ಅಧಿಕೃತವಾಗಿ ದೃಢಪಡಿಸಿದೆ. ಬಹವಾಲ್ಪುರದ ಜಾಮಿಯಾ ಮಸ್ಜಿದ್‌ ಉಸ್ಮಾನ ವಾಲಿಯಲ್ಲಿ ಸೋಮವಾರ ತಡರಾತ್ರಿ ಅನ್ವರ್‌ನ ಅಂತ್ಯಕ್ರಿಯೆ ನೇರವೇರಿದೆ ಎಂದು ತನ್ನ ಅಧಿಕೃತ

ಜೈಶ್‌ ಉಗ್ರ ಮಸೂದ್‌ ಅಜರ್‌ ಸಹೋದರ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವು Read More »

error: Content is protected !!
Scroll to Top